ಭದ್ರಕಾಳಿಯಾಗಿ ನಿಂತು ರಕ್ಕಸನ ಸಂಹಾರ ಮಾಡಿದ್ದ ಪಿಎಸ್ಐ ಅನ್ನಪೂರ್ಣ ಅವರ ಕೆಲಸಕ್ಕೆ ಖುದ್ದು ಸಚಿವರೇ ಸಲ್ಯೂಟ್ ಹೊಡೆದಿದ್ದಾರೆ. ಕೀಚಕನ ವಧೆ ಮಾಡಿದ ಈ ಲೇಡಿ ಸಿಂಗಂ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಗಟ್ಟಿಗಿತ್ತಿ ಅನ್ನಪೂರ್ಣೇಶ್ವರಿ ಚೆನ್ನಮ್ಮನ ನಾಡಿನ ಸಾಹಸಿ, ದಿಟ್ಟತನಕ್ಕೇ ಹೆಸರಾಗಿರೋ ಮಣ್ಣಿನ ಮಗಳು ಎಂದು ಜನ ಕೊಂಡಾಡುತ್ತಿದ್ದಾರೆ.
ತನ್ನ ಮಕ್ಕಳಿಗೆ, ತಾಯಿಗೆ, ತಾಯ್ನಾಡಿಗೆ ಅನ್ಯಾಯವಾದಾಗ ಹೆಣ್ಣೇನೇದಾರೂ ಸಿಡಿದೆದ್ದು ನಿಂತರೆ ಏನು ಬೇಕಾದರೂ ಮಾಡಬಲ್ಲಳು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದೀಗ ಕೀಚಕನೊಬ್ಬನ ಸಂಹಾರ ನಡೆದಿರೋದು ಮತ್ತೆ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ಲಕ್ಷ್ಮಿ ರಾಣಿಬಾಯಿ ಯಂಥ ಸಾಹಸಿಮಣಿಗಳ ಶೌರ್ಯ್ರವನ್ನು ಮತ್ತೆ ನೆನಪಿಸುತ್ತಿದೆ. ಅಷ್ಟಕ್ಕೂ ಕೂಸಿನ ಉಸಿರು ನಿಲ್ಲಿಸಿದ್ದ ಪಾಪಿಯ ಸಂಹಾರ ಮಾಡಿದ ವೀರನಾರಿ ಅನ್ನಪೂರ್ಣ ಯಾರು ಎಂಬ ಪ್ನಶ್ನೆ ಎಲ್ಲರಲ್ಲೂ ಮೂಡಿದೆ.
ಚೆನ್ನಮ್ಮನ ನಾಡಿನ ಸಾಹಸಿ
ಕಿತ್ತೂರು ರಾಣಿ ಚೆನ್ನಮ್ಮ.. ಕೆಂಪುಮೂತಿಗಳ ವಿರುದ್ಧ ಕಂದಾಯದ ಕದನ ಸಾರಿದ ದಿಟ್ಟ ಹೆಣ್ಣು. ಬ್ರಿಟೀಷರ ವಿರುದ್ದ ಸೆಣಸಾಡಿ ಸ್ವಂತಂತ್ರ ನಾಡಿಗಾಗಿ ಪ್ರಾಣ ತೆತ್ತ ವೀರವನಿತೆ.. ಇಂಥಾ ಕಿಚ್ಚಿನ ಮಣ್ಣಲ್ಲೇ ಹುಟ್ಟಿದ ಸಾಹಸಿ, ಕೊಲೆಗಡುಕ ರಿತೇಶ್ ಬೆನ್ನಿಗೆ ಗುಂಡಿಟ್ಟ, ಹುಬ್ಬಳ್ಳಿಯ ಅಶೋಕ ನಗರದ ಪಿಎಸ್ಐ ಅನ್ನಪೂರ್ಣ.
ಲೇಡಿ ಸಿಂಗಂ ಅನ್ನಪೂರ್ಣ!
ಬಾಲಕಿ ಕೊಲೆ ಆರೋಪಿಗೆ ಗುಂಡಿಕ್ಕಿರೋ ಪಿಎಸ್ಐ ಅನ್ನಪೂರ್ಣ ಚೆನ್ನಮ್ಮನ ನಾಡು ಬೆಳಗಾವಿಯ ಗುಜನಹಟ್ಟಿ ಗ್ರಾಮದಲ್ಲಿ ಹುಟ್ಟಿದವರು. ಧಾರವಾಡದ ಕೃಷಿ ವಿವಿಯಲ್ಲಿ MSC ಮುಗಿಸಿದ್ದ ಅನ್ನಪೂರ್ಣ ರೈತಾಪಿ ಕುಟುಂಬದ ಮಗಳಾಗಿ ಪಿಎಸ್ಐಯಾಗಿ ಆಯ್ಕೆಯಾಗಿದ್ರು. 2018 ರಲ್ಲಿ ಅನ್ನಪೂರ್ಣ ಪಿಎಸ್ಐ ಸೇವೆಗೆ ಸೇರ್ಪಡೆಯಾಗಿದ್ರು. ಹುಬ್ಬಳ್ಳಿಯ ಅಶೋಕ ನಗರದಲ್ಲಿ ಕಾರ್ಯ ನಿರ್ವಹಿಸ್ತಿರೋ ಅನ್ನಪೂರ್ಣ 2024 UPSC ಪರೀಕ್ಷೆ ಬರೆದು ಪ್ರಿಲಿಮ್ಸ್ ಕೂಡ ಕ್ಲಿಯರ್ ಮಾಡಿದ್ದಾರೆ.
ಇದೇ ಪಿಎಸ್ಐ ಅನ್ನಪೂರ್ಣ ಅವರ ಬಗ್ಗೆ ಇದೀಗ ರಾಜ್ಯದ ಮನೆ ಮನೆಗಳಲ್ಲಿ ಚರ್ಚೆಯಾಗುತ್ತಿದೆ. ಈ ದಿಟ್ಟ ಮಹಿಳಾ ಅಧಿಕಾರಿಣಿಯನ್ನ ಜನರು ತಮ್ಮ ಮನೆ ಮಗಳಂತೆ ನೋಡುತ್ತಿದ್ದಾರೆ. ಅನ್ನಪೂರ್ಣ ಅವರಿಗೆ ಮುಂದಿನ ತಿಂಗಳು ಮದುವೆ ಕೂಡ ಫಿಕ್ಸ್ ಆಗಿದೆಯಂತೆ. ಹೀಗಿರುವಾಗ್ಲೂ ಅನ್ನಪೂರ್ಣ ತಮ್ಮ ಪ್ರಾಣ ಪಣಕ್ಕಿಟ್ಟು ಜೀವ ಬಿಟ್ಟ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿದ್ದಾರೆ.
ಮುಂದಿನ ತಿಂಗಳಲ್ಲೇ ಮದುವೆ
ಚೆನ್ನಮ್ಮನ ನೆಲದವರಾಗಿರುವ ಅನ್ನಪೂರ್ಣ ಅವರಿಗೆ ಶೌರ್ಯ ಎನ್ನುವುದು ರಕ್ತದಲ್ಲಿಯೇ ಬಂದಿದೆ. ಮುಂದಿನ ತಿಂಗಳು ಅವರ ಮದುವೆ ನಿಗದಿಯಾಗಿದ್ದು, ವೈಯಕ್ತಿಕ ಜೀವನವನ್ನೂ ಲೆಕ್ಕಿಸದೇ ಆಕೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಹಂತಕನ ಸಂಹಾರ ಮಾಡಿದ್ದಾರೆ. ಬಾಲಕಿ ಕೊಲೆಯಾದಾಗ ಆಸ್ಪತ್ರೆಯಲ್ಲಿ ಮಗು ಮುಖವನ್ನು ನೋಡಿ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕಿದ್ದರು. ಅಣ್ಣಪೂರ್ಣ ಅವರ ಕರುಳು ಕಿವುಚಿದಂತಾಗಿತ್ತು. ಅಲ್ಲದೇ ಮಗುವನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿ, ತಕ್ಕ ಕ್ರಮ ಕೈಗೊಳ್ಳುವುದಾಗಿ ಶಪಥ ಮಾಡಿದ್ದರು. ಕಾಕಾತಾಳಿಯವೆಂಬಂತೆ ಅನ್ನಪೂರ್ಣ ಹಾರಿಸಿದ ಗುಂಡಿಗೆ ರಿತೇಶ್ ಬಲಿಯಾಗಿದ್ದಾನೆ. ಆದ್ರೆ, ಪಿಎಸ್ಐ ಹಾರಿಸಿದ ಗುಂಡು ಆತನ ಜೀವ ತೆಗೆಯುವ ಉದ್ದೇಶವಿರಲಿಲ್ಲ, ಬದಲಾಗಿ ಶರಣಾಗಲಿ ಅನ್ನೋ ಉದ್ದೇಶವಷ್ಟೇ ಇತ್ತು.