ಗೀತಾ ಕುಂದಾಪುರ ಲೇಖಕಿ

ಸತ್ವಯುತ ಸಾಹಿತ್ಯ ರಚಿಸಿರುವ ಕರಾವಳಿಯ ಅಪ್ಪಟ ಕನ್ನಡ ಪ್ರತಿಭೆ ಗೀತಾ ಕುಂದಾಪುರ ಅವರ ಸಾಹಿತ್ಯ ಕೃಷಿ ಅನನ್ಯವಾದುದು. ಕುರಿತು ಅವರೇನು ಹೇಳಬಯಸುತ್ತಾರೆ.......?

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಇಂದು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆಧುನಿಕ ಯುಗದಲ್ಲಿ ಮಹಿಳೆ ಪುರುಷರ ಸರಿಸಮಾನವಾಗಿ ಎಲ್ಲಾ ರಂಗಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ನಿಮ್ಮೆಲ್ಲರಿಗೆ ತಿಳಿದಿರುವ ಸಂಗತಿ. ಅದರಂತೆಯೇ ಸಾಹಿತ್ಯ ರಚನೆಯಲ್ಲಿ ಕೂಡ ಇವರು ಹಿಂದೆ ಬಿದ್ದಿಲ್ಲ. ಕುಟುಂಬದ ಜವಾಬ್ದಾರಿ, ಉದ್ಯೋಗ ಎಲ್ಲದರ ನಡುವೆಯೇ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಉತ್ತಮ ಕೃತಿಗಳ ರಚನೆಯಲ್ಲಿ ತೊಡಗಿಸಿಕೊಳ್ಳುವವರು ನಮ್ಮ ನಿಮ್ಮೆಲ್ಲರ ನಡುವೆ ಇರುತ್ತಾರೆ. ಅಂತಹವರಲ್ಲಿ ಗೀತಾ ಕುಂದಾಪುರ ಸಹ ಒಬ್ಬರು.

`ದೇಶ ಸುತ್ತು ಕೋಶ ಓದು' ಎನ್ನುವ ನುಡಿಗಟ್ಟಿಗೆ ಅನ್ವರ್ಥ ಎನ್ನುವಂತಿರುವ ಗೀತಾ ಕುಂದಾಪುರ ಉದ್ಯೋಗ ನಿಮಿತ್ತ ನಾನಾ ದೇಶ ಸುತ್ತಿ ಬಂದಿದ್ದಾರೆ. ಜೊತೆಗೆ ಸಾಹಿತ್ಯದ ಓದಿನ ಅಭಿರುಚಿ ಕೂಡ ಅವರಿಗೆ ಬಾಲ್ಯದಿಂದಲೇ ಬಂದಿದೆ.

ಗೀತಾ ಕುಂದಾಪುರ ಜನಿಸಿದ್ದು, 1967 ಜೂನ್‌ 23, ಉಡುಪಿ ಜಿಲ್ಲೆ ಕುಂದಾಪುರದ ವಿಶ್ವೇಶ್ವರ ಉಡುಪ ಹಾಗೂ ಸುಲೋಚನಾ ದಂಪತಿಯ ಮಗಳಾದ ಗೀತಾ ಕುಂದಾಪುರದಲ್ಲೇ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣವನ್ನೂ ಮುಗಿಸಿದರು. ಕುಂದಾಪುರದ ಭಂಡಾರ್ಕರ್ಸ್‌ ಕಾಲೇಜಿನಲ್ಲಿ ಬಿ.ಕಾಂ. ಪದವಿ ಮುಗಿಸಿದ ಗೀತಾ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಕಾಂ. ಪದವಿ ಗಳಿಸಿದರು.

ಕೇರಳದ ವೈನಾಡು ಮೂಲದ ಸುರೇಂದ್ರ ಉಪಾಧ್ಯಾಯರನ್ನು ವಿವಾಹವಾದ ಗೀತಾ ಮದುವೆ ನಂತರ ಕಾಸರಗೋಡಿಗೆ ತೆರಳಿ ಅಲ್ಲಿನ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು. ಕೆಲವು ವರ್ಷಗಳ ನಂತರ ಪತಿಯೊಡನೆ ಕತಾರ್ ದೇಶಕ್ಕೆ ತೆರಳಿದ್ದ ಗೀತಾ ಅಲ್ಲಿ ಆಸ್ಟ್ರೇಲಿಯಾ ಮೂಲದ ಸಂಸ್ಥೆಯೊಂದರಲ್ಲಿ ಪ್ಲಾನರ್‌ ಮತ್ತು ಪ್ರಾಜೆಕ್ಟ್ ಕಂಟ್ರೋಲರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಹದಿನೆಂಟು ವರ್ಷಗಳ ನಂತರ ಭಾರತಕ್ಕೆ ಮರಳಿದ ಗೀತಾ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ.

ಬಾಲ್ಯದಲ್ಲೇ ಸಾಹಿತ್ಯದ ನಂಟು

ಗೀತಾ ತಂದೆ ವಕೀಲರಾಗಿದ್ದು ಅವರು ಸಾಹಿತ್ಯ ಪ್ರೇಮಿಯೂ ಕೂಡ. ಮನೆಯಲ್ಲಿ ಉತ್ತಮ ಸಾಹಿತ್ಯ ಕೃತಿಗಳು, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳು ಸದಾ ಇರುತ್ತಿದ್ದು, ಇವೆಲ್ಲ ಬಾಲ್ಯದಲ್ಲೇ ಗೀತಾರಿಗೆ ಸಾಹಿತ್ಯದ ಮೇಲೆ ಒಲವು ಮೂಡಲು ಕಾರಣವಾಗಿತ್ತು. ಆದರೆ ವೈವಿಧ್ಯಮಯ ಸಾಹಿತ್ಯವನ್ನು ಓದಿದರೂ ಗೀತಾಗೆ ತಾವು ಬರೆಯಬೇಕೆಂದು ಇತ್ತೀಚಿನವರೆಗೂ ಅನಿಸಿರಲಿಲ್ಲ. ಕತಾರ್ ವಾಸದ ದಿನಗಳಲ್ಲಿ ಉದ್ಯೋಗದ ಜಂಜಾಟದಲ್ಲಿ ಬೇರೆ ಯಾವ ಆಲೋಚನೆಗೂ ಅಕಾಶವೇ ಇರಲಿಲ್ಲ. ಆದರೆ ಬೆಂಗಳೂರಿನಲ್ಲಿ ನೆಲೆ ನಿಂತ ನಂತರ ಅವರಿಗೆ ಬಿಡುವಿನ ವೇಳೆ ಸಾಕಷ್ಟು ದೊರೆತು ಬರವಣಿಗೆಯತ್ತ ಆಸಕ್ತಿ ಕೆರಳುವಂತಾಯಿತು.

ಗೀತಾ ಇದುವರೆಗೆ 80ಕ್ಕೂ ಹೆಚ್ಚು ಕಥೆಗಳು, 200ಕ್ಕೂ  ಹೆಚ್ಚು ಲೇಖನಗಳು, ಲಹರಿ, ಲಲಿತ ಪ್ರಬಂಧಗಳು, ಪ್ರವಾಸ ಕಥನಗಳನ್ನು ಬರೆದಿದ್ದು, ಅದರಲ್ಲಿ ಹೆಚ್ಚಿನ ನಾಡಿನ ಹೆಸರಾಂತ ಕನ್ನಡ, ಇಂಗ್ಲಿಷ್‌ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

`ಅಪ್ರಮೇಯ' ಕಥಾಸಂಕಲನ (2018), `ದ್ವೀಪಗಳತ್ತ ಯಾನ,' `ಜಪಾನ್‌ ಮತ್ತು ಆಸ್ಟ್ರೇಲಿಯಾ' ಪ್ರವಾಸ ಕಥನ (2019), `ಚಿತ್ತದಲ್ಲಿ ಮೂಡಿದ ಚಿತ್ತಾರ' ಕಥಾಸಂಕಲನ (2020), `ಕಡಲ್ಗಳ್ಳರ ಸರಹದ್ದಿನಲ್ಲಿ,' `ರಷ್ಯಾ ಮತ್ತು ಆಸ್ಟ್ರೇಲಿಯಾ' ಪ್ರವಾಸ ಕಥನ ಮತ್ತು `ಒಂಟಿ ಪಯಣಿಗರು' ಕಥಾಸಂಕಲನ (2022) ಇವು ಗೀತಾ ಅವರ ಪ್ರಕಟಿತ ಪ್ರಮುಖ ಕೃತಿಗಳಾಗಿವೆ. ಇವರ ಕಥೆಗಳಲ್ಲಿ ಅಪ್ಪಟ ಗ್ರಾಮೀಣ ಬದುಕಿನ ಚಿತ್ರಣ ಜೊತೆಗೇ ಮಾಡರ್ನ್‌ ಲೈಫ್‌ ಸ್ಟೈಲ್‌, ಹೈ ಫೈ ಜೀವನ ಸಹ ಇದೆ. ಪ್ರಕೃತಿ ಹಾಗೂ ಮನುಷ್ಯ ಸಂಬಂಧಗಳ ಹುಡುಕಾಟ ಇದೆ. ಹಾಗಾಗಿ ಇವರ ಕಥೆಗಳು ಓದುಗರ ಮನಗೆಲ್ಲುವುದು ಖಚಿತ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ