ಬಂದಿದೆ ಹೊಸ ಸಂವತ್ಸರ
ವಸಂತನ ಆಗಮನ
ಚೈತ್ರಮಾಸ ತಂದಿದೆ ಗಿಡಮರಗಳಲಿ
ಹೊಸ ಚಿಗುರು ಕೋಗಿಲೆಯ ಕೂಜನ

ಮನೆಮನೆಗಳಲ್ಲಿ ತಂದಿದೆ
ಹೊಸ ಹರ್ಷ, ಬೇವುಬೆಲ್ಲದ
ಸಮ್ಮಿಶ್ರ ಸಂತಸದ ಹೊನಲು
ಬಾಗಿಲಿಗೆ ಮಾವಿನ ತೋರಣ

ಹೋಳಿಗೆ ಪಾಯಸದ ಘಮ
ಹೊಸಬಟ್ಟೆಯ ಸಂಭ್ರಮ
ಪಂಚಾಂಗ ಶ್ರವಣ, ಮುಂಬರುವ
ದಿನಗಳ ಫಲಾಫಲ ತಿಳಿಯುವ ಕಾತುರ

ತರಲಿ ಎಲ್ಲರ ಬಾಳಲ್ಲೂ ಸಿಹಿಯ
ಸಂತಸ, ಮರೆಯಲಿ ಹಳೆಯ
ಕಹಿಯ ಘಟನೆಗಳ ಆರೋಗ್ಯ, ಐಶ್ವರ್ಯ ನೆಮ್ಮದಿ ವೃದ್ಧಿಸಲಿ
ಶುಭಾ ಶ್ರೀನಾಥ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





