ಇತ್ತೀಚಿನ ದಿನಗಳಲ್ಲಿ ರೇಪ್‌ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಹೊರಟಿವೆ. ಆದರೆ ಅದೆಷ್ಟೋ ಸಲ ಎಂತಹ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತವೆಂದರೆ, ಅದರಲ್ಲಿ ಪ್ರೇಯಸಿ ತನ್ನ ಪ್ರಿಯಕರನ ಮೇಲೆ ರೇಪ್‌ ಆರೋಪ ಹೊರಿಸುತ್ತಾಳೆ. ಇಂತಹ ಪ್ರಕರಣಗಳು ನಿಜಕ್ಕೂ ಗಾಬರಿಗೊಳಿಸುವಂತವಾಗಿರುತ್ತವೆ.

ಹೈದರಾಬಾದಿನಿಂದ ಬೆಂಗಳೂರಿಗೆ ಬಂದಿದ್ದ ಮೋಹನ್‌ ನ ಪ್ರಕರಣ ಹೀಗೆಯೇ ಚಕಿತಗೊಳಿಸುವಂಥದ್ದು. ಮೋಹನ್‌ ತನ್ನ ಗರ್ಲ್ ಫ್ರೆಂಡ್‌ ಕಾಂಚನಾ ಜೊತೆ ಒಂದೇ ಫ್ಲ್ಯಾಟಿನಲ್ಲಿ ವಾಸಿಸುತ್ತಿದ್ದ. ಇಬ್ಬರೂ ಜೊತೆ ಜೊತೆಗಿದ್ದು ಬ್ಯಾಂಕಿಂಗ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಇಬ್ಬರೂ ಜೊತೆ ಜೊತೆಗೆ ಕೋಚಿಂಗ್‌ ಸೆಂಟರಿಗೂ ಹೋಗುತ್ತಿದ್ದರು. ಇಬ್ಬರೂ ಹೆಚ್ಚಿನ ಹೊತ್ತು ಜೊತೆ ಜೊತೆಗೇ ಕಳೆಯುತ್ತಿದ್ದರು.

ಮೋಹನ್‌ ತನ್ನ ಕೆರಿಯರ್‌ ಬಗ್ಗೆ ಬಹಳ ಸೀರಿಯಸ್‌ ಆಗಿದ್ದ. ಆದರೆ ಕಾಂಚನಾ ತನ್ನ ಕೆರಿಯರ್‌ ಗಿಂತ ಹೆಚ್ಚಾಗಿ ಮೋಹನ್‌ ಬಗ್ಗೆ ಹೆಚ್ಚು ಸೀರಿಯಸ್‌ ಆಗಿದ್ದಳು. ಅಂದರೆ ಅವಳು ಮೋಹನ್‌ ನಲ್ಲಿ ತನ್ನ ಭವಿಷ್ಯವನ್ನು ಕಾಣುತ್ತಿದ್ದಳು.

ಉತ್ತರ ಪ್ರದೇಶದ ಲಖನೌದವಳಾಗಿದ್ದ ಕಾಂಚನಾ ಅಷ್ಟಿಷ್ಟು ಹಠಮಾರಿ ಹಾಗೂ ಕೋಪಿಷ್ಠೆ. ಬೆಂಗಳೂರಿಗೆ ಬಂದ ಬಳಿಕ ಅವಳ ಸ್ವಭಾವದಲ್ಲಿ ಬಹಳಷ್ಟು ಬದಲಾವಣೆ ಬಂದಿತ್ತು. ಕೋಚಿಂಗ್‌ ಸೆಂಟರ್‌ನಲ್ಲಿ ಇಬ್ಬರ ಭೇಟಿಯಾಗಿ ನಂತರ ಪರಸ್ಪರ ನಿಕಟವಾಗಿದ್ದರು.

ಆ ನಿಕಟತೆ ಮೋಹನ್‌ ಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬ ಅಂದಾಜು ಅವನಿಗಿರಲಿಲ್ಲ. ಒಂದೇ ಫ್ಲ್ಯಾಟಿನಲ್ಲಿದ್ದರೂ ಮೋಹನ್‌ ಎಂದೂ ಕಾಂಚನಾಳ ಜೊತೆಗೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸಲಿಲ್ಲ. ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು, ಆದರೆ ಒಂದು ಇತಿಮಿತಿಯಲ್ಲೇ ಇದ್ದರು.

ಮೋಹನ್‌ ತನ್ನ ಕುಟುಂಬದಲ್ಲಿ ಏಕೈಕ ಪುತ್ರನಾಗಿದ್ದ. ಅವನು ಬೇಗ ಮದುವೆಯಾಗಬೇಕೆಂದು ಅವನ ಪೋಷಕರು ಬಯಸುತ್ತಿದ್ದರು. ಇತ್ತ ಮೋಹನನಿಗೆ ಪರೀಕ್ಷೆಗಳು ಆರಂಭವಾಗಲಿದ್ದವು. ಅತ್ತ ಕಡೆಯಿಂದ ಮದುವೆಯ ಒತ್ತಡ ಪರೀಕ್ಷೆ ಕ್ಲಿಯರ್ ಆದರೆ ಮಾತ್ರ ತಾನು ಬೇಗ ಮದುವೆಯಾಗುವುದಾಗಿ ಅವನು ಕೋಪದಿಂದ ತನ್ನ ಅಪ್ಪಅಮ್ಮನಿಗೆ ಹೇಳಿದ್ದ.

2 ತಿಂಗಳ ಬಳಿಕ ಮೋಹನನ ಪರೀಕ್ಷೆ ಪರಿಣಾಮ ಬಂತು. ಅದನ್ನು ಕಂಡು ಕಾಂಚನಾಳ ಕಾಲ ಕೆಳಗಿನ ನೆಲ ಅದುರಿದಂತೆ ಆಯಿತು. ಏಕೆಂದರೆ ಮೋಹನ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ.

ಮೋಹನ್‌ ಈಗ ತನ್ನಿಂದ ದೂರವಾಗುತ್ತಾನೆಂದು ಕಾಂಚನಾಳಿಗೆ ಹೆದರಿಕೆಯಾಗುತ್ತಿತ್ತು. ಪರೀಕ್ಷಾ ಪರಿಣಾಮದ ಬಗ್ಗೆ ಮೋಹನ್ ಅಷ್ಟೇ ಅಲ್ಲ, ಅವನ ಕುಟುಂಬದವರು ಕೂಡ ಬಹಳ ಖುಷಿಗೊಂಡಿದ್ದರು.

ಇತ್ತ ಕಾಂಚನಾಳ ವರ್ತನೆಯಲ್ಲಿ ಬಹಳಷ್ಟು ಬದಲಾವಣೆ ಕಂಡುಬರುತ್ತಿತ್ತು. ಮಾತು ಮಾತಿಗೂ ಕೋಪ ಸಿಡಿಮಿಡಿತನ ಉಂಟಾಗುತ್ತಿದ್ದುದು ಮೋಹನನ ಗಮನಕ್ಕೂ ಬಂದಿತ್ತು. ಆದರೆ ಅವನು ಕಾಂಚನಾಳಿಗೆ ಏನೂ ಹೇಳಿರಲಿಲ್ಲ. ಅವರಿಬ್ಬರೂ ಒಂದೇ ಫ್ಲ್ಯಾಟಿಗೆ ಬರುವ ಮುನ್ನವೇ ಮೋಹನ್‌ ಕಾಂಚನಾಗೆ ನಾನು ನಿನ್ನನ್ನು ಮದುವೆಯಾಗಲು ಆಗುವುದಿಲ್ಲ ಎಂದು ಹೇಳಿದ್ದ. ಆ ಮಾತಿಗೆ ಕಾಂಚನಾ ಕೂಡ ಒಪ್ಪಿಗೆ ಸೂಚಿಸಿದ್ದಳು. ಆದರೆ ಈಗ ಅವಳು ಅವನ ಮೇಲೆ ಹಕ್ಕು ಪ್ರತಿಪಾದಿಸಲು ಶುರುಮಾಡಿದ್ದಳು. ಆದರೆ ಅವಳ ಮಾತನ್ನು ಮೋಹನ್‌ ನಿರ್ಲಕ್ಷ್ಯ ಮಾಡುತ್ತಿದ್ದ.

ಕೆಲವು ದಿನಗಳ ಬಳಿಕ ಮೋಹನ್‌ ತಾನು ಇನ್ನು ಪ್ರತ್ಯೇಕವಾಗಿರಬೇಕೆಂದು ನಿರ್ಧರಿಸಿದ. ಹೀಗಾಗಿ ಅವನು ಕೆಲದಿನಗಳ ಮಟ್ಟಿಗೆಂದು ಊರಿಗೆ ಹೋದ. ಅಲ್ಲಿಗೆ ಹೋಗುತ್ತಿದ್ದಂತೆ ಅವನ ಪೋಷಕರು ಒಳ್ಳೆಯ ಮನೆತನದ ಹುಡುಗಿಯ ಜೊತೆಗೆ ಅವನಿಗೆ ನಿಶ್ಚಿತಾರ್ಥ ಕೂಡ ಮುಗಿಸಿಬಿಟ್ಟರು. ಮೋಹನ್‌ ಈ ವಿಷಯವನ್ನು ಕಾಂಚನಾಳಿಗೆ ಹೇಳಿದಾಗ, ಅವಳು ಅವನ ಮೇಲೆ ಕೂಗಾಡತೊಡಗಿದಳು. ತನ್ನೊಂದಿಗೆ ಮದುವೆಯಾಗದಿದ್ದರೆ ತಾನು ಸಾಯುವುದಾಗಿಯೂ, ಅವನ ಜೀವನವನ್ನೇ ಹಾಳು ಮಾಡುವುದಾಗಿಯೂ ಬೆದರಿಕೆ ಹಾಕತೊಡಗಿದಳು.

ಮೋಹನ್‌ ಕಾಂಚನಾಳಿಗೆ ಅದೆಷ್ಟೇ ತಿಳಿಹೇಳಿದರೂ ಅವಳು ತನ್ನ ಹಠಕ್ಕೆ ಕಟ್ಟುಬಿದ್ದಿದ್ದಳು. ನಿಶ್ಚಿತಾರ್ಥದ ಬಳಿಕ ಮೋಹನ್ ಬೆಂಗಳೂರಿನ ತನ್ನ ಫ್ಲ್ಯಾಟಿಗೆ ಸಾಮಾನುಗಳನ್ನು ಒಯ್ಯಲೆಂದು ಬಂದಾಗ ಕಾಂಚನಾ ಫ್ಲ್ಯಾಟ್‌ ನಲ್ಲಿಯೇ ಇದ್ದಳು. ಅವನು ಬರುತ್ತಿದ್ದಂತೆ ಅವಳು ಬಿಕ್ಕಿ ಬಿಕ್ಕಿ ಅಳತೊಡಗಿದಳು ಹಾಗೂ ತನ್ನೊಂದಿಗೆ ಮದುವೆಯಾಗಲು ಆಗ್ರಹಿಸತೊಡಗಿದಳು. ಮೋಹನ್ ಅವಳಿಗೆ ತಿಳಿಹೇಳ ತೊಡಗಿದ.

ಆಗ ಕಾಂಚನಾ ಅವನ ಮನೆಯವರಿಗೂ ಏನೇನೊ ಹೇಳತೊಡಗಿದಳು. ಅದು ಮೋಹನನಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಅವನು ಆ ಕ್ಷಣವೇ ಕೋಪದಿಂದ ಅಲ್ಲಿಂದ ಹೊರಟುಹೋದ.

ಅವನು ಆ ರಾತ್ರಿ ತನ್ನ ಸ್ನೇಹಿತನ ಮನೆಗೆ ಹೋದ. ಮೋಹನ್‌ ದುಃಖಿತನಾಗಿರುವುದನ್ನು ನೋಡಿ ಅವನ ಗೆಳೆಯ ಕಾರಣ ಕೇಳಿದ. ಆದರೆ ಮೋಹನ್‌ ಮೌನದಿಂದಿದ್ದ. ಬೆಳಗ್ಗೆ ಮೋಹನ್‌ ಎದ್ದಾಗ ಎಲ್ಲ ಬದಲಾಗಿತ್ತು. ಪೊಲೀಸರು ಅವನ ಎದುರು ನಿಂತಿದ್ದರು. ಅವನ ಸ್ನೇಹಿತನ ಮನೆಯವರು ಅವನನ್ನು ಕೋಪದಿಂದ ನೋಡುತ್ತಿದ್ದರು. ಇದೆಲ್ಲ ಏನಾಗುತ್ತದೆ ಎಂದು ಅವನಿಗೆ ಕಲ್ಪನೆ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ. ಆಗಿದ್ದು ಇಷ್ಟೇ, ಕಾಂಚನಾ ಅವನ ಮೇಲೆ ರೇಪ್‌ ಆರೋಪ ಹೊರಿಸಿದ್ದಳು. ತನ್ನ ಮೇಲಿನ ಆರೋಪ ಕೇಳಿ ಮೋಹನ್‌ ಕಂಗಾಲಾಗಿ ಹೋದ. ಕಾಂಚನಾ ತನ್ನ ಮೇಲೆ ಇಂತಹ ಆರೋಪ ಹೊರಿಸಬಹುದೆಂದು ಅವನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಕಾಂಚನಾಳ ಮುಖಾಂತರ ಮೋಹನನ ಮೇಲೆ ರೇಪ್‌ ನ ಸುಳ್ಳು ಪ್ರಕರಣದಿಂದಾಗಿ ಅವನ ಜೀವನ ಸಂಪೂರ್ಣ ಹಾಳಾಗಿ ಹೋಯಿತು.

ಇದೆಲ್ಲ ಹೇಗಾಗುತ್ತದೆ?

IB137231-137231115754647-SM81816

ಅಂದಹಾಗೆ, ಪರಸ್ಪರ ಸಂಪರ್ಕದಲ್ಲಿರುವಾಗ ಅಂದರೆ, ದೀರ್ಘಾವಧಿ ತನಕ ಜೊತೆಗಿದ್ದಾಗ, ಎಮೋಶನಲ್ ಅಟ್ಯಾಚ್‌ ಮೆಂಟ್‌ಉಂಟಾಗುತ್ತದೆ. ಈ ಅಚ್ಯಾಟ್‌ ಮೆಂಟ್‌ ಎಷ್ಟೊಂದು ಗಾಢವಾಗುತ್ತದೆಂದರೆ, ಒಬ್ಬರು ಇನ್ನೊಬ್ಬರಿಂದ ದೂರವಾದರೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಅದರಲ್ಲಿ ಒಬ್ಬರು ನಕಾರಾತ್ಮಕ ಪ್ರತಿಕ್ರಿಯೆ ತೋರಿದಾಗ, ಇನ್ನೊಬ್ಬರು ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಾರೆ.

ಈ ಕುರಿತಂತೆ ಮನೋತಜ್ಞ ಡಾ. ಶಮಂತ್‌ ಹೀಗೆ ಹೇಳುತ್ತಾರೆ, “ನಾನು ಯಾರದ್ದಾದರೂ ಜೊತೆಗೆ ಹೆಚ್ಚು ಸಮಯ ಕಳೆದಾಗ, ಅವರು ಮನುಷ್ಯರೇ ಆಗಿರಬಹುದು ಅಥವಾ ಪ್ರಾಣಿಯಾಗಿರಬಹುದು, ನಾವು ಹೆಚ್ಚು ನಿಕಟರಾಗಿಬಿಡುತ್ತೇವೆ. ನಮ್ಮೊಂದಿಗೆ  ನಿಕಟರಾಗಿದ್ದ ವ್ಯಕ್ತಿ ದೂರ ಹೋದಾಗ ಅದರ ಅನುಭವ ನಮಗೆ ಆಗತೊಡಗುತ್ತದೆ.”

ಒಂದು ವೇಳೆ ನಾವು ರಿಲೇಶನ್‌ ಶಿಪ್‌ ನಲ್ಲಿದ್ದು ಒಂದೇ ರೂಮಿನಲ್ಲಿ ಒಬ್ಬ ವ್ಯಕ್ತಿಯ ಜೊತೆ ಚಿಕ್ಕಪುಟ್ಟ ವಿಷಯಗಳನ್ನು ಹಂಚಿಕೊಳ್ಳುವುದು ನಮ್ಮ ಜೀವನದ ಒಂದು ಭಾಗವೇ ಆಗಿರುತ್ತದೆ. ಅಂದಹಾಗೆ, ನಮಗಿದು ಅಭ್ಯಾಸವೇ ಆಗಿಬಿಡುತ್ತದೆ. ಹಾಗೇನಾದರೂ ಅದಕ್ಕೆ ಅವಕಾಶ ಸಿಗದೇ ಇದ್ದಾಗ ಕೋಪಬರುವುದು ಸ್ವಾಭಾವಿಕ.

ಅಗತ್ಯಕ್ಕಿಂತ ಹೆಚ್ಚು ಕೋಪ ಬರುವುದು, ಮಾತು ಮಾತಿಗೂ ಜಗಳವಾಗುವುದು ಮಾಡುತ್ತಿದ್ದಾಗ, ಎದುರಿನ ವ್ಯಕ್ತಿಗೆ ಅದು ಇಷ್ಟವಾಗುವುದಿಲ್ಲ. ಅಂತಹ ವ್ಯಕ್ತಿಗಳು ಒಮ್ಮೊಮ್ಮೆ ಅತಿಯಾಗಿ ಕೋಪ ಮಾಡಿಕೊಳ್ಳುತ್ತಾರೆ, ಮತ್ತೊಮ್ಮೆ ಶಾಂತವಾಗಿರುತ್ತಾರೆ. ಅವರ ಈ ರೀತಿಯ ವರ್ತನೆ ಅವರನ್ನು ಖಿನ್ನತೆಯತ್ತ ಕೊಂಡೊಯ್ಯುತ್ತದೆ. ಖಿನ್ನತೆಗೆ ತುತ್ತಾದ ವ್ಯಕ್ತಿ ತನ್ನೊಳಗೆ ತಾನು ಮಗ್ನನಾಗಿರುತ್ತಾನೆ. ಅಂಥವರು ಹಠಕ್ಕೆ ಬಿದ್ದು ಏನೂ ಮಾಡಲು ಸಿದ್ಧರಾಗಿರುತ್ತಾರೆ.

ಆದರೆ ಎಂತಹ ಕೆಲವು ಜನರೂ ಇರುತ್ತಾರೆ ಎಂದರೆ, ತಮ್ಮ ವೈಯಕ್ತಿಕ ಲಾಭಕ್ಕೆ ಎಂತಹ ಘೋರ ಆರೋಪವನ್ನಾದರೂ ಹೊರಿಸುತ್ತಾರೆ.

ಸುಳ್ಳು ಆರೋಪದಿಂದ ರಕ್ಷಣೆ ಹೇಗೆ?

ರೇಪ್‌ ಒಂದು ಘೋರ ಆರೋಪ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಒಪ್ಪಿಗೆ ಮೇರೆಗೆ ಸಂಬಂಧ ಬೆಳೆಸುವುದು ಹಾಗೂ ಆ ಬಳಿಕ ಹುಡುಗಿ ರೇಪ್‌ ಆಯ್ತೆಂದು ಸುಳ್ಳು ಆರೋಪ ಹೊರಿಸಿದರೆ ಅದು ಕಾನೂನಿನ ದುರುಪಯೋಗವೇ ಹೌದು.

ಎಷ್ಟೋ ಸಲ ಹುಡುಗಿಯ ತಂದೆತಾಯಿ ಕೂಡ ಹೀಗೆ ಮಾಡುತ್ತಾರೆ. ಅದೂ ಕೂಡ ಒಂದಿಷ್ಟು ಹಣಕ್ಕಾಗಿ ಹಾಗೂ ಸುಖ ಸೌಲಭ್ಯಗಳಿಗಾಗಿ. ಇದೆಂಥ ತಿಳಿವಳಿಕೆ? ಅದರಿಂದ ತಮ್ಮ ಮಗಳ ಜೀವನದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆಂಬ ಅರಿವು ಕೂಡ ಅವರಿಗಿರುವುದಿಲ್ಲ.

ಒಂದು ವೇಳೆ ಯಾರ ಮೇಲಾದರೂ ರೇಪ್‌ ನ ಸುಳ್ಳು ಆರೋಪ ಹೊರಿಸಿದರೆ, ಅದು ಸುಳ್ಳೆಂದು ಸಾಬೀತಾದರೆ, ಕಾನೂನಿನ ಪ್ರಕಾರ ಆರೋಪ ಹೊರಿಸುವ ವ್ಯಕ್ತಿಗೆ 10 ವರ್ಷಗಳ ಸಜೆಯ ಜೊತೆಗೆ ದಂಡ ಕೂಡ ತೆರಬೇಕಾಗುತ್ತದೆ.

ಒಂದು ಮಹತ್ವದ ಸಂಗತಿಯೆಂದರೆ, ಆ ನಿರಪರಾಧಿಗಳನ್ನು ರೇಪ್‌ ನ ಸುಳ್ಳು ಆರೋಪಗಳಿಂದ ಹೇಗೆ ರಕ್ಷಿಸುವುದು? ಇಂದು ಅದೆಷ್ಟೋ ನಿರಪರಾಧಿಗಳು ಈ ಕಳಂಕದೊಂದಿಗೆ ಜೈಲಿನ ಕಂಬಿಗಳ ಹಿಂಗೆ ಕಾಲ ಕಳೆಯುವಂತಾಗಿದೆ.

ಕೆಲವು ಸಲಹೆಗಳು

ಈ ಕುರಿತಂತೆ ವಕೀಲರಾದ ಸುಭಾಷ್‌ ಶರ್ಮ ಹೀಗೆ ಹೇಳುತ್ತಾರೆ, “ಇತ್ತೀಚಿನ ದಿನಗಳಲ್ಲಿ ಮಹಿಳೆ ಅಥವಾ ಪುರುಷನ ಜೊತೆಗೆ ಸ್ನೇಹ ಬೆಳೆಸಿದ ಬಳಿಕ ದೈಹಿಕ ಸಂಬಂಧ ಹೊಂದುವುದು ವಿಶೇಷ ಸಂಗತಿಯೇನೂ ಅಲ್ಲ. ಇಂತಹದರಲ್ಲಿ ಬಹಳಷ್ಟು ಹುಡುಗಿಯರು, ಮದುವೆಗೆ ಒತ್ತಾಯಿಸಿ ಅಥವಾ ಮೋಸ ಮಾಡುವ ಉದ್ದೇಶದಿಂದ ಪುರುಷರ ಮೇಲೆ ರೇಪ್‌ ನ ಆರೋಪ ಹೊರಿಸುತ್ತಾರೆ. ಒಂದು ವೇಳೆ ಯಾರಾದರೂ ಪುರುಷ ಮದುವೆಯ ಆಮಿಷ ತೋರಿಸಿ, ದೈಹಿಕ ಸಂಬಂಧ ಬೆಳೆಸಿದರೆ, ಅದನ್ನು ರೇಪ್‌ ನ ಶ್ರೇಣಿಯಲ್ಲಿ ಇರಿಸಲಾಗುತ್ತದೆ. ಆದರೆ ಎಷ್ಟೋ ಸಲ ಹುಡುಗ ನಿರಪರಾಧಿಯಾಗಿರುತ್ತಾನೆ ಮತ್ತು ಹುಡುಗಿಯ ಜಾಲಕ್ಕೆ ಸಿಲುಕುತ್ತಾನೆ. ಇಂತಹ ಸ್ಥಿತಿಯಲ್ಲಿ ಹುಡುಗರು ಈ ಸಲಹೆಗಳನ್ನು ಗಮನಿಸಬೇಕು.

ಒಂದು ವೇಳೆ ರೇಪ್‌ ಮಾಡಿರುವ ಯಾವುದೇ ಸೂಕ್ತ ಪುರಾವೆಗಳು ಇಲ್ಲದೇ ಇದ್ದಾಗ, ನೀವು ಆ ಹುಡುಗಿಯ ಜೊತೆ ದೈಹಿಕ ಸಂಬಂಧವನ್ನು ನಿರಾಕರಿಸಬಹುದು. ಅಷ್ಟೇ ಅಲ್ಲ, ವೈದ್ಯಕೀಯ ಟೆಸ್ಟ್ ನಲ್ಲಿ `ಟೂ ಫಿಂಗರ್‌ ಟೆಸ್ಟ್’ನ ರಿಪೋರ್ಟ್‌ ನ್ನು ಆಧರಿಸಿ  ಹುಡುಗಿಯ ಆರೋಪ ಸುಳ್ಳು ಎಂದು ಸಾಬೀತು ಪಡಿಸಬಹುದು.

ಒಂದು ವೇಳೆ ಹುಡುಗಿಯೇ ನಿಮಗೆ ದೈಹಿಕ ಸಂಬಂಧಕ್ಕೆ ಕೋರಿಕೆ ಸಲ್ಲಿಸಿದ್ದರೆ, ಅದರ ಪುರಾವೆ ನಿಮ್ಮ ಬಳಿ ಇದ್ದರೆ ಅದನ್ನು ನೀವು ಕೋರ್ಟಿಗೆ ಸಲ್ಲಿಸಬಹುದು.

ಒಂದು ವೇಳೆ ದೈಹಿಕ ಸಂಬಂಧದ ವರದಿ ಪೆರೆನ್ಸಿಕ್‌ ರಿಪೋರ್ಟ್‌ ಅಥವಾ ಆಡಿಯೋ ಅಥವಾ ವಿಡಿಯೋದಲ್ಲಿ ಇದ್ದರೆ ನೀವು ಸಂಬಂಧ ಹೊಂದಿರುವುದನ್ನು ಸ್ವೀಕರಿಸಿ ಹಾಗೂ ಸಂಬಂಧವನ್ನು ಮೋಸದಿಂದ ಮಾಡಲಾಗಿಲ್ಲ ಎನ್ನುವುದನ್ನು ಸಾಬೀತು ಮಾಡಿ. ಆದರೆ ಒಂದು ಸಂಗತಿ ಗಮನದಲ್ಲಿರಲಿ, ಹುಡುಗಿಯ ವಯಸ್ಸು 18ಕ್ಕಿಂತ ಮೇಲ್ಪಟ್ಟಿದ್ದರೆ ಮಾತ್ರ ಅದು ಸಾಧ್ಯ.

ಮೆಡಿಕಲ್ ರಿಪೋರ್ಟ್‌ ನಲ್ಲಿನ ನ್ಯೂನತೆಗಳನ್ನು ಗಮನಿಸಿ ಹಾಗೂ ಅದನ್ನೇ ಅಸ್ತ್ರದ ರೂಪದಲ್ಲಿ ಉಪಯೋಗಿಸಿಕೊಳ್ಳಿ.

ಒಂದು ವೇಳೆ ಪ್ರಕರಣ ಹೆಚ್ಚು ಗಂಭೀರವಾಗಿದ್ದರೆ ಚಾರ್ಜ್‌ ಶೀಟ್‌ ಬೇಗ ಫೈಲ್ ‌ಮಾಡಲು ಪ್ರಯತ್ನಿಸಿ.

– ಸಂಗೀತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ