ಇಂದು ಅಧಿಕಾರ ಎಂಬುದು, ಕೇವಲ ವೋಟು ಆಧಾರಿತ ನೇತಾಗಳ ಕೈಯಲ್ಲಿ ಉಳಿಯದೆ, ಅಲ್ಲಿಂದ ಜಾರಿ ನೇತಾಗಳಿಗಾಗಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳ ಪಾಲಾಗಿದೆ. ಈ ಅಧಿಕಾರಿಗಳು ಈಗ ಹಳೆಯ ಪುರೋಹಿತರಂತೆ ಮಾತನಾಡುತ್ತಿದ್ದಾರೆ. ಆ ಕಂದಾಚಾರಿಗಳು, ಇಂದಿನ 21ನೇ ಶತಮಾನದಲ್ಲೂ ಹೆಂಗಸರನ್ನು ಸದಾ ಧರ್ಮವೆಂಬ ಸರಪಣಿಯಿಂದ ಬಂಧಿಸಿಡುತ್ತಾರೆ. ಈ ಅಧಿಕಾರಿಗಳೆಂಬ ಪುರೋಹಿತರು ಎಲ್ಲಾ ಗಂಡಸು ಹೆಂಗಸರಿಗೂ ಹೇಳುವುದಿಷ್ಟೆ, ಇವರ ತಲೆಯಿಂದ ಅವರಿಗೆ ಸಿಕ್ಕಿರುವುದೆಲ್ಲ ದೇವರ ಅನುಗ್ರಹ ಹಾಗೂ ಅವರಿಂದ ಏನೇ ಕಿತ್ತುಕೊಂಡಿದ್ದರೂ, ಅದು ದೇವರ ಕೃಪೆಯಂತೆ.

ಹಿಂದಿನಿಂದಲೂ ಹಾಗೂ ಈಗಲೂ ಸಹ ಈ ಪುರೋಹಿತರು ಹೇಗೆ ಬ್ರೇನ್‌ ವಾಶ್‌ ಮಾಡುತ್ತಿದ್ದಾರೆಂದರೆ, ಇಡೀ ಜನತೆ ತಮ್ಮ ಎಲ್ಲಾ ದವಸಧಾನ್ಯ, ಪರಿಶ್ರಮ, ಬಟ್ಟೆಬರೆ ಮಾತ್ರವಲ್ಲದೆ, ಪ್ರಾಣವನ್ನೂ ಸಹ ಇವರ ಸೇವೆಗೆ ಒತ್ತೆ ಇಡಬೇಕು. ಹೆಂಗಸರು ಅಂದೂ ಇದನ್ನು ತಾವಾಗಿ ತೆರುತ್ತಿದ್ದರೂ, ಇಂದೂ ತೆರುತ್ತಾ ತಮ್ಮನ್ನೇ ತಾವು ದೋಷಿಗಳೆಂದು ವಿಧಿಗೆ ಶಾಪ ಹಾಕುತ್ತಾ ಸುಮ್ಮನಿದ್ದಾರೆ.

ಎಂದಿನಿಂದ ಆಧುನಿಕ, ತಾರ್ಕಿಕ, ವೈಜ್ಞಾನಿಕ ವಿಚಾರಧಾರೆಗಳು ಹುಟ್ಟಿಕೊಂಡವೋ, ಗಂಡಸರು ಈ ಪುರೋಹಿತರ ಮಾತನ್ನು ಬದಿಗಿಟ್ಟರು. ಆಗಿನಿಂದ ಗಂಡಸರ ಮೇಲೆ ರಾಜರು, ರಾಜಪುರೋಹಿತರ ಹಿಡಿತ ತಪ್ಪಿತು. ಆದರೆ ಹೆಂಗಸರಿಗೆ ಇಂಥ ಭಾಗ್ಯ ಲಭಿಸಲಿಲ್ಲ. ಮೊದಲಿನಿಂದಲೂ ಅವರು ಈ ಧರ್ಮದ ದಲ್ಲಾಳಿಗಳ ತಿಜೋರಿ ಭರ್ತಿ ಮಾಡುತ್ತಾ, ತಮ್ಮ ತನುಮನಗಳ ಸೇವೆಯನ್ನೂ ಮುಂದುವರಿಸುತ್ತಿದ್ದಾರೆ.

ಈಗ ಅಧಿಕಾರಿಗಳೆಂಬ ಈ ಪುರೋಹಿತರು ಭಾರತದಲ್ಲಿ ಹೇಳಲು ಶುರು ಮಾಡಿರುವುದೆಂದರೆ, ದೇಶದ ತುಸು ಸುಶಿಕ್ಷಿತ ಯುವಜನತೆಗೆ ಸರ್ಕಾರಿ ನೌಕರಿಗಳಿಗಾಗಿ ಕಾದು ಕುಳಿತಿರುವುದು ಬೇಡ ಎನ್ನುತ್ತಿದ್ದಾರೆ. ಸಂಜೀವ್ ‌ಸಂನ್ಯಲಾ ಎಂಬ ಒಬ್ಬ ಅಧಿಕಾರಿ ಯುವಜನತೆಯನ್ನು ಧಿಕ್ಕರಿಸುವಂತೆ, ಅವರೇಕೆ ಜೀವನದ ಅಮೂಲ್ಯ ವರ್ಷಗಳನ್ನು ಸರ್ಕಾರಿ ನೌಕರಿ ಹುಡುಕುವುದರಲ್ಲೇ ಕಳೆದುಬಿಡುತ್ತಾರೆ, ಅದರ ಬದಲಿಗೆ ಅವರು ಆ್ಯಲೆನ್‌ ಮಸ್ಕ್ ಅಥವಾ ಮುಕೇಶ್‌ ಅಂಬಾನಿ ಆಗಬಾರದೇಕೆ ಎಂದು ಗುಡುಗಿದ್ದಾರೆ.

ಇಂದು ಅವರು ಜನತೆಗೆ ನೀಡುವ ಉಪದೇಶ ಎಂದರೆ, ಜನ ತಪಸ್ಸು ಮಾಡಿ ಇಂದ್ರ ಪದವಿ ಪಡೆಯಲು ಎಲ್ಲವನ್ನೂ ತ್ಯಾಗ ಮಾಡಬೇಕು, ಅವರ ಕಣ್ಣು ತಪ್ಪಿಸಿ, ಹೇಗೋ ಬುದ್ಧಿವಂತಿಕೆಯಿಂದ ಒಂದು ಮನೋಹರ ಆಶ್ರಮ ಸ್ಥಾಪಿಸಬೇಕು, ಅದರ ರಕ್ಷಣೆಯ ಹೊಣೆ ರಾಜರದಂತೆ!

ಸಂಜೀವ್ ‌ಮುಂದುವರಿಯುತ್ತಾ, 2 ಹೊತ್ತಿನ ಊಟ ಪಡೆಯುವುದಕ್ಕಾಗಿ ಯುವಜನತೆ ಸರ್ಕಾರಿ ನೌಕರಿ ಹುಡುಕುವ ಬದಲು, ಸಣ್ಣಪುಟ್ಟ ಹೋಟೆಲ್ ‌ಸ್ಥಾಪಿಸಿ, ನೂರಾರು ಜನ ಬಂದು ಉಂಡು ಹೋಗುವಂತೆ ಮಾಡಬೇಕು ಎನ್ನುತ್ತಾರೆ. ಯುವಜನತೆ ಘನ ಉದ್ದೇಶ ಹೊಂದಿರಬೇಕು, ಕೇವಲ ಅಲ್ಪತೃಪ್ತರಾಗಿ ಇರಬಾರದು. ತಾನೇ ಸರ್ಕಾರಿ ಹುದ್ದೆಯಲ್ಲಿ ಕುಳಿತುಕೊಂಡ ಈತ ಹೀಗೆ ಉಪದೇಶ ನೀಡುವುದು ಹೇಗಿದೆ ಅಂದ್ರೆ, ಪ್ರತಿ ಪ್ರವಚನದಲ್ಲೂ ಪುರೋಹಿತರು/ಪಾದ್ರಿಗಳು ಭವ್ಯ ಭವನದಲ್ಲಿ ಚಿನ್ನದ ಸಿಂಹಾಸನದಲ್ಲಿ ಕುಳಿತು ಮಾಯೆಗೆ ಮೋಹದ ಹೆಸರು ನೀಡಿ, ಮೋಕ್ಷ ಪಡೆಯಲು ತ್ಯಾಗದ ಮಹಿಮೆ ಹೊಗಳುವುದಾಗಿದೆ. ಇಂಥ ಆಫೀಸರ್‌ ಗಳು ವಿಶ್ವದ ಎಲ್ಲೆಡೆ ಹೇಳುವುದೆಂದರೆ, ನಿಮ್ಮ ಆಸೆಗಳನ್ನು ನಿಯಂತ್ರಿಸಿ, ನಿಮ್ಮ ಕರ್ಮವನ್ನು ಪೂರ್ಣಗೊಳಿಸಿ, ಆಡಳಿತ ಮಂದಿಗೆ ಸದಾ ಸೇವೆ ಮಾಡುತ್ತಿರಿ ಅಂತ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ