ಗರ್ಭದ ಮೇಲೆ ಕಾನೂನು ಪಹರೆ ಏಕೆ?

ಹೆಣ್ಣು ಭ್ರೂಣಹತ್ಯೆ ತಡೆಗೆ ಸರ್ಕಾರ ಭಾರಿ ಹೆಸರುಳ್ಳ ಕಾನೂನು `ಪ್ರೀ ಕನ್ಸೆಪ್ಶನ್‌ ಅಂಡ್‌ ಪ್ರೀ ನೆಟ್‌ ಡೈಗ್ನೊಸ್ಟಿಕ್‌ ಟೆಕ್ನಿಕ್‌'  (ಪ್ರಾಹಿಬಿಷನ್‌ ಆಫ್‌ ಸೆಕ್ಸ್ ಸೆಲೆಕ್ಷನ್‌) ಆ್ಯಕ್ಟ್ 1994 ರೂಪಿಸಿದೆ. ಅದರ ಒಂದು ನಿಯಮದನ್ವಯ ಪೊಲೀಸ್‌ ಅಧಿಕಾರಿಗಳ ತಂಡ ಅಲ್ಲಲ್ಲಿ ಆಸ್ಪತ್ರೆಗಳ ಅಲ್ಟ್ರಾಸೌಂಡ್‌ ಯಂತ್ರಗಳನ್ನು ಪರೀಕ್ಷೆ ನಡೆಸಬಹುದು, ರಿಜಿಸ್ಟರ್‌, ರಿಪೋರ್ಟ್‌ ಮುಂತಾದವುಗಳನ್ನು ಪರಿಶೀಲಿಸಿ ಏನಾದರೂ ತಪ್ಪು ನಡೆದಿರುವುದು ಕಂಡುಬಂದರೆ ವೈದ್ಯರು, ನರ್ಸ್‌ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ತಮ್ಮ ವಶಕ್ಕೆ ಪಡೆಯಬಹುದು. ಈ ರೀತಿಯ ತಂಡಗಳು ದೇಶಾದ್ಯಂತ ಕಾರ್ಯನಿರ್ವಹಿಸಲಿದ್ದು, ಅವು ಹೆಣ್ಣು ಭ್ರೂಣಹತ್ಯೆಯನ್ನು ತಡೆಯುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಭಾರಿ ಪ್ರಮಾಣದಲ್ಲಿ ಹಣವನ್ನಂತೂ ಮಾಡಿಕೊಳ್ಳುತ್ತವೆ.

ಅದೇ ಕಾರಣದಿಂದ ಕುಗ್ರಾಮಗಳಲ್ಲಿ ನಡೆಸಿದ ದಾಳಿಯ ಬಗ್ಗೆ ರಾಜ್ಯ ಸರ್ಕಾರಗಳು ಸಾಕಷ್ಟು ಗಂಭೀರವಾಗಿರುತ್ತವೆ. ಒಡಿಸ್ಸಾದ ಢೆಂಕನಾಲದಲ್ಲಿ 2014ರಲ್ಲಿ ಒಂದು ತಂಡ ಜಗನ್ನಾಥ್‌ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಮಮತಾ ಸಾಹು ಹಾಗೂ ಇತರರ ವಿರುದ್ಧ ಮೊಕದ್ದಮೆ ದಾಖಲಿಸಿ ಸಮನ್ಸ್ ಜಾರಿಗೊಳಿಸಿತು.

ಈ ಪ್ರಕರಣ ಹೈಕೋರ್ಟ್‌ ಕಟ್ಟೆ ಏರಿತು. ಆದರೆ ಹೈಕೋರ್ಟ್‌ ಈ ಪ್ರಕರಣನ್ನು ಕಿತ್ತುಹಾಕಿತು. ಬಳಿಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಯಿತು. ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರ ಮತ್ತು ಇನ್‌ಸ್ಪೆಕ್ಟರ್‌ಗಳ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣನ್ನು ಮತ್ತೆ ಮುಂದುವರಿಸಿತು.

ಇಷ್ಟೊಂದು ದೀರ್ಘ ವಿಷಯ ಪ್ರಸ್ತಾಪಿಸಲು ಕಾರಣ ಇಷ್ಟೆ, ತನ್ನಿಷ್ಟದ ಸಂತಾನದ ಆಯ್ಕೆ ಪ್ರತಿಯೊಬ್ಬ ಮಹಿಳೆಯ ಹಕ್ಕು. ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ಅಥವಾ ಖಾಸಗಿ ಯಾವುದೇ ಕಾರಣಗಳಿರಬಹುದು. ಯಾವುದೇ ಆಸ್ಪತ್ರೆ ಈ ಕುರಿತಂತೆ ಮಹಿಳೆಯ ಮೇಲೆ ಒತ್ತಡ ಹಾಕುವಂತಿಲ್ಲ, ಅಪಾಯ ಉಂಟು ಮಾಡುವಂತಿಲ್ಲ. ಎದೆಯಲ್ಲಿ ಒಂದಿಷ್ಟು ನೋವು ಅನಿಸಿದರೆ ಅದನ್ನು ಹಾರ್ಟ್‌ ಅಟ್ಯಾಕ್‌ ಎಂದು ಸಬೂಬು ಹೇಳಿ ಲಕ್ಷ ಲಕ್ಷ ರೂ. ಸುಲಿಗೆ ಮಾಡಲಾಗುತ್ತದೆ. ಮೂತ್ರ ಸೋಂಕನ್ನು `ಕಿಡ್ನಿ ಫೇಲ್ಯೂರ್‌' ಎಂದು ಹೇಳಿ ಅದನ್ನು ತೆಗೆಸಿ ಹಾಕಲಾಗುತ್ತದೆ. ಆದರೆ ಪ್ರಸವ ಪೂರ್ವ ಪರೀಕ್ಷೆಯನ್ನು ಗರ್ಭಿಣಿ ತನಗಿಷ್ಟವಾದಾಗ ಮಾಡಿಸಿಕೊಳ್ಳಬಹುದು ಎಂಬುದನ್ನು ಮಾತ್ರ ಒಪ್ಪುವುದಿಲ್ಲ. ಅವಳ ಈ ಇಚ್ಛೆಗೆ ಸರ್ಕಾರ ನಿರ್ಬಂಧ ಹೇರುವುದು ಸರಿಯಲ್ಲ. ಬಹುಶಃ ಧಾರ್ಮಿಕ ಹಾಗೂ ಸಾಮಾಜಿಕ ಕಾರಣಗಳಿಂದಾಗಿಯೇ ಮಹಿಳೆ ತನಗಿಷ್ಟವಾದ ಸಂತಾನ ಬಯಸುತ್ತಿದ್ದರೆ, ಅದಕ್ಕೆ ಸರ್ಕಾರ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸಬೇಕು. ಸಮಾಜಕ್ಕೆ ಸಜೆ ನೀಡಬೇಕು ಮಹಿಳೆಗೇಕೆ ಆ ಶಿಕ್ಷೆ?

ಪ್ರತಿಯೊಬ್ಬ ಮಹಿಳೆಗೂ ತನ್ನ ಕುಡಿ ತನಗೆ ಪ್ರಿಯವಾಗಿರುತ್ತದೆ. ಸಂತಾನ ಆಯ್ಕೆಯಲ್ಲಿ ಸಮತೋಲನ ಕಾಪಾಡಿ ಎಂದು ಸೃಷ್ಟಿಯೇ ಕಲಿಸಿಕೊಟ್ಟಿದೆ. ಹುಟ್ಟಲಿರುವ ಮಗು ಗಂಡೊ, ಹೆಣ್ಣೊ ಎಂದು ತಿಳಿದುಕೊಳ್ಳುವುದು ತಪ್ಪೇನಲ್ಲ. ಅದೇ ಆಧಾರದನ್ವಯ ದಂಪತಿಗಳು ಸಿದ್ಧತೆ ಮಾಡಿಕೊಳ್ಳಬಹುದು. ಬಟ್ಟೆ ಖರೀದಿಸಬಹುದು. ಗಂಡ-ಹೆಂಡತಿ ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಳ್ಳಬಹುದು. ಒಂದು ವೇಳೆ ಹುಟ್ಟಲಿರುವ ಮಗು ತನಗಿಷ್ಟವಾದದ್ದು ಆಗಿರದಿದ್ದರೆ ಗರ್ಭಪಾತ ಮಾಡಿಸಿಕೊಳ್ಳಬಹುದು, ಅದು ಅವಳ ಆಯ್ಕೆ. ಸಮಾಜ ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು ಆಸ್ಪತ್ರೆ, ಅಲ್ಟ್ರಾಸೌಂಡ್‌ ಯಂತ್ರ ಅಥವಾ ವೈದ್ಯರನ್ನು ಅಪರಾಧಿಯಾಗಿಸಿ ಸರ್ಕಾರ ಧರ್ಮ ಹಾಗೂ ಸಮಾಜದ ಬಗ್ಗೆ ಹೆದರಿಕೆಯನ್ನು ಬಿಂಬಿಸುತ್ತದೆ. ಈಗಂತೂ ಸರ್ಕಾರ ಇಬ್ಬಗೆಯ ಮಾತಾಡುತ್ತದೆ. ಒಂದೆಡೆ ಆಧುನಿಕ ತಂತ್ರಜ್ಞಾನದ ಬಗ್ಗೆ ಹೇಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ