`ಕೊರೊನಾ' ಹೆಸರಿನ ಮಹಾಘಾತುಕ ರೋಗ ಚೀನಾದಲ್ಲಿ ಜನ್ಮತಳೆದು, ವಿಶ್ವದ ಬಹುತೇಕ ಎಲ್ಲ ದೇಶಗಳನ್ನು ಕಂಗೆಡಿಸಿಬಿಟ್ಟಿತು.

ಚೀನಾ, ಇಟಲಿ, ಸ್ಪೇನ್‌, ಅಮೆರಿಕ, ಜರ್ಮನಿ ಮುಂತಾದ ದೇಶದಲ್ಲಿ ಕೊರೊನಾ ರುದ್ರ ನರ್ತನವನ್ನೇ ಮಾಡಿತು. ಭಾರತದಲ್ಲೂ ಅದು ತನ್ನ ಕಬಂಧ ಬಾಹುಗಳನ್ನು ಚಾಚಲು ಆರಂಭಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಲಾಕ್‌ ಡೌನ್‌ ಮಾಡುವ ಮೂಲಕ ಅದರ ಪ್ರಸರಣ ತಡೆಯಲು ಪ್ರಯತ್ನ ಮಾಡಿತು.

ಲಾಕ್‌ ಡೌನ್‌ ನಂತರ ಅಂದರೆ ದೈನಂದಿನ ಚಟುವಟಿಕೆಗಳು ಶುರುವಾದವು ಬಳಿಕ ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮ್ಮ ಆಸುಪಾಸಿನ ಪರಿಸರ, ಮನೆಗಳನ್ನು ನೈರ್ಮಲ್ಯದಿಂದ ಇಟ್ಟುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಮನೆಯವರನ್ನೆಲ್ಲ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಬಾಹ್ಯ ಪರಿಸರದ ಸ್ವಚ್ಛತೆ ಹೇಗೆ?

ಕೊರೊನಾ ಹಾಳಿ ಶುರವಾದ ಬಳಿಕ ಜನರಲ್ಲಿ ಹಿಂದೆಂದೂ ಇಲ್ಲದಷ್ಟು ಸ್ವಚ್ಛತೆ ಹಾಗೂ ಆರೋಗ್ಯದ ಬಗೆಗಿನ ಕಾಳಜಿ ಬಂದುಬಿಟ್ಟಿದೆ. ಇದು ಒಳ್ಳೆಯ ಬೆಳವಣಿಗೆ ಕೂಡ. ಕಾಲರಾ, ಮಲೇರಿಯಾ ಮುಂತಾದ ರೋಗಗಳ ಉಪಟಳವನ್ನು ತಡೆಯಲು ಇದು ನೆರವಾಗುತ್ತದೆ. ನಾವು ಬಾಹ್ಯ ಸ್ವಚ್ಛತೆ ಹೇಗೆ ಕೈಗೊಳ್ಳಬೇಕು ಎನ್ನುವುದನ್ನು ಗಮನಿಸಿ :

ಮನೆ ಮುಂದೆ ಚರಂಡಿ ಇದ್ದರೆ, ಅಲ್ಲಿ ಸರಾಗವಾಗಿ ನೀರು ಹರಿದುಹೋಗುವಂತೆ ನೋಡಿಕೊಳ್ಳಬೇಕು. ನೀರು ಒಂದೇ ಕಡೆ ನಿಂತರೆ ಪಾಚಿ ಕಟ್ಟಿ ಸೊಳ್ಳೆಗಳ ತಾಣವಾಗಬಹುದು.

ನಿಮ್ಮ ಮನೆ ಮಂದೆ ಅಥವಾ ಮಹಡಿ ಮೇಲೆ ತ್ಯಾಜ್ಯ ವಸ್ತುಗಳು ಹಾಗೆಯೇ ಇದ್ದರೆ ಅದರಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳು ನಿಮಗೆ ತೊಂದರೆ ಕೊಡಬಹುದು. ಹಾಗಾಗಿ ಬೇಡದ ವಸ್ತುಗಳನ್ನು ಶೀಘ್ರ ವಿಲೇವಾರಿ ಮಾಡಿಬಿಡಿ.

ನಿಮ್ಮ ಮನೆ ಮುಂದೆ ಮರವಿದ್ದರೆ ಅದರ ಎಲೆಗಳು ಬಿದ್ದು ಕಸ ಆಗುತ್ತಿದ್ದರೆ, ಅದನ್ನು ಸಂಗ್ರಹಿಸಿ ಆಗಾಗ ವಿಲೇವಾರಿ ಮಾಡುತ್ತಾ ಇರಿ. ಆದರೆ ಯಾವುದೇ ಕಾರಣಕ್ಕೂ ಕಸದ ಗುಡ್ಡೆಗೆ ಬೆಂಕಿ ಹಚ್ಚಬೇಡಿ. ಇದರಿಂದ ನಿಮ್ಮ ಮನೆಯ ಮಕ್ಕಳಿಗೆ ಹಾಗೂ ವೃದ್ಧರ ಉಸಿರಾಟಕ್ಕೆ ಸಮಸ್ಯೆ ಉಂಟಾಗಬಹುದು. ಅದು ಅಕ್ಕಪಕ್ಕದವರಿಗೂ ತೊಂದರೆ ಕೊಡಬಹುದು

ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಬಹುದು.

ಹಾಲು, ತರಕಾರಿ, ಹಣ್ಣು, ದಿನಸಿ ಮುಂತಾದವುಗಳ ಖರೀದಿಗೆ ಹೊರಗಡೆ ಹೋದಾಗ ಮುಖಕ್ಕೆ ಮಾಸ್ಕ್ ಧರಿಸಿ ಹೋಗಿ. ಅಲ್ಲಿ ವ್ಯರ್ಥ ಮಾತುಕತೆಗೆ ಅವಕಾಶ ಕೊಡದೇ ಬೇಗ ಖರೀದಿ ಮುಗಿಸಿಕೊಂಡು ಬನ್ನಿ. ರೋಗಾಣುಗಳು ಯಾವಾಗ, ಯಾರಿಂದ, ಹೇಗೆ ಪಸರಿಸಬಹುದೊ ಹೇಳಲು ಆಗದು. ಆದಷ್ಟೂ ಜಾಗೃತಿ ವಹಿಸಿ.

ಹಣ್ಣು ತರಕಾರಿಗಳನ್ನು ಮನೆಗೆ ತಂದ ಬಳಿಕ ಕಲ್ಲುಪ್ಪು ಹಾಕಿದ ನೀರಲ್ಲಿ ಸ್ವಚ್ಛಗೊಳಿಸಿಯೇ ಒಳಗೆ ತೆಗೆದುಕೊಂಡು ಹೋಗಿ. ಅದೇ ರೀತಿ ಹಾಲಿನ ಪ್ಯಾಕೆಟ್‌ಗಳನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು.

ಮನೆಯಿಂದ ಹೊರಗೆ ಯಾವುದಾದರೂ ಕಾರ್ಯಕ್ರಮ ಅಂದರೆ ನಿಶ್ಚಿತಾರ್ಥ, ಮದುವೆ, ನಾಮಕರಣ, ಬರ್ಥ್‌ ಡೇ ಮುಂತಾದವುಗಳಲ್ಲಿ ಭಾಗವಹಿಸುವಿಕೆ ಅನಿವಾರ್ಯವಿದ್ದರಷ್ಟೇ ಹೋಗಿ. ಅದರಲ್ಲೂ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಬಹಳ ಎಚ್ಚರ ವಹಿಸಿ.

ಹೊರಗಿನಿಂದ ಮನೆಗೆ ಬಂದಾಗ

ನಾವು ದಿನ ಕೆಲಸ ಕಾರ್ಯಗಳ ನಿಮಿತ್ತ ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಕಾರ್ಯಸ್ಥಳದಲ್ಲಿ ಸ್ವಚ್ಛತೆ ಕೈಗೊಳ್ಳುವುದು ಅತ್ಯವಶ್ಯಕ. ಅಲ್ಲಿಂದ ಮನೆಗೆ ಬಂದ ನಂತರ ಕೂಡ ಸ್ವಚ್ಛತೆಗೆ ಅಷ್ಟೇ ಆದ್ಯತೆ ಕೊಡಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ