ಬೆಂಗಳೂರಿನ ರಜನಿ ಹೈಸ್ಕೂಲೊಂದರಲ್ಲಿ ಟೀಚರ್‌. ಆಕೆಯ ಸಾವಿನ ಬಳಿಕ ಗಂಡ ಶ್ಯಾಮನನ್ನು ಬಂಧಿಸಲಾಯಿತು. ಅತ್ತೆಮನೆಯ ಇತರೆ ಆರೋಪಿ ಸದಸ್ಯರು ಪಲಾಯನ ಮಾಡಿದರು. ರಜನಿಗೆ ಇಬ್ಬರು ಮಕ್ಕಳಿದ್ದರು. 2 ವರ್ಷದ ರಶ್ಮಿ ಹಾಗೂ 10 ತಿಂಗಳಿನ ವಿಶಾಖಾ. ಇವರಿಬ್ಬರನ್ನು ರಜನಿಯ ತವರುಮನೆಯವರು ಕರೆದುಕೊಂಡು ಹೋದರು. ರಜನಿಯ ಅಣ್ಣ ರಾಜೇಶ್‌ ಹೇಳಿದ್ದೇನೆಂದರೆ, ರಜನಿ ನೌಕರಿ ಮಾಡಲು ಇಚ್ಛಿಸಿದ್ದಳು. ಆದರೆ ಅವಳ ಗಂಡ ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅವನು ರಜನಿಯನ್ನು ತವರಿಗೆ ಹೋಗಲು ಕೂಡ ಬಿಡುತ್ತಿರಲಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟಂತೆ ರಜನಿ ಹಾಗೂ ಶ್ಯಾಮ್ ನಡುವೆ ಮೇಲಿಂದ ಮೇಲೆ ಜಗಳಗಳು ನಡೆಯುತ್ತಿದ್ದವು.

ಸೆಪ್ಟೆಂಬರ್‌ 13 ರಂದು ರಜನಿ ತವರು ಮನೆಗೆ ಹೋಗುವುದಾಗಿ ಹಟ ಹಿಡಿದಿದ್ದಳು. ಆದರೆ ಶ್ಯಾಮ್ ಅವಳಿಗೆ ಹೋಗಲು ಅವಕಾಶ ಕೊಟ್ಟಿರಲಿಲ್ಲ. ಹಾಗಾಗಿ ಅವಳನ್ನು ಮೂರನೇ ಮಹಡಿಯಿಂದ ಕೆಳಕ್ಕೆ ತಳ್ಳಿಬಿಟ್ಟಿದ್ದ. ಆ ಘಟನೆಯಲ್ಲಿ ಆಕೆ ಸತ್ತು ಹೋದಳು. ಶ್ಯಾಮ್ ಪೊಲೀಸರ ಮುಂದೆ ಹೇಳಿದ ವಿಷಯವೇ ಬೇರೆ, ``ರಜನಿ ತವರುಮನೆಗೆ ಹೋಗುವುದಾಗಿ ಹಟ ಹಿಡಿದಿದ್ದಳು. ನಾನು ಈಗ ಹೋಗುವುದು ಬೇಡ ಎಂದಿದ್ದೆ. ಅದರಿಂದ ಕೋಪಗೊಂಡು ಮಹಡಿಯಿಂದ ಜಿಗಿದು ಸತ್ತುಹೋದಳು,'' ಎಂದು ಹೇಳಿಕೆ ಕೊಟ್ಟ. ರಜನಿಯ ಸಾವಿನ ಬಳಿಕ ಆಕೆಯ ಪತಿ ಶ್ಯಾಮ್ ನನ್ನು ಪೊಲೀಸ್‌ ಕಸ್ಟಡಿಗೆ ಕಳಿಸಲಾಯಿತು. ಪೊಲೀಸ್‌ ಇಲಾಖೆ ಮತ್ತು ನ್ಯಾಯಾಲಯಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿರುತ್ತವೆ. ವರ್ಷಾನುಗಟ್ಟಲೆ ಪೊಲೀಸ್‌ ತನಿಖೆ ನಡೆಯುತ್ತಿರುತ್ತದೆ. ನ್ಯಾಯಾಲಯದಲ್ಲಿ ಪ್ರಕರಣ ಒಂದು ದಿನಾಂಕದಿಂದ ಮತ್ತೊಂದು ದಿನಾಂಕಕ್ಕೆ ಮುಂದೂಡುತ್ತ ಹೋಗುತ್ತಿರುತ್ತದೆ. ಇವೆರಡರ ನಡುವೆ ಆ ಇಬ್ಬರು ಮಕ್ಕಳ ಸ್ಥಿತಿ ಏನಾಗಬಹುದು? ಈ ಪ್ರಶ್ನೆಗೆ ಕಾನೂನು ಎಂದಿನಂತೆ ಮೌನವಾಗಿಯೇ ಇದೆ. ಆ ಮಕ್ಕಳ ಜೀವನ ಹೇಗೆ ನಡೆಯಬಹುದು? ತಮ್ಮೊಂದಿಗೆ ಎಂತಹ ದೊಡ್ಡ ದುರ್ಘಟನೆ ನಡೆದಿದೆ ಎಂಬುದು ಆ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಆ ಮಕ್ಕಳ ಅಜ್ಜಿ ತಾತಾ ಎಷ್ಟು ದಿನಗಳ ಕಾಲ ಅವರನ್ನು ಸಲಹಬಹುದು? ಅವರ ಪಾಲನೆಪೋಷಣೆ ಮತ್ತು ವಿದ್ಯಾಭ್ಯಾಸದ ಗತಿ ಏನು? ಇಂತಹ ಅನೇಕ ಪ್ರಶ್ನೆಗಳು ಇದ್ದು, ಅವುಗಳಿಗೆ ಸಮಾಜದ ಬಳಿಯಾಗಲಿ, ಕಾನೂನಿನ ಬಳಿಯಾಗಲಿ ಉತ್ತರವಿಲ್ಲ. ಮನೋವಿಜ್ಞಾನಿ ಅಜಯ್‌ ಹೀಗೆ ಹೇಳುತ್ತಾರೆ, ``ಕುಟುಂಬ ಮತ್ತು ತಂದೆ ತಾಯಿಗಳ ನಡುವಿನ ಜಗಳ ಅವರನ್ನು ದೈಹಿಕವಾಗಿ ಬೌದ್ಧಿಕವಾಗಿ ಕುಸಿಯುವಂತೆ ಮಾಡುತ್ತದೆ. ಇಂತಹ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ.

parivarik-kala

''ಅಜಯ್‌ ತಮ್ಮ ಬಳಿಗೆ ಬಂದಿದ್ದ ದಂಪತಿಗಳ ಕಥೆಯನ್ನು ಹೀಗೆ ವಿವರಿಸುತ್ತಾರೆ. ಗಂಡಹೆಂಡತಿಯ ಜಗಳಗಳಿಂದ ಬೇಸತ್ತು ಅವರ ಮನೆಯವರು ನನ್ನ ಬಳಿ ಕೌನ್ಸೆಲಿಂಗ್‌ಗೆ ಕರೆದುಕೊಂಡು ಬಂದಿದ್ದರು. ಜೊತೆಗೆ ಇಬ್ಬರು ಮಕ್ಕಳನ್ನೂ ಕರೆತಂದಿದ್ದರು. ಗಂಡಹೆಂಡತಿ ಇಬ್ಬರನ್ನು ಮಾತನಾಡಿಸಿದ ಬಳಿಕ ಮಕ್ಕಳನ್ನು ಕೇಳಲಾಯಿತು, ``ಮನೆಯಲ್ಲಿ ಅತಿ ಹೆಚ್ಚು ಜಗಳ ಯಾರು ಮಾಡುತ್ತಾರೆ?'' ನನ್ನ ಆ ಪ್ರಶ್ನೆಗೆ ಕಂಗಾಲಾಗಿ ಮಕ್ಕಳು ತಂದೆತಾಯಿಯ ಮುಖ ನೋಡತೊಡಗಿದವು. ಮಕ್ಕಳನ್ನು ಬೇರೊಂದು ರೂಮಿಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದೆ. 8 ವರ್ಷದ ಮಗು ಹೇಳಿತು, ಅಪ್ಪ ಅಮ್ಮ ಯಾವಾಗಲೂ ಜಗಳ ಮಾಡ್ತಿರ್ತಾರೆ. ಅವರಿಬ್ಬರೂ ಜಗಳ ಮಾಡಿ, ನಮ್ಮನ್ನು ಕೇಳ್ತಾರೆ, ``ಯಾರು ಮೊದಲು ಜಗಳ ಶುರು ಮಾಡ್ತಾರೆ? ಅಮ್ಮ ಕೇಳ್ತಾಳೆ, ಅಪ್ಪನೇ ಮೊದಲು ಜಗಳ ಶುರು ಮಾಡ್ತಾರೆ ಅಲ್ವಾ ಪುಟ್ಟು? ಅಪ್ಪ ಕೇಳ್ತಾರೆ, ಮಮ್ಮಿ ಮೊದಲು ಜಗಳ ಶುರು ಮಾಡ್ತಾಳೆ ಅಲ್ವಾ? ಅವರ ಪ್ರಶ್ನೆಗೆ ನಾನೇನು ಉತ್ತರ ಕೊಡಲಿ ಅಂಕಲ್? ಜಗಳವಾಡಿದ ಬಳಿಕ ಇಬ್ಬರೂ ಕೋಣೆಗೆ ಹೋಗಿ ಬಿಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ