ತೀರ್ಪು ಯಾತನೆ ಕೊಡದೆ ಸಾಂತ್ವನ ನೀಡಲಿ
ಸುಪ್ರೀಂಕೋರ್ಟ್ ತನ್ನ ಹೊಸದೊಂದು ತೀರ್ಪಿನಲ್ಲಿ ಅತ್ಯಾಚಾರದ ವಿಷಯಗಳಲ್ಲಿ ರಾಜಿ ಮಾಡಿಸುವ ಪ್ರಯತ್ನವನ್ನು ಕಾನೂನಿಗೆ ವಿರುದ್ಧ ಎಂದು ಹೇಳಿ ಅತ್ಯಾಚಾರಿ ಮತ್ತು ಸಂತ್ರಸ್ತೆಯ ನಡುವೆ ಏನಾದರೂ ಒಪ್ಪಂದ ಉಂಟಾದರೆ, ಒಂದುವೇಳೆ ಅವರಿಬ್ಬರ ಮದುವೆ ಆಗಿಹೋದರೂ ಮೊಕದ್ದಮೆ ನಡೆಸಲಾಗುವುದು ಎಂದಿದೆ. ಮಧ್ಯಪ್ರದೇಶದ ಗುನಾ ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ನಡೆಯುತ್ತಿರುವ ಅತ್ಯಾಚಾರದ ಒಂದು ಕೇಸ್ನಲ್ಲಿ ಸಂತ್ರಸ್ತಿ ಇನ್ನೂ ಅಪ್ರಾಪ್ತ ವಯಸ್ಕಳಾಗಿದ್ದಳು. ಅತ್ಯಾಚಾರಿಗೆ 5 ವರ್ಷದ ಶಿಕ್ಷೆಯಾಗಿತ್ತು. ಆದರೆ ಉಚ್ಚ ನ್ಯಾಯಾಲಯ ಎರಡೂ ಪಕ್ಷದವರು ರಾಜಿಯಾಗಿದ್ದರಿಂದ ಅತ್ಯಾಚಾರಿಯನ್ನು ಬಿಡುಗಡೆ ಮಾಡಿತು.
ಉಚ್ಚ ನ್ಯಾಯಾಲಯ ಆತ್ಯಾಚಾರಿಯನ್ನು ಬಿಡುಗಡೆ ಮಾಡಿದಾಗ ಅವನು ಬರೀ 1 ವರ್ಷ ಶಿಕ್ಷೆ ಅನುಭವಿಸಿದ್ದ. ಈ ಕೇಸು ಸುಪ್ರೀಂಕೋರ್ಟ್ಗೆ ಏಕೆ ಬಂತೋ ಸ್ಪಷ್ಟವಾಗಿಲ್ಲ. ಆದರೆ ಸುಪ್ರೀಂ ಕೋರ್ಟ್, ಅತ್ಯಾಚಾರ ಒಬ್ಬ ಹುಡುಗಿಯ ಮೇಲೆ ಮಾತ್ರ ಆಗಿರದೆ ಇಡೀ ಸಮಾಜದ ಮೇಲೆ ಆಗಿದೆ. ಪರಸ್ಪರ ರಾಜಿಯಿಂದ ಅದನ್ನು ಅಲ್ಲಗಳೆಯಲಾಗುವುದಿಲ್ಲ. ಮೊಕದ್ದಮೆ ನಡೆದೇ ತೀರುತ್ತದೆ ಎಂದು ಛೀಮಾರಿ ಹಾಕಿತು.
ಸುಪ್ರೀಂ ಕೋರ್ಟ್ ಈ ಹಿಂದೆಯೂ ಇದೇ ರೀತಿ ಚೆನ್ನೈ, ಮುಂಬೈ ಮತ್ತು ಕೋಲ್ಕತಾ ಉಚ್ಚ ನ್ಯಾಯಾಲಯಗಳ ವಿಷಯದಲ್ಲಿ ಅತ್ಯಾಚಾರದಂತಹ ಹೀನ ಅಪರಾಧವನ್ನು ಪರಸ್ಪರ ಒಪ್ಪಂದದ ಅಪರಾಧವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.
ಸುಪ್ರೀಂ ಕೋರ್ಟ್ನ ಭಾವನೆ ಒಳ್ಳೆಯದು ಹಾಗೂ ಪ್ರಶಂಸನೀಯವಾಗಿರಬಹುದು. ಆದರೆ ಈ ತೀರ್ಪು ಖಂಡಿತಾ ತಪ್ಪು. ವಾಸ್ತವವಾಗಿ ಅತ್ಯಾಚಾರ ಇಡೀ ಸಮಾಜದ ವಿರುದ್ಧ ನಡೆದ ಅಪರಾಧ. ಅದು ಹತ್ಯೆಗಿಂತಲೂ ಅತ್ಯಂತ ಹೀನವಾದ ಅಪರಾಧವಾಗಿದೆ. ನಿಸ್ಸಂದೇಹವಾಗಿ ಗಂಡಸರು ತಮ್ಮ ಶಕ್ತಿಯನ್ನು ಮಹಿಳೆಯರ ಮೇಲೆ ಪ್ರಯೋಗಿಸಲು ಪ್ರಯತ್ನಿಸುತ್ತಾರೆ. ಆದರೆ ಅದರ ವ್ಯಾವಹಾರಿಕತೆಯನ್ನು ಮರೆಯಬಾರದು.
ಮೊಕದ್ದಮೆ ನಡೆಸಿ ಎಂದು ಹೇಳುವುದು ಸುಲಭ. ಆದರೆ ಅತ್ಯಾಚಾರದ ಪ್ರಸಂಗಗಳನ್ನು 10-12 ವರ್ಷಗಳು ಎಳೆದರೆ ಕೋರ್ಟ್ ತೀರ್ಮಾನ ಮಹಿಳೆಗೆ ನೆಮ್ಮದಿ ಕೊಡುವಂತಿರುತ್ತದೆಯೇ? ಅತ್ಯಾಚಾರಿ 10-12 ವರ್ಷಗಳು ಗೂಳಿಯಂತೆ ಓಡಾಡುತ್ತಿದ್ದರೆ ಸಂತ್ರಸ್ತೆಗೆ ಪ್ರತಿದಿನ ಮಾನಸಿಕ ಹಾಗೂ ಕಾನೂನಿನ ಅತ್ಯಾಚಾರ ಆಗುವುದಿಲ್ಲವೇ? ತೀರ್ಪಿನ ದಿನಾಂಕ ಹತ್ತಿರ ಬಂದಾಗ, ಅತ್ಯಾಚಾರಿಯ ಕಡೆಯವರು ಸಂತ್ರಸ್ತೆಯ ಬಳಿ ರಾಜಿ ಮಾಡಿಸಲು ಅಥವಾ ರಾಜಿಯಾಗುವಂತೆ ಬೆದರಿಸಲು ಬರುತ್ತಿದ್ದರೆ ಅದು ಗಾಯವನ್ನು ಕೆದಕಿದಂತಾಗುವುದಿಲ್ಲವೇ? ಪೊಲೀಸ್ ಅಧಿಕಾರಿ ಹಾಗೂ ಸರ್ಕಾರಿ ವಕೀಲರು ಸಂತ್ರಸ್ತೆಯನ್ನು ಪ್ರತಿ ಬಾರಿ ಕೋರ್ಟ್ನಲ್ಲಿ ಹಾಜರುಪಡಿಸುವ ಮೊದಲು ಈ ವಿಷಯದ ಬಗ್ಗೆ ಪದೇ ಪದೇ ಕೇಳುವುದಿಲ್ಲವೇ?
ವೊಕದ್ದಮೆ ನಡೆಯುವವರೆಗೆ ಪ್ರತಿದಿನ ಸಂತ್ರಸ್ತೆಯ ತಲೆಯ ಮೇಲೆ ಕತ್ತಿ ತೂಗಾಡುವಂತಿರುತ್ತದೆ. ಏಕೆಂದರೆ ಅತ್ಯಾಚಾರಿ ಒಂದು ವೇಳೆ ಬಿಡುಗಡೆಯಾದರೆ ಅವನು ಮನೆಯ ಮುಂದೆ ಎದೆ ಸೆಟೆಸಿಕೊಂಡು ನಿಲ್ಲುತ್ತಾನೆ. ಮೊಕದ್ದಮೆ ನಡೆಯುವಾಗ 2-3 ವರ್ಷಗಳವರೆಗೆ ಸಾಕ್ಷಿಗಳ ವಿಚಾರಣೆ ನಡೆಯುತ್ತದೆ. ಪ್ರತಿ ವಿಚಾರಣೆಗೆ ಮೊದಲು ಸಂತ್ರಸ್ತೆ ತನ್ನೊಂದಿಗೆ ನಡೆದ ಅನ್ಯಾಯದ ಕಥೆಯನ್ನು ಪುನರಾವರ್ತಿಸಬೇಕಾಗುತ್ತದೆ. ಮೊದಲು ಹೇಳಿದ ವೃತ್ತಾಂತ ನಂತರದ ವಿಚಾರಣೆಯಲ್ಲಿ ಬದಲಾಗದಂತೆ ಗಮನವಿಡಬೇಕು. ಅಂದರೆ ಸಂತ್ರಸ್ತೆ ಪ್ರತಿ ಬಾರಿ ಆ ದುರ್ಘಟನೆಯನ್ನು ನೆನಪಿಸಿಕೊಳ್ಳಬೇಕು.
ಮಧ್ಯಪ್ರದೇಶದ ಈ ಕೇಸ್ ಸುಪ್ರೀಂ ಕೋರ್ಟ್ಗೆ ಬರುವಷ್ಟರಲ್ಲಿ 10 ವರ್ಷಗಳು ಕಳೆದುಹೋಗಿತ್ತು. ಈಗ ಮತ್ತೆ ಉಚ್ಚ ನ್ಯಾಯಾಲಯಕ್ಕೆ ಬಂತು. ಅಪರಾಧಿಗೆ ಶಿಕ್ಷೆಯಾಗಬೇಕೆಂದು ಯಾವ ಸರ್ಕಾರಿ ವಕೀಲರಿಗೆ ಚಿಂತೆ ಇದೆ? ಸಂತ್ರಸ್ತೆಯೇ ಒತ್ತಾಯಿಸುತ್ತಿದ್ದರೆ ಏನಾದರೂ ಆಗಬಹುದು. ಇಲ್ಲದಿದ್ದರೆ ಸುಪ್ರೀಂ ಕೋರ್ಟ್ನ ಆದೇಶದ ಹೊರತಾಗಿಯೂ ಸಂತ್ರಸ್ತೆಯೊಂದಿಗೆ ಸಂಬಂಧ ನಡೆದೇ ಇಲ್ಲ. ಇಡೀ ಘಟನೆ ನಂಬಲರ್ಹವಲ್ಲ ಎಂದು ಹೇಳಬಹುದು.
ಅತ್ಯಾಚಾರದ ನಂತರ ಮೊದಲು ದೂರು ನೀಡುವುದು ಸುಲಭ. ಆದರೆ ಕೋರ್ಟ್ಗೆ ಓಡಾಡುವುದು ಬಹಳ ಕಷ್ಟ. ಇಂತಹ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದೇ ಸರಿಯಾದ ಉಪಾಯ. ಸಂತ್ರಸ್ತೆಗೆ ಅದು ನೆಮ್ಮದಿ ನೀಡುತ್ತದೆ. ಅವಳಿಗೆ ಹಣ ಸಿಗುವುದು, ಅತ್ಯಾಚಾರಿಯೊಂದಿಗೆ ಅವಳ ಮದುವೆಯಾಗುವುದು, ಅವಳು ತನ್ನೊಂದಿಗ ನಡೆದ ದೌರ್ಜನ್ಯವನ್ನು ಮರೆತು ಹೊಸ ಜೀವನ ಆರಂಭಿಸಬಹುದು. ಅತ್ಯಾಚಾರಿಗೆ ಸಮಯಂತೂ ಬಹಳ ಇರುತ್ತದೆ. ಸಂತ್ರಸ್ತೆಗೆ ಕೆಲವೇ ತಿಂಗಳುಗಳು ಇರುತ್ತವೆ. ಆದರೆ ನಮ್ಮ ವ್ಯವಸ್ಥೆ ಅವಳನ್ನು ವರ್ಷಾನುಗಟ್ಟಲೆ ತೂಗುಬಿಟ್ಟಿರುತ್ತದೆ.
ಸುಪ್ರೀಂ ಕೋರ್ಟಿನ ತೀರ್ಪು ಸರಿಯಾದ ಕಾನೂನೇ ಆಗಿರಬಹುದು, ಸರಿಯಾದ ಸಾಮಾಜಿಕ ಎಚ್ಚರಿಕೆಯಾಗಿರಬಹುದು. ಆದರೆ ಅದು ಸಂತ್ರಸ್ತೆಗೆ ಘಾತಕವಾಗಿರುತ್ತದೆ. ಏಕೆಂದರೆ ಅವಳು ಹಳೆಯ ಯಾತನೆ ಮರೆತು ಹೊಸ ಜೀವನ ಆರಂಭಿಸಲು ಇಚ್ಛಿಸಿರುತ್ತಾಳೆ. ಕೇಸು ನಡೆಯುವಾಗ ಅವಳು ಮನೆ ಬದಲಿಸಿ ಬೇರೆಲ್ಲೂ ಹೋಗಲಾಗುವುದಿಲ್ಲ. ಕೋರ್ಟಿನ ತೀರ್ಪು ನೀರಲ್ಲಿ ಬಿದ್ದವರನ್ನು ರಕ್ಷಿಸಲು ಎಸೆದ ಹಗ್ಗ ಕೊರಳಿಗೆ ಬಿದ್ದ ಉರುಳಿನಂತಾಗುತ್ತದೆ.
ಅಧಿಕಾರಿಗಳ ಮೂರ್ಖತನ : ಹದಗೆಟ್ಟ ನಗರಗಳು
ಸೌಲಭ್ಯದಾಯಕ ನಗರಗಳ ಯೋಜನೆ ರೂಪಿಸುವುದು ಕಠಿಣವಾಗುತ್ತ ಸಾಗಿದೆ. ಒಂದು ತಮಾಷೆಯ ಸಂಗತಿಯೆಂದರೆ, ರಸ್ತೆ ಮಧ್ಯದಲ್ಲಿ ವಿಭಜಕ ನಿರ್ಮಾಣ ಆಗಲಿ, ಬಿಡಲಿ ಅವೆಲ್ಲ ಸಂಗತಿಗಳನ್ನು ಈಚೆಗೆ ಸುಪ್ರೀಂ ಕೋರ್ಟ್ಗೆ ಎಳೆದು ತರಲಾಗುತ್ತಿದೆ. ಇವುಗಳ ತೀರ್ಪು ಬರಲು ವರ್ಷಗಟ್ಟಲೆ ಹಿಡಿಯುತ್ತದೆ ಮತ್ತು ವಕೀಲರ ಲಕ್ಷಾಂತರ ರೂ. ಶುಲ್ಕ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.
ದೆಹಲಿಯ ಎರಡು ಅತ್ಯಂತ ಶ್ರೀಮಂತ ಬಡಾವಣೆಗಳಲ್ಲಿನ ರಸ್ತೆಯನ್ನು ವಿಭಜನೆ ಮಾಡುವ ಕಡೆ ವಿಭಜಕ ನಿರ್ಮಾಣ ಆಗಲಿ ಬಿಡಿ, ಅದರ ಬಗ್ಗೆ ಪ್ರಕರಣವೊಂದು ಸುಪ್ರೀಂ ಕೋರ್ಟ್ನಲ್ಲಿದೆ. ದೆಹಲಿ ಉಚ್ಚ ನ್ಯಾಯಾಲಯದಲ್ಲಂತೂ ಇಂತಹ ನೂರಾರು ಪ್ರಕರಣಗಳಿವೆ.
ಪಾದಚಾರಿ ಮಾರ್ಗ ಎಷ್ಟು ಅಗಲವಾಗಿರಬೇಕು, ರೈಟ್ ಟರ್ನ್ ಬಂದ್ ಆಗಬೇಕು. ಇಲ್ಲವೇ ಬಂದ್ ಆಗಬಾರದು, ಪಾದಚಾರಿ ಮಾರ್ಗದಲ್ಲಿ ತಲೆಯೆತ್ತಿದ ಅಂಗಡಿಗಳನ್ನು ಹೇಗೆ ಖಾಲಿ ಮಾಡಿಸಬೇಕು, ಜನವಸತಿ ಪ್ರದೇಶದಲ್ಲಿ ಅಂಗಡಿಗಳು ಹೋಟೆಲ್ ಗಳು, ಆಫೀಸುಗಳು, ಆಸ್ಪತ್ರೆಗಳು ನಿರ್ಮಾಣ ಆಗಬೇಕೊ ಬೇಡವೋ, ಮನೆಯ ಎದುರು ಪಾರ್ಕಿಂಗ್ ಹಕ್ಕು ಇದೆಯೋ ಇಲ್ಲವೋ, ಹೆಚ್ಚುವರಿ ಕೋಣೆಯನ್ನು ಮನೆಯಲ್ಲಿ ಹೇಗೆ ಸೇರ್ಪಡೆ ಮಾಡಲಾಯಿತು ಎಂಬಂತಹ ಪ್ರಕರಣಗಳನ್ನು ಈಗ ಅಧಿಕಾರಿಗಳು ಅಲ್ಲ ನ್ಯಾಯಾಲಯಗಳು ತೀರ್ಮಾನಿಸಬೇಕಾದ ಸಂದರ್ಭ ಬಂದಿದೆ.
ನಮ್ಮ ಅಧಿಕಾರಿಗಳು ತರ್ಕದ ಮಾತುಗಳನ್ನು ಆಲಿಸದೇ ಇದ್ದಾಗ, ನ್ಯಾಯಾಲಯಗಳು ಇಂತಹ ಸಣ್ಣಸಣ್ಣ ಪ್ರಕರಣಗಳನ್ನು ಬಗೆಹರಿಸಲು ವರ್ಷಾನುಗಟ್ಟಲೇ ತೆಗೆದುಕೊಳ್ಳುತ್ತಿವೆ. ಬಹುತೇಕ ಎಲ್ಲ ನಗರಗಳ ರಸ್ತೆಗಳು ಅಧಿಕಾರಿಗಳ ಮೂರ್ಖತನದಿಂದ ಕೊಳೆತು ನಾರುತ್ತಿವೆ. ದೇಶದ ಒಂದೇ ಒಂದು ನಗರದ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ನಗರದ ಮಾತು ಬಿಡಿ, ಒಂದೇ ಒಂದು ಬೀದಿ ಕೂಡ ಅಂದವಾಗಿ ಕಾಣುವುದಿಲ್ಲ. ಪ್ರತಿಯೊಂದು ರಸ್ತೆಗೂ ಹತ್ತಾರು ಅಧಿಕಾರಿಗಳು ಅಧಿಕಾರ ಚಲಾಯಿಸುತ್ತಾರೆ. ನೌಕರಶಾಹಿಗಳ ನಿಷ್ಪ್ರಯೋಜಕ ನೀತಿಗಳಿಂದಾಗಿ ಪ್ರತಿಯೊಂದು ನಗರಗಳು ನರಕದಂತಾಗಿಬಿಟ್ಟಿವೆ. ಈಗಂತೂ ಜನರಿಗೆ ಇಂತಹ ನರಕದಲ್ಲಿ ಇರುವುದು ಅಭ್ಯಾಸವಾಗಿ ಹೋಗಿದೆ.
ದೇಶದ ಪ್ರತಿ ರಸ್ತೆಯೂ ಕಿರಿದಾಗಿದೆ. ರಸ್ತೆ ಸಂಚಾರ 4-5 ಪಟ್ಟು ಹೆಚ್ಚಾಗಿದೆ. ಒಂದು ವೇಳೆ ರಸ್ತೆ ಮಧ್ಯದಲ್ಲಿ ವಾಹನವೊಂದು ಕೆಟ್ಟು ನಿಂತರೆ ಅಥವಾ ಎಡಬಲಬದಿಗೆ ತಿರುವು ಪಡೆಯಲು ಆರಂಭಿಸಿದರೆ ಕ್ಷಣಾರ್ಧದಲ್ಲಿ ವಾಹನಗಳು ಸಾಲಾಗಿ ನಿಂತುಬಿಡುತ್ತವೆ. ಬಳಿಕ ಆ ವಾಹನವನ್ನು ಅಲ್ಲಿಂದ ನೂಕಲು ಅಥವಾ ದೂರ ಸಾಗಿಸಲು ಗಂಟೆಗಳೇ ಬೇಕಾಗುತ್ತದೆ. ಸ್ಥಳದಲ್ಲಿ ಪೊಲೀಸರು ಇದ್ದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಏಕೆಂದರೆ ಇಲ್ಲಿನ ವ್ಯವಸ್ಥೆಯೇ ಹದಗೆಟ್ಟುಹೋಗಿದೆ. ತೊಂದರೆಯ ಹೊರತಾಗಿ ಇಲ್ಲಿ ಬೇರೇನೂ ಸಿಗದು.
ನ್ಯಾಯಾಲಯಗಳಲ್ಲಿ ಪ್ರಕರಣಗಳು ವರ್ಷಾನುಗಟ್ಟಲೆ ಹಾಗೆಯೇ ಉಳಿಯುತ್ತಿರುವುದರಿಂದ ಜನರು ಸುಸ್ತಾಗಿ ಹೋಗುತ್ತಿದ್ದಾರೆ. ಹಾಗೊಮ್ಮೆ ತೀರ್ಪು ಹೊರಬಿದ್ದರೂ ಅದು ಒಂದು ಪಕ್ಷಕ್ಕೆ ಲಾಭವಾಗಿ ಪರಿಣಮಿಸುತ್ತದೆ. ಮತ್ತೊಂದು ಪಕ್ಷಕ್ಕೆ ನಕಾರಾತ್ಮಕವಾಗಿ ಪರಿಣಮಿಸುತ್ತದೆ.
ರಸ್ತೆಗಳನ್ನು ನಿರ್ವಹಿಸುವ ಜವಾಬ್ದಾರಿ ಈಗ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅವುಗಳ ದುರಸ್ತಿ, ಅವುಗಳ ಅಗಲದ ನಿರ್ಧಾರ, ಸ್ವಚ್ಛತೆ, ಪಾರ್ಕಿಂಗ್ ನಿರ್ಧಾರ ಇವೆಲ್ಲವನ್ನು ಅತ್ಯಂತ ನಿಕಟವಾಗಿರುವ ಅಧಿಕಾರಿಯೇ ಕೈಗೊಳ್ಳಬೇಕು. ಆ ಅಧಿಕಾರಿಯೇ ಇದನ್ನು ಸಮರ್ಥವಾಗಿ ನಿರ್ವಹಣೆ ಮಾಡುವಂತಾಗಬೇಕು. ಏನಾದರೂ ಸಮಸ್ಯೆ ಉಂಟಾದರೆ ಆ ಅಧಿಕಾರಿಯನ್ನೇ ಅದಕ್ಕೆ ಹೊಣೆಗಾರನನ್ನಾಗಿ ಮಾಡಬೇಕು.
ನ್ಯಾಯಾಲಯಗಳಲ್ಲಿ ಚಿಕ್ಕಪುಟ್ಟ ಪ್ರಕರಣಗಳು ಬರದಂತೆ ತಡೆಯಲು ಪೊಲೀಸ್ ಬೂಥ್ಗಳ ಹಾಗೆ ರಸ್ತೆ ನಿರ್ವಹಣಾ ಬೂಥ್ಗಳು ನಿರ್ಮಾಣ ಆಗಬೇಕು ಅಥವಾ ಟ್ರ್ಯಾಫಿಕ್ ಪೊಲೀಸರೇ ರಸ್ತೆ ಪೊಲೀಸರಾಗಬೇಕು. ಅಲ್ಲಿ ಅವರು ರಸ್ತೆಗೆ ಸಂಬಂಧಪಟ್ಟ ಏನೆಲ್ಲ ತೀರ್ಮಾನ ಕೈಗೊಳ್ಳುವಂತಾಗಬೇಕು. ಸರ್ಕಾರಿ ಅಧಿಕಾರಿಗಳು ಜನರಿಗೆ ಸುಲಭವಾಗಿ ಸಿಗುವಂತಾಗಬೇಕು, ಆಗಲೇ ಪ್ರಗತಿ ಹೆಚ್ಚುತ್ತದೆ.
ಸಂಬಂಧಗಳಲ್ಲಿ ಅಡ್ಡಿಯಾಗುತ್ತಿರುವ ಧರ್ಮ
ವಿವಾಹ ಎಂಬುದು ಸ್ತ್ರೀ-ಪುರುಷರ ಕಾನೂನುಬದ್ಧ, ಸಾಮಾಜಿಕ, ಧಾರ್ಮಿಕ ಹೊಂದಾಣಿಕೆಯೋ ಅಥವಾ ಇಬ್ಬರು ವ್ಯಕ್ತಿಗಳ ನಡುವಿನ ಪರಸ್ಪರ ಹೊಂದಾಣಿಕೆಯೋ? ಯಾವುದರ ಮೇಲೆ ಸರ್ಕಾರಿ ಮುದ್ರೆ ಬೀಳುತ್ತೋ, ಆಗ ಒಬ್ಬರ ಕುರಿತಂತೆ ಇನ್ನೊಬ್ಬರಿಗೆ ಸಾಕಷ್ಟು ಹಕ್ಕು ಮತ್ತು ಅಧಿಕಾರಗಳು ದೊರೆಯುತ್ತವೆ.
ಅಮೆರಿಕ ಸುಪ್ರೀಂ ಕೋರ್ಟ್ 54ರ ಬಹುಮತದಿಂದ ಒಂದು ತೀರ್ಪು ಕೊಟ್ಟಿದೆ. ವಿವಾಹ ಮಾಡಿಕೊಳ್ಳುವ ವ್ಯಕ್ತಿಗಳಲ್ಲಿ ಒಬ್ಬರು ಪುರುಷ ಮತ್ತೊಬ್ಬರು ಮಹಿಳೆ ಆಗಿರಲೇಬೇಕೆಂಬ ಕಡ್ಡಾಯ ಷರತ್ತೇನಿಲ್ಲ. ಇದರರ್ಥ ಇಷ್ಟೆ, ಮದುವೆ ಎನ್ನುವುದು ಲಿಂಗ ಆಧಾರಿತ ಅಲ್ಲ. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ, ಒಂದೇ ಲಿಂಗದವರು ಅಂದರೆ ಸಲಿಂಗ ಮದುವೆಗೆ ಅಮೆರಿಕ ಸುಪ್ರೀಂಕೋರ್ಟ್ ಮಾನ್ಯತೆ ನೀಡಿದೆ. ಅದು ಈಗಾಗಲೇ ಅಮೆರಿಕದ 26 ರಾಜ್ಯಗಳಲ್ಲಿ ಮಾನ್ಯತೆ ಪಡೆದಿತ್ತು.
ಮದುವೆಯ ನಡುವೆ ಧರ್ಮ ಯಾವಾಗ ಮತ್ತು ಹೇಗೆ ನುಸುಳಿತು ಎಂದು ಹೇಳುವುದು ಕಷ್ಟ. ಆದರೆ ಸಕಲ ಸಂಕಷ್ಟಗಳನ್ನು ತಂದು ಗುಡ್ಡೆ ಹಾಕಿದ್ದು ಈ ಧರ್ಮವೇ. ಹೀಗೆ ಮಾಡು, ಹಾಗೆ ಮಾಡು, ಹಾಗೆ ಮಾಡಲೇಬೇಡ ಎಂದು ಬೋಧನೆ ಮಾಡುತ್ತದೆ. ಧರ್ಮದ ಆದೇಶ ಉಲ್ಲಂಘನೆ ಮಾಡಿದರೆ ನರಕ ಕಾಣ್ತೀಯಾ ಎಂದು ಹೆದರಿಸುತ್ತಾರೆ. ಗಂಡನನ್ನೇ ದೇವರು ಎಂದು ಕಾಣುವ, ಸತಿಯರನ್ನು ಸಹಿಸಿಕೊ, ಗಂಡ ಬಿಟ್ಟು ಹೋದರೆ 7 ವರ್ಷ ಕಾದಿರು. ಅವನು ಸತ್ತು ಹೋದರೆ ಅವನ ಹಿಂದೆಯೇ ಬೆಂಕಿಗೆ ಹಾರು ಮುಂತಾದ ನೈಸರ್ಗಿಕ ಉಡುಗೊರೆ ಅಲ್ಲ, ಅದು ಧರ್ಮದ ಕಾಣಿಕೆ. ಈ ರೀತಿಯ ನೂರಾರು ನಿರ್ಬಂಧಗಳನ್ನು ಹೇರಿದ್ದು, ಅದಕ್ಕೂ ಸಮಾಜಕ್ಕೂ ಯಾವುದೇ ಸಂಬಂಧ ಇಲ್ಲ.
ಸಮಾಜ ಇಬ್ಬರೂ ವ್ಯಕ್ತಿಗಳ ಪರಸ್ಪರ ಸಂಬಂಧವನ್ನು ಸಹಜವಾಗಿ ಸ್ವೀಕರಿಸುತ್ತದೆ. ಉದಾಹರಣೆಗೆ ಸೋದರರು, ತಂದೆ ಮಗ, ಮಾಲೀಕ ನೌಕರ, ಮನೆ ಮಾಲೀಕ ಬಾಡಿಗೆದಾರ ಹೀಗೆ ನೂರಾರು ಬಗೆಯ ಸಂಬಂಧಗಳನ್ನು ಸಮಾಜ ಸ್ವೀಕರಿಸುತ್ತದೆ. ಸಮಾಜ ವ್ಯಕ್ತಿಯೊಬ್ಬ ಇಟ್ಟುಕೊಂಡಿರುವಾಕೆಯನ್ನು, ದೇಹ ವ್ಯಾಪಾರ ಮಾಡು ವೇಶ್ಯೆಯನ್ನು ಕೂಡ ಸ್ವೀಕರಿಸುತ್ತದೆ. ಧರ್ಮವೇ ಸಮಾಜದಲ್ಲಿ ಅಡಚಣೆಯನ್ನು ಉಂಟುಮಾಡುತ್ತಿರುತ್ತದೆ. ಸುಪ್ರೀಂ ಕೋರ್ಟ್ ಮಾತ್ರ ಅದನ್ನು ಪರಿಪೂರ್ಣವಾಗಿ ಸಂವಿಧಾನ ವಿರೋಧಿ ಎಂದು ಹೇಳಿದೆ.
ಅಮೆರಿಕ ಸುಪ್ರೀಂ ಕೋರ್ಟ್ ಪ್ರಕಾರ, ವಿವಾಹ ಇಬ್ಬರು ವ್ಯಕ್ತಿಗಳ ನಡುವೆ ಇರುವ ಹೊಂದಾಣಿಕೆಯಾಗಿದೆ. ಲಿಂಗದ ಆಧಾರದಲ್ಲಿ ಬೇಧಭಾವ ಮಾಡಲಾಗದು. ಈಗ ಅಮೆರಿಕದಲ್ಲಿ ಸ್ತ್ರೀ-ಪುರುಷ, ಪುರುಷ-ಪುರುಷ, ಸ್ತ್ರೀ-ಸ್ತ್ರೀ ಹೀಗೆ ಮೂರು ಬಗೆಯ ಸಂಸಾರಗಳನ್ನು ಕಾಣಬಹುದು. ಈ ಮೂವರೂ ಜೋಡಿಗಳಿಗೆ ಒಂದೇ ಬಗೆಯ ಹಕ್ಕುಗಳಿರುತ್ತವೆ.
ಸಲಿಂಗ ಜೋಡಿಗಳನ್ನು ವಿವಾಹಿತ ಎಂದು ಭಾವಿಸುವ ಅರ್ಥ ಇಬ್ಬರಿಗೂ ಆಸ್ತಿಯಲ್ಲಿ ಸಮಪಾಲಿರುತ್ತದೆ. ಪಿತ್ರಾರ್ಜಿತ ಕಾನೂನು ಅನ್ವಯಿಸುತ್ತದೆ. ಮೂರನೆಯ ವ್ಯಕ್ತಿಯ ಹಸ್ತಕ್ಷೇಪ ವಿಚ್ಛೇದನಕ್ಕೆ ಕಾರಣವಾಗಬಹುದು.
ಇಬ್ಬರೂ ವ್ಯಕ್ತಿಗಳು ಮಗುವನ್ನು ದತ್ತಕ ತೆಗೆದುಕೊಳ್ಳಬಹುದು ಅಥವಾ ಡೋನರ್ ಸ್ಪರ್ಮ್ ಅಥವಾ ಅಂಡಾಣು ಅಥವಾ ಸರೊಗೆಸಿ ಸಂತಾನ ಮಾಡಿಕೊಳ್ಳಬಹುದು. ಅದರಲ್ಲಿ ಅದು ಒಬ್ಬರ ಜೈವಿಕ ಸಂತಾನವಾಗುತ್ತದೆ. ವಿವಾಹದ ಕಾನೂನು ಪುರುಷರಿಗೆ ಯಾವ ಹಕ್ಕುಗಳನ್ನು ನೀಡುತ್ತೋ, ಅದನ್ನು ಸಲಿಂಗ ಜೋಡಿಗಳಿಗೂ ನೀಡುತ್ತದೆ.
ಭಾರತದ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಲಕ್ಷಾಂತರ ಮೈಲಿ ದೂರದಲ್ಲಿದೆ. ಅದು ವಿವಾಹವನ್ನು ಧಾರ್ಮಿಕ ಸಂಸ್ಕಾರವೆಂದೇ ಭಾವಿಸುತ್ತದೆ. ವಿವಾಹದಲ್ಲಿ ಜಾತಿ, ಧರ್ಮ, ವರದಕ್ಷಿಣೆ, ಹಣ ಇವೇ ಅದರ ಪರಿಣಾಮಗಳು. ವಿವಾಹ ವಿಚ್ಛೇದನದ ಬಳಿಕ ಮಹಿಳೆಯ ಸ್ಥಿತಿ ಹೀನಾಯವಾಗುತ್ತದೆ. ವಿಧವೆಯರ ಭಯಾನಕ ಸ್ಥಿತಿ ಇವೆಲ್ಲ ವಿವಾಹವನ್ನು ಧಾರ್ಮಿಕ ಸಂಸ್ಕಾರ ಎಂದು ಭಾವಿಸಿರುವುದರಿಂದ. ಭಾರತದ ಸುಪ್ರೀಂ ಕೋರ್ಟ್ ಈಗ ಏನೇನು ಪಾಠ ಕಲಿಯುತ್ತೊ ನೋಡಬೇಕು.