ಮಾಲಾ : ಪ್ರಾಣಿಗಳಿಗೆ ದೃಷ್ಟಿದೋಷದ ಸಮಸ್ಯೆ ಎಂದೂ ಕಂಡುಬರುವುದಿಲ್ಲ..... ಅಲ್ಲವೇ?
ಲೀಲಾ : ಇರಬಹುದು ಅನಿಸುತ್ತೆ ..... ನಾನಂತೂ ಕನ್ನಡಕ ಧರಿಸಿದ ಯಾವ ಪ್ರಾಣಿಯನ್ನೂ ನೋಡಿಯೇ ಇಲ್ಲ ಬಿಡು.
ಮಾಲಾ : ಹಾಗೇಂತ ಅವು ಲೆನ್ಸ್ ಧರಿಸಿವೆ ಅಂತಾನೂ ಅಂದ್ಕೊಬಾರದು!
ಪುಸ್ತಕ ನೋಡಿಕೊಂಡು ಸೊಸೆ ಅಡುಗೆ ಮಾಡುತ್ತಿದ್ದಳು.
ಅತ್ತೆ : ಏನಮ್ಮ, ಚಪಾತಿ ಹಿಟ್ಟಿನ ಮೇಲೆ ಪೂಜಾ ರೂಮಿನ ಘಂಟೆ ಯಾಕೆ ತಂದಿರಿಸಿದ್ದೀಯಾ...?
ಸೊಸೆ : ಓ ಅದಾ ಅತ್ತೆ...... ಈ ಪುಸ್ತಕದಲ್ಲಿ ಹಿಟ್ಟು ಕಲಸಿದ ಮೇಲೆ 1 ಗಂಟೆ ಇಡಿ ಅಂತ ಕೊಟ್ಟಿದ್ದಾರೆ.
ಟೀಚರ್: ಲೋ ಕಿಟ್ಟಿ, ಪರೀಕ್ಷೆ ಬರ್ತಿದೆ, ತಯಾರಿ ಮಾಡಿಕೊಂಡಿದ್ದೀಯಾ?
ಕಿಟ್ಟಿ : ಏನೋ ಸುಮಾರಾಗಿ.
ಟೀಚರ್: ಎಲ್ಲಿ.... ದ್ಯುತಿ ಸಂಶ್ಲೇಷಣೆ ಎಂದರೇನು? ಹೇಳು ನೋಡೋಣ.
ಕಿಟ್ಟಿ : ಗೊತ್ತಿಲ್ಲ ಟೀಟರ್.
ಟೀಚರ್ : ಮೊದಲು ಸ್ವಲ್ಪ ಓದಿನ ಕಡೆ ಗಮನ ಕೊಡು.
ಕಿಟ್ಟಿ : ಟೀಚರ್ ನಿಮಗೆ ಪ್ರಶಾಂತ್ ಕುಮಾರ್ ಗೊತ್ತಾ?
ಟೀಚರ್ : ಯಾರದು....? ಗೊತ್ತಿಲ್ಲವಲ್ಲ....
ಕಿಟ್ಟಿ : ನಿಮ್ಮ ಮಗಳು 10ನೇ ಕ್ಲಾಸಿಗೆ ಬಂದಾಯ್ತು, ಸ್ವಲ್ಪ ಅವಳ ಮೇಲೂ ಗಮನ ಕೊಡಿ!
ಮಗಳು : ಅಮ್ಮಾ, ಶ್ರಾವಣ ಮಾಸದಲ್ಲಿ ಹೆಣ್ಣು ಮಕ್ಕಳು ಯಾಕೆ ದೇವಸ್ಥಾನಕ್ಕೆ ಹೋಗ್ತಾರೆ?
ತಾಯಿ : ಒಳ್ಳೆಯ ಗಂಡನ್ನ ಕೊಡಪ್ಪ ಅಂತ ದೇವರನ್ನು ಕೇಳಿಕೊಳ್ಳೋಕೆ.
ಮಗಳು : ಮತ್ತೆ ಮದುವೆಯಾದ ಆಂಟಿಯರು ಯಾಕೆ ಹೋಗ್ತಾರೆ.....?
ತಾಯಿ ನಾನು ಕೇಳಿದ್ದೇನು....? ನೀನು ಕೊಟ್ಟಿದ್ದೇನು.... ಅಂತ ವಿಚಾರಿಸೋಕ್ಕೆ!
ವೀಣಾ : ವಾಟ್ಸ್ ಆ್ಯಪ್ ಮೆಸೇಜ್ಗೂ ಅಡುಗೆಮನೆಗೂ ಬಹಳ ಸಂಬಂಧ ಗೊತ್ತಾ?
ವಾಣಿ : ಅದು ಹೇಗೆ ಅಂತೀಯಾ?
ವೀಣಾ : ಅದು ಒಲೆ ಮೇಲೆ ಇಟ್ಟ ಹಾಲಿನಂತೆ.... ಅಗಾಗ ಇಣುಕಿ ನೋಡುತ್ತಲೇ ಇರಬೇಕು.
ಟೀಚರ್ : ಸೀನ, ಲಿಂಗಗಳಲ್ಲಿ ಎಷ್ಟು ವಿಧ ಹೇಳು.....
ಸೀನ : ಆರು ವಿಧ ಟೀಚರ್.
ಟೀಚರ್ : ಅದು ಹೇಗೋ?
ಸೀನ : ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ, ನಮ್ಮಪ್ಪ ಸಿದ್ಲಿಂಗ, ಅಟೆಂಡರ್ ಗುರುಲಿಂಗ, ಶ್ರೀಲಂಕಾ ಬೋಲರ್ ಮಲಿಂಗ!
ಕಿಟ್ಟಿ : ನಾನು ಸತ್ತ ಮೇಲೆ ದೇವರನ್ನು ನನ್ನನ್ನು ನರಕಕ್ಕೇ ಕಳಿಸು ಎಂದು ಬೇಡಿಕೊಳ್ಳುತ್ತೇನೆ.
ನಾಣಿ : ಇದ್ಯಾಕೋ ಮಾರಾಯ... ನಿನ್ನ ತಲೆ ನೆಟ್ಟಗಿದೆ ತಾನೇ?
ಸೀನ : ಎಲ್ಲರೂ ಸ್ವರ್ಗಕ್ಕೆ ಹೋಗಬೇಕು ಅಂತ ತಾನೇ ಆಸೆ?
ವೆಂಕಿ : ಬೇಡ, ಮನಸ್ಸು ಸರಿಯಾಗಿಟ್ಟುಕೊಂಡು ಪ್ರಾರ್ಥನೆ ಮಾಡಿಕೋ.....
ಕಿಟ್ಟಿ : ಅದೆಲ್ಲ ಮುಖ್ಯವಲ್ಲ, ನಿಮ್ಮಂಥ ಆತ್ಮೀಯ ಗೆಳೆಯರೆಲ್ಲ ಗ್ಯಾರಂಟಿ ನರಕದಲ್ಲೇ ಇರುತ್ತೀರಿ ಅಂತ ಗೊತ್ತು, ಹಾಗಿರುವಾಗ ನಾನೇಕೆ ನಿಮ್ಮನ್ನು ಬಿಟ್ಟು ಸ್ವರ್ಗಕ್ಕೆ ಹೋಗಲಿ?
ಗುಂಡನಿಗೆ ಸಮಾಜ ಸೇವೆಯಲ್ಲಿ ಅಪಾರ ಆಸಕ್ತಿ. ಹೇಗಾದರೂ ಸಮಾಜ ಸೇವೆಗೆ ತನ್ನನ್ನೇ ಅರ್ಪಿಸಿಕೊಳ್ಳಬೇಕೆಂದು ತಿಮ್ಮನ ಸಹಾಯ ಪಡೆದ.
ಅದಾಗಿ ಒಂದು ವಾರದ ನಂತರ ತಿಮ್ಮ ಗುಂಡನನ್ನು ಹಿಡಿದು ಯದ್ವಾತದ್ವಾ ಹೊಡೆಯುತ್ತಿದ್ದ. ಯಾಕೆ ಅಂತೀರಾ? ಹತ್ತಿರದ ಸ್ಮಶಾನಕ್ಕೆ ಹೋದ ಗುಂಡ ಅಲ್ಲಿದ್ದ ಪ್ರತಿ ಗೋರಿಯ ಮೇಲೂ ಬೋರ್ಡ್ ತಗುಲಿಸಿದ್ದ, `ಎಲ್ಲರಿಗೂ ಇಲ್ಲಿಗೆ ಹೃದಯಪೂರ್ವಕ ಸುಸ್ವಾಗತ!'