ಹಬ್ಬ ಆಚರಿಸಲು ಮನೆಯ ಸ್ವಚ್ಛತೆಯಿಂದ ಶುರು ಮಾಡಿರಬಹುದು. ಆದರೆ ಹೃದಯ ಶುದ್ಧಿ ಮಾಡುವ ಬಗ್ಗೆ ಏನಾದರೂ ಯೋಚಿಸಿದ್ದೀರಾ? ಮನೆಯ ಒಳ ಹೊರಗಿನ ಗೋಡೆಗಳ ರಂಗನ್ನೇನೊ ಬದಲಿಸಿದಿರಿ, ಆದರೆ ಬೇರೊಬ್ಬರ ಜೀವನದಲ್ಲಿ ರಂಗು ತುಂಬುವ ವಿಚಾರ ನಿಮ್ಮ ಹೃದಯದಲ್ಲಿ ಬಂದಿದೆಯಾ? ಈ ಪ್ರಶ್ನೆಯನ್ನು ಹಬ್ಬದ ಬಳಿಕ ಬಿಡುವಿನ ವೇಳೆಯಲ್ಲಿ ನಿಮಗೆ ನೀವೇ ಕೇಳಿಕೊಳ್ಳಿ.

ಹಬ್ಬವನ್ನು ಕೇವಲ ನಿಮಗಷ್ಟೇ ಸೀಮಿತಗೊಳಿಸಿಕೊಂಡು ಅದರ ಖುಷಿಯ ಆನಂದವನ್ನು ಕಡಿಮೆಗೊಳಿಸಿಕೊಳ್ಳುವುದಕ್ಕಿಂತ ಎಂದಾದರೊಮ್ಮೆ ಸಾಮಾನ್ಯ ಜನರ ಜೊತೆಗೂ ಹಬ್ಬದ ಆನಂದವನ್ನು ಪಡೆದುಕೊಳ್ಳಿ. ಯಾವುದೊ ಕಾರಣದಿಂದ ಅವರ ಜೀವನದಲ್ಲಿ ಕತ್ತಲೆ ಆವರಿಸಿಕೊಂಡಿದೆ. ಯಾರೊ ಏಕಾಂಗಿ ದಂಪತಿಯ ಶೂನ್ಯಭಾವ ಕೊನೆಗೊಳಿಸಿ, ಯಾರದ್ದೊ ಉದಾಸ ಚಹರೆಯಲ್ಲಿ ನಗು ಚಿಮ್ಮಿಸಿ. ನಿಮ್ಮಿಂದ ಮುನಿಸಿಕೊಂಡ ವ್ಯಕ್ತಿಗೆ ಸಿಹಿ ಕೊಟ್ಟು ಸಂಬಂಧಕ್ಕೆ ಹೊಸ ವ್ಯಾಖ್ಯೆ ಕೊಡಿ.

ಇದೆಲ್ಲದಕ್ಕೆ ಆಗುವ ಖರ್ಚು ಕೇವಲ ಆತ್ಮೀಯತೆ ಆಗಿರುತ್ತದೆ. ಅದಕ್ಕೆ ಪ್ರತಿಯಾಗಿ ನಿಮಗೆ ನೆಮ್ಮದಿ ಮತ್ತು ಪ್ರೀತಿ ದೊರಕುತ್ತದೆ. ಅದಕ್ಕೆ ಯಾವುದೇ ಬೆಲೆ ಕಟ್ಟಲು ಆಗುವುದಿಲ್ಲ. ನಿಮ್ಮ ಒಂದು ಪುಟ್ಟ ಹೆಜ್ಜೆ ಯಾರದೋ ಜೀವನವನ್ನು ಬದಲಿಸುವ ಶಕ್ತಿ ಹೊಂದಿರುತ್ತದೆ. ಬನ್ನಿ, ಮುಂಬರುವ ಎಲ್ಲ ಹಬ್ಬಗಳನ್ನು ಹೀಗೆ ಸ್ಮರಣಾರ್ಹಗೊಳಿಸಿ.

ಮನಸ್ತಾಪ ದೂರಗೊಳಿಸಿ

6740a36cc68405013e60f7afde7e4255

 

ಸಂಬಂಧಗಳು ಜೀವನಕ್ಕೆ ಅತ್ಯಂತ ಅವಶ್ಯಕ. ಆದರೆ ಚಿಕ್ಕಪುಟ್ಟ ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇವೆ. ಒಂದು ಕಾಲದಲ್ಲಿ ಅವೇ ಸಂಬಂಧಗಳು ನಮ್ಮ ಜೀವನದ ಒಂದು ಭಾಗವಾಗಿದ್ದವು. ಅವನ್ನು ನಾವು ಕಡೆಗಣಿಸಿ ದೂರ ಮಾಡಿಕೊಳ್ಳುತ್ತೇವೆ. ಸಕಾಲದಲ್ಲಿಯೇ ಮುನಿಸಿಕೊಂಡವರನ್ನು ಮನ್ನಿಸುವುದು ಅತ್ಯವಶ್ಯ. ಹಬ್ಬದ ಸಂದರ್ಭಗಳಲ್ಲೂ ಅವರ ಸಂಬಂಧದಲ್ಲಿ ರಂಗು ತುಂಬುವುದನ್ನು ಮರೆಯಬೇಡಿ.

ಹಬ್ಬದ ಬಳಿಕ ಸರ್‌ಪ್ರೈಸ್‌ ಕೊಡಲು ಆಕಸ್ಮಿಕವಾಗಿ ನಿಮ್ಮವರ ಮನೆ ತಲುಪಿ. ಅವರ ಕುಶಲ ಸಮಾಚಾರ ವಿಚಾರಿಸಿ. ಏನಾದರೂ ಪ್ರೀತಿಯ ಉಡುಗೊರೆ ಕೊಡಿ. ಒಂದೇ ಕ್ಷಣದಲ್ಲಿ ಅವರ ಜೊತೆ ನಿಮ್ಮ ಜೀವನದಲ್ಲೂ ಬೆಳಕು ಚಿಮ್ಮುತ್ತದೆ.

ಸಕಾರಾತ್ಮಕ ವಿಚಾರಗಳ ಬೆಳಕು

ಕೆಲವು ಜನರ ಮಾನಸಿಕತೆ ಹೇಗಿರುತ್ತದೆಂದರೆ, ಅವರು ಪ್ರತಿಯೊಂದು ಸಂಗತಿಯಲ್ಲೂ ಕೆಡುಕನ್ನು ಹುಡುಕುತ್ತಾರೆ. ತಮ್ಮ ಜೀವನದಲ್ಲಿಯೇ ಆಗಿರಬಹುದು. ಬೇರೆಯವರ ಜೀವನದಲ್ಲಿ ಅವರಿಗೆ ಯಾವಾಗಲೂ ತಪ್ಪುಗಳ ಬಗ್ಗೆಯೇ ಗಮನ ಹೋಗುತ್ತದೆ.

ಒಳ್ಳೆಯದನ್ನು ನಿರ್ಲಕ್ಷಿಸಿ, ಕೆಟ್ಟದ್ದನ್ನು ಅಥವಾ ಕೊರತೆಯನ್ನು ಮಾತ್ರ ಬಿಂಬಿಸುವುದು ಸರಿಯಲ್ಲ. ನಿಮ್ಮ ಅಂತರಂಗದಲ್ಲೂ ನಕಾರಾತ್ಮಕತೆಯ ಇಂಥ ಕತ್ತಲು ಇದ್ದರೆ, ಈಗ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆಯ ದೀಪ ಬೆಳಗಿಸಬೇಕು, ಪ್ರತಿಯೊಂದರಲ್ಲೂ ಬೆಳಕಿನ ಪಕ್ಷ ಗಮನಿಸಲು ಪ್ರಯತ್ನಿಸಿ. ಪ್ರತಿಯೊಂದು ಸಣ್ಣಪುಟ್ಟ ಖುಷಿಗಳನ್ನು ಸೆಲೆಬ್ರೆಟ್‌ ಮಾಡಲು ಕಲಿಯಬೇಕು.

ಬೇರೆಯವರ ಜೀವನ ಬೆಳಗಿಸಿ : ಬೇರೆಯವರ ಜೀವನದಲ್ಲಿ ಖುಷಿ ತುಂಬಲು ಮತ್ತೊಂದು ವಿಧಾನವಿದೆ. ಅದೇನೆಂದರೆ ಅಗತ್ಯವಿದ್ದರ ಮುಖದಲ್ಲಿ ಮುಗುಳ್ನಗು ತುಂಬುವುದು. ನಮ್ಮ ಸಮಾಜದಲ್ಲಿ ಅದೆಷ್ಟೋ ಜನರಿದ್ದು, ಅವರಿಗೆ ಹಬ್ಬದ ಸಂದರ್ಭದಲ್ಲಿ ಹಾಗೂ ಹಬ್ಬದ ಬಳಿಕ ಈ ಕೆಲಸಕ್ಕೆ ಆದ್ಯತೆ ಕೊಡಬಹುದು. ಈ ಕುರಿತಂತೆ ಕೆಲವರ ಅಭಿಪ್ರಾಯಗಳನ್ನು ಇಲ್ಲಿ ತಿಳಿಸಲಾಗಿದೆ.

ಸಂಜನಾ ರೆಡ್ಡಿ : 32 ವರ್ಷದ ಈ ನಿರ್ದೇಶಕಿ 2 ಹಿಟ್‌ ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಕುಟುಂಬದ ಒಂದು ಪದ್ಧತಿ ಏನಾಗಿದೆಯೆಂದರೆ, ಅವರು ತಮ್ಮ ಕುಟುಂಬದ ಶೇ.40ರಷ್ಟು ಭಾಗವನ್ನು ಅಗತ್ಯವಿದ್ದವರಿಗೆ ನೀಡುತ್ತಾರೆ. ಮಕ್ಕಳಿಗೆ ಸಹಾಯ ಮಾಡುವುದು ಅವರ ಆದ್ಯತೆಯಲ್ಲಿ ಸೇರಿದೆ. ದೀಪಾವಳಿಗೂ ಮುನ್ನ ಅವರ ಕೆಲವು ಸ್ನೇಹಿತರು ಬೀದಿ ಮಕ್ಕಳು ಹಾಗೂ ಅನಾಥಾಲಯದ ಮಕ್ಕಳನ್ನು ಭೇಟಿಯಾಗಿ ಅವರಿಗೆ ಯಾವುದರ ಅವಶ್ಯಕತೆಯಿದೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಬಳಿಕ ಒಂದು ಪಟ್ಟಿ ಸಿದ್ಧಪಡಿಸಿ, ವಸ್ತುಗಳನ್ನು ಖರೀದಿಸುತ್ತಾರೆ. ಹಳೆಯ ಬಟ್ಟೆಗಳೇನಾದರೂ ಇದ್ದರೆ, ಅವನ್ನು ಸ್ವಚ್ಛಗೊಳಿಸಿ ಪ್ಯಾಕ್ ಮಾಡುತ್ತಾರೆ. ಅದರ ಜೊತೆಗೆ ಕೆಲವು ಸಿಹಿ ತಿಂಡಿಗಳು ಮತ್ತು ಪಾನೀಯಗಳನ್ನು ಹಂಚುತ್ತಾರೆ. ಇದೆಲ್ಲದರ ಜೊತೆಗೆ ಒಂದಿಷ್ಟು ಹಣವನ್ನು ಸೇರಿಸಿ ಕೊಡುತ್ತಾರೆ. ಅನಾಥಾಶ್ರಮಕ್ಕೆ ಹೋದಾಗ ಅಲ್ಲಿ ಅವರ ಜೊತೆಗೆ ಕುಳಿತು ತಿಂಡಿ ತಿನ್ನುತ್ತಾರೆ. ಆ ಮಕ್ಕಳ ಖುಷಿ ಇರಲ್ಲಿ ಹೊಸ ಉತ್ಸಾಹ ತುಂಬುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ