ಮಹೀಂದ್ರಾ ಕಂಪನಿಯ ಆನಂದ್‌ ಮಹೀಂದ್ರಾ ಡಿಸೆಂಬರ್‌ನಲ್ಲಿ ಮಾಡಿದ ಒಂದು ಟ್ವೀಟ್‌ ಮಂಗಳೂರಿನ ಸ್ವಾವಲಂಬಿ ಮಹಿಳೆಯೊಬ್ಬಳ ಬದುಕಿನ ದಿಕ್ಕುದೆಸೆಯನ್ನೇ ಬದಲಿಸಿಬಿಟ್ಟಿತು. ಅವರೇ `ಹಳ್ಳಿಮನೆ ರೊಟ್ಟೀಸ್‌'ನ ಶಿಲ್ಪಾ.

ಶಿಲ್ಪಾ ಕಳೆದ ಅನೇಕ ವರ್ಷಗಳಿಂದ ಮಂಗಳೂರಿನ ಮಣ್ಣುಗುಡ್ಡೆ ಪ್ರದೇಶದಲ್ಲಿ ಮಹೀಂದ್ರಾ ಬೊಲೆರೋ ವಾಹನದಲ್ಲಿ `ಹಳ್ಳಿಮನೆ ರೊಟ್ಟೀಸ್‌' ಹೆಸರಿನಲ್ಲಿ ಮಲೆನಾಡಿನ ವೈವಿಧ್ಯಮಯ ರೊಟ್ಟಿಗಳ ಸವಿ ಉಣಬಡಿಸುವ ಸಂಚಾರಿ ಕ್ಯಾಂಟೀನ್‌ ಆರಂಭಿಸಿ, ಮಂಗಳೂರಿಗೆ ಮಲೆನಾಡಿನ ವಿಶಿಷ್ಟ ರೊಟ್ಟಿಗಳ ಪರಿಚಯ ಮಾಡಿಕೊಟ್ಟರು.

ಮಹೀಂದ್ರಾ ಗಮನಕ್ಕೆ ಬಂದದ್ದು ಹೇಗೆ?

ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಶಿಲ್ಪಾರ ದೈನಂದಿನ ಕಾಯಕದ ಬಗ್ಗೆ ಫೋಟೊ ಸಮೇತ ಮಾಹಿತಿ ನೀಡಿ, ಅದನ್ನು ಮಹೀಂದ್ರಾ ಕಂಪನಿಯ ಸಿಇಓ ಆನಂದ್‌ ಮಹೀಂದ್ರಾರಿಗೆ ಟ್ಯಾಗ್‌ ಮಾಡಿದ್ದರು. ತಮ್ಮ ಕಂಪನಿಯ ವಾಹನದಲ್ಲಿ ಸ್ವಾವಲಂಬಿ ಜೀವನ ನಡೆಸಿ ಯಶಸ್ವಿ ಮಹಿಳೆ ಅನಿಸಿಕೊಂಡ ಶಿಲ್ಪಾರ ಬಗ್ಗೆ ಆನಂದ್‌ಗೆ ಬಹಳ ಕುತೂಹಲ ಮೂಡಿತು. ಆನಂದ್‌ ಮಹೀಂದ್ರಾ ತಕ್ಷಣವೇ ಟ್ವೀಟ್‌ ಮಾಡಿ ಶಿಲ್ಪಾ ತಮ್ಮ ಉದ್ಯಮವನ್ನು ವಿಸ್ತರಿಸಲು ಆಸಕ್ತಿ ಇದ್ದರೆ ನಾನು ಅವರಿಗೆ ಬೊಲೆರೋ ವಾಹನವನ್ನು ಉಚಿತವಾಗಿ ಕೊಡುವುದಾಗಿ ಹೇಳಿದರು. ಹೇಳಿದಂತೆಯೇ ಒಂದೇ ತಿಂಗಳಲ್ಲಿ ಮಹೀಂದ್ರಾ ವಾಹನವನ್ನು ಶಿಲ್ಪಾಗೆ ಹಸ್ತಾಂತರಿಸಿದರು. ಈಗ ಎರಡನೇ ವಾಹನದ ಮೂಲಕ ಕಂಕನಾಡಿ ಪ್ರದೇಶದಲ್ಲಿ ತಮ್ಮ ವಹಿವಾಟನ್ನು ವಿಸ್ತರಿಸಲು ಶಿಲ್ಪಾ ಪ್ರಯತ್ನಶೀಲರಾಗಿದ್ದಾರೆ.

`ಹಳ್ಳಿಮನೆ ರೊಟ್ಟೀಸ್‌'ನ ಹಿಂದೆ ಶಿಲ್ಪಾರ ಶ್ರದ್ಧೆ ಮತ್ತು ಅಪಾರ ಶ್ರಮವಿದೆ, ಅತೀ ತಾಳ್ಮೆ ಇದೆ. `ಹಳ್ಳೀಮನೆ ರೊಟ್ಟೀಸ್‌' ಮಣ್ಣುಗುಡ್ಡೆ ಪ್ರದೇಶದಲ್ಲಿ ನೆಲೆ ನಿಲ್ಲಲು ಶಿಲ್ಪಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅವರ ಯಶೋಗಾಥೆಯ ಹಿಂದಿನ ಕಥೆಯನ್ನೊಮ್ಮೆ ಮೆಲುಕು ಹಾಕಿದರೆ ಶಿಲ್ಪಾರ ಶ್ರಮ ಎಂಥವರಿಗೂ ಪ್ರೇರಣೆಯಾಗುತ್ತದೆ.

ಹಾಸನ - ಮಂಗಳೂರು ಪಯಣ

ಶಿಲ್ಪಾ ಮೂಲತಃ ಹಾಸನದವರು. ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಮದುವೆಯಾದದ್ದು ತುಮಕೂರು ಮೂಲದ ಬೆಂಗಳೂರು ಉದ್ಯಮಿ ರಾಜಶೇಖರ್‌ರನ್ನು. ರಾಜಶೇಖರ್‌ ಗಣಿ ಉದ್ಯಮಕ್ಕೆ ಟ್ರಕ್‌ ಒದಗಿಸುವ ಟ್ರಾನ್ಸ್ ಪೋರ್ಟ್‌ ಉದ್ಯಮ ನಡೆಸುತ್ತಿದ್ದರು. ಅದರ ಪ್ರಧಾನ ಕಛೇರಿ ಮಂಗಳೂರಿನಲ್ಲಿತ್ತು. ಗಂಡ ಬಿಸ್‌ನೆಸ್‌ನಲ್ಲಿ ಮಗ್ನ. ಶಿಲ್ಪಾ ಮನೆಯಲ್ಲಿಯೇ ಮಗನ ಲಾಲನೆ ಪಾಲನೆಯಲ್ಲಿ ತಲ್ಲೀನರಾಗಿದ್ದರು. ಗಂಡ ಮನೆ ನಿರ್ವಹಣೆಗೆ, ಮಗನ ಪಾಲನೆ ಪೋಷಣೆಗೆ ಯಾವುದೇ ಕೊರತೆ ಮಾಡದ್ದರಿಂದ ಶಿಲ್ಪಾಗೆ ಆವರೆಗೆ ಹಣಕಾಸಿನ ಸಮಸ್ಯೆ ಏನೆಂಬುದು ಗೊತ್ತೇ ಇರಲಿಲ್ಲ.

ಗಂಡ ನಾಪತ್ತೆಯಾದ ಬಳಿಕ.....

ಆಫೀಸ್‌ ಕೆಲಸದ ನಿಮಿತ್ತ ರಾಜಶೇಖರ್‌ ಬೆಂಗಳೂರಿಗೆ ಹೋದವರು ಪುನಃ ವಾಪಸ್‌ ಬರಲಿಲ್ಲ. ಇವತ್ತು, ನಾಳೆ ಬರುತ್ತಾರೆ ಎಂದು ಕಾಯ್ದಿದ್ದೇ ಬಂತು, ಆದರೆ ಅವರು ಬರಲೇ ಇಲ್ಲ.

ಗಂಡನ ಅಕಾಲಿಕ ಕಣ್ಮರೆಯ ಬಳಿಕ ಶಿಲ್ಪಾರ ಆದಾಯದ ಮೂಲವೇ ಹೊರಟುಹೋಯಿತು. ಕಷ್ಟಗಳು ಅವರ ಮುಂದೆ ಧುತ್ತೆಂದು ಕುಣಿಯಲಾರಂಭಿಸಿದವು. ಆ ಸಂದಿಗ್ಧ ಸ್ಥಿತಿಯಲ್ಲಿ ಶಿಲ್ಪಾ ತೀವ್ರ ಆತಂಕಕ್ಕೆ ಒಳಗಾದರು. ಖಿನ್ನತೆಗೂ ತುತ್ತಾದರು. ಅವರ ಸ್ಥಿತಿ ನೋಡಿ ಮನೆಯವರಿಗೆ ಗಾಬರಿ. ವೈದ್ಯರು ಇವರನ್ನು ಹೀಗೆಯೇ ಬಿಟ್ಟರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು, ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿದರೆ ಮತ್ತೆ ಮೊದಲಿನಂತಾಗಬಹುದು ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ