ನಮ್ಮಿಂದ ಹೆಚ್ಚು ಅಪೇಕ್ಷೆ ಇಟ್ಟುಕೊಳ್ಳಬೇಡಿ.....

ಆರೋಗ್ಯ ಸಚಿವ ಹರ್ಷವರ್ಧನ್‌ ಅವರನ್ನು ಬದಲಿಸಿ ಕೋವಿಡ್‌ ನಿರ್ವಹಣೆಯ ತಪ್ಪನ್ನು ಒಪ್ಪಿಕೊಂಡಂತೆ. ಆರೋಗ್ಯ ಸಚಿವರು ಏನೇನೋ ಹೇಳುತ್ತ ಹೊರಟಿದ್ದರು ಹಾಗೂ ಕ್ಲೇಮ್ ಮಾಡುತ್ತಿದ್ದರು. ಅದರ ನಿಜವಾದ ಹೊಣೆಗಾರಿಕೆ ಪ್ರಧಾನಿಯವರದ್ದಾಗಿರಬಹುದು, ಅದರ ತಪ್ಪು ಆರೋಗ್ಯ ಸಚಿವರದ್ದೂ ಆಗಿತ್ತು.

ಆಯುರ್ವೇದ ಮುಂತಾದವುಗಳ ಬಗೆಗಿನ ನನ್ನ ಕ್ಲೇಮ್ ತಪ್ಪಾಗಿತ್ತು ಎಂದು ಅವರು ಆಗಲೇ ಒಪ್ಪಿಕೊಳ್ಳಬೇಕಿತ್ತು.

ಹರ್ಷವರ್ಧನ್‌ ಆಲೋಪಥಿ ವೈದ್ಯರಾಗಿದ್ದೂ ಕೂಡ ಕೋವಿಡ್‌ ಸಂಕಷ್ಟದ ಸಮಯದಲ್ಲಿ ಸರ್ಕಾರ ನಿಮ್ಮ ಜೊತೆಗಿರುತ್ತದೆ ಎಂಬ ಭರವಸೆಯ ಮಾತನ್ನು ಹೇಳಲಿಲ್ಲ.

ಜನತೆಗೆ ರೆಮಡೆಸಿರ್‌ ಅಥವಾ ಡಾಕ್ಸಿಯ ಸಂಶೋಧನೆ, ಐಸಿಯು ಬೆಡ್‌, ಆಕ್ಸಿಜನ್‌ ಸಿಲಿಂಡರ್‌ ಗಳದ್ದಲ್ಲ, ಸೀದಾ ಸ್ಮಶಾನದ ವ್ಯವಸ್ಥೆ ಮಾಡಿಕೊಳ್ಳಬೇಕಾಯ್ತು.

ಟ್ವಿಟರ್‌ ಮತ್ತು ಸೋಶಿಯಲ್ ಮೀಡಿಯಾಗಳು ಜೂನ್‌ ನಿಂದಲೇ ಡಾ.ಹರ್ಷವರ್ಧನ್‌ ಅವರನ್ನು ತೆಗೆದುಹಾಕುವ ಬಗ್ಗೆ ಒತ್ತಾಯ ಮಾಡುತ್ತಲೇ ಇದ್ದವು. ಆದರೆ ಟ್ವಿಟರ್‌ ವೀರ ಮಾತ್ರ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅರೆಬರೆ ಓದಿದ ಒಬ್ಬ ವ್ಯಕ್ತಿ ಇನ್ನೊಬ್ಬ ಅರೆಬರೆ ಓದಿದವನನ್ನು ಹೇಗೆ ತೆಗೆದುಹಾಕಲು ಸಾಧ್ಯ?

ಮೊದಲ ಲಾಕ್‌ ಡೌನಿನ ದಿನಗಳಲ್ಲಿ ಸಚಿವಾಲಯದ ಕೆಲಸ ನೋಡಬೇಕಿದ್ದ ಹರ್ಷವರ್ಧನ್‌ ಮನೆಯಲ್ಲಿ ಬಟಾಣಿ ಸುಲಿಯುತ್ತಿರುವ ಪೋಟೋ ಕ್ಲಿಕ್ಕಿಸಿಕೊಂಡಿದ್ದರು. ನ್ಯಾಷನಲ್ ಡಿಸಾಸ್ಟರ್‌ ಮ್ಯಾನೇಜ್‌ ಮೆಂಟ್‌ ಅಥಾರಿಟಿಗೆ ಚೇರ್‌ಮನ್‌ ಮೋದಿ ಅವರಾಗಿದ್ದು, ಮೊದಲನೇ ಅಲೆಯಲ್ಲಿ ಹರ್ಷವರ್ಧನರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಇಎನ್‌ಟಿ ವೈದ್ಯರಾಗಿರುವ ಡಾ. ಹರ್ಷವರ್ಧನ್ ಮೂಗನ್ನಂತು ಮುಚ್ಚಿಕೊಂಡರು. ಅದರ ಜೊತೆಗೆ ಕಿವಿಯನ್ನು ಕೂಡ. ಕಣ್ಣುಗಳ ಮೇಲಂತೂ ಪಕ್ಕಾ ಭಕ್ತಿಯ ಕನ್ನಡಕ ಏರಿಸಿಕೊಂಡಿದ್ದರು.

ದೇಶದ ಆರೋಗ್ಯ ವ್ಯವಸ್ಥೆ ಪೂಜೆ ಪಾಠದ ಭರವಸೆಯ ಮೇಲೆ ಇತ್ತು. ಉಳಿದರೆ ಸರಿ, ಇಲ್ಲದಿದ್ದರೆ ಸ್ಮಶಾನವೇ ಆಸರೆ.

ಇಡೀ ದೇಶದ ಚಿಂತೆ ಮಾಡಬೇಕಿದ್ದ ಹರ್ಷವರ್ಧನಗೆ ಪಾರ್ಟಿಯ ಚಿಂತೆ ಇತ್ತು. ಹೀಗಾಗಿ ಅವರು ವಿರೋಧ ಪಕ್ಷಗಳ ಸರ್ಕಾರಕ್ಕೆ ಕೋವಿಡ್‌ ಬಗ್ಗೆ ಉಪದೇಶ ನೀಡುತ್ತಾ ಹೋದರು. ಈ ರೋಗ ಎಷ್ಟು ಭಯಂಕರ ರೂಪ ತಾಳಬಹುದು ಎಂಬ ಅಂದಾಜು ಅವರಿಗೆ ಇರಲೇ ಇಲ್ಲ. ಅದಕ್ಕೂ ಮುಂಚೆ ಅಮೆರಿಕ ಹಾಗೂ ಇಟಲಿಯ ಉದಾಹರಣೆಗಳು ಕಣ್ಮುಂದೆ ಇದ್ದವು.

ಅಲ್ಲಿ ಆಸ್ಪತ್ರೆಗಳ ಕೊರತೆ ಇರುವುದು ಗೊತ್ತಿತ್ತು. ಆದರೆ ಹರ್ಷವರ್ಧನ್‌ ಯಾವ ಒಂದು ಟೀಮಿನ ಕಿಂಗ್‌ ಆಗಿದ್ದರೆಂದರೆ, ಅವರು 20 ಮಾರ್ಚ್‌, 2020ರಲ್ಲಿ ಕೋವಿಡ್‌ ವಿಜಯಿ ಎಂದು ಘೋಷಿಸಿದ್ದರು. ಆಗ ಪ್ರಧಾನಿ ಮೋದಿ ನಾವು 21 ದಿನಗಳ ಲಾಕ್‌ ಡೌನ್ ಹಾಗೂ ಚಪ್ಪಾಳೆ ತಟ್ಟಿ, ದೀಪ ಬೆಳಗಿಸಿ ಕೋವಿಡ್‌ ವಿರುದ್ಧ ಗೆಲುವು ಸಾಧಿಸುವುದಾಗಿ ಹೇಳಿದ್ದರು.

ದೇಶದಲ್ಲಿ ಮಂತ್ರಿಗಳ ಮಹತ್ವ ಈಗ ಅಷ್ಟಾಗಿ ಉಳಿದಿಲ್ಲ. ಹಾಗೆಂದೇ ಮನ್‌ ಸುಖಿ ಮಂಡಾನಿ ಯಾರನ್ನು ಆರೋಗ್ಯ ಸಚಿವರೆಂದು ನೇಮಕ ಮಾಡಲಾಗಿದೆ. ಅವರು 2015ರಲ್ಲಿ ಟ್ರೀಟ್‌ ಮಾಡಿ ಆಲೋಪಥಿ ಫೇಸ್‌, ಆಯುರ್ವೇದ ಉತ್ತರ ಎಂದಿದ್ದರು. ಕೋವಿಡ್‌ ನ ಎರಡನೇ ಅಲೆಯ ಸಂದರ್ಭದಲ್ಲಿ ರಾಮದೇವ್ ಅಥವಾ ಹೋಮಿಯೋಪತಿ ತಜ್ಞರಾಗಲಿ ಯಾರೂ ಮುಂದೆ ಬರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ