ಪಿಂಜೋರ್‌ ಎಂತಹ ಒಂದು ಸುಂದರ ಉಡುಗೊರೆ ಎಂದರೆ ಅಲ್ಲಿ ಇತಿಹಾಸ ತನ್ನದೇ ಆದ ದೃಷ್ಟಿ ಬೀರುತ್ತಿರುವುದು ಗೋಚರಿಸುತ್ತದೆ. ನಿಸರ್ಗ ಅಲ್ಲಿ ಉಯ್ಯಾಲೆ ಆಡುತ್ತಿರುವಂತೆ, ಹಾಡು ಗುನುಗುನಿಸುತ್ತಿರುವಂತೆ ಭಾಸವಾಗುತ್ತದೆ.

ಔರಂಗ್‌ಜೇಬ್‌ನ ಚಿಕ್ಕಪ್ಪನ ಮಗ ಫಿದಾಯಿಖಾನ್‌ ಇದರ ಬಗ್ಗೆ ಪರಿಕಲ್ಪನೆ ಮಾಡಿಕೊಂಡಿದ್ದ. ಪ್ರವಾಸಿ ಸ್ಥಳಗಳು ತಮ್ಮ ವಿಶೇಷತೆಯಿಂದಾಗಿ ಗಮನಸೆಳೆಯುತ್ತವೆ. ಅದರಲ್ಲಿ ಐತಿಹಾಸಿಕತೆ ಏನಾದರೂ ಸೇರ್ಪಡೆಗೊಂಡಿದ್ದರೆ, ಅದರ ಮಹತ್ವ ಮತ್ತು ಆಕರ್ಷಣೆ ಇನ್ನಷ್ಟು ಹೆಚ್ಚುತ್ತದೆ.

ಉತ್ತರ ಭಾರತದಲ್ಲಿ ಅನೇಕ ಐತಿಹಾಸಿಕ ಮಹತ್ವದ ಸ್ಥಳಗಳಿವೆ. ಅದರಲ್ಲಿ ಪಿಂಜೋರ್‌ ಗಾರ್ಡನ್‌ ಮೊಘಲ್ ವಾಸ್ತುಶೈಲಿಯ ಒಂದು ಅಪ್ರತಿಮ ಉದಾಹರಣೆ ಎಂದೇ ಹೇಳಬಹುದು. ಈಗ ಅದನ್ನು `ಮಹಾರಾಜಾ ಆಫ್‌ ಪಟಿಯಾಲಾ ಯಾದೀಂದ್ರ' ಎಂದು ಕರೆಯಲಾಗುತ್ತದೆ. ಇದು ಚಂಡೀಗ್‌ ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಚಂಡೀಗಡ್‌ನಿಂದ 23 ಕಿ.ಮೀ. ದೂರದಲ್ಲಿ ಈ ಸುಂದರ ಉದ್ಯಾನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುತ್ತದೆ.

ಹೀಗೆ ರೂಪುಗೊಂಡಿತು ಉದ್ಯಾನ!

17ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಮೊಘಲರ ಆಡಳಿತ ಇತ್ತು. ಆಗಿನ ಔರಂಗ್‌ಜೇಬ್‌ ಮೊಘಲ್ ದೊರೆಯಾಗಿದ್ದ. ಆತನ ಚಿಕ್ಕಪ್ಪನ ಮಗ ಫಿದಾಯಿಖಾನ್‌  ಅತ್ಯುತ್ತಮ ವಾಸ್ತುತಜ್ಞನಾಗಿದ್ದ. ಅವನಿಗೆ ಈ ಒಂದು ಉದ್ಯಾನದ ಪರಿಕಲ್ಪನೆ ಮೂಡಿತ್ತು. ಮೊಘಲ್ ವಾಸ್ತು ವಿಧಾನದಲ್ಲಿ ನಿರ್ಮಾಣಗೊಂಡ ಪಿಂಜೋರ್‌ ಗಾರ್ಡನ್‌ನ ಹೆಸರು ಅಲ್ಲಿದ್ದ `ಪಿಂಜೋರ್‌' ಹೆಸರಿನ ಊರಿನಿಂದಾಗಿ ಬಂದಿತ್ತು.

1658-1707ರ ಅವಧಿಯಲ್ಲಿ ಈ ಉದ್ಯಾನದ ನಿರ್ವಹಣೆ ಕಾರ್ಯ ಸರಿಯಾಗಿ ನಡೆಯದೇ ಇದ್ದುದರಿಂದ ಅದು ದಟ್ಟಾರಣ್ಯದ ಸ್ವರೂಪ ಪಡೆದುಕೊಂಡಿತು. ಅದೇ ಸಂದರ್ಭದಲ್ಲಿ ಪಟಿಯಾಲಾದ ಮಹಾರಾಜ ಯಾದೀಂದ್ರನ ದೃಷ್ಟಿ ಈ ಉದ್ಯಾನದ ಮೇಲೆ ಬಿತ್ತು. ಅವನು ಆ ಉದ್ಯಾನದ ಹೆಸರನ್ನು `ಯಾದೀಂದ್ರ ಗಾರ್ಡನ್‌' ಎಂದಿಟ್ಟ. ಆದರೆ ಈಗಲೂ ಜನರು ಈ ಉದ್ಯಾನವನ್ನು `ಪಿಂಜೋರ್‌ ಗಾರ್ಡನ್‌' ಎಂದೇ ಕರೆಯುತ್ತಾರೆ. ಗಾರ್ಡನ್‌ನ ನಿರ್ವಹಣೆ ಈಗ ಹರಿಯಾಣ ಸರ್ಕಾರ ನೋಡಿಕೊಳ್ಳುತ್ತಿದೆ.

ಪಿಂಜೋರ್‌ ಗಾರ್ಡನ್‌ ವಾಸ್ತುಕಲೆಯ ಪ್ರಕಾರ ಒಂದು ವಿಶಿಷ್ಟ ನಮೂನೆಯಾಗಿದೆ. ಉದ್ಯಾನದ ಪ್ರವೇಶದ್ವಾರ ಚಂಡೀಗರ್-ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯ ಕಡೆಗೆ ಇದೆ. ಪ್ರವೇಶ ದ್ವಾರದ ವಿನ್ಯಾಸ ಮೊಘಲ್ ರಾಜಸ್ತಾನಿ ವಾಸ್ತುಶಿಲ್ಪದ ಸಂಗಮದಂತಿದೆ. ಅದರ ಭಾರಿ ಬಾಗಿಲನ್ನು ತೆಗೆಯುವುದು ಕಷ್ಟದ ಕೆಲಸವೇ ಸರಿ. ಒಳಗೆ ಹೋಗುತ್ತಿದ್ದಂತೆ ನಾವು ಯಾವುದೊ ಕಿನ್ನರಲೋಕದಲ್ಲಿ ಪ್ರವೇಶಿಸಿದಂತೆ ಅನುಭವಾಗುತ್ತದೆ.

ಕಣ್ಣುಗಳಿಗೆ ತಂಪು ಅನುಭೂತಿ ನೀಡುವ ಇದು ರಾಷ್ಟ್ರೀಯ ಹೆದ್ದಾರಿ 23ರಲ್ಲಿ ಚಂಡೀಗರ್ ನಿಂದ 22 ಕಿ.ಮೀ. ಹಾಗೂ ಪಂಚಕುಲಾದಿಂದ 15 ಕಿ.ಮೀ. ದೂರದಲ್ಲಿರುವ ಈ ಐತಿಹಾಸಿಕ ಉದ್ಯಾನ ಹಲವು ಮೇಳಗಳಿಗೂ ಹೆಸರುವಾಸಿ.

ಪಿಂಜೋರ್‌ ಗಾರ್ಡನ್‌ 100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಇಲ್ಲಿ ಆಗಮಿಸುವುದರ ಮೂಲಕ ಪ್ರವಾಸಿಗರು, ಮೈಮರೆತು ಪ್ರಕೃತಿಯ ಆಸ್ವಾದನೆಯಲ್ಲಿ ಮಗ್ನರಾಗಿಬಿಡುತ್ತಾರೆ. ಉದ್ಯಾನದ ಹಸಿರು ಹುಲ್ಲಿನ ಮೇಲೆ ಕುಳಿತು ಕುಟುಂಬ ಸಮೇತ ಊಟ ಮಾಡುವ ಮಜವೇ ಬೇರೆಯಾಗಿರುತ್ತದೆ. ಹಲವು ಸಿನಿಮಾಗಳಲ್ಲೂ ಈ ಉದ್ಯಾನದ ಚಿತ್ರೀಕರಣ ಪ್ರಮುಖ ಆಕರ್ಷಣೆಯಾಗಿದೆ.

ಉದ್ಯಾನದ ನಟ್ಟನಡುವೆ ಅಳವಡಿಸಲಾಗಿರುವ ಕಾರಂಜಿಗಳ ಸಾಲು ಚಮತ್ಕಾರಿ ಪ್ರಭಾವ ಬೀರುತ್ತವೆ. ಉದ್ಯಾನದಲ್ಲಿ ಬಹಳಷ್ಟು ಜನರು ತಂಪಿನ ಅನುಭೂತಿ ಮಾಡಿಕೊಳ್ಳಲು ಕಾರಂಜಿಯ ತುಂತುರು ಹನಿಗಳಿಗೆ ಮೈಯೊಡ್ಡಿ ನಿಂತಿರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ