ಮುಖಪುಸ್ತಕ ಎಷ್ಟೋ ಜನರಿಗೆ ಒಳ್ಳೆಯದನ್ನು ಮಾಡಿದೆ. ಸ್ನೇಹ ಸಂಬಂಧಗಳನ್ನು ಬೆಸೆಯುತ್ತದೆ. ಒಂದೇ ಮನಸ್ಕರಿಗೆ ಅದೇ ಮನಸ್ಸಿನವರು ಸಿಗುತ್ತಾರೆ. ನಮ್ಮ ನಮ್ಮ ಅಭಿರುಚಿಗೆಗೆ ತಕ್ಕ ವ್ಯಕ್ತಿತ್ವದವರು ದೊರೆಯುತ್ತಾರೆ. ಒಟ್ಟಿನಲ್ಲಿ ನಮ್ಮ ಆಯ್ಕೆ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ `ಅಮ್ಮ' ಎಂದು ಸಂಬೋಧಿಸುವತ್ತ, ಮುಖಪುಸ್ತಕದ ಮುಖೇನ ಪರಿಚಿತರಾಗಿ, ಖ್ಯಾತ ಲೇಖಕರಾದ ಸಂತೋಷ್‌ಕುಮಾರ್‌ ಮೆಹಂದಳೆಯವರ  `ಅವರು ಎಂದರೆ....' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖೇನ ಪರಿಚಿತರಾಗಿ, ಕ್ರಮೇಣ ಆತ್ಮೀಯರಾದ ಅಭೂತಪೂರ್ವ ಪ್ರತಿಭೆ. ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅವುಗಳಲ್ಲಿ ಹೆಸರನ್ನು ಯಶಸ್ಸನ್ನು, ಗಳಿಸುತ್ತ, ಕುಟುಂಬಕ್ಕೆ ಬಂಧು ಬಾಂಧವರಿಗೆ, ಸ್ನೇಹಿತರಿಗೆ, ಆಪ್ತವರ್ಗದವರಿಗೆ, ಆತ್ಮೀಯರಾಗಿ ಸಕಲರಿಗೂ ಸತ್ಪಾತ್ರರಾದ ಸನ್ನಡತೆಯ ವ್ಯಕ್ತಿ ಡಾ. ಅನಸೂಯಾದೇವಿ.

ಕಾವೇರಮ್ಮ  ಹಾಗೂ ತಮ್ಮಯ್ಯ ಅಡಿಗರ ಸುಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಿಂದಲೇ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ, ಕಲಿಕೆ, ಶಿಕ್ಷಣ ದೊರಕಿತು. ಪ್ರಥಮ ದರ್ಜೆಯಲ್ಲಿ ಉತ್ತೀರ್ಣ. ತದನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಹರಿದಾಸ ಸಾಹಿತ್ಯದ ಮೇಲಿನ ತಮ್ಮ ಸಂಶೋಧನಾ ಪ್ರಬಂಧಕ್ಕಾಗಿ, ಹಂಪಿಯ ಪಿಎಚ್‌ಡಿ ಪದವಿಯನ್ನು ಪಡೆದು ಡಾ. ಅನಸೂಯಾದೇವಿಯಾದರು!

ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆ

ಕವನ, ಲೇಖನ, ಸಣ್ಣಕಥೆ, ಕಾದಂಬರಿಗಳನ್ನು ಬರೆದಿರುವರು. ಈಗ್ಗೆ ಕೆಲವು ದಶಕಗಳ ಹಿಂದಿನ ಅನೇಕ ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ `ಕಾವೇರಿಸುತೆ' ಕಾವ್ಯನಾಮದಿಂದ ಇವರ ಬರಹಗಳು ಪ್ರಕಟವಾಗಿದ್ದವು. ಪ್ರಸ್ತುತ ಅನೇಕ ದೈನಿಕ, ವಾರಪತ್ರಿಕೆಗಳಲ್ಲೂ ತಮ್ಮ ಸಾಹಿತ್ಯದ ಕೃಷಿಯನ್ನು ನಡೆಸುತ್ತಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನಿಕೇತನ ತ್ರೈಮಾಸಿಕದಲ್ಲಿ ಕನ್ನಡಕ್ಕೆ ಅನುವಾದಿಸಿರುವ ಡಾ. ಹೇಮಂತ ಕುಲಕರ್ಣಿಯವರ ಇಂಗ್ಲಿಷ್‌ ಕವಿತೆಗಳ ಕನ್ನಡ ರೂಪ ಪ್ರಕಟಗೊಂಡಿವೆ. ರಾಬಿನ್‌ ರವರ `ಫೇರ್‌' ಇಂಗ್ಲಿಷ್‌ ಕಾದಂಬರಿಯನ್ನು ಕನ್ನಡಕ್ಕೆ `ಸಂಕಟವೇ ನಿಲ್ಲು, ಸಾಧನೆಯಾಗು!' ಎಂದು ಭಾವಾನುವಾದ ಮಾಡಿರುವರು. ಹಾಗೆಯೇ ಇತರ ಕೃತಿಗಳಾದ `ಆಕಾಶದ ಹಾಡು,' `ಕಾಡ ಬೆಳದಿಂಗಳು' ಧಾರಾವಾಹಿಗಳಾಗಿ ಪ್ರಕಟಗೊಂಡು ಮೆಚ್ಚುಗೆ ಗಳಿಸಿವೆ.

ಪ್ರಕಟಿತ ಕೃತಿಗಳು ಕವನ ಸಂಕಲನಗಳು : ಪ್ರಕೃತಿ ಪುರುಷ, ಅಮ್ಮ!... ನಿನ್ನ ನೆನಪಿಗೆ, ಕೇಶ ನಮನ, ಅನನ್ಯ, ಎದೆಹಾಸಿನ ಭಾವ, ಹೂಗಳು.

ಕಥಾಸಂಕಲನಗಳು : ಮಲ್ಲಿಗೆ ಹೂ, ಉರಿಯಬೇಲಿ, ದೀಪದ ಕೆಳಗೆ, ಅನಸೂಯಾ ಕಥೆಗಳು, ಕಥೆಯೊಳಗಿನ ಕಥೆಗಳು, ಅಜ್ಜಿ ಹೇಳಿದ ಕಥೆಗಳು.

ಕಾದಂಬರಿಗಳು : ಆಕಾಶದ ಹಾಡು, ಕಾಡ ಬೆಳದಿಂಗಳು, ನಕ್ಷತ್ರ ಸೂಕ್ತ, ಸಂಕಟವೇ ನಿಲ್ಲು.... ಸಾಧನೆಯಾಗು!

ವೈಚಾರಿಕ ಕೃತಿಗಳು : ವ್ಯಾಸಕೂಟ ಮತ್ತು ದಾಸಕೂಟ ಪಿಎಚ್‌ಡಿ ಮಹಾಪ್ರಬಂಧ, ಕುಂದಗನ್ನಡ.

ಗಾದೆಗಳು : ವ್ಯಾಖ್ಯಾನದೊಂದಿಗೆ, ಪ್ರಕೃತಿ ಮತ್ತು ಪ್ರೀತಿ, ವೈಚಾರಿಕ ಮತ್ತು ಆಧ್ಯಾತ್ಮಿಕ ಬರಹಗಳ ಸಂಕಲನ.

ಲೇಖಕಿಯಾಗಿ ಪಡೆದಿರುವ ಪ್ರಶಸ್ತಿಗಳು : ಧರ್ಮಸ್ಥಳ ಟ್ರಸ್ಟ್ ನಿಂದ `ರತ್ನಮ್ಮ ಮಂಜಯ್ಯ ಹೆಗ್ಗಡೆ,' ಗೊರೂರು ಸಾಹಿತ್ಯ ಪ್ರಶಸ್ತಿ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯಿಂದ ವಿಶುಕುಮಾರ್‌ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ, ಕುವೆಂಪುಶ್ರೀ ಪ್ರಶಸ್ತಿ, ಶ್ರೀ ವಿಜಯ ಪ್ರಶಸ್ತಿ, ಸಾಹಿತ್ಯಸೇತು ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಎಂ.ಜಿ. ರಂಗನಾಥ್‌ ಸ್ಮಾರಕ ವಿಶೇಷ ಬಹುಮಾನ, ಹೂಗೊಂಚಲು ಪ್ರಶಸ್ತಿ, ಸ್ಥಳೀಯ ಪ್ರತಿಭಾ ಸನ್ಮಾನ, ಶ್ರೀ ಭೀಮಸೇತು ಪುರಂದರ ಪ್ರಶಸ್ತಿ 2012, ಅತ್ಯುತ್ತಮ ಕೃತಿ 2013 ಪ್ರಥಮ ಬಹುಮಾನ ಪುರಸ್ಕಾರ, ವೈಚಾರಿಕ ಲೇಖನಕ್ಕೆ ಪ್ರಥಮ ಬಹುಮಾನ, ಅತ್ಯುತ್ತಮ ಚಿಂತನಾಕೃತಿ 2014 ಪ್ರಥಮ ಬಹುಮಾನ ಪುರಸ್ಕಾರ ದೊರೆತಿರುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ