ಸುಪ್ರೀಂ ಕೋರ್ಟ್ ಹೇಟ್ ಸ್ಪೀಚ್ ಅಂದ್ರೆ ವಿದ್ವೇಷ ಹುಟ್ಟುಹಾಕುವ ಘೃಣಾತ್ಮಕ ಸ್ವೀಚುಗಳ ಕುರಿತು ಹಿಯರಿಂಗ್ ಆರಂಭಿಸಿದೆ. ಮಹಾರಾಷ್ಟ್ರದಲ್ಲಿ ಬಹಳ ಕಡೆ ಹಿಂದೂ ಮುಸ್ಲಿಂ ಪ್ರಕರಣಗಳ ಕುರಿತಾಗಿ ಹಿಂದೂ ಪ್ರಚಾರಕರು, ಪ್ರವಚನಕಾರರಿಂದ ಅನಗತ್ಯ ಮಾತುಗಳು ಹೊರಬಿದ್ದಾಗ, ಈ ಮಾತುಗಳನ್ನು ಭಗವಾ ರಾಜಕೀಯದವರು ಗಬಕ್ಕನೇ ಹಿಡಿದುಕೊಳ್ಳುತ್ತಾರೆ. ಹಿಂದೂ ಧರ್ಮದ ಕುರಿತಾಗಿ ಸುಧಾರಣೆಯೂ ಹಿಂದೂಗಳಿಂದಲೇ ಬಂದಿದ್ದರೂ, ಇದನ್ನು ದೈವನಿಂದೆ, ದೇಶದ್ರೋಹ ಎಂದೆಲ್ಲಾ ಹೇಳುತ್ತಾ, ಮುಸ್ಮಾನರು ವಿಷಕಾರುವ ಮಾತನಾಡುತ್ತಾರೆ ಎಂದವರನ್ನು, ಅಲ್ಲಿನ ಶಿಂಧೆ ಸರ್ಕಾರ ಏನೂ ಮಾಡುವುದಿಲ್ಲ.
ಈ ವಿಷಕಾರಕ ಮಾತುಗಳು ಧರ್ಮಪ್ರಚಾರ, ವೋಟ್ ಬ್ಯಾಂಕಿಂಗಾಗಿ ಹೇಳಲಾಗುತ್ತದೆ. ಜನರನ್ನು ಬೇರೆ ಧರ್ಮದ ವಿರುದ್ಧ ಎತ್ತಿಕಟ್ಟಿ, ತಮ್ಮ ಧರ್ಮದ ಸುರಕ್ಷತೆಗಾಗಿ ಚಂದಾ ವಸೂಲಿ ಮಾಡಿ ಎನ್ನಲಾಗುತ್ತದೆ. ಹಣ ಕೊಡದಿದ್ದರೆ ಬೇರೆ ಧರ್ಮ ಮತ್ತೆ ಮೆರೆಯಲಿದೆ, ಮೊಘಲರಂಥ ದುರಾಡಳಿತ ಮತ್ತೆ ಮರಳಲಿದೆ ಎಂದು ಜನರನ್ನು ಉತ್ತೇಜಿಸಲಾಗುತ್ತಿದೆ.
ಹೇಟ್ ಸ್ಪೀಚ್ ಅಸಲಿಗೆ ಮನೆಯಿಂದ ಹೊರಗೆ ಹಾಲ್, ಮೆರವಣಿಗೆ, ಸಮ್ಮೇಳನಗಳಲ್ಲಿ ಹೆಚ್ಚಾಗಿರುತ್ತದೆ. ಹಾಗೆಯೇ ಇದು ಹರಡುತ್ತಾ ಗಲ್ಲಿ ಗಲ್ಲಿ ಸುತ್ತಿ ಮನೆಯ ಒಳಗೂ ನುಸುಳುತ್ತದೆ. ಕೇಳುವವರು ತಾವು ಒಂದಿಷ್ಟು ಬೈಗುಳ, ಅವಾಚ್ಯ ಶಬ್ದ, ನಿಂದನೆಯ ಆರೋಪಗಳಿಗೆ ತುತ್ತಾಗಿ ಅದನ್ನು ಅಂಗಡಿ, ನೆರೆಹೊರೆ, ಬೀದಿ, ಅಪರಿಚಿತರ ಎದುರಲ್ಲೂ ಬಳಸುವಂತೆ ಆಗಿದೆ. ಮನೆಯಲ್ಲಿ ದುರ್ಬಲರ ಎದುರು ಅಂದೂ ಆಡಿಕೊಳ್ಳುತ್ತಾರೆ.
ಪತಿ ತನ್ನ ಪತ್ನಿಯನ್ನು ಬೈಯುತ್ತಾ ಇಂಥ ಅವಾಚ್ಯ ಶಬ್ದ ಬಳಸುತ್ತಾನೆ, ಜೊತೆಗೆ ಅವಳ ಕೆಲಸದಲ್ಲೂ ಹಿಂದೂ ಮುಸ್ಲಿಂನ ಅಂತರ ಹುಡುಕುತ್ತಾನೆ. ಪತಿಗೆ ಪತ್ನಿ ಮನೆಯವರು ಹಾಗೂ ಪತ್ನಿಗೆ ಪತಿಯ ಮನೆಯವರು ವಿಧರ್ಮಿಗಳೇ ಆಗುತ್ತಾರೆ, ಇದೇ ಕೆಟ್ಟ ಮಾನದಂಡ ಎಲ್ಲೆಡೆ ಚಾಲ್ತಿಯಲ್ಲಿದೆ.
ಮನೆಗಳಲ್ಲಿ ನಡೆಯುವ ವಿವಾದ, ಕೌಟುಂಬಿಕ ಹಿಂಸಾಚಾರದ ರೂಪ ತಾಳಿ ಹೊರಬರುವುದು ಸಹ, ಇಂಥದ್ದೇ ಬೀಜಾಂಕುರದಿಂದಾಗಿ. ಇದು ನಮ್ಮ ಧಾರ್ಮಿಕ, ರಾಜಕೀಯ ನೇತಾರರ ಕೊಡುಗೆ. ಇಂಥ ಬೀಜಗಳ ಮೊಳಕೆ ಗಿಡ ಹೆಮ್ಮರವಾಗಿ ಮನೆ ಮನೆಗಳಲ್ಲೂ ಪರಸ್ಪರ ಅಲರ್ಜಿ ಹುಟ್ಟು ಹಾಕುತ್ತವೆ. ಹಿಂದೂ ಮುಸ್ಲಿಂ ವಿವಾದ, ಪತಿ ಪತ್ನಿ ವಿವಾದ, ಅಣ್ಣತಮ್ಮಂದಿರ ಜಗಳ, ಅಣ್ಣ ತಂಗಿ ಗಲಾಟೆ, ತಂದೆ ಮಕ್ಕಳ ಜಗಳಗಳಾಗಿ ಬದಲಾಗುತ್ತವೆ. ನೆರೆಹೊರೆಯರ ಜೊತೆ ಈ ವಿವಾದ ಉಗ್ರ ಹೋರಾಟವೇ ಆಗುತ್ತದೆ. ವ್ಯಾಪಾರದಲ್ಲಿ ಪ್ರತಿಸ್ಪರ್ಧೆ ಒಡ್ಡುವ ವಿಧರ್ಮಿ ಶತ್ರುವೇ ಆಗುತ್ತಾನೆ.
ಈ ತರಹದ ಧರ್ಮಾಧಾರಿತ ವಿವಾದಗಳ ವಾತಾವರಣ, ತಂತಮ್ಮ ಧರ್ಮಗಳ ಕುರಿತು ಗರ್ವಪಡಲು ಕಲಿಸುತ್ತವೆ. ಆದರೆ ನಮ್ಮ ಧರ್ಮದಲ್ಲೂ ಸಹ ಅಣ್ಣತಮ್ಮಂದಿರ ವಿವಾದ ಗದ್ದುಗೆಯಿಂದ ನಾಸ ಹಾಗೂ ಘೋರಯುದ್ಧಕ್ಕೆ ನಾಂದಿಯಾಗಿದೆ. ಸಹಯೋಗಿ ದಸ್ಯುಗಳಿಗೆ ಮೋಸ ಮಾಡಿ ದೇವತೆಗಳು ಅಮೃತ ಕಸಿಯಲಿಲ್ಲವೇ? ಅಕಾರಣ ಪತ್ನಿ ತ್ಯಾಗ, ಪತ್ನಿಯನ್ನು ಆರೋಪಿಸಿ ಶಿಕ್ಷಿಸುವುದನ್ನು ಕಲಿಸುತ್ತದೆ. ಜೊತೆಗೆ ಇಂಥವನ್ನೆಲ್ಲ ಧರ್ಮಾಚರಣೆ, ಅಗತ್ಯ ಕಲಿಯಿರಿ ಅಥವಾ ವಿಧರ್ಮಿ ದುರಾಡಳಿತಕ್ಕೆ ಸಿದ್ಧರಾಗಿರಿ ಎಂದು ಭಯಪಡಿಸಲಾಗುತ್ತಿದೆ.
ವಿವಾದಗಳಿಗೆ ಸಭ್ಯ ಅಸಭ್ಯ ಎರಡೂ ತರಹದ ಭಾಷೆ ಬಳಸಬಹುದು. ವಿವಾದಕ್ಕಾಗಿ ಸತ್ಯ, ನ್ಯಾಯ, ತರ್ಕಗಳನ್ನು ಬಳಸಬಹುದು, ಸುಳ್ಳು ಕುತರ್ಕಗಳನ್ನೂ ಸಹ. ಹೇಟ್ ಸ್ಪೀಚ್ ನೀಡುವವರಿಗೆ ಅತ್ತ ಸತ್ಯದ ಗೊಡವೆ ಇಲ್ಲ, ಇತ್ತ ನ್ಯಾಯತರ್ಕ ಬೇಕಾಗಿಲ್ಲ. ಅವರು ಮನಸ್ಸಿಗೆ ಬಂದಂತೆ ಯಾವಾಗ, ಏನು ಬೇಕಾದರೂ ಮಾತನಾಡಬಹುದು. ಅದೀಗ ಮನೆ ಮನೆಗಳಲ್ಲೂ ರಿಂಗುಣಿಸುತ್ತಿದೆ. ಯಾವ ತರಹ ತುಳಸಿದಾಸರು ರಾಮಚರಿತ ಮಾನಸದಲ್ಲಿ ಬಹಳ ಮಂದಿಗೆ ಅಪಮಾನಜನಕ ಶಬ್ದಗಳನ್ನು ಕಲಿಸಿದ್ದಾರೋ, ಅದು ನಮ್ಮ ಸ್ವಧರ್ಮೀಯರಿಗೇ ಹೊರತು, ವಿಧರ್ಮೀಯರಿಗಲ್ಲ. ಅದೇ ತರಹ ಹೇಟ್ ಸ್ಪೀಚ್ ಗಳಲ್ಲಿ ಇಂಥ ಕೆಟ್ಟದ್ದನ್ನು ಮತ್ತೆ ಮತ್ತೆ ರಿಪೀಟ್ ಮಾಡುತ್ತಾರೆ. ಹೀಗಾಗಿ ಇಂದಿಗೂ ಸಹ ಹೆಂಗಸರು ಸೀತಾ, ದ್ರೌಪದಿ, ಕುಂತಿ, ಹೋಲಿಕಾರಂತೆ ಅತ್ತ ಬಾಳಲಾಗದೆ ಇತ್ತ ಸಾಯಲಾಗದೇ ಹಿಂಸೆ ಅನುಭವಿಸುತ್ತಿದ್ದಾರೆ.
ಪೌರಾಣಿಕ ಕಥೆಗಳ ಧರ್ಮದ ಯೋಚನಾಧಾಟಿ, ಇಂದಿನ ಮನೆ ಮನೆಗಳಲ್ಲೂ ಪ್ರತಿಧ್ವನಿಸುತ್ತಿದೆ. ಹೀಗಾಗಿ ಇಂಥವನ್ನು ನಮ್ಮ ಸ್ವಧರ್ಮೀಯರಿಗೆ ಹೇಳುವರು, ವಿಧರ್ಮೀಯರ ಕುರಿತು ಅವಾಚ್ಯ ಶಬ್ದ ಬಳಸಬೇಕೇಕೆ?
ಈ ಕುರಿತಾಗಿ ಸುಪ್ರೀಂ ಕೋರ್ಟ್ ಏನಾದರೂ ಮಾಡಲಾದೀತೇ? ಸಂದೇಹ. ಇಂದು ಧಾರ್ಮಿಕ ರಾಜಕೀಯದ್ದೇ ದರ್ಬಾರು ಎಂದಾಗಿದೆ, ಇದರ ಪ್ರಚಾರ ಒಂದಿಷ್ಟೂ ಅಡೆತಡೆ ಇಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ತರ್ಕ, ಸತ್ಯ, ಸುವಾಚ್ಯ ವ್ಯವಹಾರ ಎಲ್ಲಿಂದ ಬಂದೀತು? ಇದೇ ಕಾರಣದಿಂದ ಹ್ಯಾಪಿನೆಸ್ ಇಂಡೆಕ್ಸ್ ನಿಂದ ಭಾರತ 7-8ಕ್ಕೆ ಇಳಿದಿದೆ. ಇದು ನಮ್ಮ ಧಾರ್ಮಿಕ ಕೊಡುಗೆಯೇ ಸರಿ.
ಇದೇಕೆ ಇಂಥ ರಾದ್ಧಾಂತ?
ಅತ್ತೆ ಸೊಸೆಯರ ಜಗಳಗಳಲ್ಲಿ ಅನೇಕ ಸಲ ಮೂಲಕಾರಣ ಎಂದರೆ, ಅತ್ತೆ ಸೊಸೆಯ ತವರಿನ ಕುರಿತಾಗಿ ಏನೇನೋ ಆಡಿಕೊಂಡಳು, ಯಾರದ್ದೋ ಮದುವೆಯಲ್ಲಿ ಎಲ್ಲರ ಮುಂದೆ ಸೊಸೆ ಯಾವ ಅವಳ ತರನ್ನು ಕಮೆಂಟ್ ಮಾಡಿದಳು….. ಇತ್ಯಾದಿ. ಈ ಕುರಿತಾಗಿ ದೊಡ್ಡ ರಗಳೆ ರಾದ್ಧಾಂತಗಳೇ ಆಗಿ ಹೋಗುತ್ತವೆ. ಇದಕ್ಕೆ ಸೊಸೆ ಚಾಟಿ ಏಟಿನಂಥ ಉತ್ತರ ನೀಡುತ್ತಾಳೆ, ಅವಳ ತವರಿನವರೂ ಸಹ ಆಗಾಗ ಬಂದು ರಗಳೆ ಎಬ್ಬಿಸುತ್ತಾರೆ.
ಇದೇ ಕೆಲಸವನ್ನು ಪೌರಾಣಿಕ ಧಾರಾವಾಹಿಗಳಿಂದ ಜ್ಞಾನ ಪ್ರಾಪ್ತಿ ಪಡೆದು ಪಟ್ಟವೇರಿದ ಬಿಜೆಪಿ ಮಂದಿ ಸಂಸತ್ತಿನಲ್ಲಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಲಂಡನ್ನಿನಲ್ಲಿ ಭಾಷಣ ಮಾಡುವಾಗ, ಭಾರತದಲ್ಲಿ ಪ್ರಜಾಪ್ರಭುತ್ವ ಡೋಲಾಯಮಾನವಾಗಿದೆ, ಇದರ ಪರಿಣಾಮ ವಿಶ್ವದ ಇನ್ನಿತರ ಪ್ರಜಾಪ್ರಭುತ್ವದ ದೇಶಗಳ ಮೇಲೂ ಆಗಬಹುದು ಎಂದು ಆಡಿದ ಕೆಲವು ಮಾತುಗಳು, ಇವರ ಬುಡಕ್ಕೇ ಬಂತು. ಸಂಸತ್ತಿನಲ್ಲಿ ಮೈಕಲ್ ಆಫ್ ಮಾಡಿ ವಿಪಕ್ಷದ ನೇತಾರರ ಭಾಷಣ ಕೇಳಲಾಗದಂತೆ ಮಾಡಲಾಗುತ್ತದೆ, ಎಂದೂ ಹೇಳಿದ್ದರು.
ಬಿಜೆಪಿಗೆ ಇಂಥ ವಾಗ್ಬಾಣಗಳ ಕುರಿತು ಭಯವಿದೆ. ಅವರು ಸುಳ್ಳಾಡಿದರು ಎಂಬುದು ಇವರುಗಳ ಆಕ್ಷೇಪಣೆ ಅಲ್ಲ. ಈ ಸತ್ಯವನ್ನು ಲಂಡನ್ನಿನಲ್ಲಿ ಆಡಿದೆದೀಕೆ ಎಂಬುದೇ ಆಕ್ಷೇಪಣೆ. ರಾಹುಲ್ ಗಾಂಧಿ ಕ್ಷಮಾಪಣೆ ಕೇಳುವವರೆಗೂ ಸಂಸತ್ತಿನ ಕಲಾಪ ನಡೆಸಬಾರದು ಎಂದು ಹಠ ಹಿಡಿದಿದ್ದಾರೆ. ಲೋಕಸಭೆಯ ಅಧ್ಯಕ್ಷರಾದ ಓಂ ಬಿಡಾ ಸಹ ಪರೋಕ್ಷ ರೂಪದಲ್ಲಿ ಈ ಹಠಕ್ಕೆ ಮಣಿದಿದ್ದಾರೆ. ಅತ್ತೆ ಸೊಸೆ ಜಗಳದಲ್ಲಿ ಸಂಸತ್ತಿನ ಕಲಾಪ ಸ್ಥಗಿತಗೊಂಡಿದೆ, ಬರಿ ಕಲಹವೇ ತುಂಬಿದೆ.
ಅತ್ತೆ ಸೊಸೆ ಜಗಳದಲ್ಲಿ ನೀನೇಕೆ ಎಲ್ಲರೆದುರು ಹಾಗೆ ಹೇಳಿದೆ, ಹೀಗೆ ಹೇಳಿದೆ ಎಂಬುದೆಲ್ಲ ಮಾಮೂಲಿ. ಅದು ಮನೆಯ ಹಣ, ಆಹಾರ, ವರದಕ್ಷಿಣೆ, ಆಸ್ತಿ ವಿಭಜನೆ ಕುರಿತಾಗಿದ್ದರೆ, ಯಾರಾದರೂ ತಿಳಿ ಹೇಳಬಹುದಿತ್ತು. ಇಂಥಗಳಲ್ಲಿ ಅಭಿಪ್ರಾಯ ಭೇದ ಸಾಮಾನ್ಯ. ಆದರೆ ಕೆಲವು ಮಾತುಗಳಿಂದಾಗಿ ಇಡೀ ದೇಶದ ಪ್ರತಿಷ್ಠೆ ಹಾಳಾಯಿತು ಎಂದು ವಾದಿಸುವುದರಲ್ಲಿ ಏನು ಹುರುಳಿದೆ?
ಇಡೀ ವಿಶ್ವದ ದೃಷ್ಟಿಯಲ್ಲಿ ಭಾರತಕ್ಕೆ ಈಗ 2 ವಿಷಯಗಳಿಗೆ ಪ್ರಾಮುಖ್ಯತೆ ಇದೆ. ಒಂದು, ಅತಿ ಹೆಚ್ಚಿನ ಜನಸಂಖ್ಯೆಯುಳ್ಳ ದೇಶ. ಎರಡು, ಹೆಚ್ಚಿನ ಜನಸಂಖ್ಯೆ ಕಾರಣ, ಅರ್ಥವ್ಯವಸ್ಥೆ ಅತಿ ದೊಡ್ಡದಾಗಿದ್ದು, ವಿಶ್ವದ ಯಾವುದೇ ಉತ್ಪನ್ನಕ್ಕೆ ಇಲ್ಲಿ ಒಳ್ಳೆಯ ವ್ಯಾಪಾರವಿದೆ! ಹ್ಯೂಮನ್ ರೈಟ್ಸ್, ಹಂಗರ್ ಇಂಡೆಕ್ಸ್, ಫ್ರೀಡಂ ಇಂಡೆಕ್ಸ್, ಹ್ಯಾಪಿನೆಸ್ ಇಂಡೆಕ್ಸ್ ಯಾವುದೇ ಗಮನಿಸಿ ಈ ಪಟ್ಟಿಗಳಲ್ಲಿ ಭಾರತ ಎಲ್ಲಕ್ಕಿಂತ ಕೆಳಗಿನ 5-10 ದೇಶಗಳಲ್ಲಿ ಕಾಣುತ್ತದೆ.
ಪಾಶ್ಚಾತ್ಯ ದೇಶಗಳವರಿಗೆ ಗೊತ್ತಿಲ್ಲದೆ ಇರು ವಿಚಾವರನ್ನೇನೂ ರಾಹುಲ್ ಗಾಂಧಿ ಆಡಲಿಲ್ಲ. ಅಲ್ಲಿ ಯಾವ ರಹಸ್ಯ ಇರಲಿಲ್ಲ. ಅದರಲ್ಲಿ ದೂರು ಇರಲಿಲ್ಲ, ಬೇರೆ ದೇಶ ಮೂಗು ತೂರಿಸುವಂಥದ್ದೇನೂ ಇರಲಿಲ್ಲ. ಅವರನ್ನು ಕೇಳಿದ್ದಕ್ಕೆ ಸಹಜವಾಗಿ ಉತ್ತರಿಸಿದರಷ್ಟೆ.
ಅತ್ತೆ ಸೊಸೆ ಜಗಳ ತರಹ ಬಿಜೆಪಿ ಸಾಂಸದರು ಈಗ ಇದೇ ವಿಷಯ ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದಾರೆ. ಅವರಿಗೆ ಈ ಸಂದರ್ಭ ಸಕಾಲಿಕ, ಸಂಸತ್ತಿನ ಕಲಾಪ ನಡೆದರೆ ತಾನೇ ಅಡಾನಿ ಗ್ರೂಪ್ ವಿಷಯ ಚರ್ಚೆಗೆ ಬರುವುದು? ಇದನ್ನೇ ಅವರು ಬಯಸುವುದಿಲ್ಲ.
ಈ ವಿಷಯ ಓದುಗರನ್ನು ತಲುಪು ಹೊತ್ತಿಗೆ, ಈ ಪ್ರಕರಣ ತಣ್ಣಗಾಗಿರುತ್ತದೆ. ಇದರಿಂದ ರಾಜಕೀಯ ಎಂಬುದು ಅತ್ತೆ ಸೊಸೆ ಜಗಳದ ತರಹ ಎಂಬುದು ಸಾಬೀತಾಗಿದೆ, ಇದರಲ್ಲಿ ಒಮ್ಮೆ ಅತ್ತೆ ಹುಲಿಯಾದರೆ, ಮತ್ತೊಮ್ಮೆ ಸೊಸೆ ಸಿಂಹಿಣಿ! ಹೀಗಾಗಿಯೇ ಸ್ಮೃತಿ ಇರಾನಿ `ಕ್ಯೂಂಕಿ ಸಾಸ್ ಭೀ ಕಭೀ ಬಹೂ ಥಿ’ ಧಾರಾವಾಹಿಯಿಂದ ಪ್ರಸಿದ್ಧರಾದರು, ಈ ಸಂಸತ್ತಿನ ಜಟಾಪಟಿಯಲ್ಲಿ ಬಿಜೆಪಿಯ ಮುಖ್ಯ ಸೂತ್ರಧಾರಿ ಎನಿಸಿದ್ದಾರೆ.
ದತ್ತು ತೆಗೆದುಕೊಳ್ಳುವುದರಲ್ಲೂ ಕಂದಾಚಾರವೇ?
ನಿಸ್ಸಂತಾನ ದಂಪತಿ ಕಂಡ ತಕ್ಷಣ ಅಕ್ಕಪಕ್ಕದವರು ಒಂದು ಮಗು ದತ್ತು ಪಡೆಯಿರಿ ಅಂತಾರೆ. ಇಂಥ ಸಲಹೆ ಕೊಡುವವರಿಗೆ ಈ ದತ್ತು ಸ್ವೀಕಾರ ಎಂಥ ಇಕ್ಕಟ್ಟಿನದು, ಸರ್ಕಾರಿ ಕರ್ಮಕಾಂಡಗಳಿಂದ ತುಂಬಿದೆ ಎಂಬುದು ಗೊತ್ತಿಲ್ಲ. ಇದರಿಂದ ದತ್ತು ಸ್ವೀಕಾರಕ್ಕೆ ಮುಂದಾದರು ಹಿಂಜರಿಯುವಂತಾಗುತ್ತದೆ. ಕೆಲವು ತಿಂಗಳು, ವರ್ಷಗಳ ಕಷ್ಟದ ನಂತರ ಅಂತೂ ಇಂತೂ ಒಂದು ಮಗು ಪಡೆಯುತ್ತಾರೆ, ಅದರಲ್ಲಿ ಆಯ್ಕೆಯ ಪ್ರಶ್ನೆಯೇ ಇಲ್ಲ. ಏಕೆಂದರೆ ಕಾನೂನಿನ ಪ್ರಕಾರ, ಅದು ಸರಿಯೂ ಹೌದು, ಗೊಂಬೆ ಆರಿಸುವಂತೆ ಮಗು ಆರಿಸುವ ಹಾಗಿಲ್ಲ. ಇದಕ್ಕಿಂತ ಹೆಚ್ಚಿನ ಕಷ್ಟ ದತ್ತಕಾದ ಮಗುವಿನದು. ಅದು ಆ ಹೊಸ ಮನೆಗೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ತಿಳಿಯುವುದು ಅಸಂಭವೇ ಸರಿ.
ಅಮೆರಿಕಾದ ಅನುಪ್ರಿಯಾ ಪಾಂಡೆ ಇಂಥ ಕೆಲವು ಮಕ್ಕಳ ಜೊತೆ ಮಾತನಾಡಿ, ಭಾರತದಲ್ಲಿ ತಮ್ಮ ಬಾಲ್ಯದಲ್ಲೇ ದತ್ತಕಕ್ಕೆ ಹೋದವರನ್ನು ವಿಚಾರಿಸಿದರು. ಅವರು ಅಮೆರಿಕಾದಲ್ಲಿ ಕರಿಯ ಬಿಳಿಯರ ಮಧ್ಯೆ ಬೆಳೆದು ದೊಡ್ಡವರಾದರು. ಇವರಲ್ಲಿ ಒಬ್ಬರು ಲೀಲಾ ಬ್ಲ್ಯಾಕ್, 41 ವರ್ಷದವರು. 1982ರಲ್ಲಿ ಈಕೆಯನ್ನು ಅಲ್ಲಿನ ಸಿಂಗಲ್ ಪೇರೆಂಟ್ ನರ್ಸ್ ದತ್ತಕ ಪಡೆದರು. ಲೀಲಾ ತನ್ನ ಬಾಲ್ಯವನ್ನು ಒಂದು ಕನಾಕ್ಟಿಕಟ್ ನಲ್ಲಿ ಕಳೆದಳು. ತನ್ನ 2 ತಿಂಗಳ ವಯಸ್ಸಿನಲ್ಲಿ ಇದ್ದ ಕಷ್ಟ ಮುಂದಿರಲಾರದು ಎಂದು ಆಕೆ ಸಂಭ್ರಮಿಸಿದ್ದರು. ನಂತರ ಅಮೆರಿಕಾದ ಪ್ರೀತಿ ಲಭಿಸಿತು, ಸುಖ ಸೌಲಭ್ಯ, ಹಿಯರಿಂಗ್ ಲಾಸ್ಸೆರೆಬ್ರೆಲ್ ಪ್ಲಾಸಿ ರೋಗಕ್ಕೆ ಚಿಕಿತ್ಸೆ ಸಹ.
2 ಮಕ್ಕಳ ಒಬ್ಬ ಬಿಳಿಯ ಅಮೆರಿಕನ್ ಯುವಕನನ್ನು ಮದುವೆಯಾದ ಲೀಲಾ, ತನ್ನ ಮೂಲ ಹುಡುಕಲು ಆರಂಭಿಸಿದರು. ಆಕೆ ಭಾರತೀಯ ಅಡುಗೆ ತಯಾರಿಸಿ, ಸವಿದು, ಭಾರತಕ್ಕೆ 2-3 ಸಲ ಪ್ರವಾಸ ಸಹ ಬಂದರು. ಇಲ್ಲಿ ಹೋಳಿ ದೀಪಾವಳಿ ಆಚರಿಸಿ, ಟೆಸ್ಟ್ ಮಾಡಿಸಿ, ತನ್ನಂಥ 3-4 ಕಸಿನ್ಸ್ ಹುಡುಕಿದರು. (ಅವರು ಹತ್ತಿರದ ನೆಂಟರೋ ಅಲ್ಲವೋ, ಭಾರತೀಯ ಮೂಲದ ರಕ್ತ ಆಗಿದ್ದರು). ಅಮೆರಿಕಾದಲ್ಲಿ ಪ್ರತಿ ವರ್ಷ ಭಾರತದಿಂದ 200ಕ್ಕೂ ಹೆಚ್ಚು ಮಕ್ಕಳು ದತ್ತಕ ಹೋಗುತ್ತಾರೆ. ಅಲ್ಲಿ ಇವರದೇ ಒಂದು ಸಮುದಾಯ ಇದೆ.
ಭಾರತದಲ್ಲಿ ದತ್ತಕ ಸ್ವೀಕಾರಗೊಂಡ ಮಕ್ಕಳ ಬಣ್ಣ, ಈ ತಾಯಿ ತಂದೆಯರ ಬಣ್ಣ, ಭಾಷೆ, ವ್ಯಕ್ತಿತ್ವಗಳ ಜೊತೆ ಜಾತಿಯ ಪ್ರಶ್ನೆಯೂ ಧುತ್ತೆಂದು ನಿಲ್ಲುತ್ತದೆ. ಜಾತಕ ನಂಬುವ ಹಿಂದೂ ಸಮಾಜ, ಇಂಥ ಮಕ್ಕಳನ್ನು ತಮ್ಮವರಾಗಿಸಿಕೊಳ್ಳಲು ಹಿಂಜರಿಯುತ್ತದೆ.
ಆದರೆ ಅಮೆರಿಕಾ, ಯೂರೋಪ್ ಹೀಗೆ ಚಿಂತಿಸಲ್ಲ. ಮಕ್ಕಳು ಎಲ್ಲಿಂದಲೇ ಬಂದಿರಲಿ, ಅವರನ್ನು ತೆರೆದ ಮನದಿಂದ ಸ್ವಾಗತಿಸುತ್ತಾರೆ, ಆದರೂ ಸಣ್ಣಪುಟ್ಟ ಅಡ್ಡಿ ಆತಂಕ ಇರುತ್ತದೆ. ನೆಟ್ ಫ್ಲಿಕ್ಸ್ ನಲ್ಲಿ ನಡೆಯುತ್ತಿರುವ `ರಾಂಗ್ ಸೈಡ್ ಆಫ್ ಟ್ರಾಕ್’ ಸೀರೀಸ್ ನಲ್ಲಿ, ಒಂದು ಸ್ಪಾನಿಶ್ ಪರಿವಾರ ವಿಯೆಟ್ನಾಂ ಹುಡುಗಿಯನ್ನು ದತ್ತು ಪಡೆದ ಮೇಲೆ, ದೊಡ್ಡವಳಾಗಿ ಅವಳು ವಿದ್ರೋಹಿ ಎನಿಸುತ್ತಾಳೆ. ಇಲ್ಲಿ ದತ್ತು ಸ್ವೀಕಾರದ ಸಮಸ್ಯೆ ಬಗ್ಗೆ ಚೆನ್ನಾಗಿ ವಿಶ್ಲೇಷಿಸಲಾಗಿದೆ. ಇದರಲ್ಲಿ ಮುಖ್ಯ ಪಾತ್ರ ತಾತಾ, ಈ ವಿಯೆಟ್ನಾಂ ಹುಡುಗಿಯ ಚೀನೀ ಫೀಚರ್ಸ್ ನ್ನು ಹಾಸ್ಯ ಮಾಡುತ್ತಿರುತ್ತಾರೆ. ಆದರೆ ಅವಳು ಡ್ರಗ್ ಟ್ರೇಡರ್ಸ್ ನ ಜಾಲದಲ್ಲಿ ಸಿಲುಕಿದಾಗ, ಇವರು ತಮ್ಮ ಪ್ರಾಣ ಪಣಕ್ಕೊಡ್ಡಿ, ಪೊಲೀಸರಿಗೂ ಮಣ್ಣು ಮುಕ್ಕಿಸಿ, ಮೊಮ್ಮಗಳನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಈ ತಾತನ ಮಗಳು ಈ ಹುಡುಗಿಯ ಕಾಟದಿಂದ ಬೇಸತ್ತು ಹಾಸ್ಟೆಲಿಗೆ ಸೇರಿಸಲು ಹವಣಿಸುತ್ತಾಳೆ.
ಇದೀಗ ಎಲ್ಲೆಲ್ಲೂ ಸಿಂಗಲ್ ಪೇರೆಂಟ್ಸ್ ಮಾಮೂಲಿ ಆಗಿರುವಾಗ, ಈ ಕ್ರಮದಿಂದ ಅನಾಥರು ಕಡಿಮೆ ಆಗುತ್ತಿದ್ದಾರೆ. ಭಾರತದಲ್ಲಿ ಗರ್ಭಪಾತಕ್ಕೆ ಅವಕಾಶವಿದೆ, ಆದರೆ ದತ್ತು ಸ್ವೀಕಾರಕ್ಕೆ ಹೆಚ್ಚಿನ ಆಸಕ್ತಿ ಇಲ್ಲ. ಪೋಷಕರನ್ನು ಸೇರಿದ ಅಂಥ ಮಕ್ಕಳಿಗೆ ಉತ್ತಮ ವಾತಾವರಣ ಸಿಗುತ್ತದೆಯೇ? ನಾವು ಮೂಲತಃ ಕಂದಾಚಾರಿಗಳು. ಹೀಗಾಗಿ ದತ್ತು ಪಡೆದ ಮಕ್ಕಳು ಮುಂದೆ ನಮ್ಮ ತಿಥಿ ಮಾಡಿಸಲು ಅರ್ಹರೇ ಎಂದು ಯೋಚಿಸುತ್ತೇವೆಯೇ ಹೊರತು, ಬದುಕಿರುವಾಗಿನ ಖಾಲಿತನ ಹೋಗಲಾಡಿಸುವ ಅವರ ಇರುವಿಕೆಗೆ ಮಹತ್ವ ನೀಡುವುದಿಲ್ಲ.