ಗರ್ಭಪಾತ : ಸರ್ಕಾರಿ ಹಸ್ತಕ್ಷೇಪ ಏಕೆ?

ಮೆಡಿಕಲ್ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಇನ್ನಷ್ಟು ಸರಳಗೊಳಿಸಬೇಕು ಹಾಗೂ ಗರ್ಭಿಣಿಯ ಕಷ್ಟನಷ್ಟಗಳ ಬಗೆಗೂ ಯೋಚಿಸುವಂತಾಗಬೇಕು ಎಂದು ಸುಪ್ರೀಂಕೋಟ್‌ ಸಲಹೆ ನೀಡಿದೆ. ಈ ಸಲಹೆ ಚೆನ್ನಾಗಿದೆ. ಆದರೆ ಇಷ್ಟೇ ಹೇಳಿದರೆ ಸಾಲದು.

ವಾಸ್ತವದಲ್ಲಿ ಗರ್ಭಪಾತದ ಮೇಲೆ ಮಹಿಳೆಯರದ್ದೇ ಹಕ್ಕು ಇರಬೇಕು. ಗರ್ಭಪಾತ ಯಾವಾಗ ಮಾಡಿಸಿಕೊಳ್ಳಬೇಕು  ಎನ್ನುವುದನ್ನು ಮಹಿಳೆ ಹಾಗೂ ಆಕೆಯ ವೈದ್ಯರು ನಿರ್ಧರಿಸಬೇಕು. ಕೈಮೇಲೊಂದು ಗುಳ್ಳೆಯಾಗಿ ಅದು ಗ್ಯಾಂಗ್ರಿನ್‌ ಆಗುವುದೆಂಬ ಅಪಾಯ ಇದ್ದಾಗ, ಕೈ ಕತ್ತರಿಸುವ ನಿರ್ಧಾರವನ್ನು ರೋಗಿ ಹಾಗೂ ವೈದ್ಯರು ತೆಗೆದುಕೊಳ್ಳಬೇಕು. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಏಕೆ ಮಾಡಬೇಕು?

ಇತ್ತೀಚಿನ ವರ್ಷಗಳಲ್ಲಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ವೈದ್ಯರು ರೋಗಿಯ ಅನುಮತಿ ಪಡೆದು ಕ್ಯಾನ್ಸರ್‌ ನಿವಾರಣೆ ಮಾಡುತ್ತಾರೆ. ಇದರಲ್ಲಿ ಸರ್ಕಾರವನ್ನು ಕೇಳುವ ಪ್ರಶ್ನೆಯೇ ಉದ್ಭವಿಸದು. ಗರ್ಭಸ್ಥ ಶಿಶುವಿನ ಸ್ಥಿತಿ ಕೂಡ ಇದೇ ಆಗಿದೆ. ಅದು ಮಹಿಳೆಯ ಅಂಗವೇ ಹೊರತು ಸರ್ಕಾರದ್ದಲ್ಲ. ಕೇವಲ ಧಾರ್ಮಿಕ ಕಾರಣಗಳಿಗಾಗಿ ಸರ್ಕಾರ ಇದರಲ್ಲಿ  ಹಸ್ತಕ್ಷೇಪ ಮಾಡುತ್ತದೆ. ಬೇಡವಾದ ಗರ್ಭ ನಿವಾರಣೆ ಮಾಡುವುದು ಸಜೀವಹತ್ಯೆಯಲ್ಲ. ಅದು ಬೇಡವಾದ ತೊಂದರೆಯಿಂದ ಮುಕ್ತವಾಗುವವುದು.

ಮಕ್ಕಳಿಗಾಗಿ ಜನರು ಪರಿತಪಿಸುತ್ತಾರೆ. ಐವಿಎಫ್‌ನ ಉದ್ಯೋಗ ಇತ್ತೀಚಿನ ವರ್ಷಗಳಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಲಕ್ಷಾಂತರ ದಂಪತಿಗಳು ಮಗು ಪಡೆಯಲೆಂದು ಆಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಬಹಳಷ್ಟು ಜನ ಸ್ವಾಮಿಗಳು, ಸಾಧುಗಳು ಮತ್ತು ಮುಲ್ಲಾಗಳ ಆಶೀರ್ವಾದ ಪಡೆಯಲು ಹಿಂದೇಟು ಹಾಕುವುದಿಲ್ಲ. ವಾಸ್ತವದಲ್ಲಿ ತಂದೆ ಯಾರೇ ಆಗಿರಬಹುದು, ಆದರೆ ಹೆಸರು ಪತಿಯದ್ದೇ ಆಗಿರುತ್ತದೆ. ಬಂಜೆಯರನ್ನು ನಿಕೃಷ್ಟವಾಗಿ ಕಾಣುವಂತಹ ಸ್ಥಿತಿಯಲ್ಲಿ ಗರ್ಭದಲ್ಲಿರುವ ಭ್ರೂಣವನ್ನು ಕಾರಣವಿಲ್ಲದೆಯೇ ಯಾರಾದರೂ ಸಾಯಿಸಲು ಸಾಧ್ಯವೇ?

ಗರ್ಭಪಾತಕ್ಕೆ ಹಾಗೇನಾದರೂ ಮುಕ್ತ ಅನುಮತಿ ದೊರೆತುಬಿಟ್ಟರೆ, ಜನರು ಸಾವಿರಾರು ಸಂಖ್ಯೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗುತ್ತಾರೆ ಎಂದು ಯೋಚಿಸಬೇಡಿ. ಅಪವಾದ ಎಂಬಂತೆ ಅಂತಹ ಕೆಲವು ಘಟನೆಗಳು ಘಟಿಸಬಹುದು. 20 ವಾರಗಳ ಬಳಿಕ ಗರ್ಭಪಾತಕ್ಕೆ ಮುಂದಾದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚು. ಈ ಸಂಗತಿ ಗರ್ಭಿಣಿ ಹಾಗೂ ಡಾಕ್ಟರ್‌ ಇಬ್ಬರಿಗೂ ಚೆನ್ನಾಗಿ ತಿಳಿದಿರುತ್ತದೆ. ಗರ್ಭಪಾತ ಮಾಡಿಸುವುದು ಅನಿವಾರ್ಯ ಸಂದರ್ಭದಲ್ಲಿ ಮಾತ್ರ. ಮದುವೆಗೂ ಮುಂಚೆಯೇ ಗರ್ಭ ಧರಿಸಿದ್ದಲ್ಲಿ ಅಥವಾ ಬೇರೆ ಏನಾದರೂ ಸಮಸ್ಯೆ ಇದ್ದಲ್ಲಿ ಗರ್ಭಪಾತದ ನಿರ್ಧಾರ ಮಾಡುತ್ತಾರೆ. ಅದೂ ಕೂಡ 20 ವಾರಗಳ ಮುಂಚೆಯೇ ನಿರ್ಧಾರ ಕೈಗೊಳ್ಳಬೇಕು. 30ರಲ್ಲಿಯೇ ಆಗಿರಬಹುದು ಅಥವಾ 40ರಲ್ಲಿ, ಆ ಬಗ್ಗೆ ವೈದ್ಯರು ಅಥವಾ ಮಹಿಳೆಯೇ ನಿರ್ಧಾರ ಕೈಗೊಳ್ಳಲಿ. ಒಂದು ವೇಳೆ ಗರ್ಭಪಾತದ ಕಾರಣದಿಂದ ಗರ್ಭಿಣಿಯ ಸಾವು ಸಂಭವಿಸುವ ಸಾಧ್ಯತೆ ಇದ್ದಲ್ಲಿ ಅದರ ಹೊಣೆ ಕೂಡ ಅವರಿಬ್ಬರದ್ದೇ. ಹೊಟ್ಟೆಯಲ್ಲಿರುವ ಮಗು ಭೂಮಿಗೆ ಬಂದರೆ ಏನಾಗಬಹುದು ಎಂಬುದು ಮಹಿಳೆಗೆ ಗೊತ್ತಿರುತ್ತದೆ. ಆ ಮಗುವನ್ನು ಕಸದ ತೊಟ್ಟಿಯಲ್ಲಿ ಎಸೆಯುವುದು ಸಮಂಜಸವಲ್ಲ. ಆಪರೇಷನ್‌ ಟೇಬಲ್ ಮೇಲೂ ಅದರ ಅಂತ್ಯ ಆಗುವುದು ಸರಿಯಲ್ಲ.

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕಾರಣಗಳಿಂದಾಗಿ ನಿಗದಿತ ಅವಧಿಯ ಬಳಿಕ ಗರ್ಭಪಾತ ಮಾಡಿಸಬೇಕಿದ್ದಲ್ಲಿ ಸುಪ್ರೀಂಕೋರ್ಟ್‌ನ ಮೆಟ್ಟಿಲು ಏರಬೇಕಾಗುತ್ತದೆ. ಅದಕ್ಕಾಗಿ ಲಕ್ಷಾಂತರ ಕಾನೂನು ಖರ್ಚು ಬೇರೆ. ಅನುಮತಿ ದೊರೆತ ಬಳಿಕ ವೈದ್ಯಕೀಯ ಖರ್ಚು. ಇದೆಲ್ಲದರ ಔಚಿತ್ಯ ಏನು?

ವಾಸ್ತವದಲ್ಲಿ ಗರ್ಭಪಾತವನ್ನು ಅಪರಾಧದ ಶ್ರೇಣಿಯಲ್ಲಿ ಇರಿಸಲೇಬಾರದು. ಗರ್ಭಕ್ಕೆ ಮುಕ್ತಿ ಕೊಡಬೇಕು. `ಮಿಸ್‌ ಕ್ಯಾರೇಜ್‌’ ಹಾಗೂ ಮೆಡಿಕಲ್ ಟರ್ಮಿನೇಶನ್‌ನಲ್ಲಿ ಯಾವುದೇ ವ್ಯತ್ಯಾಸ ಇಲ್ಲ.

ಭೇದಭಾವ ಉಂಟು ಮಾಡುತ್ತಿರುವುದು ಧರ್ಮವೇ!

ವಿಶ್ವ ಹಿಂದೂ ಪರಿಷತ್‌ ಸಂಘಟನೆ ಯಾವಾಗಲೂ ಹಿಂದೂ ರಾಷ್ಟ್ರದ ಬಗ್ಗೆಯೇ ಮಾತನಾಡುತ್ತಿರುತ್ತದೆ. ಹಾಗೆಂದೇ ಅದು ಮುಸ್ಲಿಂ ಮತ್ತು ಕ್ರೈಸ್ತರಿಗೆ ಪುನಃ ಹಿಂದೂ ಧರ್ಮಿಗಳಾಗುವ ಸಲಹೆ ನೀಡುತ್ತಿರುತ್ತದೆ. ದೇಶದ ಶೇ.16-17ರಷ್ಟು ಮುಸ್ಲಿಂ ಮತ್ತು ಕ್ರೈಸ್ತರು (ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಉಳಿದ ಮುಸ್ಲಿಮರನ್ನು ಹೊರತುಪಡಿಸಿ) ಹೇಗೆ ಮರಳಿ ಬರುತ್ತಾರೆ ಮತ್ತು ಏಕೆ ಬರುತ್ತಾರೆ ಎಂಬುದರ  ಬಗ್ಗೆ ಹೇಳುವುದಿಲ್ಲ. ವಾಸ್ತವದಲ್ಲಿ ಅವರಿಗೆ ಅದರ ಬಗ್ಗೆ ಗೊತ್ತೂ ಇಲ್ಲ.

ಭಾರತೀಯ ಉಪಖಂಡದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮುಸ್ಲಿಮರು ಎಲ್ಲಿಂದ ಬಂದರು ಮತ್ತು ಮುಸ್ಲಿಂ ರಾಜರು ಎಲ್ಲರನ್ನೂ ಮುಸ್ಲಿಮರನ್ನಾಗಿ ಏಕೆ ಮಾಡಲಿಲ್ಲ ಎಂಬುದನ್ನು ಅವರಿಗೆ ತಿಳಿದುಕೊಳ್ಳುವ ಅಗತ್ಯ ಇಲ್ಲ. ವಿಶ್ವ ಹಿಂದೂ ಪರಿಷತ್‌ನಂತಹ ಸಂಘಟನೆಗಳ ದೃಷ್ಟಿಯಲ್ಲಿ ಮುಸ್ಲಿಂ ಹಾಗೂ ಕ್ರೈಸ್ತರು ಮೂಲತಃ ಹಿಂದೂಗಳು. ವಿಹಿಂಪ ಹಿಂದೂಗಳ ಮನಸ್ಸನ್ನು ಉದ್ರೇಕಗೊಳಿಸಿ `ಘರ್‌ ವಾಪಸಿ’ ಅಂದರೆ `ಮರಳಿ ಮನೆಗೆ’ ಅಭಿಯಾನಕ್ಕಾಗಿ ಚಂದಾ ಹಣ ಕೂಡಿಸಬೇಕೆನ್ನುವುದು ಅದರ ತಂತ್ರ. ಈ ಮೂಲಕ ತಮ್ಮ ಮುಖಂಡರು ಧರ್ಮಗುರುಗಳು, ಅರ್ಚಕರಿಗೆ ಸಿಗಬೇಕಾದ ಸವಲತ್ತು ಸದಾ ಸಿಗುತ್ತಿರಬೇಕು.

ಹಿಂದೂಗಳಲ್ಲಿ ಬ್ರಾಹ್ಮಣರು ತಮ್ಮದೇ ಆದ ರೀತಿಯಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಅವರು ಸಂಬಂಧ ಬೆಸೆಯುವುದು ತಮ್ಮದೇ ಕುಲಬಾಂಧವರೊಂದಿಗೆ. ಇದನ್ನು ಕಿಟಿ ಪಾರ್ಟಿಯಲ್ಲೂ ಕೂಡ ಕಾಣಬಹುದು. ವಿವಾಹಗಳಲ್ಲಿ ಸಾಮಾನ್ಯವಾಗಿ ಒಂದೇ ಜಾತಿಯವರು ಒಗ್ಗೂಡುತ್ತಾರೆ. ಸ್ನೇಹವನ್ನು ಕೂಡ ಜಾತಿ ನೋಡಿಯೇ ಮಾಡಲಾಗುತ್ತದೆ. ವೃತ್ತಿ ವ್ಯವಸಾಯದಲ್ಲಿ ಜಾತಿಯ ಬಗ್ಗೆ ಮರೆಯಾಗುತ್ತದೆ. ಆದರೆ ಮನಸ್ಸಿನ ಆಳದಲ್ಲಿ ಮಾತ್ರ ಅಲ್ಪಸಂಖ್ಯಾತ ಭಾವನೆ ಇದ್ದೇ ಇರುತ್ತದೆ.

ಪ್ರತಿಯೊಂದು ಧರ್ಮದಲ್ಲೂ ವಿಚ್ಛೇದನವಿದೆ. ಗಂಡನಿಂದ ಹೊಡೆತ ತಿನ್ನುವ ಪದ್ಧತಿ ಇದೆ. ಧರ್ಮ ಹುಡುಗಿಯರಿಗೆ ಸುರಕ್ಷತೆಯನ್ನು ನೀಡಲು ಸಾಧ್ಯವಾಗಿಲ್ಲ. ಅತ್ಯಾಚಾರಿಗಳು ಪ್ರತಿಯೊಂದೂ ಧರ್ಮದಲ್ಲೂ ಇದ್ದಾರೆ. ಶಿಕ್ಷಣದ ಮಟ್ಟ ಪ್ರತಿಯೊಂದು ಧರ್ಮದಲ್ಲಿ ಅವರವರ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿದೆ ಹೊರತು ಧಾರ್ಮಿಕ ಸಾಮಾಜಿಕ ನಿಯಮಗಳನ್ನಲ್ಲ. ಪಾರಂಪರಿಕ ಕಾನೂನುಗಳು ಏನೇ ಆಗಿರಬಹುದು, ಪ್ರತಿಯೊಂದು ಧರ್ಮದ ಯಾವೊಬ್ಬ ಮಹಿಳೆಯ ಕಡೆಯೂ ಹಣ ಇಲ್ಲವೇ ಇಲ್ಲ ಎಂದೆನ್ನಬಹುದು. ಹಾಗಾದರೆ ಮರಳಿ ಮನೆಗೆ ಏಕೆ?`ಮರಳಿ ಮನೆಗೆ’ ಇದು ಅಲೆಮಾರಿಗಳಿಗೆ ಸೂಕ್ತ. ಅವರು ಕೂಡ ಅಲೆದು ಅಲೆದು ಮತ್ತೆ ಅದೇ ಸ್ಥಿತಿಯಲ್ಲಿ ಇರಬೇಕೆಂದರೆ ವಾಪಸ್‌ ಏಕೆ ಬರಬೇಕು? ಒಂದು ಖುಷಿಯ ಸಂಗತಿಯೆಂದರೆ, ಈ ಚಿಕ್ಕಪುಟ್ಟ ಸಂಘಟನೆಗಳ ಮಾತನ್ನು ಸಾಮಾನ್ಯವಾಗಿ ನಿರಾಕರಣೆ ಮಾಡಲಾಗುತ್ತದೆ. ಒತ್ತಾಯಪೂರ್ವಕವಾಗಿ ಏನನ್ನೂ ಮಾಡಲಾಗುತ್ತಿಲ್ಲ.

ಜಗತ್ತಿನಲ್ಲಿ ಭೇದಭಾವ ಉಂಟು ಮಾಡುತ್ತಿರುವುದು ಧರ್ಮವೇ! ವಾಸ್ತವದಲ್ಲಿ `ಮರಳಿ ಮನೆಗೆ’ ಅಂದರೆ ಧರ್ಮವನ್ನು ತೊರೆಯುವುದಾಗಿದೆ. ಆದರೆ ಧರ್ಮ ತೊರೆಯುವ ಸಲಹೆ ನೀಡುವ ಮತ್ತು ವಕಾಲತ್ತು ವಹಿಸುವವರಿಗೆ ಈ ಕೆಲಸ ಮಾಡುವುದರಿಂದ ಹಣವೇನೂ ದೊರೆಯುವುದಿಲ್ಲ. ಅವರು ಹಾಗೆ ಸುಮ್ಮನೇ ಕೆಲಸ ಮಾಡುತ್ತಾರೆ. ಯಾವುದೇ ಗೊಂದಲ ಗಲಾಟೆಯಲ್ಲಿ ಸಿಲುಕಲು ಇಷ್ಟಪಡುವುದಿಲ್ಲ.

ಸಮಾನ ಗೌರವ ಕೊಡಿ

ಮನೆಗೆಲಸದವರಿಲ್ಲದೆ ಮಹಿಳೆಯರ ಜೀವನ ಅಪೂರ್ಣ. ಮಗು ಚಿಕ್ಕದಾಗಿರಬಹುದು, ಮನೆಯೊಡತಿ ಅನಾರೋಗ್ಯಪೀಡಿತಳಾಗಿದ್ದರೆ ಆ ಕೆಲಸದವಳ ಮಹತ್ವ ಇನ್ನೂ ಹೆಚ್ಚಾಗುತ್ತದೆ. ಆಕೆಯನ್ನು ಹೊರಗೆ ಕರೆದುಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಕೆಲವು ಸ್ಥಳಗಳಲ್ಲಿ ಕೆಲಸದವರಿಗೆ ಅವಕಾಶ ಸಿಗುವುದು ಅಷ್ಟಕಷ್ಟೆ. ಬಿಳಿಯರಿಗಾಗಿ ಶುರುವಾಗಿದ್ದ ಕ್ಲಬ್‌ಗಳಲ್ಲಿ ಮತ್ತು ಹೋಟೆಲ್‌ಗಳಲ್ಲಿ ಅವರಿಗೆ ಪ್ರವೇಶ ನಿಷಿದ್ಧವಾಗಿರತ್ತದೆ. ಮಕ್ಕಳ ಆಯಾಗಳಂತೆ ಅವರು ಒಳಪ್ರವೇಶಿಸಲು ನೋಡುತ್ತಾರೆ. ಆದರೆ ಅವರನ್ನು ಗೇಟ್‌ನಲ್ಲಿ ತಡೆದು ನಿಲ್ಲಿಸಲಾಗುತ್ತದೆ.

ದೆಹಲಿಯ ಅತ್ಯಂತ ಪ್ರತಿಷ್ಠಿತ ಶ್ರೀಮಂತರಿಗಷ್ಟೇ ಮೀಸಲಾದ ಗಾಲ್ಫ್ ಕ್ಲಬ್‌ನಲ್ಲೂ ಇಂಥದೇ ಘಟನೆ ನಡೆಯಿತು. ಮೇಘಾಲಯದ ಮಹಿಳೆಯೊಬ್ಬಳು ಪಾರಂಪರಿಕ ಪೋಷಾಕಿನಲ್ಲಿ ಅತಿಥಿಗಳ ನಡುವೆ ಕುರ್ಚಿಯಲ್ಲಿ ಕುಳಿತಿದ್ದಳು. ಆಕೆ ಕೆಲಸದವಳ ರೀತಿಯಲ್ಲಿ ಕಾಣಿಸುತ್ತಿದ್ದಳು. ಹೀಗಾಗಿ ಕ್ಲಬ್‌ನವರು ಆಕೆಗೆ ಹೊರಗೆ ಹೋಗಲು ಸೂಚಿಸಿದರು. ಆಕೆಯ ಮನೆಯೊಡತಿಗೆ ಇದು ತನ್ನದೇ ಅವಮಾನ ಎಂಬಂತೆ ಅನಿಸಿತು. ಅವಳು ಈ ವಿಷಯವನ್ನು ಜೋರಾಗಿ ಎಬ್ಬಿಸಿದಳು… ಆಂಗ್ಲ ಪತ್ರಿಕೆ  ವಿಷಯವನ್ನು ದೊಡ್ಡ ವಿಷಯ ಎಂಬಂತೆ ಪ್ರಕಟಿಸಿತು.

ಮನೆಗೆಲಸದವರ ಜೊತೆ ಈ ತೆರನಾದ ವರ್ತನೆ ದೇಶಾದ್ಯಂತ ಘಟಿಸುತ್ತಲೇ ಇರುತ್ತದೆ. ಏಕೆಂದರೆ ಶಿಕ್ಷಣದ ಸೂಕ್ಷ್ಮ ಪರಿಧಿಯೊಳಗೆ ನಾವು ಈಗಲೂ ಜಾತಿವಾದಿ ವ್ಯವಸ್ಥೆಯಲ್ಲಿ ಜೀವಿಸುತ್ತಿದ್ದೇವೆ. ಅವರಿಗೆ ಕೆಲಸ ಮಾಡಿಸಿಕೊಳ್ಳಲು ಕೆಲಸಗಾರರು ಬೇಕು. ಆದರೆ ಅವರಿಗೆ ಸಮಾನ ಸ್ಥಾನಮಾನ ಕೊಡುವುದು ಮಾತ್ರ ಆಗುವುದಿಲ್ಲ.`ಮೇಡ್‌ ಇನ್‌ ಮ್ಯಾನ್‌ಹಟ್ಟನ್‌’ ಎಂಬ ಹಾಲಿವುಡ್‌ ಚಲನಚಿತ್ರವೊಂದು ಚೆನ್ನಾಗಿ ಓಡಿತು. ಅದರ ನಾಯಕ ಬಿಳಿ ಸೆನೇಟರ್‌ ವ್ಯಕ್ತಿ ಬಿಳಿಯೇತರ ಮಹಿಳೆಯೊಬ್ಬಳನ್ನು ಮದುವೆಯಾಗುತ್ತಾನೆ. ಆದರೆ ಈ ಚಲನಚಿತ್ರದಲ್ಲೂ ಅವನಿಗೆ ಪ್ರೇಮ ಉಕ್ಕುವುದು ಅವಳು ದುಬಾರಿ ಫರ್‌ ಕೋಟೊಂದನ್ನು ತೊಟ್ಟು ನಿಂತಿದ್ದಾಗ. ಆ ಮನೆಗೆಲಸದವಳು ಓದಿದವಳಾಗಿದ್ದಳು ಹಾಗೂ ಎಂಬಿಎಗೆ ಸಿದ್ಧತೆ ನಡೆಸಿದ್ದಳು ಎಂದು  ಚಿತ್ರದಲ್ಲಿ ತೋರಿಸಲಾಗಿತ್ತು.

ಬಡ, ಕೆಳ ವರ್ಗದ ಹುಡುಗಿಯರೇ ಮನೆಗೆಲಸದವರು ಏಕೆ ಆಗಬೇಕು? ಮೇಲ್ವರ್ಗದ ಜಾತಿಯ ಮಹಿಳೆಯರು ಏಕೆ ಮನೆಗೆಲಸದವರಾಗುವುದಿಲ್ಲ? ಮನೆ ಸ್ವಚ್ಛತೆ, ತೋಟದ ಕೆಲಸ, ಬಟ್ಟೆ ಒಗೆಯಲು ಕೆಳವರ್ಗದವರೇ ಸೀಮಿತ ಪ್ರದೇಶದವರೇ ಏಕಾಗಬೇಕು?

ಕೆಲಸ ಕೆಲಸವೇ. ಅದರಿಂದ ಹಣ ದೊರೆಯುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಸಮಾನತೆ ಮಾತ್ರ ಇರುತ್ತಲ್ಲ….. ಮನೆಯವರಿಗೆ ಕೆಲಸದವರು ಬೇಕೇ ಬೇಕು. ಆದರೆ ಅವರಿಗೆ ಮನೆಯವರ ರೀತಿಯಲ್ಲಿ ಗೌರವವನ್ನೂ ಕೊಡಬೇಕು. ಮನೆಗೆಲಸದವರಿಗೆ ದೊರೆಯುವಷ್ಟೇ ಸಂಬಳ ಸೇಲ್ಸ್ ಗರ್ಲ್ಸ್ ಗೆ ದೊರೆಯುತ್ತದೆ. ಆದರೆ ಸೇಲ್ಸ್ ಗರ್ಲ್ಸ್ ಗೆ ದೊರೆಯುವ ಗೌರವ ಮನೆಗೆಲಸದವರಿಗೆ ದೊರೆಯುವುದಿಲ್ಲ. ಇದಕ್ಕೆ  ಕಾರಣ ಜಾತಿ ವವ್ಯಸ್ಥೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ