ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ವಾತಾವರಣಕ್ಕೆ ತನ್ನದೇ ಆದ ಮೆರುಗು ಬರುತ್ತದೆ. ಅಂತಹ ಸಂದರ್ಭದಲ್ಲಿ ಜನರು ಜಲಪಾತಗಳ ವೈಭವ ನೋಡಲು ಮುಗಿಬೀಳುತ್ತಾರೆ. ನೀವು ಈ ವರ್ಷ ಮಹಾರಾಷ್ಟ್ರದ ಈ ಜಲಪಾತಗಳ ಜಲವೈಭವವನ್ನು ಕಣ್ತುಂಬಿಸಿಕೊಳ್ಳಲು ಒಂದೊಳ್ಳೆ ಪ್ರವಾಸದ ಯೋಜನೆ ಹಾಕಬಹುದು.

ಮಳೆಗಾಲದಲ್ಲಿ ಮಹಾರಾಷ್ಟ್ರದ ಈ ಜಲತಾಣಗಳು ಜನ ಜಂಗುಳಿಯಿಂದ ಭರ್ತಿಯಾಗಿರುತ್ತವೆ. ಮೋನಾಳಾ, ಮಾಥೇರಾನ್‌, ಮಾಲಶೇಜ್‌ ಘಾಟ್‌, ಅಂಬೋಲಿ ಘಾಟ್‌ ಇವು ಕೆಲವು ಪ್ರಮುಖ ಜಲಪಾತಗಳಾಗಿವೆ.

ಅಂದಹಾಗೆ ಮಹಾರಾಷ್ಟ್ರದಲ್ಲಿ ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಇದಕ್ಕೆ ಪ್ರಮುಖ ಕಾರಣ, ಆ ಸಮಯದಲ್ಲಿ ಇಲ್ಲಿನ ವಾತಾವರಣ ಅತ್ಯಂತ ರಮ್ಯವಾಗಿರುತ್ತದೆ. ಥೋಸೆಘರ್‌ ಪ್ಯಾಲೆಸ್‌, ಬಾಂಬಾಲಿ ಪ್ಯಾಲೆಸ್‌ ಇತರೆ ಕೆಲವು ಸುಪ್ರಸಿದ್ಧ ಪ್ಯಾಲೆಸ್‌ಗಳಿವೆ. ಕುಂಡಲಿಕಾ ವಾಟರ್‌ ರಾಫ್ಟಿಂಗ್‌, ಲೋಹಗಡ್‌ ಟ್ರೆಕಿಂಗ್‌ ಮುಂತಾದವು ಕೂಡ ಮಳೆಗಾಲದ ಆಕರ್ಷಣೆಯ ಕೇಂದ್ರಗಳಾಗಿವೆ.

ಕೆಲವು ಪ್ರಮುಖ ಸ್ಥಳಗಳು

ಮಾಲಶೇಜ್‌ ಘಾಟ್‌ :  ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಹಸಿರು ಹೊದಿಕೆಗಳಿಂದ ಆವರಿಸಿಕೊಂಡಿರುವ ಈ ತಾಣ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಇದು ಪುಣೆಯಿಂದ 130 ಕಿ.ಮೀ. ದೂರದಲ್ಲಿದೆ. ಇಲ್ಲಿ ಹಲವು ರೆಸಾರ್ಟ್‌ಗಳು ಕೂಡ ಇವೆ.

ಲೋನಾಳಾ ಮತ್ತು ಖಂಡಾಲಾ : ಇವೆರಡು ರಮ್ಯ ತಾಣಗಳು ಮುಂಬೈನಿಂದ ಬಹಳ ಹತ್ತಿರದಲ್ಲಿವೆ. ಇಲ್ಲಿ ಭೂಮಿ ಮತ್ತು ಜಲದ ಅದ್ಭುತ ಸಮನ್ವಯ ನೋಡಲು ಸಿಗುತ್ತದೆ. ಮಳೆಗಾಲದ ಸಮಯದಲ್ಲಿ ಇಲ್ಲಿನ ರಮ್ಯತೆ ಕಣ್ತುಂಬಿಸಿಕೊಳ್ಳಲು ಖುಷಿಯಾಗುತ್ತದೆ.  ಇಲ್ಲಿ ಸಮೀಪದಲ್ಲಿ  ವಿಮಾನ ನಿಲ್ದಾಣವಿಲ್ಲ. ಹಾಗಾಗಿ ಪ್ರವಾಸಿಗರು ಮುಂಬೈ ಅಥವಾ ಪುಣೆಯಿಂದ ರಸ್ತೆ ಅಥವಾ ರೈಲಿನ ಮೂಲಕ ಪ್ರಯಾಣ ಮಾಡಬೇಕಾಗುತ್ತದೆ.

ಭೂಸಿ ಡ್ಯಾಮ್, ರಜಾಮಾಚಿ ನ್ಯೂ ಪಾಯಿಂಟ್‌, ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಇವು ಖಂಡಾಲಾದಲ್ಲಿನ ನೋಡಲೇಬೇಕಾದ ಸ್ಥಳಗಳು. ಇಲ್ಲಿ ಉಳಿದುಕೊಳ್ಳಲು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ಗಳಲ್ಲದೆ, ಹಾಲಿಡೇ ರೆಸಾರ್ಟ್ಸ್ ಮತ್ತು ಹೋಟೆಲ್‌ಗಳು ಕೂಡ ಇವೆ.

ಮುಲಸಿ ಡ್ಯಾಮ್ : ಇದು ಮೂಲಾನದಿಯ ಮೇಲೆ ಕಟ್ಟಿದ ಅಣೆಕಟ್ಟು. ಇಲ್ಲಿಗೆ ಮುಂಬೈನಿಂದ ಕೇವಲ 3 ಗಂಟೆಯ ಅವಧಿಯಲ್ಲಿ ತಲುಪಬಹುದು. ವಿದ್ಯುತ್‌ ಉತ್ಪಾದನೆ ಮಾಡಿ ಮಹಾರಾಷ್ಟ್ರ ರಾಜ್ಯಕ್ಕೆ ಪೂರೈಸುವ ಪ್ರಮುಖ ಜಲವಿದ್ಯುತ್‌ ಕೇಂದ್ರವಾಗಿದೆ.

ಕಳಸೂಬಾಯಿ ಶಿಖರ : ಇದನ್ನು `ಮಹಾರಾಷ್ಟ್ರದ ಎವರೆಸ್ಟ್ ಶಿಖರ' ಎಂದೇ ಕರೆಯುತ್ತಾರೆ. ಇದರ ಎತ್ತರ 5400 ಅಡಿ. ಇಲ್ಲಿರುವ ಕಳಸೂಬಾಯಿ ಹರಿಶ್ಚಂದ್ರ ಜೀವ ವೈವಿಧ್ಯ ತಾಣ ಬಹಳ ಪ್ರಸಿದ್ಧವಾಗಿದೆ. ಇಡೀ ವರ್ಷ ಇಲ್ಲಿಗೆ ಚಾರಣಪ್ರಿಯರು ಬರುತ್ತಿರುತ್ತಾರೆ. ಮಳೆಗಾಲದಲ್ಲಿ ಮಾತ್ರ ಕಳಸೂಬಾಯಿ ಶಿಖರ ಪ್ರದೇಶದ ರಮ್ಯತೆ ಪ್ರವಾಸಿಗರ ಮನ ಸೆಳೆಯುತ್ತದೆ.

ಭಂಡಾರಧಾರಾ : ಇದು ಅಹಮ್ಮದ್‌ ನಗರ ಜಿಲ್ಲೆಯಲ್ಲಿದೆ. ಮುಂಬೈನಿಂದ 185 ಕಿ.ಮೀ. ದೂರದಲ್ಲಿರುವ ಈ ತಾಣ ನೈಸರ್ಗಿಕ ಜಲಪಾತಗಳು, ಪರ್ವತ ಶಿಖರಗಳು, ಅದ್ಭುತ ಹಸಿರು ಸಿರಿ ಪ್ರವಾಸಿಗರ ಮನ ಸೆಳೆಯುತ್ತವೆ.

ನದಿಯ ದಂಡೆಯ ಮೇಲಿರುವ ಈ ಕ್ಷೇತ್ರ ಆರ್ಥರ್‌ ಸರೋವರ ರಂಧಾ ಜಲಪಾತದಿಂದ ಸುಪ್ರಸಿದ್ಧವಾಗಿದೆ. ಮುಂಬೈನಿಂದ ಭಂಡಾರಧಾರಾಕ್ಕೆ ತಲುಪತಲು ರಸ್ತೆ ಮಾರ್ಗವೇ ಸೂಕ್ತ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ