ಮಹಾತ್ಮ ಗಾಂಧಿಯವರು ಒಂದು ಮಾತು ಹೇಳಿದ್ದರು, ``ನಾನು ಒಂದು ದಿನದ ಮಟ್ಟಿಗಾದರೂ ಆಡಳಿತದ ಚುಕ್ಕಾಣಿ ಹಿಡಿದರೆ, ಯಾವುದೇ ಗೌರವ ಧನ ಪಡೆಯದೆ ಮದ್ಯದಂಗಡಿ ಮತ್ತು ಅದರ ಕಾರ್ಖಾನೆಗಳನ್ನು ಮುಚ್ಚಿಸಿಬಿಡುತ್ತೇನೆ!''

ಗಾಂಧೀಜಿಯವರು ಅತ್ಯಂತ ತಿಳಿವಳಿಕೆಯಿಂದ ಈ ಮಾತನ್ನು ಹೇಳಿದ್ದರು. ಏಕೆಂದರೆ ಕುಟುಂಬಗಳು ಹಾಳಾಗಲು ಮದ್ಯವೇ ಮುಖ್ಯ ಕಾರಣ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಕೆಲವು ತಿಂಗಳುಗಳ ಹಿಂದಷ್ಟೇ ಕೇರಳ ಸರ್ಕಾರ ಮದ್ಯ ನಿಷೇಧಿಸಿ ಈ ಚರ್ಚೆಗೆ ಮತ್ತೊಮ್ಮೆ ಇಂಬುಕೊಟ್ಟಿತು.

ಭಾರತದಲ್ಲಿ ಸ್ವಾತಂತ್ರ್ಯಾನಂತರ ಈವರೆಗೆ ಅನೇಕ ರಾಜ್ಯ ಸರ್ಕಾಗಳು ಮದ್ಯ ನಿಷೇಧದ ಪ್ರಯತ್ನ ಮಾಡಿ ಸೋತುಹೋದವು. ಇದರರ್ಥ ಇಷ್ಟೇ, ಯಾವುದೇ ರಾಜ್ಯ ಸರ್ಕಾರಗಳು ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ. ಯಾವ ಯಾವ ರಾಜ್ಯ ಸರ್ಕಾರಗಳು ಮದ್ಯದ ಮೇಲೆ ನಿಷೇಧ ಹೇರಿದ್ದಿ, ಅಲ್ಲಿ ಮದ್ಯ ಮಾರಾಟ ಕಳ್ಳ ಮಾರ್ಗದಲ್ಲಿ ನಡೆದಿತ್ತು ಹಾಗೂ ಅನೇಕ ಅನಾಹುತಗಳು ನಡೆದಿರುವುದು ಜಗಜ್ಜಾಹೀರು.

ದೇಶದಲ್ಲಿ ಎಲ್ಲಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಕೂಡ ಸಲ್ಲಿಸಲಾಗಿತ್ತು. 1950ರಲ್ಲಿ ಅಂದಿನ ಮುಂಬೈ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯವರು ರಾಜ್ಯದಲ್ಲಿ ಮದ್ಯದ ಮೇಲೆ ನಿಷೇಧ ಹೇರಿದ್ದರು. ಆಗ ಒಬ್ಬರು ವೈಯಕ್ತಿಕ ಸ್ವಾತಂತ್ರ್ಯದ ಆಧಾರದ ಮೇಲೆ ಈ ಅಧಿನಿಯಮದ ವಿರುದ್ಧ ಸುಪ್ರಿಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.

ಸರ್ವೋಚ್ಚ ನ್ಯಾಯಾಲಯ, ದಿ ಸ್ಟೇಟ್‌ ಆಫ್‌ ಬಾಂಬೆ V/S ಎಫ್‌.ಎನ್‌. ಬಾಲ್ಸರಾ ಪ್ರಕರಣ ಕುರಿತಂತೆ 1951ರಲ್ಲಿ ತೀರ್ಪು ನೀಡುತ್ತ ಪರಿಚ್ಛೇದ 47ರ ಬಗ್ಗೆ ವಿಸ್ತಾರವಾಗಿ ಉಲ್ಲೇಖ ಮಾಡಿತ್ತು. ಇದರ ಸಾರಾಂಶ ಇಷ್ಟೆ, ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಜೀವನ ಮತ್ತು ಸ್ವಾತಂತ್ರ್ಯದ ಮೌಲಿಕ ಹಕ್ಕು ಹಾಗೂ ರಾಜ್ಯದ ಮುಖಾಂತರ ಮದ್ಯ ನಿಷೇಧ ಮಾಡುವಲ್ಲಿ ಯಾವುದೇ ವಿರೋಧ ಇಲ್ಲ. ಜೊತೆಗೆ ಆ ನ್ಯಾಯಾಲಯ ಆಲ್ಕೋಹಾಲ್‌ನ್ನು ಔಷಧೀಯ ರೂಪದಲ್ಲಿ ಬಳಕೆ ಮತ್ತು ಸ್ವಚ್ಚತೆಯ ರಾಸಾಯನಿಕವಾಗಿ ಬಳಸಲು ಅನುಮತಿ ನೀಡಿತು.

ಎಲ್ಲಿ ನಿರ್ಬಂಧವೋ, ಅಲ್ಲಿ ಅನಾಹುತ

ದೇಶದಲ್ಲಿ ಗುಜರಾತ್‌, ಮಿಜೋರಾಂ ಹಾಗೂ ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಮದ್ಯದ ಮೇಲೆ ಸಂಪೂರ್ಣ ನಿಷೇಧವಿದೆ. ಗುಜರಾತ್‌ನಲ್ಲಂತೂ ಸ್ವಾತಂತ್ರ್ಯಾನಂತರದಿಂದಲೇ ಮದ್ಯದ ಮೇಲೆ ನಿಷೇಧವಿದೆ. ಖೇದದ ಸಂಗತಿಯೆಂದರೆ, ಅಲ್ಲಿ ಸಹಜವಾಗಿಯೇ ಮದ್ಯ ಲಭಿಸುತ್ತದೆ. ಪೊಲೀಸರು ಅಲ್ಲಿ ಪ್ರತಿ ವರ್ಷ 125 ಕೋಟಿ ರೂ. ಮೊತ್ತದ ಅನಧಿಕೃತ ಮದ್ಯ ವಶಪಡಿಸಿಕೊಳ್ಳುತ್ತಾರೆಂದರೆ, ಮದ್ಯದ ಹಾವಳಿ ಎಷ್ಟಿರಬಹುದು ಎಂಬುದನ್ನು ಅಂದಾಜು ಮಾಡಬಹುದು.

ಪ್ರತಿ ವರ್ಷ ಕಳ್ಳಭಟ್ಟಿ ಮದ್ಯ ಸೇವನೆಯಿಂದ ನೂರಾರು ಜನ ಸಾವಿಗೀಡಾಗುತ್ತಾರೆ. 2009ರಲ್ಲಿ ಗುಜರಾತ್‌ನಲ್ಲಿ ವಿಷಪೂರಿತ ಮದ್ಯ ಸೇವಿಸಿ 148 ಜನ ಸಾವಿಗೀಡಾಗಿದ್ದರು.

ಮಿಜೋರಾಂ ರಾಜ್ಯದಲ್ಲಿ 1996ರಲ್ಲಿ ಮದ್ಯದ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಆಗಸ್ಟ್ 2014ರಲ್ಲಿ ಮದ್ಯ ನಿಷೇಧ ಹಿಂದೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಮದ್ಯ ನಿಷೇಧದಿಂದ ಲಾಭಕ್ಕಿಂತ ಹಾನಿಯೇ ಜಾಸ್ತಿ ಎನ್ನುವುದು ಆ ರಾಜ್ಯ ಸರ್ಕಾದ ಹೇಳಿಕೆ. ನಾಗಾಲ್ಯಾಂಡ್‌ನಲ್ಲೂ ಸಹ ಹೆಚ್ಚು ಕಡಿಮೆ ಇದೇ ಸಮಯದಿಂದಲೇ ಮದ್ಯ ನಿಷೇಧ ಜಾರಿಯಲ್ಲಿದೆ. ಆ ರಾಜ್ಯದ ಮುಖ್ಯಮಂತ್ರಿ ಇತ್ತೀಚಿಗೆ ಹೇಳಿಕೆ ನೀಡುತ್ತ ಮದ್ಯ ನಿಷೇಧದ ಬಗ್ಗೆ ಪುನಃ ಯೋಚಿಸಲಾಗುತ್ತಿದೆ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ