ಎ.ಆರ್‌. ಸುಧಾಮಣಿ ಹುಣಸೂರು ತಾಲ್ಲೂಕು, ಹನಗೋಡು ನಿವಾಸಿ. ಇವರ ಪತಿ ಬಸವರಾಜು, ಮಗ ಮಧು ಮತ್ತು ಮಗಳು ಅಂಜುಪ್ರಿಯ. ಮೈಸೂರಿನ ಮಹಾರಾಣಿ ಜ್ಯೂನಿಯರ್‌ ಕಾಲೇಜಿನಲ್ಲಿ ಪಿ.ಯು.ಸಿ ವ್ಯಾಸಂಗ ಮಾಡಿರುವ ಇವರು ಮದುವೆಗೂ ಮುಂಚಿನಿಂದಲೇ ಕೃಷ್ಣರಾಜನಗರ ತಾಲ್ಲೂಕಿನ ಅರ್ಜುನಹಳ್ಳಿಯಲ್ಲಿರುವ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಮದುವೆಯ ನಂತರ ಪತಿಯ ಊರು ಹನಗೋಡಿನಲ್ಲಿ ಮನೆಯವರ ಬೆಂಬಲದಿಂದ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಂಡರು.

1993ರಲ್ಲಿ ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ತ.ಮ. ವಿಜಯಭಾಸ್ಕರ್‌ರವರ ಪ್ರೋತ್ಸಾಹದಿಂದ ಹನಗೋಡಿನಲ್ಲಿ ಸಾಕ್ಷರತಾ ಆಂದೋಲನದಲ್ಲಿ ಪಾಲ್ಗೊಂಡು, ಆಗಲೇ ಅಕ್ಷರ ಆರೋಗ್ಯ ಪತ್ರಿಕೆಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದರು. 1994ರಲ್ಲಿ ಹನಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಜಿಲ್ಲೆಯಲ್ಲೇ ಮಾದರಿ ಗ್ರಾಮ ಪಂಚಾಯ್ತಿ ಎಂಬ ಕೀರ್ತಿ ತಂದರು. ಮಹಿಳೆಯರ ಸಬಲೀಕರಣಕ್ಕಾಗಿ ಸ್ಛೂರ್ತಿ ಸಂಸ್ಥೆ ಸ್ಥಾಪಿಸಿ ಉಚಿತವಾಗಿ ಟೈಲರಿಂಗ್‌, ಫ್ಯಾಷನ್‌ ಡಿಸೈನಿಂಗ್‌, ಕೌಶಲ್ಯಾಧಾರಿತ ತರಬೇತಿಗಳನ್ನು ಕೊಡಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ 41 ಬೃಹತ್‌ಬೆಟ್ಟಗಳ ವಿಸ್ತಾರವನ್ನು ಹೊಂದಿದ್ದು, ಅದರ ಪಕ್ಕದಲ್ಲೇ ಅತೀ ದಟ್ಟವಾದ ಕಾಡು ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹರಡಿರುವ ಅರಣ್ಯ 50 ವರ್ಷಗಳ ಹಿಂದೆ ಕಾಣಬಹುದಾಗಿತ್ತು.

ಇತ್ತೀಚೆಗೆ ಅತಿ ಮುಖ್ಯವಾಗಿ ಜನಸಂಖ್ಯಾ ಸ್ಛೋಟದಿಂದ ಕೃಷಿ ಭೂಮಿ ವಿಸ್ತರಣೆ, ಅರಣ್ಯ ಉತ್ಪನ್ನಗಳ ಅಭಿವೃದ್ಧಿಪಡಿಸುವ ಉದ್ಯಮಗಳು, ರಸ್ತೆ ಅಭಿವೃದ್ಧಿ, ವಿದ್ಯುತ್‌ ಉತ್ಪಾದನೆ, ಅಣೆಕಟ್ಟೆಯ ನಿರ್ಮಾಣ, ಸಾರಿಗೆ ಸಂಪರ್ಕಗಳು ಹೆಚ್ಚಿರುವುದು, ಹೊಗೆಸೊಪ್ಪು ಸಂಸ್ಕರಣೆಗೆ ಹಾಗೂ ಟೀ ಸಂರಕ್ಷಣೆಗೆ ಪ್ರತಿ ವರ್ಷ 1 ಲಕ್ಷ ಲಾರಿ ಲೋಡುಗಳ ಸೌದೆ ಉಪಯೋಗ, ಗಣಿಗಾರಿಕೆ ಹಾಗೂ ಸುಮಾರು 67 ಸಾವಿರ ವಸತಿ ಗೃಹಗಳ ನಿರ್ಮಾಣ ಇತ್ಯಾದಿಗಳಿಂದ ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವುದನ್ನು ಕಾಣಬಹುದು.

ಜಲಾಶಯಕ್ಕೆ 35,840 ಹೆಕ್ಟೇರ್‌ ಪ್ರದೇಶ ಗಣಿಗೆ 42,676 ಹೆಕ್ಟೇರ್‌ ಪ್ರದೇಶ ನಾಶವಾಗಿದ್ದು, ಇತ್ತೀಚೆಗೆ ಇನ್ನೂ ಹೆಚ್ಚಿನ ಅರಣ್ಯ ನಾಶವನ್ನು ಕಾಣಬಹುದಾಗಿದೆ. 2002ರಲ್ಲಿ ರಾಜ್ಯದಲ್ಲಿ 9,94,881 ಹೆಕ್ಟೇರ್‌ ಪ್ರದೇಶ ಡೀಮ್ಡ್ ಪ್ರದೇಶವಿದ್ದು, 2014-15ರಲ್ಲಿ 5,17,485 ಹೆಕ್ಟೇರ್‌ ಪ್ರದೇಶ ಹಾಗೂ 2017ರಲ್ಲಿ 4,98,000 ಹೆಕ್ಟೇರ್‌ ಪ್ರದೇಶಕ್ಕೆ ಇಳಿಮುಖವಾಗಿರುತ್ತದೆ. ಇದೇ ಮಾದರಿಯಲ್ಲಿ ಕೇರಳದ 14 ಬೆಟ್ಟಗಳು ಕ್ಷೀಣಿಸುತ್ತಿರುವುದು ಕಾವೇರಿ ನದಿಗೆ ತೊಂದರೆಯಾಗಿದೆ.ಎಚ್‌.ಕೆ. ಪಾಟೀಲ್‌ರವರು ನೀರಾವರಿ ಮಂತ್ರಿಯಾಗಿದ್ದ ಅವಧಿಯಲ್ಲಿ ನೀರು ಬಳಕೆದಾರರ ಸಂಘ ಅಸ್ತಿತ್ವಕ್ಕೆ ಬಂದು, ಹನಗೋಡು ಸಂಘಕ್ಕೆ ಇವರು ಅಧ್ಯಕ್ಷೆಯಾದರು. 2005ರಲ್ಲಿ ಹಾರಂಗಿ ನೀರು ಬಳಕೆದಾರರ ಮಹಾಮಂಡಳದ ಪ್ರಥಮ ಅಧ್ಯಕ್ಷೆಯಾಗಿ 5 ತಾಲ್ಲೂಕುಗಳ 420 ಹಳ್ಳಿಗಳಲ್ಲಿ 96 ನೀರು ಬಳಕೆದಾರರ ಸಂಘಗಳನ್ನು ಸ್ಥಾಪಿಸಿ ಮುಖ್ಯ ನಾಲೆ ಹಾಗೂ ಉಪನಾಲೆಯ ಕೊನೆಯ ಭಾಗಕ್ಕೂ ಸಮರ್ಪಕವಾಗಿ ನೀರು ಹರಿಯುವಂತೆ ಮಾಡಿದರು. ಜೊತೆಗೆ ಕಾಲುವೆ ಬದಿಯಲ್ಲಿ ಗಿಡ ನೆಡಲು ರೈತರನ್ನು ಪ್ರೇರೇಪಿಸಿ ಅದರಲ್ಲೂ ಯಶಸ್ಸು ಕಂಡರು.

ಈ ಸಂದರ್ಭದಲ್ಲಿ ಇವರಿಗೆ ಮೇಧಾಪಾಟ್ಕರ್‌, ರಾಜೇಂದ್ರಸಿಂಗ್‌, ಅಣ್ಣಾ ಹಜಾರೆಯವರ ಒಡನಾಟ ಬೆಳೆಯಿತು. ನೀರು ಬಳಕೆದಾರರ ಸಂಘದ ಅಧ್ಯಕ್ಷೆಯಾಗಿದ್ದ ಸುಧಾಮಣಿಯವರ ಕಾರ್ಯವೈಖರಿಯನ್ನು ಮೆಚ್ಚಿ ನೆದರ್‌ಲ್ಯಾಂಡಿನ ನೀರಾವರಿ ತಜ್ಞ ಡಾ. ಪೀಟರ್‌ ಮೆಲಿಂಗೋ ಮತ್ತು ಪ್ರೊ. ರೆಮೆಂಟ್‌ ಪೀಟರ್‌ತಾವು ಬರೆದ `ಸೌತ್‌ ಇಂಡಿಯನ್‌ ಇರಿಗೇಷನ್‌ ಮ್ಯಾನೇಜ್‌ಮೆಂಟ್‌' ಪುಸ್ತಕದಲ್ಲಿ, ಸುಧಾಮಣಿ ರಾತ್ರಿ ಸಮಯದಲ್ಲಿ ಕಾಲುವೆಗಳ ಬಳಿ ನೀರಾವರಿ ನಿರ್ವಹಣೆಯ ಜವಾಬ್ದಾರಿಯ ಸಾಧನೆಯನ್ನು ದಾಖಲಿಸಿರುವುದು ಇವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ