ದೆಹಲಿಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಲಭಾಗದ ಎಂಜಿನ್ ಹಾರಾಟದ ವೇಳೆ ಏಕಾಏಕಿ ಸ್ಥಗಿತಕೊಂಡಿದ್ದು, ಪರಿಣಾಮ ಟೇಕಾಫ್ ಆದ ಸ್ವಲ್ಪ ಹೊತ್ತಲ್ಲೇ ದೆಹಲಿಗೆ ಮರಳಿದೆ.
ಸೋಮವಾರ (ಡಿ.22) ಬೆಳಗ್ಗೆ 6:10ಕ್ಕೆ ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ 887 ಸಂಖ್ಯೆಯ ಬೋಯಿಂಗ್ 777 ವಿಮಾನವು 6:52ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಈ ಕುರಿತು ಡಿಜಿಸಿಎ ಮಾಹಿತಿ ನೀಡಿದ್ದು, ವಿಮಾನ ಹಾರಾಟದ ವೇಳೆ ಒಂದು ಎಂಜಿನ್ನ ಕಾರ್ಯ ಸ್ಥಗಿತಗೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಲಾಗಿದೆ. ಅವಳಿ ಎಂಜಿನ್ ಹೊಂದಿರುವ ವಿಮಾನಗಳು ಒಂದು ಎಂಜಿನ್ ಮೂಲಕ ಲ್ಯಾಂಡ್ ಆಗಬಹುದು. ಸದ್ಯ ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಸದ್ಯ ಎಂಜಿನ್ ವೈಫಲ್ಯದ ಕುರಿತು ಪರಿಶೀಲನೆ ನಡೆಯುತ್ತಿದೆ. ಬಲಭಾಗದ ಎಂಜಿನ್ನಲ್ಲಿ ಆಯಿಲ್ ಪ್ರೇಷರ್ ಶೂನ್ಯಕ್ಕೆ ಕುಸಿದಿತ್ತು. ಈ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪೈಲಟ್ನ ಸಮಯ ಪ್ರಜ್ಞೆಯಿಂದ ಸಂಭಾವ್ಯ ದುರಂತ ತಪ್ಪಿದಂತಾಗಿದೆ. ವಿಮಾನದಲ್ಲಿ 335 ಪ್ರಯಾಣಿಕರಿದ್ದರು. ನಂತರ ಅವರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಈ ಕುರಿತು ತನಿಖೆಗೆ ಆದೇಶಿಸಿದೆ.





