ದಿವ್ಯಾ ಹೊಸೂರ್ ಅವರು ಸದ್ಯ ಬೆಳಗಾವಿ ಕಂಟೊನ್ಮೆಂಟ್‌ ಬೋರ್ಡ್‌ನ ಸಿಇಓ. ಬೆಳಗಾವಿಯ ಸಂಪೂರ್ಣ ಮಿಲಿಟರಿ ಪ್ರದೇಶ ಹಾಗೂ ಅದರಡಿ ಬರುವ ನಾಗರಿಕ ಪ್ರದೇಶಗಳ ಉಸ್ತುವಾರಿ ನೋಡಿಕೊಳ್ಳುವ ಪ್ರಮುಖ ಹೊಣೆಗಾರಿಕೆಯನ್ನು ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

2012ರಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಐಎಎಸ್‌ ಉತ್ತೀರ್ಣರಾದ ಬಳಿಕ ಅವರು ಆಯ್ದುಕೊಂಡಿದ್ದು ಐಡಿಇಎಸ್‌. ಅಂದರೆ `ಇಂಡಿಯನ್‌ ಡಿಫೆನ್ಸ್ ಎಸ್ಟೇಟ್‌ ಸರ್ವೀಸ್‌.' ಇದು ಎಂತಹ ಒಂದು ಮುಖ್ಯ ಜವಾಬ್ದಾರಿಯಾಗಿರುತ್ತದೆಂದರೆ, ದಂಡು ಪ್ರದೇಶಗಳಿರುವ ನಗರಗಳಲ್ಲಿ ಕೆಲಸ ಮಾಡುವ ಜವಾಬ್ದಾರಿ ಅವರ ಮೇಲಿರುತ್ತದೆ. ಉತ್ತರಾಖಂಡದ ರಾಣಿಖೇತ್‌ ಅಲ್ಮೋಡಾ ಹಾಗೂ ಗೋವಾದಲ್ಲಿ ಸೇವೆ ಸಲ್ಲಿಸಿದ ಬಳಿಕ ಬೆಳಗಾವಿ ಕಂಟೊನ್ಮೆಂಟ್‌ಗೆ ಬಂದಿದ್ದಾರೆ.

ಗೋವಾದಲ್ಲಿ ಕೆಲಸ ಮಾಡುವಾಗ ಅವರಿಗೆ ಕಾರವಾರದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಮಿಲಿಟರಿ ಪ್ರದೇಶಗಳ ಆಡಳಿತ ನಿರ್ವಹಣೆಯಲ್ಲಿ ದಿವ್ಯಾ ಅದೆಷ್ಟು ಸಮರ್ಥರು ಎನ್ನುವುದಕ್ಕೆ ಇದೇ ಸಾಕ್ಷಿ.

ಅಮ್ಮನಿಂದ ನನಸಾದ ಕನಸು

ದಿವ್ಯಾರ ತಂದೆ ಶಿವರಾಮ್ ಬ್ಯಾಂಕ್‌ ಉದ್ಯೋಗಿ. ಅಮ್ಮ ಗಾಯತ್ರಿ ಸಮಾಜ ಸೇವಕಿ. ಜೊತೆಗೆ ಸಾಕಷ್ಟು ಓದುವ ಹವ್ಯಾಸ ಉಳ್ಳವರಾಗಿದ್ದರು. ``ಅಮ್ಮ ತಾವು ಸಾಕಷ್ಟು ಓದುವುದರ ಜೊತೆ ಜೊತೆಗೆ ನಮ್ಮ ಓದಿನ ಬಗ್ಗೆಯೂ ತುಂಬಾ ಆಸಕ್ತಿ ತೋರಿಸುತ್ತಿದ್ದರು. ನಮಗಾಗಿ ಬೇಕಾದಷ್ಟು ಪತ್ರಿಕೆ, ನಿಯತಕಾಲಿಕೆ, ಹೆಸರಾಂತ ಲೇಖಕರ ಕೃತಿಗಳನ್ನು ತಂದು ಕೊಡುತ್ತಿದ್ದರು. ನಮ್ಮೂರಿನವರೇ ಆದ ತರಾಸು, ಬಿ.ಎಲ್. ವೇಣು ಅವರ ಬಹುತೇಕ ಎಲ್ಲ ಪುಸ್ತಕಗಳನ್ನೂ ನಾನು ಬಾಲ್ಯದಲ್ಲಿಯೇ ಓದಿ ಮುಗಿಸಿದ್ದೆ.  ಅದೇ ನನಗೆ ಮುಂದೆ ಐಎಎಸ್‌ ಮಾಡಲು ಪ್ರೇರಣೆಯಾಯಿತು,'' ಎಂದು ದಿವ್ಯಾ ತಮ್ಮ ಬಾಲ್ಯದ ದಿನಗಳನ್ನು ಬಿಚ್ಚಿಟ್ಟರು.

ಕೊಯಂಬತ್ತೂರು ಹಾಗೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿದ ಬಳಿಕ ಅವರು ತಮ್ಮ ಭವಿಷ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದು ಯುಪಿಎಸ್‌ಸಿ ನಡೆಸುವ ಐಎಎಸ್‌ ಪರೀಕ್ಷೆಯನ್ನು. ಅದಕ್ಕಾಗಿ ಅವರು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡು ಪರೀಕ್ಷೆ ಬರೆದರು. `ಕಬ್ಬಿಣದ ಕಡಲೇ' ಎಂದೇ ಹೇಳಲ್ಪಡುವ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಪಾಸಾದದ್ದು ಅವರ ಅವಿರತ ಪ್ರಯತ್ನ ಹಾಗೂ ಉತ್ಕೃಷ್ಟ ಅಧ್ಯಯನಶೀಲತೆಯನ್ನು ತೋರಿಸುತ್ತದೆ.

ತರಬೇತಿ ಅವಧಿಯಲ್ಲಿ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅಭ್ಯರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಉದ್ದ ಜಿಗತ, ಎತ್ತರ ಜಿಗಿತ, ಬ್ಯಾಡ್ಮಿಂಟನ್‌, ಓಟ, ರಿಲೇ ಹೀಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಶಾಲಾ ಜೀವನದಲ್ಲಿ ನೃತ್ಯ ಸಂಗೀತದಲ್ಲಿ ಮಾತ್ರ ಅಪಾರ ಆಸಕ್ತಿ ಹೊಂದಿದ್ದ ದಿವ್ಯಾ, ಕ್ರೀಡೆಯ ಬಗ್ಗೆ ಅಷ್ಟೇನೂ ಉತ್ಸಾಹ ತೋರಿಸುತ್ತಿರಲಿಲ್ಲ. ಆದರೆ ಆಶ್ಚರ್ಯ ಎಂಬಂತೆ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾದವರಿಗೆ ನಡೆಸುವ ಕ್ರೀಡಾ ಸ್ಪರ್ಧೆಯಲ್ಲಿ ದಿವ್ಯಾ ಒಟ್ಟು 9 ಪದಕಗಳನ್ನು ಗೆದ್ದು ಅತಿ ಹೆಚ್ಚು ಪದಕ ಪಡೆದ ಸ್ಪರ್ಧಾರ್ಥಿ ಎನಿಸಿಕೊಂಡರು.

ಶ್ರೇಯಸ್‌ ಭೇಟಿ

ಕ್ರೀಡಾಕೂಟದ ಅವಧಿಯಲ್ಲಿ ಅವರಿಗೆ ಶ್ರೇಯಸ್‌ ಹೊಸೂರರ ಭೇಟಿಯಾಗುತ್ತದೆ. ಅವರೂ ಕೂಡ ಐಎಎಸ್‌ ಉತ್ತೀರ್ಣರಾಗಿ ಆ ಕ್ರೀಡಾಕೂಟಕ್ಕೆ ಬಂದಿದ್ದರು. ಪರಸ್ಪರರ ಗೆಲುವಿಗೆ ಹೆಮ್ಮೆ ವ್ಯಕ್ತಪಡಿಸಿದ ಅವರು ಬಳಿಕ ಪರಸ್ಪರ ಪ್ರೀತಿಸತೊಡಗುತ್ತಾರೆ. ಆ ಪ್ರೀತಿ ಬಳಿಕ ಮದುವೆಯಲ್ಲಿ ಪರಿವರ್ತನೆಗೊಳ್ಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ