ಮಹಾನ್ಸಂಸ್ಕೃತಿ

ಕೇಂದ್ರ ಸಚಿ ಗಿರಿರಾಜ್‌ ಸಿಂಗ್‌ ಈ ಪ್ರಶ್ನೆ ಕೇಳಿ ತಪ್ಪೇನೂ ಹೇಳಿಲ್ಲ. ಒಂದು ವೇಳೆ ರಾಜೀವ್ ‌ಗಾಂಧಿ ನೈಜೀರಿಯಾದ ಹುಡುಗಿಯನ್ನು ಮದುವೆಯಾಗಿದ್ದರೆ ಕಾಂಗ್ರೆಸ್‌ ಪಕ್ಷ ಆ ಕಪ್ಪು ಹೆಂಡತಿಯನ್ನು ತನ್ನ ನಾಯಕಿಯೆಂದು ಒಪ್ಪಿಕೊಳ್ಳುತ್ತಿತ್ತೇ ಎಂಬುದೇ ಆ ಪ್ರಶ್ನೆ. ಇದಂತೂ ಖಂಡಿತಾ ಸತ್ಯ, ಈ ದೇಶದಲ್ಲಿ ವರ್ಣ ವ್ಯವಸ್ಥೆ, ಮನುಸ್ಮೃತಿಯ ಅಧಿಕಾರ, ಬ್ರಾಹ್ಮಣರಿಗೆ ಗೋದಾನ, ಹೋಮ ಹವನ ಮತ್ತು ಗುಡಿ ಕಟ್ಟಿಸುವುದು ಇತ್ಯಾದಿಗಳ ಸಂಕಲ್ಪದಿಂದ ಬದುಕುತ್ತಿರುವ ಭಾರತೀಯ ಜನತಾ ಪಾರ್ಟಿಯ ನಾಯಕ ಒಂದು ಯೋಜನಾಬದ್ಧ ವಿಧಾನದಿಂದ ಮಹಾನ್‌ ಹಿಂದೂ ಸಂಸ್ಕೃತಿಯೆಂದರೆ ಏನೆಂದು ಜನರಿಗೆ ಜ್ಞಾಪಿಸುತ್ತಿದ್ದಾರೆ.

ಮಹಾನ್‌ ಹಿಂದೂ ಸಂಸ್ಕೃತಿಯಲ್ಲಿ ಎಲ್ಲ ದೇವಾನುದೇವತೆಯರು, ಅವತಾರ ಪುರುಷರು ತಮ್ಮ ಸ್ವಾರ್ಥ ಸಾಧಿಸಲು ಸುಳ್ಳು, ಮೋಸ, ಅತ್ಯಾಚಾರ, ಅನಾಚಾರ, ಹಿಂಸೆಯ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಗಿರಿರಾಜ್‌ ಸಿಂಗ್‌ ಮಾಡುತ್ತಿದ್ದಾರೆ, ಸಾಧ್ವಿ ನಿರಂಜನ್‌ ಜ್ಯೋತಿ ಮಾಡುತ್ತಿದ್ದಾರೆ, ಸಾಕ್ಷಿ ಮಹಾರಾಜ್‌ ಮಾಡುತ್ತಿದ್ದಾರೆ, ಪ್ರವೀಣ್‌ ತೊಗಾಡಿಯಾ ಮಾಡುತ್ತಿದ್ದಾರೆ,  ರಾಜನಾಥ್‌ ಸಿಂಗ್‌ ಕೂಡ ಅದನ್ನೇ ಮಾಡುತ್ತಿದ್ದಾರೆ. ಗಿರಿರಾಜ್‌ ಸಿಂಗ್‌ ಏನೇ ಹೇಳಿದ್ದರೂ ಅದನ್ನು ಹಿಂದೂ ಧರ್ಮದ ಮಾನ್ಯತೆಗೆ ಅನುಸಾರವಾಗಿ ಹೇಳಿದ್ದಾರೆ. ಅದರಲ್ಲಿ ತ್ವಚೆಯ ಬಣ್ಣಕ್ಕೆ ಬಹಳ ಮಹತ್ವವಿದೆ. ವಿಶೇಷವಾಗಿ ಪತ್ನಿಯರಿಗೆ.

ಆದರೆ ಗಿರಿರಾಜ್‌ ಕ್ಷಮೆ ಯಾಚಿಸಿದ್ದು ಹೃದಯದಿಂದಲ್ಲ. ಇದು ಎಂತಹ ಬೈಗುಳವೆಂದರೆ ಸ್ವಯಂ ಶ್ರೀಕೃಷ್ಣ ಅರ್ಜುನನಿಂದ ಕರ್ಣನಿಗೆ ಕೊಡಿಸಿದ್ದು. ಅರ್ಜುನ ಯುದ್ಧದಲ್ಲಿ ತನ್ನ ಅಣ್ಣನಾದ ಕರ್ಣನನ್ನು ಕೊಲ್ಲಲು ಸನ್ನದ್ಧನಾಗುತ್ತಾನೆ. ಒಂದುವೇಳೆ ನಮ್ಮ ಕೆಲಸವಾಗಬೇಕಿದ್ದರೆ ಸುಳ್ಳು ಕ್ಷಮೆ ಕೇಳುವುದು ನಮ್ಮ ಸಂಸ್ಕೃತಿಯ ನಿಯಮವಾಗಿದೆ. ಪ್ರತಿದಿನ ಮನೆಗಳಲ್ಲಿ ನೋಡುತ್ತಿರುವುದು ಏನೆಂದರೆ ಒಬ್ಬರು ಯಾರ ಬಗ್ಗೆಯಾದರೂ ಏನಾದರೂ ಹೇಳಿದರೆ ಅವರ ಕೋಪ ಹಾಗೂ ಅವರು ಉಪಯೋಗಿಸಿದ ಪದಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಅವರದು ನಿರ್ಮಲ ಹೃದಯ ಎನ್ನುತ್ತಾರೆ. ಆದರೆ ನಿರ್ಮಲ ಹೃದಯದವರು ಕೆಟ್ಟ ಮಾತುಗಳನ್ನು ಹೇಗೆ ಹೇಳುತ್ತಾರೆ ಎಂಬುದು ಅರ್ಥವಾಗುವುದಿಲ್ಲ.

ನಮ್ಮ ಸಮಾಜದ ವಿಡಂಬನೆಯೇನೆಂದರೆ ನಮ್ಮಲ್ಲಿ ಮಹಿಳೆಯರನ್ನು ಎಂದಿಗೂ ಕ್ಷಮಿಸುವುದಿಲ್ಲ. ಸೋನಿಯಾ ಗಾಂಧಿಯವರನ್ನು ಅವರು ವಿವಾಹವಾಗಿ 4 ದಶಕಗಳ ನಂತರ ಅವರ ಮೂಲ ಸ್ಥಳ ಯಾವುದು ಎಂದು ನೆನಪಿಸಲಾಗುತ್ತಿದೆ. ಇಲ್ಲಿ ಹುಟ್ಟು ಗುಣಕ್ಕೆ ಮಹತ್ವ ಇದೆ, ಬಣ್ಣಕ್ಕಲ್ಲ. ಆದ್ದರಿಂದ ಎಂ.ಬಿ.ಎ. ಮಾಡಿದವರು, ಎಂಜಿನಿಯರ್‌ಗಳು ಕೂಡ ಮದುವೆಯಾಗುವಾಗ ತಮ್ಮ ಜಾತಕ ಕೈಲಿ ಹಿಡಿದು ತಾವು ಹುಟ್ಟಿದಾಗ ಯಾವ ಯಾವ ದೋಷಗಳಿದ್ದ ಎಂದು ಅರ್ಧಂಬರ್ಧ ತಿಳಿದ ಜ್ಯೋತಿಷಿಗಳ ಬಳಿ ಕೇಳುತ್ತಾರೆ. ಕುಜ ದೋಷವಿದೆಯೆಂದು ಸಾವಿರಾರು ಸುಂದರ, ಸುಶಿಕ್ಷಿತ ಹಾಗೂ ಸೌಮ್ಯ ಹುಡುಗಿಯರನ್ನು ತಮ್ಮ ಜಾತಿ ಹಾಗೂ ತಮ್ಮ ಅಂತಸ್ತಿಗೆ ತಕ್ಕವರಾಗಿದ್ದರೂ ಹುಡುಗರು ತಿರಸ್ಕರಿಸಿಬಿಡುತ್ತಾರೆ. ಏಕೆಂದರೆ ಸಾಕ್ಷಿ, ಗಿರಿರಾಜ್‌,  ಜ್ಯೋತಿ ಮುಂತಾದವರ ಇಸಂ ನಮ್ಮ ಕಣಕಣದಲ್ಲೂ ಇದೆ ಹಾಗೂ ಹೊಸ ಸರ್ಕಾರ ಪ್ರತಿ ದಿನ ಅದನ್ನೇ ನಮ್ಮ ಮೇಲೆ ಹೇರುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ