ಇವರ ಇಚ್ಛಾಶಕ್ತಿಗೆ ದೊಡ್ಡ ಸವಾಲ್!

ಜಯಲಲಿತಾ ಹಾಗೂ ಮಮತಾ ಬ್ಯಾನರ್ಜಿ ನಂತರ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಮಾಯಾವತಿ ಮತ್ತೆ ಅಧಿಕಾರಕ್ಕೆ ಬರುವವರೇ ಎಂಬುದು ಏಕೋ ಅನುಮಾನಾಸ್ಪದವಾಗಿದೆ.

ಮಾಯಾವತಿ ಗೆಲ್ಲುತ್ತಾರೋ ಇಲ್ಲವೋ ಅದು ಬೇರೆ ವಿಚಾರ, ಆದರೆ ಈ  ಮೂವರಲ್ಲೂ ಒಂದು ಸಾಮಾನ್ಯ ಅಂಶವಂತೂ  ಇದ್ದೇ ಇದೆ, ಈ ಮೂವರೂ ಎಂದೂ ಯಾವ ಪುರುಷ ನಾಯಕನ ಬೆನ್ನುಹತ್ತಿ ಹೋದವರಲ್ಲ. ಹಾಗೆ ನೋಡಿದರೆ ಎಷ್ಟೋ ಮಹಿಳಾ ಮುಖ್ಯಮಂತ್ರಿಗಳು ಬಂದರು, ಇಂದಿಗೂ ವಸುಂಧರಾ ರಾಜೇ ಅಂಥವರಿದ್ದಾರೆ, ಆದರೆ ಇವರುಗಳು ತಮ್ಮ ಸ್ವಶಕ್ತಿಯಿಂದ ಮೇಲೇರಿದವರಲ್ಲ.

ಮಮತಾ, ಲಲಿತಾ, ಮಾಯಾ ಮೂವರೂ ಯಾವುದೇ ಗಂಡಸಿನ ನೆರವಿಲ್ಲದೆ ರಾಜಕೀಯದಂಥ ಪುರುಷ ಪ್ರಧಾನ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ ತೋರಿಸಿದ್ದಾರೆ ಹಾಗೂ ರಾಜ್ಯದಲ್ಲಿನ ಅರ್ಧದಷ್ಟು ಪ್ರಜೆಗಳು ಹೆಂಗಸರನ್ನೇ ಅವಲಂಬಿಸಿದ್ದಾರೆ ಎಂಬುದನ್ನು ಆಡಿ ತೋರಿಸದೆ ಮಾಡಿದ್ದಾರೆ.

ಈ ಮೂವರ ರಾಜಕಾರಣ, ಅನ್ಯ ಪುರುಷ ರಾಜಕಾರಣಿಗಳ ನೀತಿ ನಿರ್ಧಾರಗಳ ತರಹವೇ ನಡೆಯುತ್ತದೆ. ಜೊತೆಗೆ ದಿನೇ ದಿನೇ ನಡೆಯುವ ರಾಜಕೀಯ ಆಕ್ರಮಣಗಳು, ದೈನಂದಿನ ಸಮಸ್ಯೆಗಳು, ಬಂದು ಸೇರುವ ಬಿಟ್ಟುಹೋಗುವ ಜನರ ಕಿರುಕುಳ ಇತ್ಯಾದಿ ಎಲ್ಲವನ್ನೂ ಸಹನೆಯಿಂದ ಎದುರಿಸುತ್ತಾರೆ.

ಈ ಮೂವರಿಗೂ ಈ ಗದ್ದುಗೆ ಪಾರಂಪರಿಕವಾಗಿ ಏನೂ ಸಿಗಲಿಲ್ಲ, ಇವರು ತಾವಾಗಿ ಕಿತ್ತುಕೊಂಡದ್ದು. ಇವರುಗಳು ಯಶಸ್ವಿಯಾಗಿ ನಡೆಯುತ್ತಿದ್ದ ಪಕ್ಷಗಳನ್ನು ಸೋಲಿಸಿ ತಮ್ಮ ಗೆಲುವನ್ನು ಸಾಧಿಸಿದ್ದಾರೆ. ಇವರು ಅಧಿಕಾರದಿಂದ ಹೊರಗಿದ್ದ ಕಾಲದಲ್ಲೂ ಎಂದೂ ಹತಾಶರಾಗಿ ಕೈಚೆಲ್ಲಿದವರಲ್ಲ ಹಾಗೂ ಘಳಿಗೆಗೊಂದು ಗಂಡಾಂತರ ಎದುರಿಸುತ್ತಲೇ ಇರುತ್ತಾರೆ.

ಇಂಥದೇ ಕಥೆ ಈಗ ಮನೆಮನೆಗಳಲ್ಲೂ ಕಾಣಬಹುದಾಗಿದೆ. ಎಷ್ಟೋ ಲಕ್ಷಾಂತರ ಮನೆಗಳು ಈಗ ಕೇವಲ ಹೆಂಗಸರ ಸ್ವಶಕ್ತಿಯಿಂದ ನಡೆಯುವಂತಾಗಿವೆ. ಈ ಮೂವರು ಮಹಿಳಾ ಮಂತ್ರಿಗಳಂತೆಯೇ ಪುರುಷ ಶಕ್ತಿಯೊಂದಿಗೆ ಹೋರಾಡುತ್ತಾ ನೆಮ್ಮದಿಯಾಗಿ ಬದುಕುತ್ತಿದ್ದಾರೆ, ಅಂದಿನ ಕಾಲದ ಅಬಲೆಯರಾಗಿ ಅಳುತ್ತಾ ಮೂಲೆ ಸೇರಿಲ್ಲ. ಈಗ ಅವರಿಗೆ ತಂದೆ, ಗಂಡ, ಅಣ್ಣ ತಮ್ಮ ಅಥವಾ ಮಗನ ಸಹಾಯ ಬೇಕಾಗಿಲ್ಲ.

ಆಧುನಿಕ ಶಿಕ್ಷಣದ ಎಲ್ಲಕ್ಕೂ ದೊಡ್ಡ ಕೊಡುಗೆ ಎಂದರೆ, ಈಗ ಹೆಂಗಸರಿಗೂ ಸಹ ಗಂಡಸರಿಗೆ ತಿಳಿಯುತ್ತಿದ್ದ ಎಲ್ಲಾ ಸಂಗತಿಗಳೂ ಗೊತ್ತು ಹಾಗೂ ಗಂಡಸರು ಕೈಯಾಡಿಸುತ್ತಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಇರುವ ದಿಟ್ಟವಾಗಿ ಹೆಜ್ಜೆಯೂರಬಲ್ಲರು.

ಕೇವಲ ಇಸ್ಲಾಂ ದೇಶಗಳನ್ನು ಹೊರತುಪಡಿಸಿ ವಿಶ್ವವಿಡೀ ಹೆಂಗಸರು, ಇಂದು ಮಾಯಾತಿ ತರಹ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಮರ್ಥರಾಗಿದ್ದಾರೆ. ಹಾಗಿದ್ದಾರೆ ಅದು ರಾಜಕೀಯದ ಅಧಿಕಾರವೇ ಇರಲಿ, ಮನೆಯ, ಬಿಸ್‌ನೆಸ್‌ನ, ವ್ಯವಸ್ಥೆಯ ಕುರಿತಾಗಿರಲಿ, ಇಡೀ ರಾಜ್ಯ ಅಥವಾ ದೇಶದ್ದೇ ಇರಲಿ, ಎಲ್ಲ ಸಲೀಸೆನಿಸಿದೆ.

ಜರ್ಮನಿಯ ಏಂಜೆಲಾ ಮಾರ್ಕೆಲ್ ‌ತಮ್ಮ ಸ್ವಶಕ್ತಿಯಿಂದ ಯೂರೋಪಿನ ಅತಿ ಶಕ್ತಿಶಾಲಿ ನಾಯಕಿ ಎನಿಸಿದ್ದಾರೆ. ಹಿಲೆರಿ ಕ್ಲಿಂಟನ್ ರಾಷ್ಟ್ರಪತಿ ಆಗಿದ್ದಾರೆಂದರೆ ಅದು ಬಿಲ್ ‌ಕ್ಲಿಂಟನ್‌ರ ಸಹಾಯದಿಂದಲ್ಲ ತಮ್ಮ ಸ್ವಶಕ್ತಿಯ ಆಧಾರದಿಂದ ಮಾತ್ರ.

ಇಲ್ಲಿ ಅಗತ್ಯ ಇರುವುದೆಲ್ಲ ಕೇವಲ ಧೈರ್ಯದ್ದು ಮಾತ್ರ, ಸಂಕಲ್ಪದ್ದು ಮಾತ್ರ.... ಇದು ಎಲ್ಲಾ ಸ್ತ್ರೀ-ಪುರುಷರಲ್ಲೂ ಸಮಾನವಾಗಿ ಕಂಡುಬರುತ್ತದೆ. ಅಗತ್ಯ ಇರುವುದು ಸಾಮಾಜಿಕ ಸಂಘಟನೆ ಮಾತ್ರ, ಇದು ಸ್ತ್ರೀ-ಪುರುಷರ ಮೇಲೆ ಬಂಧನ ಹೇರುವುದಿಲ್ಲ ಅಥವಾ ಸರಿಸಮಾನ ಬಂಧನ ಹೇರುತ್ತದೆ. ಜೆಂಡರ್‌ ಇಂದಿನ ಯುಗದಲ್ಲಿ ನಿರರ್ಥಕ ಎನಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ