ಪ್ರಶ್ನೆ : ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ವಸ್ತುನ್ನು ಹೆಸರಿಸಿ.
ಉತ್ತರ : ಇಡ್ಲಿ, ದೋಸೆ ಹಿಟ್ಟು!
ಪತಿ : ಅಕಸ್ಮಾತ್ ಮುಂದೊಂದು ದಿನ ನಾನು ಕಣ್ಮರೆಯಾಗಿ ತಪ್ಪಿಸಿಕೊಂಡು ಬಿಟ್ಟರೆ, ಆಗ ಏನು ಮಾಡ್ತೀಯಾ?
ಪತ್ನಿ : ತಕ್ಷಣ ಪೇಪರ್ ನಲ್ಲಿ ಜಾಹೀರಾತು ಕೊಡ್ತೀನಿ.
ಪತಿ : ವಾಹ್…. ಏನಂತ ಕೊಡ್ತೀಯಾ?
ಪತ್ನಿ : ಗಂಡ ಬೇಕಾಗಿದ್ದಾನೆ!
ಪತ್ನಿ : ರೀ, ನಾವು ಭೂತ ಓಡಿಸ್ಬೇಕಾದ್ರೆ ತಾಯಿತ ಕಟ್ತೀವಿ, ಅದೇ ಭೂತವನ್ನು ಕರೀಬೇಕಾದ್ರೆ…..?
ಪತಿ : ತಾಳಿ ಕಟ್ತೀವಿ…..!
ಮಹಿಳೆ : ಸ್ವಾಮೀಜಿ, ನನ್ನ ಗಂಡನನ್ನು ಸದ್ಯಕ್ಕೆ ಸಿಲುಕಿರೋ ಹಗರಣದಿಂದ ಪಾರು ಮಾಡಿ.
ಸ್ವಾಮೀಜಿ : ತಾಯಿ, ಯಾವುದಾದರೂ ಹಗರಣವೇ ಇಲ್ಲದ ರಾಜಕಾರಣಿಯ ಮನೆಯಿಂದ ಸಾಸುವೆ ತಂದರೆ, ನಿನ್ನ ಗಂಡನ್ನ ಪಾರು ಮಾಡಬಹುದು.
ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು :
- ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ “ಅವಳು ನಿನ್ನನ್ನೇ ನೋಡುತ್ತಿದ್ದಾಳೆ!”
- ಬಸ್ ಕಂಡೆಕ್ಟರ್ ಹೇಳಿದ ಸುಳ್ಳು ಕಥೆ “ನೆಕ್ಸ್ಟ ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.”
- ಪೋಷಕರು ಹೇಳಿದ ಸುಳ್ಳು ಕಥೆ “10ನೇ ತರಗತಿವರೆಗೆ ಕಷ್ಟಪಟ್ಟರೆ ಸಾಕು…. ಆಮೇಲೆ ಆರಾಮವಾಗಿ ಇರಬಹುದು.”
- ಕಾಲೇಜ್ ಪ್ರಿನ್ಸಿಪಾಲ್ ಹೇಳಿದ ಸುಳ್ಳು ಕಥೆ “ಈ ಕೋರ್ಸ್ ಗೆ ಮುಂದೆ ಬಹಳ ಸ್ಕೋಪ್ ಇದೆ.”
- ಹೊಸದಾಗಿ ನೇಮಕಗೊಂಡ ಸಹೋದ್ಯೋಗಿ ಹೇಳಿದ ಸುಳ್ಳು ಕಥೆ “ಸಂಬಳ ಕಡಿಮೆ. ಆದರೆ ಏನಂತೆ…. ಕಲಿಯಲು
ಬಹಳಷ್ಟು ಅವಕಾಶ ಇದೆ.”
- ಬಡ್ತಿ ತಿರಸ್ಕರಿಸುವಾಗ ಬಾಸ್ ಹೇಳಿದ ಸುಳ್ಳು ಕಥೆ “ನಿನ್ನ ಪರ್ಫಾರ್ಮೆನ್ಸ್ ತೃಪ್ತಿದಾಯಕವಾಗಿಲ್ಲ.”
- ಹುಡುಗಿಯನ್ನು ನೋಡಲು ಹೋದಾಗ, ಅತ್ತೆ ಮನೆಯವರು ಹೇಳಿದ ಸುಳ್ಳು ಕಥೆ “ನಮ್ಮ ಹುಡುಗಿ ಅಡುಗೆ ಚೆನ್ನಾಗಿ ಮಾಡ್ತಾಳೆ. ಈ ಅವಲಕ್ಕಿ ಇವಳೇ ಮಾಡಿದ್ದು…..!!”
- ಮದುವೆಗೆ ಮೊದಲು ಹುಡುಗ ಹುಡುಗಿಗೆ ಹೇಳಿದ ಸುಳ್ಳು ಕಥೆ “ನಾನು ಅಕೇಶನಲಿ ಡ್ರಿಂಕ್ಸ್ ತಗೋಳ್ತೀನಿ ಅಷ್ಟೆ……!!”
- ಪ್ರಶಸ್ತಿ ವಿತರಣೆಯ ಸಮಯದಲ್ಲಿ ಅತಿಥಿ ಹೇಳಿದ ಸುಳ್ಳು ಕಥೆ “ನನ್ನ ದೃಷ್ಟಿಯಲ್ಲಿ ಎಲ್ಲರೂ ವಿನ್ನರ್ಸ್.”
- ಬಟ್ಟೆ ಅಂಗಡಿಯ ಸೇಲ್ಸ್ ಮನ್ ಹೇಳಿದ ಸುಳ್ಳು ಕಥೆ “ಈ ಬಣ್ಣ ನಿಮಗೆ ಕರೆಕ್ಟ್ ಆಗಿ ಸೂಟ್ ಆಗುತ್ತೆ….”
- ಟೇಬಲ್ ಮೇಟ್ ಹೇಳಿದ ಸುಳ್ಳು ಕಥೆ “ಬಿಯರ್ ಆಲ್ಕೋಹಾಲ್ ಅಲ್ಲ ಮಾರಾಯ….”
ಇನ್ನೊಂದು ಎಕ್ಟ್ರಾಡಿನರಿ ಮಹಾನ್ ಸುಳ್ಳು ಕಥೆ ಗಂಡ ತನ್ನ ಹೆಂಡತಿಗೆ ಹೇಳಿದ್ದು “ನನ್ನ ಹೃದಯದಲ್ಲಿ ನಿನ್ನನ್ನು ಬಿಟ್ಟು ಯಾರಿಗೂ ಜಾಗ ಇಲ್ಲ…..!!”
ಟೀಚರ್ : `ಸಕ್ಕರೆ’ ಎಂಬ ಪದ ಬಳಸಿ ಒಂದು ವಾಕ್ಯ ರಚಿಸಿರಿ.
ಗುಂಡ : ನಿನ್ನೆ ಸಂಜೆ ನಾನು ಒಂದು ಕಪ್ ಚಹಾ ಕುಡಿದೆ.
ಟೀಚರ್ : ಇದರಲ್ಲಿ ಸಕ್ಕರೆ ಎಲ್ಲಿ ಬಂತೋ…?
ಗುಂಡ : ಅದು ಚಹಾದಲ್ಲಿ ಕರಗಿದೆ ಟೀಚರ್!
ಟೀಚರ್ : ಮಕ್ಕಳೇ, ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ, ಅಲ್ಲವೇ? ಅದಕ್ಕೆ ಏನಂತಾರೆ?
ಸೀನ : ಅಷ್ಟೆಲ್ಲ ಗೊತ್ತಿದ್ದರೆ ನಾವೇಕೆ ನಿಮ್ಮ ಕ್ಲಾಸ್ ಅಟೆಂಡ್ ಮಾಡ್ತಿದ್ವಿ?
ಟೀಚರ್ : ಹಾಳಾಗಿ ಹೋಗಲಿ, ಇವತ್ತಿನ ಜೀವಶಾಸ್ತ್ರದ ಪ್ರಮುಖ ಕಾನ್ಸೆಪ್ಟ್ ದ್ಯುತಿ ಸಂಸ್ಲೇಷಣೆ (ಫೋಟೋಸಿಂಥೆಸಿಸ್). ಈಗ ಹೇಳಿ, ದ್ಯುತಿ ಸಂಸ್ಲೇಷಣೆ ಅಂದ್ರೆ ಏನು?
ನಾಣಿ : ಅದೇ… ಇವತ್ತಿನ ನಮ್ಮ ಸಸ್ಯಶಾಸ್ತ್ರ ಪಾಠದ ಟಾಪಿಕ್!
`ವೆಂಕಿ ಮರ ಹತ್ತಿ ಮಾವಿನ ಹಣ್ಣು ಕೀಳಲು ಬರುತ್ತಿದ್ದಾನೆ.’ ಮಕ್ಕಳೇ, ಈ ವಾಕ್ಯನ್ನು ಮಾವಿನಿಂದ ಹೇಗೆ ಆರಂಭಿಸಬಹುದು, ಪ್ರಯತ್ನಿಸಿ ನೋಡೋಣ!
ಗುಂಡ : ಮಾವಿನ ಹಣ್ಣುಗಳೇ! ವೆಂಕಿ ಮರ ಹತ್ತಿ ನಿಮ್ಮನ್ನು ಕೇಳಲು ಬರುತ್ತಿದ್ದಾನೆ, ಎಚ್ಚರ!
ಟೀಚರ್ : ಮಕ್ಕಳೆ, ಶಾಲೆ ಅಂದ್ರೆ ನಿಮ್ಮೆಲ್ಲರಿಗೂ ಬಹಳ ಇಷ್ಟ ಅಲ್ಲವಾ?
ವಾಣಿ : ಹೌದು ಟೀಚರ್, ರಜಾ ದಿನಗಳಿಗಿಂತಲೂ ಶಾಲೆಯೇ ನಮಗೆ ಇಷ್ಟ. ಇಲ್ಲಿ ನಮ್ಮ ಎಲ್ಲ ಫ್ರೆಂಡ್ಸ್ ಇರ್ತಾರಲ್ಲ…..?
ಟೀಚರ್ : ಹಾಗಿದ್ದರೂ ವಿದ್ಯಾರ್ಥಿಗಳಿಗೆ ಶಾಲೆ ಕುರಿತು ಹಿಡಿಸದೆ ಇರುವಂಥ, ದ್ವೇಷಿಸುವಂಥ ವಿಷಯ ಇದೆ ಅಂತೀರಾ?
ವೆಂಕಿ : ಯಾಕಿಲ್ಲ? ಪರೀಕ್ಷೆ ಎಂಬ ಭೂತ ಇದ್ದೇ ಇದೆಯಲ್ಲ!
ಟೀಚರ್ : ಮಕ್ಕಳೆ, ನಮ್ಮ ಶಾಲೆಯನ್ನು ಸದಾ ಸರ್ವದಾ ಶುಚಿಯಾಗಿ, ಶುಭ್ರವಾಗಿ ಇರಿಸಿಕೊಳ್ಳುವುದು ಹೇಗೆ?
ರಾಣಿ : ಬಹಳ ಸುಲಭ ಮೇಡಂ, ಪ್ರತಿ ತಿಂಗಳಿಗೊಮ್ಮೆ 1-2 ತಿಂಗಳು ಶಾಲೆಗೆ ರಜೆ ಕೊಡುತ್ತಿರಬೇಕು, ಆಗ ಶಾಲೆಯನ್ನು ಗಲೀಜು ಮಾಡುವವರು ಯಾರಿರುತ್ತಾರೆ?
ಟೀಚರ್ : ಮಕ್ಕಳೆ, ನಿಮಗೆ ಇವತ್ತಿನ ವ್ಯಾಕರಣದ ಪಾಠ ಅರ್ಥ ಆಯ್ತು ತಾನೇ!
ಮಕ್ಕಳು : ಏನೋ…. ಸುಮಾರಾಗಿ ಆಗಿದೆ ಅನ್ಸುತ್ತೆ.
ಟೀಚರ್ : ಹಾಗ್ದಾರೆ ಈಗ ಹೇಳಿ, `ನಮ್ಮ ದೇಶ ಒಂದಲ್ಲ ಒಂದು ದಿನ ಲಂಚವಿಲ್ಲದ ನಾಡಾಗಲಿದೆ!’ ಈ ವಾಕ್ಯ ಯಾವ ಕಾಲದಲ್ಲಿದೆ?
ರಿಂಕು : ಎಂದೆಂದೂ ನಡೆಯದ ಇಂಪಾಸಿಬಲ್ ಕಾಲ!





