ಮುದ್ದಾದ ಮಗು ಜನಿಸಿದ ಸಂತಸದಲ್ಲಿ ಗಂಡ ಹೆಂಡತಿ ಇದ್ದರು. ಎಲ್ಲವೂ ಚೆನ್ನಾಗಿತ್ತು. ಮಗುವಿನ ಆರೋಗ್ಯಕರ ಬೆಳವಣಿಗೆಯನ್ನು ನೋಡುತ್ತ ನೋಡುತ್ತ ತಂದೆ ತಾಯಿ ಸಂತೋಷಪಡುತ್ತಿದ್ದರು. ಮಗುವಿಗೆ ಎರಡು ವರ್ಷ ತುಂಬುತ್ತಲೇ ಬಿಡದ ಜ್ವರವಾಯಿತು. ನಿಲ್ಲದ ಭೇದಿ ಶುರುವಾಯಿತು. ಎಷ್ಟೇ ಔಷಧಿ ನೀಡಿದರೂ ಮಗು ಗುಣವಾಗಲಿಲ್ಲ. ದೊಡ್ಡ ಆಸ್ಪತ್ರೆ, ನಾಟಿ ಔಷಧಿ ಮಾಡಿದರೂ ಜ್ವರ ವಿಪರೀತವಾಗಿ ಮಗುವಿನ ಕೈಕಾಲುಗಳು ಎಳೆದುಕೊಂಡಿತು. ನರಗಳು ಬಿಗಿದುಕೊಂಡವು. ತಿನ್ನಿಸುವ ಆಹಾರ ಒಳಗೆ ಹೋಗದೆ ಎಲ್ಲ ಹಾಗೆ ಹೊರಬರತೊಡಗಿತು. ದುಡ್ಡಿದ್ದರೆ ಏನು ಬೇಕಾದರೂ ಆಗುತ್ತೆ ಎನ್ನುವ ಮಾತು ಇಲ್ಲಿ ಗೌಣವಾಯಿತು. ಎಷ್ಟೇ ಖರ್ಚು ಮಾಡಿದರೂ ಮಗು ಗುಣಮುಖವಾಗಲಿಲ್ಲ. ಬೆಳವಣಿಗೆ ಕುಂಠಿತವಾಗಿ ಕೈಕಾಲುಗಳು ಇಲ್ಲವಾಯಿತು. ದೇಹ ಕುಬ್ಜವಾಯಿತು.

ಮಗವನ್ನು ಅಂಗವಿಕಲ ಎಂದು ವೈದ್ಯರು ದೃಢೀಕರಿಸಿಬಿಟ್ಟರು. ತಂದೆ ತಾಯಿ ಕಂಗಾಲಾದರು. ಆಕಾಶವೇ ಇವರ ತಲೆಯ ಮೇಲೆ ಕಳಚಿಬಿದ್ದಿತು.

ಮಗುವನ್ನು ಬಹಳ ನಾಜೂಕಾಗಿ ಹುಷಾರಾಗಿ, ಹೆಚ್ಚಾಗಿ ಪ್ರೀತಿಯಿಂದ ಬೆಳೆಸತೊಡಗಿದರು. ಅದರ ಫಲವಾಗಿ ಮಗು ಒಂದಿಷ್ಟು ಸುಧಾರಿಸಿ, ಇರುದರಲ್ಲೇ ಬುದುಕುವ ಸಾಮರ್ಥ್ಯ ಮೈಗೂಡಿಸಿಕೊಂಡಿತು. ಮನೆಯವರೂ ಇಷ್ಟೆ ಲಭ್ಯ ಎನ್ನುತ್ತ ದಿನಕಳೆದರು. ಮಗು ದಿನೇ ದಿನೇ ಒಳ್ಳೆ ರೂಪ, ಗುಣ, ವಿದ್ಯೆಗಳೊಟ್ಟಿಗೆ ಬೆಳೆಯತೊಡಗಿತು. ಮಗುವನ್ನು ನಾರ್ಮಲ್ ಶಾಲೆಗೇ ಸೇರಿಸಿದರು. ಜೆ.ಎಸ್‌.ಎಸ್‌ ಶಾಲೆಯಲ್ಲಿ ಈ ಮಗು ಮೆಟ್ಟಿಲು ಹತ್ತಲು ಆಗುವುದಿಲ್ಲ ಎಂಬ ಕಾರಣಕ್ಕೆ ತರಗತಿಯನ್ನು ಕೆಳಗೇ ಮಾಡಿದ ಮುಖ್ಯೋಪಾಧ್ಯಾಯಿನಿಯ ಸಹಾಯವನ್ನು ಇಂದಿಗೂ ನೆನೆಯುತ್ತಾರೆ. ಹಾಗೇ ಬೆಳೆಯುತ್ತಾ ಬಿ.ಕಾಂ. ಪದವಿಯನ್ನು ಪಡೆದು, ಇಂದು ಇನ್‌ಪೇಸಿಸ್‌ನಲ್ಲಿ ಕೆಲಸ ನಿರ್ವಹಿಸುತ್ತ, ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ (ಜಾವೆಲಿನ್‌ ಥ್ರೋ, ಡಿಸ್ಕಸ್‌ ಥ್ರೋ, ಶಾಟ್‌ಪುಟ್‌) ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮಂಜುಳಾರವರ ಸಾಧನೆ ಅಷ್ಟಿಷ್ಟಲ್ಲ.

ಚಿಕ್ಕ ಮಗುವನ್ನು ತಂದೆ ಶಾಲೆಗೆ ಬಿಟ್ಟು ತಾವು ಕೆಲಸಕ್ಕೆ ಹೋಗುತ್ತಿದ್ದರು. ಕೆಲಸದಿಂದ ಬರುವಾಗ ಮಗುವನ್ನು ಮತ್ತೆ ಮನೆಗೆ ಕರೆದುಕೊಂಡು ಬರುತ್ತಿದ್ದರು. ಮನೆಗೆ ಬಂದೊಡನೆ ಮಗುವಿನ ಆರೈಕೆ ಲಾಲನೆ ಪೋಷಣೆ ತಾಯಿಯ ಪಾಲಿನದಾಗುತ್ತಿತ್ತು. ಮಗುವಿಗೆ ಯಾವುದರಲ್ಲೂ ಕುಂದು ಬಾರದಂತೆ ಮನೆಯವರು ಅಕ್ಕರೆಯಿಂದ ಬೆಳೆಸಿದರು. ಬನಶಂಕರಿಯ ಬಿ.ಎನ್‌.ಎಂ. ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಮುಗಿಸಿ ಮನೆಯಲ್ಲೇ ಕೂತು ಸಮಯ ಕಳೆಯುತ್ತಿದ್ದ ಮಂಜುಳಾರವರಿಗೆ ಪರಿಚಯವಾದವರು ಶಾಂತಲಕ್ಷ್ಮಿ. ಆಕೆ ಬ್ಯಾಂಕ್‌ ಉದ್ಯೋಗಿ. ಇವರೂ ಸಹ ಅಂಗವೈಕಲ್ಯತೆಯನ್ನು ಹೊಂದಿದವರೇ. ಬಹಳ ಚಟುವಟಿಕೆಯ ಸ್ವಭಾವ ಇವರದ್ದು. ಬಹಳಷ್ಟು ಮಂದಿಯನ್ನು ಮುಖ್ಯವಾಹಿನಿಗೆ ತಂದ ಹಿರಿಮೆ ಇವರಿಗೇ ಸಲ್ಲುತ್ತದೆ.

ಸಾಧನೆಗೆ ನಾಂದಿ

ಮಂಜುಳಾರವರಿಗೆ ಬಹಳ ಪ್ರೋತ್ಸಾಹ ನೀಡಿ ಅವರನ್ನು ಮನೆಯ ನಾಲ್ಕುಗೋಡೆಯ ಆಚೆಗೆ ತಂದು ಪ್ರಪಂಚ ತೋರಿಸಿದ ಮಹನೀಯರು. ಅಷ್ಟಾಗಿ ಬಾಹ್ಯಲೋಕದ ಪರಿಚಯವಿಲ್ಲದ ಮನೆಯವರ ಬಾಳಿಗೆ ಶಾಂತಲಕ್ಷ್ಮಿಯವರು ದಾರಿದೀಪವಾದರು, ಜೀವನ ಜ್ಯೋತಿಯಾದರು. ಅದಾಗಲೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಐಟಿಐ ಕಾರ್ಖಾನೆಯ ಉದ್ಯೋಗಿ ಕೃಷ್ಣಮೂರ್ತಿಯವರು ವಾಲೆಂಟಿಯರ್‌ ಆಗಿ ಮಾರ್ಗದರ್ಶಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. `ಇವರಿಬ್ಬರ ಪ್ರೋತ್ಸಾಹ ಉತ್ತೇಜನ ನನ್ನನ್ನು ಇಂದು ಈ ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಿದೆ,' ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಂಜುಳಾ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ