ತಮ್ಮಿಚ್ಛೆಯಂತೆ ಜೀವಿಸುವುದು ಸರ್ವರ ಹಕ್ಕು

ಕಂದಾಚಾರಿ ಸರ್ಕಾರದ ಸರ್ವ ಅಡೆತಡೆಗಳ ನಡುವೆಯೂ ಸಲಿಂಗಿಗಳಿಗೆ ಸುಪ್ರಿಂಕೋರ್ಟ್‌ನಿಂದ ದೊರೆತ ವಿಜಯ ತಮ್ಮದೇ ಆದ ರೀತಿಯಲ್ಲಿ ಜೀವಿಸುವ ಹಕ್ಕು ಅಪೇಕ್ಷಿಸುವವರ ಉತ್ಸಾಹವನ್ನು ಹೆಚ್ಚಿಸಿದೆ. ಸರ್ವಾಧಿಕಾರಿ ಧೋರಣೆಯಲ್ಲಿ ಸರ್ಕಾರದ ನಡೆಯು ಸಿಂಗಾಪುರ ಈಗ ಸಲಿಂಗಿಗಳ ಮುಕ್ತ ಪ್ರದರ್ಶನವನ್ನು ಎದುರಿಸುತ್ತಿದೆ. ಸಿಂಗಾಪುರ ಹಿಂದೊಮ್ಮೆ ಬ್ರಿಟಿಷರ ಅಧೀನದಲ್ಲಿತ್ತು. ಅದು ಅವರ ಪೊಳ್ಳು ನೈತಿಕತೆಯನ್ನು ಈಗಲೂ ಪಾಲಿಸಿಕೊಂಡು ಹೋಗುತ್ತಿದೆ. ಅಲ್ಲಿನ ಪೀನಲ್ ಕೋಡ್‌ನ ಸಂಖ್ಯೆ ಭಾರತದ ನಕಲು ಎಂಬಂತಿದೆ. 377 `ಎ’ ಕಲಂ ಅನ್ವಯ ಅದು ಅಪರಾಧವಾಗಿದೆ.

ಬ್ರಿಟಿಷ್‌ ವಸಾಹತುಶಾಹಿಗಳಾಗಿದ್ದ ಶ್ರೀಲಂಕಾ ಹಾಗೂ ಕೀನ್ಯಾದಲ್ಲೂ ಇದೇ ಸ್ಥಿತಿ ಇದೆ. ಈ ಕಾನೂನಿನ ವಿರುದ್ಧ ಹೋರಾಡಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಭಾರತೀಯ ವಕೀಲರ ಸಹಾಯ ಪಡೆಯಲಾಗುತ್ತದೆ. ವಿಕ್ಟೋರಿಯನ್‌ ಯುಗದ ಮಾನದಂಡಗಳಿಂದ ಬ್ರಿಟನ್‌ ಈಗ ಪರಿಪೂರ್ಣ ಸ್ವತಂತ್ರವಾಗಿದೆ. ಆದರೆ ಅದು ಯಾವ ದೇಶದಲ್ಲಿ ಆಡಳಿತ ನಡೆಸಿತ್ತೋ ಅಲ್ಲಿ ಮಾತ್ರ ಇನ್ನೂ ಚಾಲ್ತಿಯಲ್ಲಿದೆ.

ತಮ್ಮಿಚ್ಛೆಯಂತೆ ಜೀವಿಸುವ ಹಕ್ಕು ಎಲ್ಲರಿಗೂ ಇದೆ. ಬೇರೆಯವರ ಹಕ್ಕುಗಳಿಗೆ ಚ್ಯುತಿ ತರುವ ಹಕ್ಕು ಯಾರಿಗೂ ಇಲ್ಲ. ಧರ್ಮದ ಪೂಜಾರಿಗಳು ಇದಕ್ಕೆ ವಿರುದ್ಧವಾಗಿದ್ದಾರೆ…. ಏಕೆಂದರೆ ಅವರು ಮನೆ ಹೊಕ್ಕು ಜನರ ರೀತಿನೀತಿಗಳ ಮೇಲೆ ನಿಯಂತ್ರಣ ಹೇರಲು ಇಚ್ಛಿಸುತ್ತಾರೆ.

ಯಾವ ಸಮಾಜ ಇದಕ್ಕೆ ಅನುಮತಿ ಕೊಡುತ್ತೋ, ಅಲ್ಲಿ ಸದಾ ಉಸಿರುಗಟ್ಟುವ ವಾತಾವರಣ ಇರುತ್ತದೆ ಹಾಗೂ ಪರತಂತ್ರ ಕ್ರಿಮಿಗಳು ಹೆಮ್ಮೆಯಿಂದ ಬೆಳೆಯುತ್ತಿವೆ.

ನಮ್ಮ ಮನೆಗಳಲ್ಲಿ ಪರಸ್ಪರ ವಿವಾದದ ಬಹಳಷ್ಟು ಸೂತ್ರಗಳು ಈ ಸಲಿಂಗ ಅಥವಾ ಪರಸ್ತ್ರೀ ಮೋಹದಂತಹ ಕಾನೂನಿನ ನೆರಳಿನಲ್ಲಿ ಹುಟ್ಟಿಕೊಂಡ ರೀತಿರಿವಾಜುಗಳಿಗೆ ಸಂಬಂಧಪಟ್ಟಿವೆ.

ಶಬರಿಮಲೈಯಲ್ಲಿ  ಋತುಮತಿ ಮಹಿಳೆಯರಿಗೆ  ಏಕೆ ಪ್ರವೇಶ ಕೊಡಲಾಗುವುದಿಲ್ಲ ಎಂದರೆ ಅದರಿಂದಾಗಿ ದೇವರಿಗೆ ಮೈಲಿಗೆ ಆಗುತ್ತದಂತೆ. ಈ ಮೂಲಕ ಅವರನ್ನು ಪುರುಷರಿಗಿಂತ ಕಡಿಮೆ ಎಂದು ಬಿಂಬಿಸಲಾಗುತ್ತದೆ. ಮೂಢನಂಬಿಕೆಗೊಳಗಾದವರು ತಮ್ಮಿಚ್ಛೆಯಂತೆ ಪೂಜೆ ಸಹಿತ ಮಾಡಲು ಆಗುವುದಿಲ್ಲ. ಶಬರಿಮಲೈಗೆ ಹೋಗುವುದು, ಪೂಜೆ ಮಾಡುವುದು ಯಾವುದೇ ಉತ್ಪಾದಕ  ಕೆಲಸವೇನಲ್ಲ. ಆದರೂ ಅದರ ಮೇಲೆ ಅಂಕುಶ ಹೇರಲಾಗಿದೆ.

ಸಲಿಂಗ ಕಾಮದ ಕಾನೂನನ್ನು ವೈಯಕ್ತಿಕ ನಿರ್ಧಾರದ ವಿರುದ್ಧ ಎಂದು ಭಾವಿಸುವುದರ ಅರ್ಥ, ಜನ ತಮ್ಮ ತಮ್ಮ ದೇಹವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ  ಹಕ್ಕು ಹೊಂದಿದ್ದಾರೆ ಎನ್ನುವುದನ್ನು ವಿರೋಧಿಸುವುದಾಗಿದೆ. ಇಬ್ಬರು ವ್ಯಕ್ತಿಗಳು ಒಪ್ಪಿಗೆಯಿಂದ ಲೈಂಗಿಕ ಸಂಬಂಧ ಹೊಂದುವುದು ಅವರ ಹಕ್ಕು.ಇದೇ ತೆರನಾದ ಇಚ್ಛೆಯನ್ನು ಯಾವುದೇ ದೇವಿ ದೇವತೆ, ಧರ್ಮ ರಾಜಕೀಯ ಪಕ್ಷವನ್ನು ಇಷ್ಟಪಡುವ ಸ್ವಾತಂತ್ರ್ಯವನ್ನು ನೀಡಬೇಕು. ಧರ್ಮದ ಹೆಸರಿನಲ್ಲಿ ಯಾರಿಗೆ ಆದರೂ ಮನೆ ಕೊಡದೇ  ಇರುವುದು, ಮನಸ್ಸಿಗೆ ಬಂದಾಗ ಥಳಿಸುವುದು, ದಂಗೆ ಎಬ್ಬಿಸುವುದು, ಗದ್ದಲವೆಬ್ಬಿಸಿ ಶಾಂತಿಗೆ ಭಂಗ ತರುವುದು ಸರಿಯಾದುದಲ್ಲ. ಇದು ಕೇವಲ ಪುರುಷರಿಗಷ್ಟೇ ರಿಯಾಯಿತಿ ನೀಡುವುದಿಲ್ಲ, ಮಹಿಳೆಯರ ಪರಿಪೂರ್ಣ ಸ್ವಾತಂತ್ರ್ಯದ ಬೇಡಿಕೆಯ ದಾರಿಯನ್ನು ಮುಕ್ತಗೊಳಿಸಲು ನೆರವಾಗುತ್ತದೆ.

ನಿಮ್ಮ ಮೇಲೆ ನಂಬಿಕೆ ಇಡಿ, ದೇವರ ಮೇಲಲ್ಲ

ಮೂಢನಂಬಿಕೆ ಶ್ರೀಮಂತ ದೇಶಗಳಲ್ಲಿ ಕಡಿಮೆ, ಬಡದೇಶಗಳಲ್ಲಿ ಹೆಚ್ಚು. ಅದೇ ರೀತಿ ಶ್ರೀಮಂತರು ಕಡಿಮೆ ಮೂಢನಂಬಿಕೆ ಉಳ್ಳವರು ಹಾಗೂ ಬಡವರು ಹೆಚ್ಚು ಮೂಢನಂಬಿಕೆ ಇರುವವರಾಗಿರುತ್ತಾರೆ. 109 ದೇಶಗಳ 20ನೇ ಶತಮಾನದ ಸಂಪೂರ್ಣ ಅಂಕಿಅಂಶಗಳನ್ನು ಪರಿಶೀಲಿಸಿ, ಹಣ ಬಂದ ಕೂಡಲೇ ಮೂಢನಂಬಿಕೆ ಕಡಿಮೆಯಾಗುತ್ತಾ ಅಥವಾ ಮೂಢನಂಬಿಕೆ ಕಡಿಮೆಯಾದ ಕೂಡಲೇ ಹಣ ಬರುತ್ತಾ ಎಂಬುದರ ರಹಸ್ಯ ಹೊರ ಹಾಕುವ ಪ್ರಯತ್ನ ಮಾಡಲಾಯಿತು.

ಬ್ರಿಸ್ಟ್‌ ಯೂನಿರ್ಸಿಟಿ ಮತ್ತು ಟೆನ್ಸಿ ಯೂನಿರ್ಸಿಟಿಯ ಸಂಶೋಧಕರ ಪ್ರಕಾರ, ಮೂಢನಂಬಿಕೆಯ ಪ್ರಮಾಣ ಕಡಿಮೆ ಇರುವುದು ದೇಶ, ರಾಜ್ಯ, ಸಮಾಜ ಅಥವಾ ಕುಟುಂಬದ ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಆರ್ಥಿಕ ಪ್ರಗತಿಯಿಂದ ಮೂಢನಂಬಿಕೆ ಕಡಿಮೆಯಾಗುತ್ತದೆ ಎನ್ನುವುದು ತಪ್ಪು ಧೋರಣೆಯಾಗಿದೆ.

ಒಂದು ಸ್ವಾಭಾವಿಕ ಸಂಗತಿ ಎಂದರೆ, ಜನರು ತಮ್ಮ ಸುಖ ಸಮೃದ್ಧಿಗೆ ದೇವರೇ ಕಾರಣ ಎಂದು ಹೇಳಿ ಧನ್ಯವಾದ ಹೇಳುತ್ತಾರೆ. ಎಲ್ಲ ದೇವರ ಪೂಜೆಯ ಫಲ ಎನ್ನುತ್ತಾರೆ. ಯಾರಿಗೆ ತಮ್ಮ ಮೇಲೆ ವಿಶ್ವಾಸವಿರುತ್ತೋ, ಅವರಿಗೆ ದೇವರಿಂದ ಯಾವುದೇ ಅಪೇಕ್ಷೆಗಳಿರುವುದಿಲ್ಲ. ನಮ್ಮ ದೇಶದಲ್ಲಿ ಉತ್ತರ ಪ್ರದೇಶ, ಬಿಹಾರ ಬಡ ರಾಜ್ಯಗಳು. ಏಕೆಂದರೆ ಅವು ದೇಶದ ತೀರ್ಥಸ್ಥಳಗಳ ಕೇಂದ್ರ ಸ್ಥಳಗಳಾಗಿವೆ. ಗಂಗಾ ತೀರದಲ್ಲಿ ಪ್ರತಿ 100 ಮೀಟರಿಗೊಂದು ಘಟ್ಟ ನಿರ್ಮಾಣವಾಗಿದೆ. ಕೆಲವು ಮೈಲುಗಳ ದೂರದಲ್ಲಿ ದೇಗುಲಗಳ ನಗರವಿದೆ. ಪ್ರತಿಯೊಂದು ನಗರ ಕೊಳಕಾಗಿದೆ. ಅಲ್ಲಿ ಅಪ್ರಾಮಾಣಿಕತೆ ತುಂಬಿ ತುಳುಕುತ್ತಿದೆ. ಅಲ್ಲಿ ಎಲ್ಲೆಲ್ಲೂ ಯಾತ್ರಿಗಳು ತುಂಬಿರುತ್ತಾರೆ. ಜನರು ತಮ್ಮ ಕೆಲಸವನ್ನು ಅರ್ಧಕ್ಕೆ ಬಿಟ್ಟು ಪುಣ್ಯ ಪ್ರಾಪ್ತಿಗೆ ಬರುತ್ತಾರೆ.

ನಮ್ಮಲ್ಲಿನ ಬಹಳಷ್ಟು ಶ್ರೀಮಂತರು ಕೂಡ ಅತಿಯಾದ ಧಾರ್ಮಿಕ ಶ್ರದ್ಧೆಯುಳ್ಳವರಾಗಿದ್ದಾರೆ. ಈ ಧಾರ್ಮಿಕ ಶ್ರೀಮಂತರಲ್ಲಿ ಶೇ.99ರಷ್ಟು ಸರ್ಕಾರಿ ಕೃಪಾಪೋಷಿತರು. ಅವರ ಉದ್ಯೋಗಗಳು ಹಾಗೂ ಆಸಾರಾಮ್ ರ ಆಶ್ರಮದಲ್ಲಿ ಏನೂ ವ್ಯತ್ಯಾಸವಿಲ್ಲ. ಅವರನ್ನು ಉದ್ಯಮಿ ಎನ್ನುವುದಕ್ಕಿಂತ ಜನರನ್ನು ನಂಬಿಸಿ ಮೋಸ ಮಾಡಿದ ದುಡ್ಡಿನ ಸಂರಕ್ಷಕರೆನ್ನುವುದು ಸೂಕ್ತ. ಜಗತ್ತಿನಾದ್ಯಂತ ಭಾರತೀಯ ಬ್ರ್ಯಾಂಡ್‌ನೇಮ್ ಬೇರೆಲ್ಲೂ ಮಾರಾಟವಾಗದು.

ಕೊಲ್ಲಿ ದೇಶಗಳಲ್ಲಿ ಅಪಾರ ತೈಲ ಸಂಗ್ರಹವಿದೆ. ಆದರೆ ಕಳೆದ 100 ವರ್ಷಗಳಲ್ಲಿ ಆ ಹಣದ ಗತಿ ಏನಾಯ್ತು? ಅಲ್ಲಿನ ಮೂಢನಂಬಿಕೆಯುಳ್ಳ ಜನರು ಅದನ್ನು ನಾಶಪಡಿಸಿದರು. ಹಿಟ್ಲರ್‌ ಮಹಾ ಮೂಢನಂಬಿಕೆ ಉಳ್ಳವನಾಗಿದ್ದು, ಅವನು ಯಹೂದಿಗಳ ಧರ್ಮವನ್ನೇ ನಿರ್ನಾಮ ಮಾಡಲು ಹೊಸದೊಂದು ಧರ್ಮ ಹುಟ್ಟು ಹಾಕಿದ್ದ. ಇದರ ಪರಿಣಾಮ ಏನಾಯ್ತು ಎಂದರೆ ದೇಶದ ಖನಿಜ ಸಂಪತ್ತು ಹಾಗೂ ಜನರ ಅಪಾರ ಪರಿಶ್ರಮವನ್ನು ಎರಡನೇ ಮಹಾಯುದ್ಧ ನುಂಗಿ ಹಾಕಿತು. ಈಗ ಅಲ್ಲಿ ಚರ್ಚ್‌ಗಳು ಬಂದ್‌ಆಗುತ್ತಿದ್ದವು, ಹಣದ ಸುರಿಮಳೆಯಾಗುತ್ತಿದೆ. ಅಮೆರಿಕದಲ್ಲೂ ಧರ್ಮದ ಪ್ರಭಾವ ಹೆಚ್ಚುತ್ತಿದೆ. ಅದು ನಾಸ್ತಿಕ ಚೀನಾಕ್ಕಿಂತ ಹಿಂದುಳಿಯುತ್ತಿದೆ.

ಇದು ಮನೆ ಮನೆ ಕಥೆ. ಕೇವಲ ಮೂಢನಂಬಿಕೆ ಹಾಗೂ ಪ್ರಗತಿಯಷ್ಟೇ ಸುಖ ಸಮೃದ್ಧಿಯ ಅಂಶಗಳಲ್ಲ. ಅದಕ್ಕೆ ಬೇರೆ ಕೆಲವು ಸಂಗತಿಗಳಿರುತ್ತವೆ. ಒಂದೆಡೆ ನೈಸರ್ಗಿಕ ಸಂಪನ್ಮೂಲಗಳಾಗಿದ್ದರೆ, ಇನ್ನೊಂದೆಡೆ ರಾಜಕೀಯ ಅಸ್ಥಿರತೆ ಕಾರಣವಾಗಿರುತ್ತದೆ. ಮತ್ತೊಂದೆಡೆ ಹಣ ಹಾಗೂ ಬಂಡವಾಳದ ಮೌಲ್ಯ ಕಡಿಮೆಯಾಗಿರುತ್ತದೆ ಇಲ್ಲವೇ ನೆರೆಯ ದೇಶದ ಆಕ್ರಮಣ ಅದಕ್ಕೆ ಕಾರಣವಾಗಿರಬಹುದು. ಎಷ್ಟೋ ಸಲ ಆತ್ಮವಿಶ್ವಾಸಗಳು ಕೂಡ ಯಶಸ್ವಿಯಾಗುವುದಿಲ್ಲ. ಏಕೆಂದರೆ ಅನಾರೋಗ್ಯ ಕಾಡಬಹುದು, ಎದುರಾಳಿ ರಣತಂತ್ರ ರೂಪಿಸಬಹುದಾಗಿದೆ.

ದಿನಕ್ಕೆ 4 ಗಂಟೆ ಪೂಜೆ ಮಾಡುವುದರಿಂದ ವರ್ಷಕ್ಕೆ 4 ಸಲ ವೈಷ್ಣೋದೇವಿ ಅಥವಾ ತಿರುಪತಿಗೆ ಹೋಗುವುದರಿಂದ ಧನಸಂಪತ್ತಿನ ಸುರಿಮಳೆಯಾಗುತ್ತದೆ ಎಂದು ಯೋಚಿಸುವುದು ತಪ್ಪು.

ಬದಲಾಗಬೇಕು ನಗರಗಳ ಹಳೆಯ ಭಾಗಗಳು

ದೆಹಲಿಯಂತಹ ಅದೆಷ್ಟೋ ಮಹಾನಗರಗಳ ಹೋಲ್‌ಸೇಲ್ ‌ಮಾರ್ಕೆಟ್‌ಗಳು ನಗರಗಳ ನಟ್ಟನಡುವೆ ಇವೆ. ಅವು ಕ್ರಮೇಣ ಅಕ್ಕಪಕ್ಕದ ಗಲ್ಲಿಗಳಿಗೂ ವ್ಯಾಪಿಸುತ್ತಿವೆ. ಈ ಕಿಷ್ಕಿಂದೆ ಗಲ್ಲಿಗಳಲ್ಲಿ ನಡೆದಾಡಲೂ ಜಾಗವಿಲ್ಲ, ಕೂಲಿಕಾರರಿಗೆ ವಾಸ ಮಾಡಲಂತೂ ಸಾಧ್ಯವಿಲ್ಲ. ಅಲ್ಲಿ ಸರಕು ಪೂರೈಕೆ ಮಾಡಲು ವಾಹನಗಳು ಬಂದು ಸೇರಿಕೊಳ್ಳುತ್ತವೆ.

ಈ ಭಾಗದಲ್ಲಿ ವಾಸಿಸುವವರಿಗೆ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಹಲವು ದಶಕಗಳಿಂದ ವಾಸಿಸುತ್ತಿರುವ ಅವರ ಜೀವನ ಯಾವುದೇ ತಪ್ಪಿಲ್ಲದಿದ್ದರೂ ಇಕ್ಕಟ್ಟಿಗೆ ಸಿಲುಕಿದೆ. ಅವರಿಗೆ ತಮ್ಮ ಹಳೆಯ ಮನೆಯನ್ನು ಬಿಟ್ಟು ಹೋಗಬೇಕಾಗಿ ಬರುತ್ತದೆ. ಹಲವು ಸಿನಿಮಾಗಳಲ್ಲಿ ಇವರ ಮನೆಗಳು ವ್ಯಾಪಾರ, ಧಾರ್ಮಿಕ ಜೀವನದ ಬಗ್ಗೆ ಪ್ರಸ್ತುತಪಡಿಸಲಾಗಿದೆ. ರೊಮ್ಯಾಂಟಿಕ್‌ವಾತಾರಣವಿಲ್ಲ. ಪ್ರತಿಯೊಂದು ಸರ್ಕಾರ ಇಲ್ಲಿನ ಸ್ವಚ್ಛತೆಯ ಬಗ್ಗೆ ಭರವಸೆ ಬೀರುತ್ತವೆ. ಆದರೆ ವ್ಯಾಪಾರಿಗಳಾಗಲಿ, ಗ್ರಾಹಕರಾಗಲಿ, ಇಲ್ಲಿ ವಾಸಿಸುವ ನಾಗರಿಕರಾಗಲಿ ಯಾರೊಬ್ಬರೂ ಬೆಂಬಲ ಕೊಡುತ್ತಿಲ್ಲ. ವಸತಿ ಪ್ರದೇಶದಲ್ಲಿ ವ್ಯಾಪಾರ ನಡೆಯಬಾರದು ಎಂಬ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಬಿಗಿ ಧೋರಣೆ ತಳೆಯಲಾಗದು. ಇಲ್ಲಿರುವ ನಾಗರಿಕರು 30-40 ಕಿ.ಮೀ. ದೂರದ ಪ್ರದೇಶಗಳಿಗೆ ಹೋಗುವಂತೆ ಅನಿವಾರ್ಯ ವಾತಾವರಣ ಸೃಸ್ಟಿಸಲಾಗುತ್ತಿದೆ. ಹೊಸದೊಂದು ಪ್ರದೇಶದಲ್ಲಿ ಹೊಸದಾಗಿ ವ್ಯಾಪಾರ ವಹಿವಾಟು ನೆಲೆಗೊಳಿಸುವುದು ಕಷ್ಟ. ಅಲ್ಲಿ ಅವರ ಅಂಗಡಿಯ ಗುರುತೇ ಇರುವುದಿಲ್ಲ ಎನ್ನುವುದೇನೋ ಸತ್ಯ. ಆದರೆ ಅದು ಅನಿವಾರ್ಯ.

ನಗರಗಳ ಹಳೆಯ ಪ್ರದೇಶಗಳನ್ನು ಪರಿವರ್ತನೆಗೊಳಿಸಬೇಕು. ದೆಹಲಿ, ಭೋಪಾಲ್‌, ಆಗ್ರಾ, ಕೋಲ್ಕತಾ, ಮುಂಬೈ, ಚೆನ್ನೈ, ಬೆಂಗಳೂರಿನಂಥ ನಗರಗಳ ಹಳೆಯ ಭಾಗಗಳನ್ನು ಮ್ಯೂಝಿಯಂಗಳಾಗಿ ಬದಲಿಸಬೇಕಾಗುತ್ತದೆ. ಅವು ಪಾರಂಪರಿಕ ಭಾಗಗಳು, ಯೂರೋಪಿನ ಇಂತಹ ಬಹಳಷ್ಟು ಸ್ಥಳಗಳು ಕೇವಲ ಪ್ರವಾಸಿಗರ ಸುತ್ತಾಟಕ್ಕೆ ಮಾತ್ರ ಇವೆ. ಹಳೆಯ ಅಂಗಡಿಗಳು ಹೋಟೆ‌ಲ್‌ಗಳಾಗಿವೆ. ಜನರು ಪ್ರವಾಸ ಮಾಡಲು ಹಾಗೂ ಹಳೆಯ ವಾತಾವರಣದಲ್ಲಿ ಜೀವಿಸಲು ಪುನಃ ಆಗಮಿಸುತ್ತಾರೆ.

ವ್ಯಾಪಾರಿಗಳು ಹೊಸ ಯುಗದೊಂದಿಗೆ ಸಾಗಲೇಬೇಕಾಗುತ್ತದೆ. ಹಳೆಯ ಯೋಚನೆಯೊಂದಿಗೆ ಅಂಟಿಕೊಂಡು ಕುಳಿತಿರುವುದರ ಅರ್ಥ ತಾವೇ ಸ್ವತಃ ಹಳೆ ತಲೆಮಾರಿನವರಾಗುವುದು. ಹೊಸ ತಲೆಮಾರಿನವರನ್ನು ಇದೇ ಪ್ರದೇಶದಲ್ಲಿ ಇರಿಸಬೇಕೆಂದರೆ ಅದಕ್ಕೆ ಹೊಸ ರೂಪ ಹೊಸ ರಂಗು ಕೊಡಬೇಕಾದುದು ಅಗತ್ಯ.

Tags:
COMMENT