ಒಂದು ಘಟನೆ ನಮ್ಮನ್ನು ಸಂಕೋಚದಿಂದ ತಲೆತಗ್ಗಿಸುವಂತೆ ಮಾಡುತ್ತದೆ. ಬೆಂಗಳೂರಿನ ಮನೆಯೊಂದರಲ್ಲಿ ವೃದ್ಧ ಮಹಿಳೆಯೊಬ್ಬಳ ಶವ ದೊರಕಿತು. ಅದು ನಾಗರಿಕ ಸಮಾಜಕ್ಕೊಂದು ಕಪಾಳಮೋಕ್ಷ ಮಾಡುವಂಥ ಘಟನೆ. ಯಾವ ಮಹಿಳೆಯ ಶವ ಸಿಕ್ಕಿತೊ, ಆ ಮಹಿಳೆ ವಿಧವೆಯಾಗಿದ್ದಳು, ಏಕಾಂಗಿಯಾಗಿ ವಾಸಿಸುತ್ತಿದ್ದಳು. ಮಕ್ಕಳು ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಅವರು ವರ್ಷಕ್ಕೊಮ್ಮೆ 2 ವರ್ಷಕ್ಕೊಮ್ಮೆ ಬರುತ್ತಿದ್ದರು.

ಈ ಘಟನೆ ನಮಗೆ ಬಹಳಷ್ಟು ಯೋಚಿಸಲು ಅನಿವಾರ್ಯ ವಾತಾವರಣ ಸೃಷ್ಟಿಸುತ್ತದೆ. ನಾವೆಷ್ಟು ಸಂವೇದನಾಶೀಲರಾಗಿದ್ದೇವೆ ಎಂಬುದನ್ನು ಬಿಂಬಿಸುತ್ತದೆಯಲ್ಲದೆ, ಭಾರತದ ನಗರಗಳಲ್ಲಿ ಸಾಮಾಜಿಕ ಜವಾಬ್ದಾರಿ ಎಷ್ಟರಮಟ್ಟಿಗೆ ಕುಸಿದಿದೆ ಎನ್ನುವುದು ಕೂಡ ಇದರಿಂದ ತಿಳಿದುಬರುತ್ತದೆ. ಆ ಮಹಿಳೆ ಸತ್ತುಹೋದ ವಿಷಯ ಪಕ್ಕದ ಮನೆಯವರಿಗೆ ಕೂಡ ಗೊತ್ತಾಗಲಿಲ್ಲ. ಆ ಮಹಿಳೆಯ ಶವ ಅಸ್ಥಿಪಂಜರದ ರೂಪದಲ್ಲಿ ಸಿಕ್ಕ ಬಳಿಕ ಅಲ್ಲಿ ನೆರೆದಿದ್ದ ಜನರು ಆ ವೃದ್ಧೆಯ ಮಗ ಆಕೆಯ ಬಗ್ಗೆ ಕಾಳಜಿ ವಹಿಸಬೇಕಾಗಿತ್ತು, ಕಾಳಜಿ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಇನ್ನು ಏನೇನೋ ಹೇಳುತ್ತಿದ್ದರು. ಸಾವಿರಾರು ಮೈಲಿ ದೂರದಲ್ಲಿರುವ ಮಗನಿಗಿಂತ ಪಕ್ಕದ ಮನೆಯಲ್ಲಿ ವಾಸಿಸುವ ಕುಟುಂಬದವರಿಗೆ ಒಂದಿಷ್ಟು ಕಾಳಜಿ ಇರಬೇಡವೇ?

ಎರಡು ಮನೆಗಳ ನಡುವೆ ಇರುವ ಗೋಡೆ ಗಾಳಿ, ನೀರು ಹಾಗೂ ಧ್ವನಿಯನ್ನು ಕೂಡ ತಡೆಯಬಹುದು. ಆದರೆ ಸಂಬಂಧದಲ್ಲಿ ಒದ್ದೆಯಾದ ಹೃದಯದ ಮಿಡಿತವನ್ನು ತಡೆಯಲು ಆಗುವುದಿಲ್ಲ. ಅದನ್ನು ನೆರೆಮನೆಯವರು ಅರ್ಥ ಮಾಡಿಕೊಳ್ಳಬೇಕು.

ನೆರೆಮನೆಯವರ ದೃಷ್ಟಿಯಲ್ಲಿ.......

ಮನಸ್ಸನ್ನು ಘಾಸಿಗೊಳಿಸುವ ಆ ಘಟನೆಯ ಬಳಿಕ ನಮ್ಮ ನೆರೆಮನೆಯವರಾದ ಸೋಮಶೇಖರ್‌ ಹಾಗೂ ಅವರ ಪತ್ನಿ ಶಕುಂತಲಾ ಒಂದು ಒಳ್ಳೆಯ ನೆರೆಮನೆಯ ಉದಾಹರಣೆಯನ್ನು ಪ್ರಸ್ತುತಪಡಿಸಿದರು. ನಾವು ದೀಪಾವಳಿ ಹಬ್ಬದ ನಿಮಿತ್ತ ಊರಿಗೆ ಬಂದಿದ್ದೆವು. ನಾವು ಹೊರಗೆ ಖರೀದಿಗೆ ಹೋಗಿ ಮನೆಗೆ ಬರುವಷ್ಟರಲ್ಲಿ ನಮ್ಮ ಮನೆ ಮುಂದೆ ದೀಪಗಳು ಉರಿಯುತ್ತಿದ್ದವು.

ನಮ್ಮ ಮನೆ ಎದುರುಗಡೆಯ ಮನೆಗೆ ಕೆಲವು ತಿಂಗಳುಗಳ ಹಿಂದೆ ವೃದ್ಧ ದಂಪತಿಗಳು ಬಂದಿದ್ದರು. ಅವರೇ ಈ ದೀಪಗಳನ್ನು ಇಟ್ಟಿದ್ದರು. ಆ ದೃಶ್ಯ ನೋಡಿ ನನ್ನ ಮನಸ್ಸು ತುಂಬಿಬಂತು. ಬಳಿಕ ನಾನು ಅವರ ಮನೆಗೆ ಹೋಗಿ ಧನ್ಯವಾದ ತಿಳಿಸಿದೆ.

ಅವರು ಹೇಳಿದರು, ``ಇದರಲ್ಲಿ ಧನ್ಯವಾದ ಹೇಳುವ ಅಗತ್ಯವೇನಿದೆ? ನಿಮ್ಮ ಮನೆ ಖಾಲಿ ಇದೆ ಅನಿಸಿತು. ಆ ಖಾಲಿ ಮನೆಯ ಕತ್ತಲನ್ನು ಓಡಿಸಲೆಂದು ನಾನು ದೀಪ ಬೆಳಗಿಸುವ ನಿರ್ಧಾರ ಮಾಡಿದೆ. ದೀಪಾವಳಿ ದಿನದಂದು ನಮ್ಮ ಮನೆಯೊಂದೇ ಬೆಳಕಾಗಬಾರದು. ಆ ಬೆಳಕಿನಲ್ಲಿ ಪಕ್ಕದ ಮನೆಗೂ ಪಾಲು ಸಿಗಬೇಕು.''

ಬದಲಾಗುತ್ತಿರುವ ಇಂದಿನ ಯುಗದಲ್ಲಿ ನೆರೆಮನೆಯವರು ಸಹಕಾರಿಗಳಲ್ಲ., ಸಮಸ್ಯೆಗ್ರಸ್ತರು ಎಂದು ಭಾವಿಸಿ ನಾವು ಅವರ ಜೊತೆಗೆ ಒರಟಾಗಿ ವರ್ತಿಸುತ್ತಿದ್ದೇವೆ. ವಾಸ್ತವ ಸಂಗತಿ ಏನೆಂದರೆ, ಇಂದಿನ ಯುಗದಲ್ಲಿ ನೆರೆಮನೆಯವರ ಮಹತ್ವ ಒಡಹುಟ್ಟಿದವರಿಗಿಂತ ಹಾಗೂ ಸಂಬಂಧಿಕರಿಗಿಂತ ಹೆಚ್ಚಿಗೆ ಇದೆ. ಈಗ ಹೆಚ್ಚಿನವರು ಉದ್ಯೋಗಸ್ಥರು. ಅವರಲ್ಲಿ ಅನೇಕರು ತಮ್ಮ ಮೂಲ ಮನೆಯಿಂದ, ಊರಿನಿಂದ ಬಹು ದೂರ ಇದ್ದಾರೆ. ಈ ಕಾರಣದಿಂದ ಮನೆಯರು ಹಾಗೂ ಸಂಬಂಧಿಕರಿಂದ ಸಂಪರ್ಕ ಅಷ್ಟಕಷ್ಟೇ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ನಿಮಗೇನಾದರೂ ಸಮಸ್ಯೆ ಉಂಟಾದಲ್ಲಿ ಆಗ ನೆರವಿಗೆ ಬರುವವರು ನೆರೆಯವರೇ ಹೊರತು, ದೂರದಲ್ಲಿರುವ ನಿಮ್ಮ ಸ್ನೇಹಿತರಾಗಲಿ, ಸಂಬಂಧಿಕರಾಗಲಿ ಅಲ್ಲ. ಈಗ ಸೋಮಶೇಖರ್‌ರವರ ದೀಪದ ಬೆಳಕು ವಿಸ್ತಾರಗೊಳ್ಳಬೇಕಾದ ಅಗತ್ಯವಿದೆ. ಅವರು ದೀಪ ಹಚ್ಚಿ ನೆರೆಮನೆಯವರ ಹೃದಯದಲ್ಲಿ ಬೆಳಕು ಬೀರಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ