ಇತ್ತೀಚೆಗಷ್ಟೇ ಹಿರಿತೆರೆ ಹಾಗೂ ಕಿರುತೆರೆ ನಟ, ನಿರ್ದೇಶಕ ದಿಲೀಪ್ ರಾಜ್ ಅಕಾಲಿಕ ನಿಧನದನ ಸುದ್ಧಿಯ ಆಘಾತದ ನಡುವೆಯೇ ಈಗ ಮತ್ತೊಬ್ಬ ಯುವ ಕಲಾವಿಧ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬರಹಗಾರ, ಸಂಭಾಷಣೆಕಾರ ಟಿ ಜಿ ನಂದೀಶ್ (37) ಬುಧವಾರ ಮೃತರಾಗಿದ್ದಾರೆ. ಸಿನಿಮಾ, ಧಾರಾವಾಹಿಗಳಲ್ಲಿ ಬರವಣೆಗೆ ಮೂಲಕ ಸಕ್ರಿಯರಾಗಿದ್ದ, ನಂದೀಶ್ ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಟಿ ಜಿ ನಂದೀಶ್ ಅವರು ತೀರ್ಥಹಳ್ಳಿಯ ಮಾಲೂರಿನವರು. ಪತ್ನಿ ಹರ್ಷಿತ, ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿಯನ್ನು ಅವರು ಅಗಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದ ಅವರು ನಿತ್ಯ ಪೋಸ್ಟ್ಗಳನ್ನು ಹಾಕುತ್ತಿದ್ದರು. ಬುಧವಾರವೂ ಸಹ ಕೆಲ ಪೋಸ್ಟ್ಗಳನ್ನು ಹಂಚಿಕೊಂಡಿದ್ದ ಅವರು, ಸಂಜೆ ವೇಳೆಗೆ ನಿಧನರಾಗಿದ್ದಾರೆ.
ನಟ ದಿಲೀಪ್ ರಾಜ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದ ಅವರು, ಈ ಬಗ್ಗೆ ಪೋಸ್ಟ್ ಕೂಡ ಹಂಚಿಕೊಂಡಿದ್ದರು. ಬೆಂಗಳೂರಿನಲ್ಲಿದ್ದ ಅರು ಊರಿಗೆ ಬಂದು ಅಲ್ಲಿಂದಲೇ ಬರವಣಿಗೆ ಕೆಲಸ ಮಾಡುತ್ತಿದ್ದರು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





