ಕಾವ್ಯವನ್ನು ಕೇವಲ ಓದುವುದಲ್ಲ, ಹಾಡಿ ಅದರ ಅರ್ಥವನ್ನು ಜನರ ಹೃದಯಕ್ಕೆ ತಲುಪಿಸುವ ಅಪೂರ್ವ ಕಲೆಯೇ ಗಮಕ.  ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳಾದ ಕುಮಾರವ್ಯಾಸ ಭಾರತತೊರವೆ ರಾಮಾಯಣಪಂಪ ಭಾರತಜೈಮಿನಿ ಭಾರತದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವಲ್ಲಿ ಗಮಕ ಕಲೆಯ ಪಾತ್ರ ಅಪಾರ. . ಆ ಗಮಕ ಕಲೆಗೆ ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಬದುಕನ್ನೇ ಸಮರ್ಪಿಸಿರುವ  ಈ ಪರಂಪರೆಯನ್ನು ಉಳಿಸಿ, ಬೆಳೆಸಿ, ಇಂದಿನ ತಲೆಮಾರಿಗೂ ಪರಿಚಯಿಸುತ್ತಿರುವ  ನಮ್ಮೆಲ್ಲರ ನೆಚ್ಚಿನ ಗಮಕ ಮೇಷ್ಟು ಎಂದೇ ಪ್ರಖ್ಯಾತವಾಗಿರುವ ಹಿರಿಯ ಗಮಕಿಗಳಾದ ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ಶ್ರೀ ಜಿ.ಎಸ್ನಾರಾಯಣ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಇಂದಿನ ಗುರು ಪೂರ್ಣಿಮೆಯಂದು ಪರಿಚಯಿಸುತ್ತಿದ್ದೇನೆ.

ಬಾಲ್ಯಕುಟುಂಬ ಮತ್ತು ಶಿಕ್ಷಣ

1942ರ ಅಕ್ಟೋಬರ್ 14ರಂದು  ಹೊಸಕೋಟೆ ಸಮೀಪದ ಗುಲ್ಲಳ್ಳಿಯ ಶ್ರೀ ಶೇಷಪ್ಪ ಮತ್ತು ವಂಕಮ್ಮ ದಂಪತಿಗಳಿಗೆ ಜನಿಸಿದ ಶ್ರೀಯುತ ಜಿ. ಎಸ್. ನಾರಾಯಣ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಮತ್ತು ಹೊಸಕೋಟೆಗಳಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಾಲ್ಯದಿಂದಲೇ ಕನ್ನಡ ಸಾಹಿತ್ಯ, ಪುರಾಣಗಳು ಮತ್ತು ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಮುಂದೆ ಗಮಕ ಕಲೆಯನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡರು.

ಶಿಕ್ಷಕರಿಂದ ಗಮಕಿಯವರೆಗೆ

ವೃತ್ತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಜಿ. ಎಸ್. ನಾರಾಯಣ ಅವರು ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದೆ, ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಯ ಸೇವೆಯನ್ನೇ ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡರು. ಅವರ ಜೀವನದ ನಿಜವಾದ ಪರಿಚಯ ಗಮಕಿ ಎಂಬ ಹೆಸರಿನಲ್ಲೇ ಅಡಗಿದೆ.

ಗಮಕ ಕಲೆಯಲ್ಲಿ ಶಿಕ್ಷಣ

,ಹಿರಿಯ ಗಮಕಿ ಶ್ರೀಮತಿ ಮಂಜುಳರಾಜು ಅವರ ಬಳಿ ಗಮಕ ಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಲೇ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಗಮಕ ಪ್ರವೇಶ ಮತ್ತು ಪ್ರೌಢ ಪರೀಕ್ಷೆಗಳಲ್ಲಿ (1973–74 ಹಾಗೂ 1974–75) ಯಶಸ್ವಿಯಾಗಿ ತೇರ್ಗಡೆಯಾದ ಅವರು ಆ ನಂತರ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಗಮಕ ಕಲೆಯನ್ನು ಕಲಿಸುವ ಗುರುವಾಗಿಯೂ ಹೊರಹೊಮ್ಮಿದರು.

ಗಮಕ ಬೋಧನೆಯಲ್ಲಿ ಐದು ದಶಕಗಳ ಸೇವೆ

ಗಮಕ ಕೇವಲ ವೇದಿಕೆಗೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಅವರು ಮಲ್ಲೇಶ್ವರಂ ಗಾಂಧೀ ಸಾಹಿತ್ಯ ಸಂಘ, ದಾಸರಹಳ್ಳಿ ಗಾಯತ್ರಿ ಸಂಘ ಮತ್ತು ಕೆಂಗೇರಿಯ ಮಹಿಳಾ ವಿದ್ಯಾಪೀಠಗಳಲ್ಲಿ ಗಮಕ ತರಗತಿಗಳನ್ನು ನಡೆಸಿದರು. ಅವರ ಬಳಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಗಮಕ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಗಮನಾರ್ಹವಾಗಿದೆ.

ನಮ್ಮ ಕುಟುಂಬದೊಂದಿಗೆ ಅವರ ಅವಿನಾಭಾ ಸಂಬಂಧ

ಹೇಳಿ ಕೇಳಿ ನಮ್ಮದು ಸಂಗೀತಹರಿಕಥೆ ಮತ್ತು ಗಮಕ ಪರಂಪರೆಯನ್ನು ಆರಾಧಿಸಿಕೊಂಡು ಬಂದ ಕುಟುಂಬ. ನಮ್ಮ ತಾತ ಗಮಕಿ ಶ್ರೀ ಬಿ. ನಂಜುಂಡಯ್ಯ ಅವರ ಗಾಯನವನ್ನು ಕೇಳುತ್ತಲೇ ಬೆಳೆದ ನಮ್ಮ ತಂದೆ ಶ್ರೀ ಶಿವಮೂರ್ತಿ ಅವರು ನಂತರ ಗಮಕವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುವ ಉದ್ದೇಶದಿಂದ 70ರ ದಶಕದಲ್ಲಿ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಗಮಕಾಭ್ಯಾಸ ಆರಂಭಿಸಿದರು. ಅಲ್ಲಿ ಜಿ. ಎಸ್. ನಾರಾಯಣ ಅವರೊಂದಿಗೆ ಆಯಿತು. ಆ ಪರಿಚಯವೇ ಮುಂದೆ ಜೀವನಪರ್ಯಂತದ ಆತ್ಮೀಯ ಬಾಂಧವ್ಯವಾಗಿ ಅರಳಿತು.

ಗುರುಗಳಾದ ನಾರಾಯಣ್ ಅವರ ಬಳಿ ಕೇವಲ ನಮ್ಮ ತಂದೆಯವರು ಮಾತ್ರವಲ್ಲ, ನಮ್ಮ ಚಿಕ್ಕಪ್ಪಂದಿರು, ನಂತರ ವೈಯಕ್ತಿಕವಾಗಿ ನಾನು, ನನ್ನ ಪತ್ನಿ ಮತ್ತು ನನ್ನ ಮಗಳೂ ಸಹ ಕೆಲವು ಕಾಲ ಗಮಕ ಕಲಿತಿದ್ದೇವೆ. ಹೀಗಾಗಿ ಅವರು ನಮ್ಮ ಕುಟುಂಬದಲ್ಲಿ ಗಮಕ ಮೇಷ್ಟ್ರು ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.

ಈ ಸಂಬಂಧ ಗಮಕ ತರಗತಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಮ್ಮ ಎರಡು ಕುಟುಂಬಗಳು ಕಳೆದ ಐದು ದಶಕಗಳಿಂದ ಪರಸ್ಪರರ ಎಲ್ಲ ಶುಭ ಹಾಗೂ ದುಃಖದ ಸಂದರ್ಭಗಳಲ್ಲಿ ಜೊತೆಯಾಗಿದ್ದೇವೆ. ಕುಟುಂಬದ ಸದಸ್ಯರಂತೆಯೇ ಬೆರೆತು ಬದುಕಿದ ಈ ಆತ್ಮೀಯತೆ ನಿಜಕ್ಕೂ ದೇವರ ಕೃಪೆಯೇ ಎನ್ನಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ