ಧರ್ಮದ ಬಗ್ಗೆ ಸಮಾಜದ ಆಲೋಚನೆ ಬದಲಾಗುತ್ತಿದೆ. ಧರ್ಮದ ಅಂಧ ಭಕ್ತಿ ಈಗ ಕೊನೆಯಾಗುವ ಹಂತದಲ್ಲಿದೆ. ಈಗ ಜನ ಧರ್ಮದ ಬಗ್ಗೆ ಹಿಂದಿಗಿಂತಲೂ ಹೆಚ್ಚು ಮೆದುವಾದ ಧೋರಣೆ ಇಟ್ಟುಕೊಂಡಿದ್ದಾರೆ. ಧರ್ಮದ ಬಗ್ಗೆ ಹಿಂದೆ ಮಾಡುತ್ತಿದ್ದಂತಹ ಕಪಟತನಗಳು ಈಗ ಕಡಿಮೆಯಾಗುತ್ತಿವೆ. ಜನ ಧರ್ಮವನ್ನು ವಿರೋಧಿಸುತ್ತಿಲ್ಲ. ಆದರೆ ಅದರ ಕಟ್ಟಾ ಸಮರ್ಥಕರು ಕಡಿಮೆಯಾಗುತ್ತಿದ್ದಾರೆ.

ಈ ಕಾರಣದಿಂದಲೇ ಧಾರ್ಮಿಕ ಹಬ್ಬಹರಿದಿನಗಳಲ್ಲಷ್ಟೇ ಅಲ್ಲ, ಧರ್ಮವನ್ನು ಆಧರಿಸಿ ತಯಾರಾಗುತ್ತಿರುವ ಟಿ.ವಿ ಧಾರಾವಾಹಿಗಳಲ್ಲೂ ಧರ್ಮದ  ಜಾಗದಲ್ಲಿ ಧರ್ಮದ ಸಾಮಾಜಿಕ ಮಜಲುಗಳನ್ನು ತೋರಿಸುವ ಪ್ರಯತ್ನ ಶುರುವಾಗಿದೆ. ಸಮಾಜದಲ್ಲಿ ಮಹಿಳೆಯರ ವಿಷಯದಲ್ಲಿ ಹೇಗೆ ಆಲೋಚನೆಗಳು ಬದಲಾಗಿವೆಯೋ ಅದೇ ರೀತಿ ಧಾರ್ಮಿಕ ಸೀರಿಯಲ್ಗಳು ಈಗ ಧರ್ಮದ ಪಾಕದಲ್ಲಿ ಅದ್ದಿರುವ ಸಾಮಾಜಿಕತೆಯನ್ನು ಉಣಿಸುತ್ತಿವೆ.

ಸಾಮಾಜಿಕತೆಯ ಜೊತೆ ಜೊತೆಗೆ ಅವುಗಳಲ್ಲಿ ಫ್ಯಾಷನ್‌ ಮತ್ತು ಗ್ಲಾಮರಸ್‌ ಹೊಳಪನ್ನು ತುಂಬಲಾಗುತ್ತಿದೆ. ಹಿಂದಿನ ಸೀರಿಯಲ್ಗಳಂತೆ ಉಡುಪುಗಳು ಮತ್ತು ರೂಪುರೇಷೆಗಳನ್ನು ಇವುಗಳಲ್ಲಿ ಕಾಣಲಾಗುತ್ತಿಲ್ಲ. ಇದರ ಹೊರತಾಗಿ ಈ ಸೀರಿಯಲ್ಗಳು ಇನ್ನೂ ಧಾರ್ಮಿಕ ಪ್ರಚಾರವನ್ನೇ ಅವಲಂಬಿಸಿವೆ.

ಸಾಮಾಜಿಕ ವಿಷಯಗಳಿಗೆ ಆದ್ಯತೆ

ಧಾರ್ಮಿಕ ಸೀರಿಯಲ್ಗಳಲ್ಲಿ `ರಾಮಾಯಣ' ಆಧರಿಸಿ ಇದುವರೆಗೆ ಅತ್ಯಂತ ಹೆಚ್ಚು ಸೀರಿಯಲ್ಗಳು ತಯಾರಾಗಿವೆ. ಪ್ರತಿ ಸೀರಿಯಲ್ ಗಳನ್ನು ನೋಡಿದ ನಂತರ ಇನ್ನು ಇದರಲ್ಲಿ ಏನಾದರೂ ಹೊಸದನ್ನು ತೋರಿಸಲು ಉಳಿದಿಲ್ಲ ಎನ್ನಿಸುತ್ತದೆ.

ಸ್ಟಾರ್‌ ಪ್ಲಸ್‌ನಲ್ಲಿನ `ರಾಮಾಯಣ' ಆಧರಿಸಿದ ಸೀರಿಯಲ್ `ಸಿಯಾ ಕೆ ರಾಮ್'ನಲ್ಲಿ ಸೀತೆ ಮತ್ತು ರಾಮಾಯಣದಲ್ಲಿ ಉಪೇಕ್ಷಿತರಾದ ಮಹಿಳಾ ಪಾತ್ರಧಾರಿಗಳ ಮರೆಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ ವಿಷಯಗಳನ್ನು ಎತ್ತಿಕೊಳ್ಳಲಾಗುತ್ತಿದೆ. ಅದರಿಂದ ಧಾರ್ಮಿಕ ಸೀರಿಯಲ್ಲನ್ನು ಹೊಸ ನೋಟದೊಂದಿಗೆ ಪ್ರಸ್ತುತಪಡಿಸಲಾಗುತ್ತಿದೆ.

ಅಂದಹಾಗೆ, ಧಾರ್ಮಿಕ ಸೀರಿಯಲ್ ಗಳು ಸತತವಾಗಿ ತಯಾರಾಗುತ್ತಿದ್ದು, ಅವು ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಕಳೆದುಕೊಂಡಿದ್ದವು. ಧಾರ್ಮಿಕ ಸೀರಿಯಲ್ ಗಳೊಂದಿಗೆ ಪ್ರೇಕ್ಷಕರನ್ನು ಮತ್ತೆ ಹೊಂದಿಸಲು ಅವಕ್ಕೆ ಸಾಮಾಜಿಕತೆ ಹಾಗೂ ಫ್ಯಾಷನ್‌ನ ಬಣ್ಣ ಕೊಡಲಾಗುತ್ತಿದೆ. `ಸಿಯಾ ಕೆ ರಾಮ್' ಸೀರಿಯಲ್ ನಲ್ಲಿ ಸೀತಾ ಇಂತಹ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಹಿಂದಿನ `ರಾಮಾಯಣ' ಆಧರಿಸಿದ ಯಾವುದೇ ಸೀರಿಯಲ್ ನಲ್ಲೂ ತೋರಿಸಿಲ್ಲ.

ಸಾಮಾನ್ಯವಾಗಿ ಇಂತಹ ಧಾರ್ಮಿಕ ಸೀರಿಯಲ್ ಗಳ ಶೂಟಿಂಗ್‌ ಸ್ಟುಡಿಯೋದಲ್ಲೆ ಆಗುತ್ತಿತ್ತು. `ಸಿಯಾ ಕೆ ರಾಮ್'ನ ಶೂಟಿಂಗ್‌ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಲಾಯಿತು. ಅದರಿಂದ ಪ್ರೇಕ್ಷಕರಿಗೆ ವಾಸ್ತವ ಅರ್ಥವಾಯಿತು. ಅಯೋಧ್ಯಾ ಮತ್ತು ಮಿಥಿಲಾ ಎಂಬ 2 ಬೇರೆ ಬೇರೆ ಶೂಟಿಂಗ್‌ ಲೊಕೇಶನ್‌ಗಳನ್ನು ಮಾಡಲಾಯಿತು. ಈ ಸೀರಿಯಲ್ ನಲ್ಲಿ ಆಗಿನ ಕಾಲದ ಸಾಮಾಜಿಕತೆಯನ್ನು ತೋರಿಸಲಾಗಿದೆ ಎಂದು ಒಂದು ಕಡೆ ಹೇಳಲಾಗುತ್ತದೆ. ಇನ್ನೊಂದು ಕಡೆ  ಇದನ್ನು ಪ್ರಚಾರ ಮಾಡಲು `ಧನುಷ್‌ ಯಾತ್ರಾ'ವನ್ನೂ ಆಯೋಜಿಸಲಾಗುತ್ತದೆ. ಈ `ಧನುಷ್‌ ಯಾತ್ರೆ'ಯ ಉದ್ದೇಶ ಸೀರಿಯಲ್ ನ ಪ್ರಚಾರಕ್ಕಾಗಿ ಮಾತ್ರ. ದೇಶದ ಹಲವಾರು ದೊಡ್ಡ ನಗರಗಳಲ್ಲಿ ಇದನ್ನು ಆಯೋಜಿಸಲಾಯಿತು. ಸೀರಿಯಲ್ ನ ಕಲಾವಿದರಿಗೆ ಈ ಯಾತ್ರೆಯ ಪ್ರಚಾರದ ಕೆಲಸ ವಹಿಸಲಾಯಿತು. ಶೂಟಿಂಗ್‌ ಮಾಡುವಾಗ ಸೀರಿಯಲ್ ನಲ್ಲಿ ಧರ್ಮ ಮತ್ತು ಧಾರ್ಮಿಕ ಚಿಹ್ನೆಗಳಿಗೆ ಪ್ರಾಮುಖ್ಯತೆ ಕೊಡಲಾಯಿತು. ಏಕೆಂದರೆ ಜನ ಧರ್ಮದ ಹೊಸ ಸ್ವರೂಪದಲ್ಲಿ ಸಿಕ್ಕಿರಲೆಂದು. ಸೀರಿಯಲ್ ಗೆ ಸಿನಿಮಾಗಳ ಭವ್ಯತೆ ಕೊಟ್ಟು ಪ್ರೇಕ್ಷಕರ ಕಣ್ಣು ಕುಕ್ಕಿಸಲು ಎಲ್ಲ ವ್ಯವಸ್ಥೆ ಮಾಡಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ