ಮಹಿಳೆಯರ ಕೈಯಲ್ಲಿ ಏನೂ ಇಲ್ಲ

ಏಪ್ರಿಲ್-ಮೇನಲ್ಲಿ ನಡೆಯುವ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಲಿದೆ. ಏಕೆಂದರೆ ಈ ಸಲ ಎಂತಹ ಕೆಲವು ಪ್ರಮುಖ ವಿಷಯಗಳಿವೆಯೆಂದರೆ, ಆ ಮಹಿಳೆಯರ ಮೇಲೆ ನೇರ ಪರಿಣಾಮ ಬೀರಲಿವೆ…….!

2014ರ ಚುನಾವಣೆಗೂ ಮುಂಚೆ ಭ್ರಷ್ಟಾಚಾರ ಮುಖ್ಯ ವಿಷಯವಾಗಿತ್ತು. ಆದರೆ ಆಗ ಅದು ಜನಸಾಮಾನ್ಯರ ಮೇಲೆ ಅಷ್ಟೊಂದು ಪರಿಣಾಮ ಬೀರುವಂಥದ್ದಲ್ಲ. ಈಗ ನರೇಂದ್ರ ಮೋದಿ ಭಾರತ-ಪಾಕಿಸ್ತಾನ ವಿಷಯವನ್ನು ಮುಖ್ಯ ವಿಷಯವಾಗಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಏಕೆಂದರೆ ಪಾಕಿಸ್ತಾನವನ್ನು ನಾಶ ಮಾಡುವುದು ಭಾರತಕ್ಕೆ ಅತ್ಯವಶ್ಯ ಎಂದು ಜನರನ್ನು ಹೆದರಿಸಲು ಹೊರಟಿದ್ದಾರೆ. ಯಾರು ಇದನ್ನು ಒಪ್ಪುವುದಿಲ್ಲವೋ ಅವರನ್ನು ದೇಶದ್ರೋಹಿಗಳೆಂದು ಪರಿಗಣಿಸಲಾಗುತ್ತದೆ.

ಈ ಕಪಟ ದೇಶಭಕ್ತಿ ಹಾಗೂ ದೇಶಪ್ರೇಮದ ಹಿಂದೆ ಮಹಿಳೆಯರನ್ನು ಮಾನಸಿಕವಾಗಿ, ಸಾಮಾಜಿಕವಾಗಿ ಗುಲಾಮರನ್ನಾಗಿಸುವುದು ಹಾಗೂ ಧಾರ್ಮಿಕ ಪರಂಪರೆಯಲ್ಲಿ ಬಂಧಿಸಿಡುವುದಾಗಿದೆ.

ಕಳೆದ 5 ವರ್ಷಗಳಲ್ಲಿ ದೇಶದಲ್ಲಿ ಆರ್ಥಿಕ ವ್ಯವಹಾರಗಳಿಗಿಂತ ಹೆಚ್ಚಾಗಿ ಧಾರ್ಮಿಕ ಅಥವಾ ಧರ್ಮ ಅಥವಾ ಧರ್ಮ ನೀಡಿದ ಜಾತಿಗೆ ಸಂಬಂಧಪಟ್ಟ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಲಾಗಿತ್ತು. ಪೌರಾಣಿಕ ಗ್ರಂಥಗಳಲ್ಲಿ ಗೋವಿನ ಮಹಿಮೆಯ ಬಗ್ಗೆ ಹೇಳಲಾಗಿದೆ. ವಾಸ್ತವದಲ್ಲಿ ಅದು ಎಂತಹ ಒಂದು ಸಂಪತ್ತು ಆಗಿತ್ತೆಂದರೆ ಯಾರೋ ಒಬ್ಬ ಗೃಹಸ್ಥನಿಗಿಂತ ಹೆಚ್ಚಾಗಿ ಪೂಜಾರಿ ಪುರೋಹಿತರೇ ದಾನದ ರೂಪದಲ್ಲಿ ಪಡೆಯುತ್ತಿದ್ದರು.

ಈಗ ಗೋವಿನ ಹೆಸರಿನಲ್ಲಿ ಭಾರಿ ರಾಜಕೀಯ ನಡೆಯುತ್ತಿದೆ. ಅವುಗಳಿಂದ ನಗರಗಳು ಗಲೀಜಾಗುತ್ತಿರಬಹುದು. ಮನೆಗಳು ಸುರಕ್ಷಿತ ಆಗಿರದೇ ಇರಬಹುದು ಅಥವಾ ರೈತರ ಫಸಲು ನಷ್ಟವಾಗುತ್ತಿರಬಹುದು.

ಅದರ ಬೆಲೆಯನ್ನು ಮಹಿಳೆಯರೇ ತೆರಬೇಕಾಗಿ ಬರುತ್ತದೆ. ಒಂದೆಡೆ ಈ ಕಾರಣದಿಂದಾಗಿ ದುಬಾರಿ ಆಗುತ್ತಿರುವ ವಸ್ತುಗಳ ಬೆಲೆಯನ್ನು ಹೊರಬೇಕಾಗಿ ಬರುತ್ತಿದೆ. ಅವರ ಮುಂದೆ ದೊಡ್ಡ ಪಟ್ಟಿ ಓದಿ ಗೋಸೇವೆ ಅಥವಾ ಸಂತರ ಸೇವೆ ಮಾಡಿ ಎಂದು ಹೇಳಲಾಗುತ್ತದೆ.

ಈ 5 ವರ್ಷಗಳಲ್ಲಿ ಕುಂಭಮೇಳಗಳು, ನರ್ಮದಾ ಯಾತ್ರೆ, ತೀರ್ಥಯಾತ್ರೆ, ಮೂರ್ತಿ ಮಂದಿರಗಳ ಮಾತುಗಳೇ ಹೆಚ್ಚಾದವು. ವಾಸ್ತವದಲ್ಲಿ ಉದ್ಧಾರದ ಹೆಸರಿನಲ್ಲಿ ಕೆಲವು ರಸ್ತೆಗಳು ಹಾಗೂ ಸೇತುವೆಗಳನ್ನು ಉದ್ಘಾಟಿಸಲಾಯಿತು. ಅವುಗಳ ಕೆಲಸ ಕೆಲವು ವರ್ಷಗಳ ಹಿಂದೆಯೇ ಶುರುವಾಗಿತ್ತು.

ಭಾರತ ಅಭಿವೃದ್ಧಿ ಹೊಂದುತ್ತಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಇದರಲ್ಲಿನ ಬಹುದೊಡ್ಡ ಭಾಗವನ್ನು ಸರ್ಕಾರ ತೀರ್ಥಸೇವೆ, ಗೋಸೇವೆಗೆ ಮೀಸಲಿಟ್ಟರೆ ಮನೆಯಾಕೆಗೆ ಏನು ತಾನೆ ಉಳಿಯುತ್ತದೆ? ಇತ್ತೀಚಿನ ವರ್ಷಗಳಲ್ಲಿ ವಾಸದ ಮನೆಗಳ ಕೊರತೆ ಇದೆ. ಅವುಗಳ ಬೆಲೆಯೂ ಹೆಚ್ಚುತ್ತಿಲ್ಲ. ಏಕೆಂದರೆ ಮನೆ ಕೊಂಡುಕೊಳ್ಳಲು ಜನರ ಬಳಿ ಹಣವೇ ‌ಉಳಿಯುತ್ತಿಲ್ಲ. ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ತನ್ನದೇ ಆದ ಸೂರು ಹೊಂದಲು ಗೃಹಿಣಿಗೆ ಹಣ ಹೊಂದಿಸಲು ಆಗುತ್ತಿಲ್ಲ.

ಚುನಾವಣೆಯಲ್ಲಿ ಗೆಲ್ಲಿಸಲು ಮಹಿಳೆಯರನ್ನು ತೊಡಗಿಸಿದರೆ ಅದು ಒಂದು ರೀತಿಯ ಹೊಡೆತವೇ ಹೌದು. ಹಿಂದೆ ರಾಜರು ತೆರಿಗೆ ವಸೂಲಿ ಮಾಡಲು, ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳಲು ಬಲಿದಾನಕ್ಕಾಗಿ ಅವರನ್ನು ಆಯ್ಕೆ ಮಾಡುತ್ತಿದ್ದರು. ಜನರನ್ನು ಸೈನ್ಯದಲ್ಲಿ ಭರ್ತಿ ಮಾಡುತ್ತಿದ್ದರು. ಹೆಚ್ಚು ಕೆಲಸ ಮಾಡಿ ಕಂದಾಯ ವಸೂಲಿ ಮಾಡುತ್ತಿದ್ದರು. ಈಗಲೂ ಅನೇಕ ದೇಶಗಳಲ್ಲಿ ಇದು ನಡೆಯುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ