ಒಂದೆಡೆ ತೋರಿಕೆಯ ನಾಟಕ, ಇನ್ನೊಂದೆಡೆ ಹೆದರಿಕೆಯ ಶ್ರದ್ಧೆ. ಇದೆಲ್ಲ ಒಂಥರಾ ಸ್ಟೀರಿಯೊ ಟೈಪ್‌. ಇದು ನಮ್ಮ ವಾಸ್ತವದ ಕನ್ನಡಿ. ನಮ್ಮ ಸಮಾಜ ಧರ್ಮಾಂಧತೆಯ ಕಾರಣದಿಂದ ಪೂಜಾರಿ, ಪುರೋಹಿತರು ಜಾತ್ರೆ ಉತ್ಸದ ನೆಪವೊಡ್ಡಿ ನಾನಾ ಪ್ರಕಾರದ ಮೂಢನಂಬಿಕೆಗಳನ್ನು ಪಸರಿಸುವ ಕೆಲಸ ಮಾಡುತ್ತಾರೆ. ಅವುಗಳ ಹಿಂದಿನ ವಾಸ್ತವವನ್ನು ಮರೆಮಾಚಿ ಬಗೆಬಗೆಯ ಕರ್ಮಕಾಂಡಗಳನ್ನು ಅದಕ್ಕೆ ಪೋಣಿಸಿ ಜನರ ನೆಮ್ಮದಿಯನ್ನೇ ಹಾಳು ಮಾಡುತ್ತಿದ್ದಾರೆ.

ಶುಭ ಅಂದರೆ ಒಳ್ಳೆಯದಾಗಬೇಕೆನ್ನುವ ಅಪೇಕ್ಷೆ, ಅನಿಷ್ಟ ಆಗುತ್ತದೆಂಬ ಸಂದೇಹ, ಅವನ್ನು ಪಾಲಿಸಲೇಬೇಕಾದ ವಿವಶತೆಯಿಂದ ಜನಸಾಮಾನ್ಯರು ಭಯಭೀತರಾಗಿ ಮೂಢನಂಬಿಕೆಯನ್ನು ತಮ್ಮ ತಲೆಯಲ್ಲಿ ತುಂಬಿಸಿಕೊಳ್ಳುತ್ತಾ ಹೋದರು. ನಮ್ಮ ಧಾರ್ಮಿಕ ಗ್ರಂಥಗಳು ಕೂಡ ಇದೇ ವಿಷಯವನ್ನು ಹೆಚ್ಚೆಚ್ಚು ಒತ್ತಿ ಹೇಳಿವೆ. ಒಪ್ಪದೇ ಹೋದರೆ ನಾಶವಾಗಿ ಹೋಗುತ್ತೀಯಾ ಎಂದು ಎಚ್ಚರಿಕೆ ಕೂಡ ಕೊಡುತ್ತವೆ.

(ಭಾ.ಗೀತಾ ಶ್ಲೋಕ 18/58) ಅಥಚೇತ್ವಮಹಂಕಾರಾನ್ನ ಶ್ರೇಷ್ಯಸಿ ವಿನಂಕ್ಷ್ಯಾರಿ ಅಂದರೆ ಅಹಂಕಾರದ ಕಾರಣದಿಂದ ನೀನು ಏನನ್ನು ಆಲಿಸದೆ ಇದ್ದರೆ ಮುಂದೆ ನೀನು ಸಂಪೂರ್ಣವಾಗಿ ನಾಶವಾಗಿ ಹೋಗುವೆ.

(ಭಾ.ಗೀತಾ ಶ್ಲೋಕ 18/67)ನ ಚಾಶುಶ್ರೂಷಿ ವಾತ್ಯಂ ನ ಚ ಮಾಂ ಯೋ ಭ್ಯಸೂಯತಿ ಅಂದರೆ ಅವನಿಗೆ (ದೇವರು) ಅದನ್ನು (ಜ್ಞಾನ) ನೀನೆಂದೂ ಹೀಗಳೆಯಬಾರದು ಹಾಗೂ ಭಗವಂತನನ್ನು ನಿಂದಿಸುವವರನ್ನು ಸಮರ್ಥಿಸಬಾರದು.

(ಭಾ.ಗೀತಾ ಶ್ಲೋಕ 18/66) ಸರ್ಧರ್ಮಾನ್ಪರಿತ್ಯಜ್ಯ ಮಾಮೆಕಂ ಶರಣಂ ಅಹಂ ತ್ವಾ ಸರ್ ಪಾಪೇಶ್ಯೋ ಮೋಕ್ಷಾಯಿಕ್ಷಾಮಿ ಮಾ ಶುಚಃ

ಅಂದರೆ ಯಾವಾಗ ಧರ್ಮಕರ್ಮ (ಲೋಕಧರ್ಮ ಅಥವಾ ಲೋಕ ವ್ಯವಹಾರ ಎಂಬುದು ನಾನಾ ಸಂಬಂಧಗಳ ಮಾಧ್ಯಮದಿಂದ ನಿರ್ಮಿತವಾಗಿದೆ)ನ್ನು ತೊರೆದು ನೀನು ನನಗೆ ಶರಣಾಗುವೆಯೋ, ಆಗ ನಾನು ನಿನ್ನನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುವೆ, ದುಃಖಿಸಬೇಡ.

ಇದೆಲ್ಲ ಏನು?

ಒಂದು ವೇಳೆ ದೇವರು ಇದ್ದದ್ದೇ ಆಗಿದ್ದರೆ, ಮಹಾಶಕ್ತಿಶಾಲಿ ಆಗಿದ್ದರೆ, ಅವನಿಗೆ ಎಲ್ಲವನ್ನು ಎಲ್ಲರಿಗೂ ಹೇಳುವ ಅವಶ್ಯಕತೆಯಾದರೂ ಏನಿತ್ತು? ಅವನು ತನ್ನ ವಚನಗಳನ್ನು, ಶ್ಲೋಕಗಳನ್ನು ಬೇರೆಬೇರೆ ಭಾಷೆಗಳಲ್ಲಿ ಏಕೆ ಬರೆಸಿದ? ಕಂಪ್ಯೂಟರ್‌ ಸಾಫ್ಟ್ ವೇರ್‌ನ ಹಾಗೆ ಅವನ ಬಳಿ ಸದಾ ಜ್ಞಾನ ವಿಜ್ಞಾನ ಇದ್ದೇ ಇರುತ್ತದೆ. ಹಾಗಾದರೆ ಕಾಗದಗಳಲ್ಲಿ, ಕಲ್ಲುಗಳ ಮೇಲೆ ಕೊರೆಸುವ ಅಗತ್ಯ ಏನಿತ್ತು? ಯಾರು ಇದನ್ನು ಒಪ್ಪುದಿಲ್ಲ ಅವರ ಎದುರು ಈ ಶ್ಲೋಕಗಳನ್ನು ಓದಿ ಹೇಳಲು ಏಕೆ ನಿರಾಕರಿಸಿದ? ಆ ಶ್ಲೋಕಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ ಅವರು ಪಾವನರಾಗಬೇಕಿತ್ತು. ಒಂದು ವಿಷಯ ಸ್ಪಷ್ಟ. ಅವರು ತರ್ಕಬದ್ಧ ಉತ್ತರ ಕೇಳುತ್ತಾರೆ, ಅದಕ್ಕೆ ಇವರ ಬಳಿ ಯಾವುದೇ ಉತ್ತರ ಇರುವುದಿಲ್ಲ. ಇದರಿಂದ ಇವರ ಬಣ್ಣ ಬಯಲಾಗುತ್ತಿತ್ತು. ಸತ್ಯ ಹೊರಬರುತ್ತಿತ್ತು. ಸತ್ಯವನ್ನು ವಾಸ್ತವವನ್ನು ನಿರಾಕರಿಸುವುದು, ತರ್ಕವಿಲ್ಲದೆ ಯಾವುದನ್ನಾದರೂ ಒಪ್ಪುವುದು, ಒಪ್ಪಿಸುವುದು ಹೀಗೆಯೇ ಶುರುವಾಗುತ್ತದೆ. ಧರ್ಮದ ಸುಳಿಗೆ ಸಿಕ್ಕ ಮನಸ್ಸು ದುರ್ಬಲವಾಗುತ್ತ ಹೋಗುತ್ತದೆ. ಈ ಭೀತಿಯಿಂದ ಹೊಸ ಹೊಸ ಮೂಢನಂಬಿಕೆಗಳು ಜನ್ಮ ತಳೆಯುತ್ತ ಹೋದವು ಹಾಗೂ ಮೂಢನಂಬಿಕೆಗೆ ತುತ್ತಾಗುವವರ ಸಂಖ್ಯೆ ಹೆಚ್ತುತ್ತಾ ಹೋಯಿತು.

ಒಂದೇ ವಿಷಯ ಮನಸ್ಸಿನ ಆಳದಲ್ಲಿ ಕುಳಿತುಬಿಟ್ಟಿತು. ಯಾವುದೇ ತರ್ಕವಿಲ್ಲದೆ ಹೀಗೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಏನೂ ಮಾಡದೇ ಇದ್ದರೆ ಕೆಟ್ಟದಾಗುತ್ತದೆ. ಅದೇ ರೀತಿ ನಮ್ಮ ಹಾಗೂ ಇತರರ ಕ್ರಿಯಾಕಲಾಪಗಳಿಂದ ಕೆಟ್ಟದ್ದಾಗಬಹುದು. ಹೀಗೆ ಶುರುವಾಯಿತು ಮೂಢನಂಬಿಕೆಗಳ ಸರಣಿ. ಕ್ರಿಕೆಟ್‌ನಲ್ಲಿ ಗೆದ್ದಿದ್ದಕ್ಕಾಗಿಯೊ, ಒಲಿಂಪಿಕ್‌ ಪದಕ ಪಡೆದದ್ದಕ್ಕಾಗಿಯೋ, ಮುಖಂಡನೊಬ್ಬ ಚುನಾವಣೆಯಲ್ಲಿ ಗೆದ್ದದ್ದಕ್ಕಾಗಿಯೋ ಹೋಮ ಹವನ ಮಾಡಲಾರಂಭಿಸಿದರು. ಅದೆಲ್ಲ ಆಗಬಹುದಾದರೆ, ಕೊಲೆ, ಬಲಾತ್ಕಾರ, ಕಳ್ಳತನ, ಬೆಂಕಿ ಅನಾಹುತಗಳನ್ನು ತಡೆಯಲು ಯಾಕೆ ಯಾರೊಬ್ಬರೂ ಹವನ ಮಾಡುವುದಿಲ್ಲ? ಇದು ವಿಚಾರ ಮಾಡುವಂತಹ ಮಾತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ