ನವರಾತ್ರಿಯ ಸಂದರ್ಭದಲ್ಲಿ ನಳಿನಿಯ ಮನೆ ಪೂಜೆಯ ಸಂಭ್ರಮದಿಂದ ಕೂಡಿರುತ್ತದೆ. ಆ 9 ದಿನಗಳೂ ಅವಳು ಉಪವಾಸ ವ್ರತ ಕೈಗೊಂಡು ಪೂಜೆ ನಡೆಸುತ್ತಾಳೆ. ದೇವಸ್ಥಾನಕ್ಕೆ ಹೋಗಿ ಬರುತ್ತಾಳೆ. ನವಮಿಯಂದು ಕನ್ಯಾಪೂಜೆ ನೆರವೇರಿಸುತ್ತಾಳೆ. ಇಷ್ಟೆಲ್ಲವನ್ನೂ ಹೇಗೆ ಮಾಡುವೆ ಎಂದು ಪ್ರಶ್ನಿಸಲು ಅವಳು ಬಹಳ ಶ್ರದ್ಧೆಯೊಡನೆ ಹೇಳುತ್ತಾಳೆ, ``ದೇವಿಯ ಶಕ್ತಿಯಿಂದ ಎಲ್ಲ ಸಾಧ್ಯವಾಗುತ್ತದೆ. ನನ್ನ ಕುಟುಂಬದ ಸುಖಶಾಂತಿಗಾಗಿ ನಾನು ಇದನ್ನೆಲ್ಲ ಮಾಡುತ್ತೇನೆ.''

ವಾಸ್ತವವಾಗಿ ಅವಳ ಮನೆಯಲ್ಲಿ ನಿತ್ಯ ಪತಿಪತ್ನಿಯರ ನಡುವೆ ಜಗಳ ನಡೆಯುತ್ತಿರುತ್ತದೆ. ಕೆಲವೊಮ್ಮೆ ನೆರೆಯವರು ಅಥವಾ ನೆಂಟರು ಬಂದು ಸಮಾಧಾನ ಹೇಳುವ ಮಟ್ಟಿಗೆ ಜಗಳದ ಪ್ರಕೋಪವಿರುತ್ತದೆ.

ನಳಿನಿಗೆ ಇಬ್ಬರು ಗಂಡುಮಕ್ಕಳಿದ್ದು, ಅವರು ತಂದೆ ತಾಯಿಯರ ಕಲಹದಿಂದ ಬೇಸತ್ತಿದ್ದಾರೆ, ``ಮನೆಗೆ ಬಂದಾಗೆಲ್ಲ ಅಪ್ಪ ಅಮ್ಮ ಸಣ್ಣ ಸಣ್ಣ ವಿಷಯಕ್ಕೂ ವಾದ ಮಾಡುತ್ತಾ ಇರುತ್ತಾರೆ. ಇವರ ಜಗಳವನ್ನು ನೋಡಿ ಆದಷ್ಟೂ ಮನೆಯಲ್ಲಿ ಇಲ್ಲದಿರುವುದೇ ಒಳ್ಳೆಯದು ಎನಿಸುತ್ತದೆ,'' ಎನ್ನುತ್ತಾರೆ.

ಗೀತಾಳ ಪತಿ ತೀರಿಕೊಂಡಾಗ ಮಗ ವಿಶಾಲ್‌ 8ನೇ ತರಗತಿಯಲ್ಲಿ ಓದುತ್ತಿದ್ದನು. ತಂದೆಯನ್ನು ಬಹಳವಾಗಿ ಹಚ್ಚಿಕೊಂಡಿದ್ದ ಅವನಿಗೆ ಅವರ ಮೃತ್ಯುವಿನ ನಂತರ ಒಂಟಿತನ ಕಾಡಲಾರಂಭಿಸಿತು. ಗೀತಾ ಬ್ಯಾಂಕ್‌ಉದ್ಯೋಗಿ. ಅವಳು ದಿನ ಬ್ಯಾಂಕಿಗೆ ಹೋಗುವ ಮುನ್ನ 2 ಗಂಟೆ ಮತ್ತು ಬ್ಯಾಂಕ್‌ನಿಂದ ಬಂದ ನಂತರ 1 ಗಂಟೆಯ ಕಾಲ ಪೂಜೆ ಮಾಡುತ್ತಿದ್ದಳು. ಅವಳ ಪೂಜಾ ಕೆಲಸ ಮತ್ತು ಮನೆಗೆಲಸವೆಲ್ಲ ಮುಗಿಯುವ ವೇಳೆಗೆ ಮಗ ಮಲಗಿಬಿಟ್ಟಿರುತ್ತಿದ್ದನು. ಹೀಗಾಗಿ ಅವಳಿಗೆ ಮಗನೊಡನೆ ಕೇವಲ ಔಪಚಾರಿಕ ಮಾತುಗಳನ್ನಾಡಲು ಮಾತ್ರ ಸಾಧ್ಯವಾಗುತ್ತಿತ್ತು. ತನ್ನ ಮನಸ್ಸಿನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾಗದ ಕಾರಣದಿಂದ ವಿಶಾಲ್ ಕ್ರಮೇಣ ಡಿಪ್ರೆಶನ್‌ಗೆ ಗುರಿಯಾದ. ಈಗ ಗೀತಾ ಮಗನನ್ನು ಡಾಕ್ಟರ್‌ಬಳಿಗೆ ಕರೆದೊಯ್ಯುತ್ತಿದ್ದಾಳೆ.

ಮೂಢನಂಬಿಕೆಯ ಪರಾಕಾಷ್ಠೆ

ಗಾಯತ್ರಿ ಸ್ನಾನ ಪೂಜೆ ಮುಗಿಸುವವರೆಗೆ ನೀರನ್ನು ಸಹ ಕುಡಿಯುವುದಿಲ್ಲ. ಕೆಲವು ಸಲ ಮನೆಗೆಲಸ ಮಾಡಿ ಪೂಜೆ ಕೆಲಸ ಮುಗಿಯುವಾಗ ಮಧ್ನಾಹ್ನ ಆಗಿಬಿಡುತ್ತದೆ. ಅವಳ ಪತಿ ಎಷ್ಟೋ ಸಲ ಅವಳಿಗೆ ತಿಳಿಸಿ ಹೇಳಿದ್ದಾರೆ, ``ತಿಂಡಿ ತಿನ್ನದೆ ಮಧ್ಯಾಹ್ನದರೆಗೂ ಇರುವುದು ಸರಿಯಲ್ಲ. ನಿನ್ನ ಆರೋಗ್ಯ ಹಾಳಾಗುತ್ತದೆ.''

ಆದರೆ ಗಾಯತ್ರಿ ಆ ಮಾತನ್ನು ಲಕ್ಷಿಸಲೇ ಇಲ್ಲ. ಒಂದು ದಿನ ತಲೆ ಸುತ್ತಿ ಬಿದ್ದುಬಿಟ್ಟಳು. `ಬಹಳ ಹೊತ್ತು ಹಸಿದಿರುವುದರಿಂದ ಬಿಪಿ ಕಡಿಮೆಯಾಗಿಬಿಟ್ಟಿದೆ,' ಎಂದು ಡಾಕ್ಟರ್‌ ಹೇಳಿದರು. ಇಷ್ಟೆಲ್ಲ ಆದರೂ ಗಾಯತ್ರಿ ತನ್ನ ಪದ್ಧತಿಯನ್ನು ಬಿಡಲಿಲ್ಲ. ಇದರಿಂದಾಗಿ ಮನೆಯಲ್ಲಿ ಆ ಬಗ್ಗೆ ಜಗಳ ನಡೆಯುತ್ತಿರುತ್ತದೆ.

ಪ್ರತಿಭಾಳ ಪತಿಗೆ ಲಿವರ್‌ ಸಿರೋಸಿಸ್‌ ಕಾಯಿಲೆಯಾಗಿತ್ತು. 1 ತಿಂಗಳ ಚಿಕಿತ್ಸೆಯ ನಂತರ ಡಾಕ್ಟರ್‌ ಕೈ ಚೆಲ್ಲಿದರು. ಆಗ ಪ್ರತಿಭಾ ಜ್ಯೋತಿಷಿಗಳಿಗೆ ಮೊರೆ ಹೋದಳು. ಅವರು, ``ಮಹಾ ಮೃತ್ಯುಂಜಯ ಹೋಮ ಮಾಡಿದರೆ ಪ್ರಾಣ ಉಳಿಸಬಹುದು,'' ಎಂದು ಸಲಹೆಯಿತ್ತರು.

ಆಶೆಯ ಕಿರಣ ಕಂಡಕೂಡಲೇ ಪ್ರತಿಭಾ ಹಿಂದೆ ಮುಂದೆ ಯೋಚಿಸದೆ ಜ್ಯೋತಿಷಿಗೆ 25,000 ರೂ. ಕೊಟ್ಟಳು. ಆದರೆ ಮರುದಿನವೇ ಅವಳ ಪತಿ ವಿಧಿವಶರಾಗಿಬಿಟ್ಟರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ