ಪುಟ್ಟ ಜ್ಯೋತಿ ಉದಾಸಳಾಗಿ ಕುಳಿತಿದ್ದಳು. ಅಂದು ಶಾಲೆಯ ಓಟದ ಸ್ಪರ್ಧೆಯಲ್ಲಿ ಓಡುವಾಗ ಅವಳು ಬಿದ್ದುಬಿಟ್ಟಳು. ಅದರಿಂದಾಗಿ ಅವಳು ಆ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು. ಅವಳ ಸಹಪಾಠಿಗಳು ಅವಳನ್ನು ತಮಾಷೆ ಮಾಡಿ ನಕ್ಕಿದ್ದರು.

ಅಷ್ಟರಲ್ಲಿ ಅಮ್ಮ ಬಂದು, ``ಜ್ಯೋತಿ, ಬಿದ್ದುಬಿಟ್ಟೆಯಾ...? ಇರಲಿ ಬಿಡು. ಆದರೆ ಹೀಗೆ ಸೋತವರಂತೆ ಕೊರಗುತ್ತಾ ಕೂರಬಾರದು. ನೀನು ಧೈರ್ಯಶಾಲಿ ಮುಂದಿನ ಸಲ ಗೆದ್ದೇ ಗೆಲ್ತೀಯಾ....'' ಎಂದರು. ಈ ಮಾತುಗಳು ಅವಳಲ್ಲಿ ಹೊಸ ಉತ್ಸಾಹವನ್ನು ತುಂಬಿದವು. ಆ ಬಳಿಕ ಅವಳು ತನ್ನ ಅಭ್ಯಾಸವನ್ನು ಪುನರಾರಂಭಿಸಿದಳು.

ಎಸ್‌.ಎಸ್‌.ಎಲ್.ಸಿ. ಪರೀಕ್ಷೆ ಫಲಿತಾಂಶ ಬಂದಾಗ ಮಹೇಶ್‌ ಬಹಳ ದುಃಖಿತನಾಗಿದ್ದ. ಶೇ.90ಕ್ಕಿಂತ ಹೆಚ್ಚು ಅಂಕಗಳು ಬರಬಹುದು ಎಂದು ಅವನು ನಿರೀಕ್ಷಿಸಿದ್ದ. ಆದರೆ ಅದಕ್ಕೂ ಕಡಿಮೆ ಅಂಕಗಳು ಬಂದು ಅವನು ನಿರಾಶೆಯಲ್ಲಿ ಮುಳುಗುವಂತೆ ಮಾಡಿತು. ಅಪ್ಪ ಅಮ್ಮನ ಆಸೆ ಆಕಾಂಕ್ಷೆಗಳನ್ನು ಈಡೇರಿಸದಿರುವ ಖೇದ ಅವನನ್ನು ಕಾಡುತ್ತಿತ್ತು. ಅವನು ಹತಾಶೆಯ ಸುಳಿಯಲ್ಲಿ ಸಿಲುಕಿದ್ದ.

ಅಷ್ಟರಲ್ಲಿ ಅವನ ತಾತ ಮನೆಗೆ ಬಂದರು. ತನ್ನ ಕೋಣೆಯಲ್ಲಿ ಉದಾಸನಾಗಿ ಕುಳಿತಿದ್ದ ಮಹೇಶನ ಭುಜದ ಮೇಲೆ ಕೈ ಇಟ್ಟು ಹೀಗೆ ಏಕಾಂತದಲ್ಲಿ ದುಃಖಿಸುತ್ತಾ ಕುಳಿತಿರಲು ಕಾರಣವೇನೆಂದು ಕೇಳಿದಾಗ, ತನಗೆ ನಿರೀಕ್ಷಿಸಿದಷ್ಟು ಅಂಕಗಳು ಬರದೇ ಇರುವ ಕಾರಣ ಹೇಳಿ ತಾತನನ್ನು ಬಾಚಿ ತಬ್ಬಿಕೊಂಡ. ಅಷ್ಟೇ ಅಲ್ಲ, ತನಗೀಗ ಬದುಕುವ ಆಸೆಯೇ ಉಳಿದಿಲ್ಲ ಎಂದು ಹೇಳಿದ.

ಮಹೇಶನ ಮಾತು ಕೇಳಿ ತಾತನಿಗೆ ಆಶ್ಚರ್ಯವಾಯಿತು. ನಂತರ ಅವರು, ``ನಿನಗೆ ಶೇ.82 ಮಾರ್ಕ್ಸ್ ಬಂದಿದೆ ಎಂದು ತಿಳಿದು ನಿನ್ನನ್ನು ಅಭಿನಂದಿಸಲೆಂದೇ ನಾನು ಫೋನ್‌ ಮಾಡದೆಯೇ ಬಂದುಬಿಟ್ಟೆ. ಆದರೆ ನೀನು ಈ ರೀತಿ ಕುಳಿತಿರುವುದು ನನಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ. ಮಗು, ನೀನು ಒಳ್ಳೆಯ ಮಾರ್ಕ್ಸ್ ಪಡೆದಿರುವೆ. ನಮಗೆಲ್ಲರಿಗೂ ನಿನ್ನ ಬಗ್ಗೆ ಹೆಮ್ಮೆ ಇದೆ. ಇನ್ನೆಂದೂ ಈ ರೀತಿಯ ವಿಚಾರವನ್ನು ಮನದಲ್ಲೂ ತರಬೇಡ,'' ಎಂದು ಹೇಳಿದರು.

ತಾತನ ಸ್ಛೂರ್ತಿ ತುಂಬಿದ ಹೊಗಳಿಕೆಯ ಮಾತುಗಳು ಅವನಲ್ಲಿ ಹೊಸ ಉತ್ಸಾಹವನ್ನೇ ತುಂಬಿದವು. ಆ ಬಳಿಕ ಅವನು ಸಕಾರಾತ್ಮಕ ದೃಷ್ಟಿಕೋನದಿಂದ ಮುನ್ನಡೆಯತೊಡಗಿದ. ಒಂದು ವೇಳೆ ಅವನ ಆ ಸಂಕಷ್ಟದ ಸಮಯದಲ್ಲಿ ತಾತ ಬರದೇ ಹೋಗಿದ್ದರೆ, ಮಹೇಶ ಅದೆಷ್ಟು ನಿರಾಶೆ ಹತಾಶೆಯಲ್ಲಿ ಮುಳುಗಿರುತ್ತಿದ್ದನೋ ಏನೋ? ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇತ್ತು.

``ಅಮ್ಮಾ, ಅತ್ತಿಗೆಯ ಮಾತನ್ನು ಕೇಳಿ ನೀನೇಕೆ ನೊಂದುಕೊಳ್ತೀಯಾ? ಅವರು ಬೇರೆ ಮನೆಯಿಂದ ಬಂದವರು. ಅವರಿಗೆ ನಿನ್ನ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಕ್ರಮೇಣ ಅವರಿಗೆ ನೀನು ಎಲ್ಲವನ್ನೂ ಕಲಿಸಬಹುದು. ನನ್ನ ಅಮ್ಮ ಎಲ್ಲರ ಜೊತೆಗೂ ಹೊಂದಾಣಿಕೆ ಮಾಡಿಕೊಂಡು ಹೋಗಬಲ್ಲಳು,'' ಸ್ನೇಹಾಳ ಈ ಮಾತುಗಳು ಅವಳ ತಾಯಿಯ ಕಳೆದುಹೋದ ಆತ್ಮವಿಶ್ವಾಸವನ್ನು ಮತ್ತೆ ಮರಳಿ ತಂದುಕೊಟ್ಟವು. ಈ ಎಲ್ಲ ಸ್ಥಿತಿಗಳಲ್ಲಿ ಒಂದಿಷ್ಟು ಪ್ರಶಂಸೆ ಭರಿತ ಮಾತುಗಳು ವ್ಯಕ್ತಿಯೊಬ್ಬನಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಡಬಲ್ಲವು. ವಯಸ್ಸು ಬಾಲ್ಯವೋ, ತಾರುಣ್ಯವೋ, 50 ಮೀರಿದ್ದಾಗಿದ್ದರೂ ಎಲ್ಲರಿಗೂ ಪ್ರೋತ್ಸಾಹದ ಮಾತುಗಳು ಬೇಕೇಬೇಕು. ತಮ್ಮವರ ಸ್ನೇಹಭರಿತ ನಾಲ್ಕು ಮಾತುಗಳು ವ್ಯಕ್ತಿಯೊಬ್ಬನಲ್ಲಿ ಚಮತ್ಕಾರಿ ಪ್ರಭಾವ ಬೀರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ