ದ್ವಾಪರಯುಗದ ಕೃಷ್ಣನ ದ್ವಾರಕಾ ಪಟ್ಟಣ ಸಮುದ್ರದಲ್ಲಿ ಮುಳುಗಡೆಯಾಗಿ ಅದರ ಅವಶೇಷಗಳು ಸಮುದ್ರ ತಳದಲ್ಲಿರುವುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಆದರೆ, ಅದನ್ನು ಎಲ್ಲರಿಗೂ ನೋಡಲು ಸಾಧ್ಯವಾಗದಿರಬಹುದು. ಆದರೆ, ಈ ಕಲಿಯುಗದಲ್ಲಿ ಆತನಿಗಾಗಿ ನಿರ್ಮಿಸಿದ್ದ ಸುಂದರ ಆಲಯವೆಂದು ಯಾರ ಅರಿವಿಗೂ ಬಾರದಂತೆ ಮೈಸೂರಿನ ಸುಪ್ರಸಿದ್ಧ ಕೃಷ್ಣರಾಜ ಸಾಗರದ ಕಾವೇರಿ ಒಡಲಲ್ಲಿ ಮುಳುಗಡೆಯಾಗಿ, ಈಗ ನಂಬಲಸಾಧ್ಯವಾಗುವಂತೆ ಮತ್ತೆ ಮರುಜನ್ಮ ಪಡೆದು ಜಲಾಶಯದ ಬಲದಂಡೆಯ ಮೇಲೆ ನವಜಾತ ಶಿಶುವಿನಂತೆ ನೆವೆ ಕಂಡುಕೊಂಡಿರುವ ಕೌತುಕದ ಸಂಗತಿಯನ್ನು ಯಾರು ಬೇಕಾದರೂ ಸಾಕ್ಷೀಕರಿಸಬಹುದಾಗಿದೆ. ಇದೆಲ್ಲದರ ಕುತೂಹಲಕಾರಿ ಘಟನಾವಳಿಗಳು ಇಂತಿವೆ.

ಪಶ್ಚಿಮ ಘಟ್ಟದ ತೆಕ್ಕೆಯಲ್ಲಿರುವ ಬ್ರಹ್ಮಗಿರಿ ಪರ್ವತದ ಮಡಿಲಲ್ಲಿ ಉಗಮಿಸುವ ಕಾವೇರಿ, ಗುಪ್ತಗಾಮಿನಿಯಾಗಿ ಗಿರಿಯನ್ನಿಳಿದು, ಅಲ್ಲಿ ಇಲ್ಲಿ ಸುತ್ತಿ ಸುಳಿದು, ಕಾಡು ಮೇಡುಗಳನ್ನು ಅಲೆದು, ಮೇಲಿನಿಂದ ಜಿಗಿದು, ಪ್ರಪಾತದಲ್ಲಿ ಸುಳಿದು ತನ್ನ ಪಾಡಿಗೆ ತಾನು ಹರಿದು ಬಂಗಾಳಕೊಲ್ಲಿಯೊಡನೆ ಸಂಲಗ್ನಗೊಳ್ಳುತ್ತಿದ್ದಳು. ಆದರೆ, ಆಕೆ ವ್ಯರ್ಥವಾಗಿ ಹರಿಯುವುದನ್ನು ಕಂಡ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಕೃಷ್ಣರಾಜ ಒಡೆಯರ್‌ರವರು ಜನತೆಯ ಉಪಯೋಗಕ್ಕಾಗಿ ಕನ್ನಂಬಾಡಿ ಎಂಬ ಗ್ರಾಮದ ಬಳಿ ವಿಶ್ವವೇ ಬೆರಗುಪಡುವಂತಹ ಅಣೆಕಟ್ಟನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ ಅಡೆತಡೆ ಇಲ್ಲದೆ ಹರಿಯುತ್ತಿದ್ದ ಕಾವೇರಿ ಅಣೆಕಟ್ಟೆಯ ಎಡ ಬದಿಗೆ ಶರಧಿಯಂತೆ ಮೈ ಹರವಿ ಕೃಷ್ಣರಾಜಸಾಗರದ ಹೆಸರಲ್ಲಿ ನೆಲೆ ನಿಂತು ಮಂಡ್ಯ ಮತ್ತು ಮೈಸೂರು ಜನತೆಯ ಜೀವಸೆಲೆಯಾದಳು.

ಅಣೆಕಟ್ಟೆಯ ಮತ್ತೊಂದೆಡೆ ನಂದನವನಕ್ಕೆ ಕಿಚ್ಚುಹಚ್ಚುವಂತಹ ಬೃಂದಾನ ಉದ್ಯಾನ ಮೈದಳೆದು ವಿಶ್ವದಾದ್ಯಂತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಯಿತು. ಅಣೆಕಟ್ಟೆಯಿಂದ ಸಹಸ್ರಾರು ಜನರ ಬದುಕೇನೋ ಹಸನಾಯಿತು. ಆದರೆ, ತನ್ನ ನಾಗಾಲೋಟಕ್ಕೆ ತಡೆಯೊಡ್ಡಿದ 125 ಅಡಿ ಎತ್ತರದ ಹಾಗೂ ಸುಮಾರು 3.5 ಕಿ.ಮೀ. ಉದ್ದದ ಕಟ್ಟೆಯ ಪ್ರಭಾವದಿಂದ ಹಿಮ್ಮೆಟ್ಟಬೇಕಾದ ಕಾವೇರಿ ಆಸುಪಾಸಿನ ಮೂವತ್ತೈದಕ್ಕೂ ಹೆಚ್ಚಿನ ಹಳ್ಳಿಗಳನ್ನು ಆಪೋಶನ ತೆಗೆದುಕೊಳ್ಳುವುದನ್ನು ತಪ್ಪಿಸಲು ಮಾತ್ರ ಸಾಧ್ಯವಾಗಲಿಲ್ಲ.

ಅದರ ಪರಿಣಾಮವಾಗಿ ಅಲ್ಲಿ ನೆಲೆಸಿದ್ದ ಜನ ತಮ್ಮ ಮನೆಮಠಗಳನ್ನು ತೊರೆದು ಜಾನುವಾರುಗಳೊಡನೆ ಹಿನ್ನೀರಿನಿಂದ ಹಾನಿಗೊಳಪಡದ ನಾರ್ಥ್‌ ಬ್ಯಾಂಕ್‌ ಎಂಬ ಸುರಕ್ಷಿತ ಸ್ಥಳಕ್ಕೆ ವಲಸೆ ಹೋದರು.

ದೇಗುಲದ ಹಿನ್ನೆಲೆ

ಅಣೆಕಟ್ಟು ತಲೆಯೆತ್ತಿರುವ ಅತ್ಯಂತ ಸನಿಹದ ತೀರ ಪ್ರದೇಶದಲ್ಲಿರುವ ಹಳ್ಳಿಯೇ ಕನ್ನಂಬಾಡಿ. ಈ ಹಿನ್ನೆಲೆಯಲ್ಲಿ ಅದನ್ನು ಕನ್ನಂಬಾಡಿ ಕಟ್ಟೆಯೆಂದೇ ಸ್ಥಳೀಯರು ಈಗಲೂ ಕರೆಯುತ್ತಾರೆ. ಪುರಾತತ್ವ ಇಲಾಖೆಯ ವರದಿ ಪ್ರಕಾರ 1912ರಲ್ಲಿ ಈ ಹಳ್ಳಿಯಲ್ಲಿದ್ದ ಮಹಾಲಕ್ಷ್ಮಿ, ಕಣೇಶ್ವರ, ಹರಿದೇವಿ ಮತ್ತು ವೇಣುಗೋಪಾಲ ಸ್ವಾಮಿ ದೇಗುಲಗಳು ಮುಳುಗಡೆಯಾದವೆಂದು ತಿಳಿದುಬರುತ್ತದೆ.

1bb

ಹಿಂದೊಮ್ಮೆ ಅಂದರೆ 1953ರಲ್ಲಿ ಕಾವೇರಿ ಸೊರಗಿದಾಗ ಈ ಗುಡಿ ಗೋಚರಿಸಿತಂತೆ. ಆ ವಿಷಯವನ್ನು 2000ದ ಇಸವಿಯಷ್ಟು ಹೊತ್ತಿಗೆ ಎಲ್ಲರೂ ಮರೆತೇಬಿಟ್ಟಿದ್ದರು. ಹೀಗಾಗಿ ಜಲರಾಶಿಯ ಒಡಲಿನಲ್ಲಿ ಈ ಗುಡಿ ಇರು ಕಲ್ಪನೆಯೇ ಸಾರ್ಜನಿಕರಿಗೆ ಇರಲಿಲ್ಲ. ಅಷ್ಟು ರ್ಷಗಳಾದ ಮೇಿ ಅದು ನಾಮಾಶೇಷ ಆಗಿರಬಹುದೆಂದು ಭಾವಿಸಿರಲಿಕ್ಕೂ ಸಾಕು. ಆದರೆ, 56 ವರ್ಷಗಳ ಹಿಂದೆ ವರುಣನ ಅವಕೃಪೆಯ ಫಲವಾಗಿ ಹಾಗೂ ನೀರಿಗಾಗಿ ತಮಿಳುನಾಡು ನಡೆಸಿದ ಇನ್ನಿಲ್ಲದ ಸಂಘರ್ಷದ ಪರಿಣಾಮವಾಗಿ ಕಾವೇರಿ ಸೊರಗಿ ಕೊಂಚ ಕೊಂಚವಾಗಿ ಧರೆಯನ್ನಪ್ಪುನ ಪರಿಸ್ಥಿತಿ ನಿರ್ಮಾಣವಾದಾಗ ಜಾದೂವಿನಂತೆ ಅದರ ಗರ್ಭದಲ್ಲಿದ್ದ ದೇಗುಲಗಳು ಗೋಚರಿಸಿ ಸಂದರ್ಶಕರನ್ನು ವಿಸ್ಮಯಗೊಳಿಸಿದವು. ಇದು ಮನೆ ಮನೆಯ ಸುದ್ದಿಯಾಗಲು, ಪ್ರತಿ ವರ್ಷ ಬೇಸಿಗೆ ಬಂತೆಂದರೆ ಭಗ್ನಗೊಂಡ ದೇಗುಲವನ್ನು ವೀಕ್ಷಿಸಲು ಜನ ಸಾಗರವೇ ಹರಿದುಬರತೊಡಗಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ