3 ವರ್ಷಗಳ ಹಿಂದೆ ಸುನಿಧಿ ತನ್ನ 40 ದಿನಗಳ ಮಗುವನ್ನು ಕಳೆದುಕೊಂಡಾಗ, ಅವಳ ಜೀವನವೇ ಉಡುಗಿಹೋದಂತೆ ಭಾಸವಾಗಿತ್ತು. ಉಸಿರಾಟದ ತೊಂದರೆಯಿಂದ ಆಕೆಯ ಗಂಡು ಮಗು ಈ ಜಗತ್ತಿಗೆ ಬರುತ್ತಿದ್ದಂತೆ ಸಾವಿಗೀಡಾಗಿತ್ತು. ಅವಳಿಗೀಗ ಅದೇ ದುಃಖದೊಂದಿಗೆ ಜೀವನ ನಡೆಸಬೇಕಿತ್ತು. 1 ವಾರದ ಬಳಿಕ ಮಗನಿಗಾಗಿ ತಾನು ಖರೀದಿಸಿ ತಂದಿದ್ದ ಬಟ್ಟೆ, ಆಟಿಕೆಗಳನ್ನು ಒಂದು ಅನಾಥಾಶ್ರಮಕ್ಕೆ ಕೊಡಲೆಂದು ಹೋದಳು. ಮೊದಲ ಬಾರಿಗೆ ಅವಳು ಒಂದು ಅನಾಥಾಶ್ರಮಕ್ಕೆ ಕಾಲಿಟ್ಟಿದ್ದಳು. ಆ ಒಂದು ಅನುಭವವೇ ಅವಳ ಜೀವನವನ್ನು ಪರಿಪೂರ್ಣವಾಗಿ ಬದಲಿಸಿಬಿಟ್ಟಿತು.

ಅಲ್ಲಿ ಸುನಿಧಿ ಬಹಳಷ್ಟನ್ನು ಕಂಡಳು. ಹೆರಿಗೆಯಾಗಿ 1 ದಿನವಷ್ಟೇ ಆಗಿದ್ದ, ಕಸದ ಗುಡ್ಡೆಯ ಮೇಲೆ ಬಿದ್ದಿದ್ದ ಅದೆಷ್ಟೋ ಮಕ್ಕಳನ್ನು ತಂದು ಅಲ್ಲಿ ಪಾಲನೆ ಪೋಷಣೆ ಮಾಡಲಾಗಿತ್ತು. ಆ ಅನಾಥ ಮಕ್ಕಳು ಸುನಿಧಿಯ ಕಡೆ ನೋಡಿ ಮುಗುಳ್ನಗುತ್ತಿದ್ದವು. ಆ ಮಕ್ಕಳಿಗೆ ಸುನಿಧಿಯ ಕಷ್ಟ ಏನೆಂಬುದು ಗೊತ್ತಿರಲಿಲ್ಲ. ಆದರೆ ಯಾರೋ ತಮ್ಮನ್ನು ಭೇಟಿಯಾಗಲು ಬಂದಿದ್ದಾರೆಂದು ಆ ಮಕ್ಕಳಿಗೆ ಬಹಳ ಖುಷಿಯಾಗಿತ್ತು. ಇನ್ನು ಮುಂದೆ ತಾನು ಇಂತಹ ಮಕ್ಕಳ ಜೊತೆ ಹೆಚ್ಚೆಚ್ಚು ಸಮಯ ಕಳೆಯಬೇಕೆಂದು ಅವಳು ನಿರ್ಧಾರ ಮಾಡಿದಳು.

ಈ ಕುರಿತಂತೆ ಸುನಿಧಿ ಹೀಗೆ ಹೇಳುತ್ತಾಳೆ, ``ನನ್ನೊಂದಿಗೆ ಹಾಗೇಕಾಯಿತು? ನಾನು ಅದೇನು ತಪ್ಪು ಮಾಡಿದೆ ಎಂದೆನಿಸುತ್ತಿತ್ತು. ಯಾರಾದರೂ ತಾಯಿ ಮಗುವನ್ನು ಕಂಡರೆ ಸಾಕು ನಾನೆಷ್ಟು ಅಪೂರ್ಣಳು ಎಂದೆನಿಸುತ್ತಿತ್ತು. ನಾನು ನನ್ನ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು, ಅಕ್ಕಪಕ್ಕದ ಮನೆಯವರಿಗೆ ಯಾರಾರಿಗೆ ಮಕ್ಕಳು ಇವೆಯೋ ಅವರ ಮನೆಗೆ ಹೋಗುವುದನ್ನು ಹೆಚ್ಚು ಕಡಿಮೆ ನಿಲ್ಲಿಸಿಯೇ ಬಿಟ್ಟಿದ್ದೆ. ಯಾವಾಗ ನೋಡಿದರೂ ನನಗೆ ಮಗನದೇ ನೆನಪು ಕಾಡುತ್ತಿತ್ತು. ನನ್ನ ಮಗ ಈಗ ಇಷ್ಟು ದೊಡ್ಡವನಾಗಿರುತ್ತಿದ್ದ ಎಂದೆಲ್ಲ ನಾನು ಯೋಚಿಸಲು ಶುರು ಮಾಡಿದ್ದೆ. ನನ್ನನ್ನು ನಾನು ನಿಸ್ಸಹಾಯಕಳು ಎಂದೆಲ್ಲ ಭಾವಿಸಲು ಶುರು ಮಾಡಿದ್ದೆ!''

ಅವಳಿಗೆ ಗೊತ್ತಾದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಕೆಲವು ಸ್ನೇಹಿತರು ಸಂಬಂಧಿಕರು ತಮಗೆ ಮಗುವಾದ ವಿಷಯವನ್ನು ಅವಳಿಂದ ಬಚ್ಚಿಟ್ಟಿದ್ದರು. ಅದನ್ನು ಕೇಳಿ ಅವಳಿಗೆ ಬಹಳ ದುಃಖವಾಯಿತು.

ಸುನಿಧಿ ಮುಂದುವರಿದು ಹೀಗೆ ಹೇಳುತ್ತಾಳೆ, ``ನಿಮ್ಮನ್ನು ನೀವು ಯಾವಾಗ ಮೋಸ ಹೋದವರಂತೆ ಭಾವಿಸುತ್ತೀರೋ, ಆಗ ಸಹಾನುಭೂತಿಯ ನುಡಿಗಳು ಕೂಡ ಚಾಕುವಿನ ಹಾಗೆ ಭಾಸವಾಗುತ್ತವೆ. ಆದರೆ ಈಗ ನನಗೆ ಆ ನನ್ನ ಸ್ನೇಹಿತರು ನನ್ನನ್ನು ದುಃಖದಿಂದ ಹೊರತರಲು ಎಷ್ಟೆಲ್ಲ ಪ್ರಯತ್ನ ಮಾಡಿದ್ದರು ಎಂದೆನಿಸುತ್ತದೆ.''

ಸೈಕೊಥೆರಪಿಸ್ಟ್ ಮತ್ತು ಕೌನ್ಸೆಲರ್‌ ಆಗಿರುವ ಡಾ. ಸಂಧ್ಯಾ ಹೀಗೆ ಹೇಳುತ್ತಾರೆ, ``ಯಾರು ಇತ್ತೀಚೆಗಷ್ಟೇ ಅತಿಯಾದ ದುಃಖದಲ್ಲಿ ಮುಳುಗಿದ್ದರೊ, ಭಾರಿ ಹಾನಿಗೆ ತುತ್ತಾಗಿದ್ದರೊ ಅವರು ಬೇರೆಯವರು ಖುಷಿಯಿಂದ ಸಮಯ ಕಳೆಯುವುದನ್ನು ನೋಡಿ ಖಿನ್ನತೆಗೆ ತುತ್ತಾಗಬಹುದು. ಅವರ ಜೀವನದಲ್ಲಿ ಬಂದ ರಿಕ್ತತೆ ಹಾಗೂ ಬೇರೆಯವರ ಜೀವನದಲ್ಲಿ ಬಂದ ಪರಿಪೂರ್ಣತೆಯ ಅನುಭೂತಿಯೇ ಈ ವಿರೋಧಾಭಾಸಕ್ಕೆ ಕಾರಣವಾಗಿರುತ್ತದೆ.''

ದುಃಖದಿಂದ ಹೊರಬರಲು ಕಾಲಮಿತಿ

ದುಃಖದಿಂದ ಹೊರಬರಲು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಾಲಮಿತಿಯ ಅವಶ್ಯಕತೆ ಉಂಟಾಗುತ್ತದೆ. 40 ವರ್ಷದ ನಂದಿನಿ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್‌ ಆಗಿದ್ದಾಳೆ. ಈಗ ಆಕೆ ಮೆಟರ್ನಿಟಿ ರಜೆಯ ಮೇಲೆ ಇದ್ದಾಳೆ. ಆಕೆ ಪ್ರೀತಿಸಿ ಮದುವೆಯಾದಾಗ ತನ್ನದು ಆದರ್ಶ ಪ್ರೇಮವಿವಾಹ ಎಂದು ಭಾವಿಸಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ