ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಆಕೆಯ ಮೊದಲ ಕವನ ಸಂಕಲನ ಪ್ರಕಟವಾಯಿತು!

ನಾಲ್ಕನೇ ತರಗತಿ ವಿದ್ಯಾರ್ಥಿನಿಯಿಂದ `ಮಂದಾನಿಲ' ಹೆಸರಿನ ಕೈಬರಹದ ಪತ್ರಿಕೆ ಪ್ರಕಟವಾಯಿತು. ದ್ವಿತೀಯ ಪಿಯು ಮುಗಿಸುವ ವೇಳೆಗಾಗಲೇ ರಾಜ್ಯದ ಸಾಹಿತ್ಯ ವಲಯದಲ್ಲಿ ಮಹತ್ವದ ಹೆಸರು ಗಳಿಸಿರುವ ನಮ್ಮ ನಾಡಿನ ಪ್ರತಿಭಾವಂತ ಬರಹಗಾರ್ತಿ ಎನಿಸಿದರು ವಿತಾಶಾ ರಿಯಾ (ಮುದ್ದು ತೀರ್ಥಹಳ್ಳಿ)!

ಪಶ್ಚಿಮ ಘಟ್ಟದ ಹಚ್ಚ ಹಸಿರಿನ ನಡುವೆ ನೆಲೆಯಾದ ತೀರ್ಥಹಳ್ಳಿಯ ಸಮೀಪ ಬೆಟ್ಟಮಕ್ಕಿಯರಾದ ಮುದ್ದು ತೀರ್ಥಹಳ್ಳಿ ಇದುವರೆಗೂ ಮೂರು ಕವನಸಂಗ್ರಹ, ಒಂದು ಲಲಿತ ಪ್ರಬಂಧ, ಒಂದು ಕಾದಂಬರಿ ಸೇರಿದಂತೆ ಹತ್ತು ಹಲವು ಅಂಕಣ ಬರಹಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ `ಪ್ರವೇಶ ಭಾರತಿ,` `ಕಲಾ,' ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಇವರು ಈಗಾಗಲೇ ರಾಜ್ಯ ಸಾಹಿತ್ಯ ಅಕಾಡೆಮಿ, ಅರಳು ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಕಾಸರಗೋಡು ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಸೇರಿದಂತೆ ನಾನಾ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ನಾಡು, ಭಾಷೆ ಕುರಿತಂತೆ ಯಾವ ಹಿರಿಯ ಸಾಹಿತಿಗಳಿಗೂ ಕಡಿಮೆ ಇಲ್ಲದಂತೆ ಮಂಡಿಸುವ ಈಕೆಯ ಜೊತೆಗೆ `ಗೃಹಶೋಭಾ' ನಡೆಸಿದ ವಿಶೇಷ ಸಂದರ್ಶನವಿದು. ಎಲ್ಲಾ ಪ್ರಶ್ನೆಗಳಿಗೆ ಅರಳು ಹುರಿದಂತೆ ಪಟಪಟನೆ ಉತ್ತರಿಸಿದ್ದ ಮುದ್ದು ಅವರ ಮುದ್ದಾದ ನುಡಿಗಳನ್ನು ಅವರ ಮಾತುಗಳಲ್ಲಿಯೇ ನಿಮ್ಮ ಮುಂದಿಡುತ್ತಿದ್ದೇವೆ.

ನನ್ನ ಹೆಸರು ವಿತಾಶಾ ರಿಯಾ. ಮನೆಯಲ್ಲಿ ಮುದ್ದು ಅಂತ ಕರೆಯುತ್ತಿದ್ದರಿಂದ ಅದನ್ನೇ ಕಾವ್ಯನಾಮ ಮಾಡಿಕೊಂಡೆ. ನನ್ನ ತಂದೆ ಮೆರೈನ್‌ ಎಂಜಿನಿಯರ್‌, ತಾಯಿ ಗೃಹಿಣಿ. ನನ್ನ ಅಕ್ಕ ವಿನಿಶಾ ಸಹ ಬಹುಮುಖ ಪ್ರತಿಭಾವಂತೆ. ಹಾಸ್ಯ ಲೇಖನ ಚೆನ್ನಾಗಿ  ಬರೆಯುವ ಅವಳು, `ಎತ್ತಿನಗಾಡಿ ಎಕ್ಸ್ ಪ್ರೆಸ್‌' ಎನ್ನುವ ಹಾಸ್ಯ ಲೇಖನ ಸಂಗ್ರಹವನ್ನೂ ಹೊರತಂದಿದ್ದಾಳೆ.

ನಾನು ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಯನ್ನು ನಮ್ಮ ಅಜ್ಜಿಯ ಊರಾದ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮುಗಿಸಿ ತೀರ್ಥಹಳ್ಳಿಯ ಸಹ್ಯಾದ್ರಿ ಕೇಂದ್ರೀಯ ವಿದ್ಯಾಲಯದಲ್ಲಿ ಐದನೇ ತರಗತಿಯವರೆಗೆ ಓದಿದೆ. ಆನಂತರ ಏಕೋ ಕನ್ನಡ ಶಾಲೆಯಲ್ಲೇ ಓದಬೇಕೆನಿಸಿತು. ಅದಕ್ಕೆ ಕಾರಣ ನಾನು ಯಾವುದಾದರೂ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿ ಕನ್ನಡದಲ್ಲೇ ಕನ್ನಡದ ಪರವಾಗಿ ಮಾತನಾಡುತ್ತಿದ್ದೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಿದ್ದರೂ ಕನ್ನಡ ಭಾಷೆಯ ಮೇಲೆ ಒಳ್ಳೆ ಹಿಡಿತವಿದೆ ಭೇಷ್‌! ಎನ್ನುತ್ತಿದ್ದರು. ನಮ್ಮ ಕಡೆ ಎಲ್ಲರೂ ಬಹಳ ಸುಂದರವಾಗಿ ಕನ್ನಡ ಮಾತನಾಡುತ್ತಾರೆ. ಅದೂ ಅಲ್ಲದೆ, ನಾನು ಒಂದು, ಎರಡನೇ ತರಗತಿ ಓದುವಾಗಲೇ  ಚಿಕ್ಕ ಚಿಕ್ಕ ಕವಿತೆ, ಕಥೆ ಬರೆಯುತ್ತಿದ್ದೆ. ಅಲ್ಲದೆ, ಮೂರನೇ ತರಗತಿಯಲ್ಲಿ ನನ್ನ ಮೊದಲ ಸಂಕಲನ `ಹೂಗೊಂಚಲು' ಪ್ರಕಟವಾಯಿತು. ನಾಲ್ಕು, ಐದನೇ ತರಗತಿಯಲ್ಲಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ `ಪ್ರವೇಶ ಭಾರತಿ' ಮತ್ತು `ಕಲಾ' ಪರೀಕ್ಷೆಗಳನ್ನು ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದೆ. ನಾಲ್ಕನೇ ತರಗತಿ ಓದುವಾಗ ನನ್ನ ಎರಡನೇ ಸಂಕಲನ `ಕಾನನ ಕಲರವ' ಪ್ರಕಟವಾಯಿತು. ಅಲ್ಲದೆ ನನ್ನ ಅಕ್ಕನ ಜೊತೆ ಸೇರಿ `ಮಂದಾನಿಲ' ಎನ್ನುವ ಕೈ ಬರಹದ ಪತ್ರಿಕೆ ನಡೆಸಲು ಆರಂಭ ಮಾಡಿದ್ದೆ. ಹೀಗಾಗಿ ಕನ್ನಡವೇನೋ ಚೆನ್ನಾಗಿಯೇ ಬರುತ್ತಿತ್ತು. ಆದರೆ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಾ ಕನ್ನಡದ ಪರ ಮಾತನಾಡುವಾಗ ಒಳಗೆ ಏನೋ ಇರಿದ ಅನುಭವವಾಗುತ್ತಿತ್ತು. ಅದಕ್ಕೆ ಹಟ ಹಿಡಿದು ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಕೊಂಡೆ. ಅಲ್ಲಿ ಸೇರಿದ ನಂತರ ನನಗೆ ನಿಜಕ್ಕೂ ಸಮೃದ್ಧ ಬಾಲ್ಯ, ಮಕ್ಕಳ ಹಕ್ಕುಗಳು, ಬಡತನ, ಕಷ್ಟ ಇವೆಲ್ಲದರ ಅರಿವು ಆಗತೊಡಗಿತು. ಏಕೆಂದರೆ ಆ ಸರ್ಕಾರಿ ಶಾಲೆಯಲ್ಲಿ ಇದ್ದವರೆಲ್ಲ ಬಡವ, ದಲಿತ ಮಕ್ಕಳು. ನನ್ನ ತರಗತಿಯಲ್ಲಿ ಒಬ್ಬ ಪೋಲಿಯೋ ಪೀಡಿತ ಹುಡುಗನೂ ಇದ್ದ. ನನ್ನ ಮನೋವಿಕಾಸ ಅಂತೇನಾದ್ರೂ ಆಗಿದೆ ಎಂದರೆ ಅದು ಸರ್ಕಾರಿ ಶಾಲೆ ಸೇರಿದ ಮೇಲೆ ಆಗಿದ್ದು ಎನ್ನಬಹುದು. ಅಲ್ಲಿ ಒಂದು ಕವನ ಸಂಕಲನ `ಎಷ್ಟು ಬಣ್ಣದ ಇರುಳು!' ಪ್ರಕಟಿಸಿದೆ. ಮಂದಾನಿಲ ಪತ್ರಿಕೆಯಲ್ಲಿ ಶಾಲೆಯ ಅನುಭಗಳನ್ನೆಲ್ಲ ಬರೆಯುತ್ತಾ ಇದ್ದೆ. ಏಳನೇ ತರಗತಿಯಲ್ಲಿ ನಮ್ಮ ಸರ್ಕಾರಿ ಶಾಲೆಯಿಂದ ಇನ್‌ಸ್ಪೈರ್‌ ಅವಾರ್ಡ್‌ಗೆ ಪ್ರಾಜೆಕ್ಟ್ ವಿಭಾಗದಲ್ಲಿ ಆಯ್ಕೆಯಾಗಿ ರಾಷ್ಟ್ರ ಮಟ್ಟಕ್ಕೆ ದೆಹಲಿಯವರೆಗೂ ಹೋಗಿ ಬಂದೆ. ಎಂಟನೇ ತರಗತಿಗೆ ಬಂದಾಗ ನನ್ನ ಬಿಡಿಬಿಡಿ ಲಲಿತ ಪ್ರಬಂಧಗಳನ್ನೆಲ್ಲ `ಒಂದು ಚಂದ್ರನ ತುಂಡು' ಪುಸ್ತಕವಾಗಿ ಪ್ರಕಟಿಸಿದ್ದಾಯ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ