ಗಂಡ.... ತನ್ನ...ಗರ್ಭವತಿ ಪತ್ನಿಯನ್ನು ಒಳಗೆ ಕಳಿಸಿ, ಆಸ್ಪತ್ರೆಯ ಹೊರಗಡೆ ನಿಂತಿದ್ದನು — ಆತಂಕದಿಂದ, ತೀವ್ರ ಒತ್ತಡದಲ್ಲಿದ್ದನು.
ಅವರ ವಿವಾಹವು ಮನೆಯವರ ಒಪ್ಪಿಗೆ ಇಲ್ಲದೆ ನಡೆದಿದ್ದುದು.
ಅವಳ ಕುಟುಂಬವೇ ಅವಳನ್ನು ಸತ್ತವಳಾಗಿ ಘೋಷಿಸಿತ್ತು.
ಹತ್ತಿರ ಯಾರೂ ಇಲ್ಲದ ಸ್ಥಿತಿಯಲ್ಲಿ,
ತಾನೇ ತಾಯಿಯಂತೆ ನೋಡಿಕೊಂಡು,
ಅವಳನ್ನು ಅತ್ಯಂತ ಕಾಳಜಿಯಿಂದ ತುಂಬಾ ಪ್ರೀತಿಯಿಂದ ಸಲುಹಿದ್ದನು ಗಂಡ.
ಈಗ ಅವನೊಳಗೆ ಸ್ವಲ್ಪ ಭಯವೂ ಉಂಟಾಯಿತು.
ಒಂದು ವರ್ಷದಿಂದ ಮಾತನಾಡಡಿದ್ದ ತಾಯಿಗೆ ಆ ದಿನ ಫೋನ್ ಮಾಡಿದ.
"ಅಮ್ಮಾ, ಆಸ್ಪತ್ರೆಯಲ್ಲಿ ನಾನೇ ನಿಂತಿದ್ದೇನೆ ತೀರಾ ಒಂಟಿಯಾಗಿ.
ಅವಳು ಒಳಗೆ, ಹೇರಿಗೆಗಾಗಿ ನಮ್ಮ ಮಗುವಿನೊಂದಿಗೆ ಹೋರಾಟ ಮಾಡುತ್ತಿದ್ದಾಳೆ.
ಅಮ್ಮಾ ನಾನು ಇಲ್ಲಿ , ನೀನಿಲ್ಲದೆ ಅನಾಥನಾಗಿದ್ದೇನೆ..."
ಇದು ಕೇಳಿದ ಅಮ್ಮ ಫೋನ್ನ್ನು ಇಟ್ಟು ಕಣ್ಣೀರಿಟ್ಟರು.
ತಂದೆ ಕೇಳಿದರು, "ಯಾರೊಂದಿಗೆ ಮಾತಾಡುತ್ತಿದ್ದೆ?"
ತಾಯಿ ಎಲ್ಲವನ್ನೂ ವಿವರಿಸಿದಾಗ,
ಸ್ವಲ್ಪ ಸಮಯದ ನಂತರ,
"ನಿನ್ನ ಮಗನ ತಪ್ಪಿಗೆ ಆ ಹುಡುಗಿಯೇನು ಮಾಡಬೇಕು?
ನೀನು ಹೋಗಿ ಅವಳನ್ನು ನೋಡಿ ಆರೈಸು
ಆದರೆ ನಾನು ಮಾತ್ರ ಸತ್ತರೂ,
ಅವನ ಮುಖವನ್ನೂ ನೋಡಲ್ಲ," ಎಂದರು.
ತಾಯಿ ಹೊರಟ ಕೆಲವೇ ನಿಮಿಷಗಳಲ್ಲಿ,
ಮತ್ತೊಂದು ಫೋನ್ ಕರೆ ಬಂದಿತು. ತಂದೆಯೇ ಸ್ವೀಕರಿಸಿದರು.
ಮಗನ ಧ್ವನಿ —
"ಅಮ್ಮಾ ಗಂಡು ಮಗು ಹುಟ್ಟಿದೆ!
ಅವನ ಮುಖ ಅಪ್ಪನ ಹಾಗೆಯೇ ಇದೆ!
ಅಪ್ಪ,, ಮಗುವನ್ನು ನೋಡಲು ಬರುವರಾ ಅಮ್ಮಾ?
ತಂದೆಗೆ, ಅಕ್ಷರಶಃ ಕೈ ತಡಕಾಡಿದವು,
ಅರಿವೇ ಇಲ್ಲದಂತೆ ಕಣ್ಣಾಲಿಗಳು ಕಣ್ಣೀರಿನಿಂದ ತುಂಬಿ ಹೋದವು.
ತನ್ನ ಹೆಂಡತಿಗೆ ಸ್ವಲ್ಪ ಸಮಯದ ಹಿಂದೆ"ಅವನ ಮುಖವನ್ನೂ ನೋಡಲ್ಲ" ಎಂದ ತಂದೆಯೇ
ಶರ್ಟ್ ಹಾಕಿಕೊಂಡು ತಾಯಿಯ ಹಿಂದೆ ಹೊರಟರು.
ಮಗನು ಬಹು ಆತುರದಿಂದ ಕಾಯುತ್ತಿದ್ದನು — ಯಾರು ಮಗುವನ್ನು ನೋಡಲು ಬರುವರೆಂದು.
ತಾಯಿಯನ್ನು ಬಾಗಿಲಲ್ಲಿ ನೋಡಿ,
ಅವನ ಹೃದಯವೇ ಹಿಗ್ಗಿತು,
ಮಕ್ಕಳಂತೆ ತಾಯಿಯ ಕೈ ಹಿಡಿದು, ಅಳತೊಡಗಿದನು.
ತಾಯಿ ಒಳಗೆ ಹೋಗಿ ಮಗುವನ್ನು ತಬ್ಬಿಕೊಂಡರು.
ಅಲ್ಲಿಗೆ ತಂದೆ ಬಂದಿರುವುದು ಗೊತ್ತಿರಲಿಲ್ಲ. ತಂದೆ
ಬಾಗಿಲಹತ್ತಿರ ನಿಂತು, ಎಲ್ಲಾ ನೋಡುತ್ತಿದ್ದರು.
ಯಾರಾದರೂ ಕರೆಯಲಿ ಎನ್ನುತ್ತಾ ..
ಆ ಸಮಯದಲ್ಲಿ, ಇನ್ನೂ-half-conscious ಆಗಿದ್ದ ಸೊಸೆ ಕಣ್ಣು ತೆರೆದು, ಅತ್ತೆಯನ್ನು ಯನ್ನು ನೋಡಿ,
ಸಂತೋಷದಿಂದ ಕಣ್ಣೀರು ಹರಿಸಿದಳು.
ಆ ಅತ್ತೆಯ ಕೈ ಹಿಡಿದು ಹೇಳಿದಳು:
"ಈ ಮಗುವು ಹೇಗೆ ಬೆಳೆದೀತೋ ಗೊತ್ತಿಲ್ಲ,
ಹೆಜ್ಜೆ ಹಾಕುತ್ತೋ ಇಲ್ಲವೋ ಗೊತ್ತಿಲ್ಲ.
ಆದರೆ ನನಗೆ ಇನ್ನೊಂದು ಮಗು ಸಿಕ್ಕರೂ,
ನೀವು ಬೆಳೆಸಿದ ನಿಮ್ಮ ಮಗನ ಹಾಗೆ ಯಾರೂ ಇರಲಾರರು. ಅವರು ನನ್ನನ್ನು ಹಾಗೆ ನೋಡಿಕೊಂಡರು.
ಇದು ಕೇಳಿದ ತಾಯಿ, ತನ್ನ ಮಗನನ್ನು ಬೆಳೆಸಿದ ಪ್ರತಿಫಲ ಸಿಕ್ಕಂತಾಯ್ತು.
"Uncle ಅವರು ಬಾರಲಿಲ್ಲವೇ?"
ಬಾಗಿಲಿನಲ್ಲಿ ನಿಂತಿದ್ದವನ ಕಾಲುಗಳು ಮುಂದೆ ಓಡಿದಂತಾದವು.
ಆಕೆ ತನ್ನ ಗಂಡನನ್ನು ಕೇಳಿದಳು:
"ನಿನ್ನ ತಾಯಿಗೆ ನಿನ್ನ ಮೇಲೆ ಪ್ರೀತಿ ಇದೆ,
ನಿನ್ನ ತಂದೆಗೆ ಇಲ್ಲವೇ?"
ಈ ಮಾತು ಕೇಳುತ್ತಿದ್ದ ತಂದೆ, ಮಗನು ಏನು ಉತ್ತರಿಸುತ್ತಾನೋ ನೋಡುತ್ತಿದ್ದರು.
ಮಗನು ಹೇಳಿದರು:
"ನಾನು ಚಿಕ್ಕವನಾಗಿದ್ದಾಗ ಹೆಜ್ಜೆಯೊಂದರ ಮುಂದೆ ಕಂದಕವಿದ್ದರೆ, ನಾನು ಭಯಪಡುವೆ ಎಂದು
ಅಪ್ಪ ತಾನೇ ಕೈ ಹಿಡಿದು ಹೇಳ್ತಿದ್ದರು — 'ನಾನು ಇಲ್ಲಿದ್ದೀನಿ, ಹಾರಿ ಬಾ ಮಗಾ!'ಅಂತ.
ಅವರು ಕೊಟ್ಟ ಧೈರ್ಯವೇ,
ನನ್ನನ್ನು ಇವತ್ತಿನ ಮಟ್ಟಿಗೆ ತಂದು ಹಾಕಿದ್ದು!"
ಇದನ್ನು ಕೇಳುತ್ತಿದ್ದ ತಂದೆ, ಓಡಿ ಬಂದು ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟರು.
ಅವರನ್ನು ನೋಡಿ ಎಲ್ಲರೂ ಅತ್ತರು.
ಅನಂದಭರಿತ ಕಣ್ಣೀರು ಎಲ್ಲೆಲ್ಲೋ ಹರಿಯತೊಡಗಿದವು.