ಇತ್ತೀಚೆಗಷ್ಟೇ ಹಿರಿತೆರೆ ಹಾಗೂ ಕಿರುತೆರೆ ನಟ, ನಿರ್ದೇಶಕ ದಿಲೀಪ್​ ರಾಜ್​ ಅಕಾಲಿಕ ನಿಧನದನ ಸುದ್ಧಿಯ ಆಘಾತದ ನಡುವೆಯೇ ಈಗ ಮತ್ತೊಬ್ಬ ಯುವ ಕಲಾವಿಧ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬರಹಗಾರ, ಸಂಭಾಷಣೆಕಾರ ಟಿ ಜಿ ನಂದೀಶ್​ (37) ಬುಧವಾರ ಮೃತರಾಗಿದ್ದಾರೆ. ಸಿನಿಮಾ, ಧಾರಾವಾಹಿಗಳಲ್ಲಿ ಬರವಣೆಗೆ ಮೂಲಕ ಸಕ್ರಿಯರಾಗಿದ್ದ, ನಂದೀಶ್​ ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಟಿ ಜಿ ನಂದೀಶ್​ ಅವರು ತೀರ್ಥಹಳ್ಳಿಯ ಮಾಲೂರಿನವರು. ಪತ್ನಿ ಹರ್ಷಿತ, ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿಯನ್ನು ಅವರು ಅಗಲಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸದಾ ಆಕ್ಟೀವ್​ ಆಗಿದ್ದ ಅವರು ನಿತ್ಯ ಪೋಸ್ಟ್​ಗಳನ್ನು ಹಾಕುತ್ತಿದ್ದರು. ಬುಧವಾರವೂ ಸಹ ಕೆಲ ಪೋಸ್ಟ್​ಗಳನ್ನು ಹಂಚಿಕೊಂಡಿದ್ದ ಅವರು, ಸಂಜೆ ವೇಳೆಗೆ ನಿಧನರಾಗಿದ್ದಾರೆ.

ನಟ ದಿಲೀಪ್​ ರಾಜ್​ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದ ಅವರು, ಈ ಬಗ್ಗೆ ಪೋಸ್ಟ್​ ಕೂಡ ಹಂಚಿಕೊಂಡಿದ್ದರು. ಬೆಂಗಳೂರಿನಲ್ಲಿದ್ದ ಅರು ಊರಿಗೆ ಬಂದು ಅಲ್ಲಿಂದಲೇ ಬರವಣಿಗೆ ಕೆಲಸ ಮಾಡುತ್ತಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ