ಬರ್ಮಾದ ಸಾಮಾನ್ಯ ಗೃಹಿಣಿ ಅಂಗ್ ಸಾನ್ ಸೂ ಕೀ ಮುಂದೆ ಮಹಿಳೆಯರಿಗೆ ಆದರ್ಶಪ್ರಾಯರಾಗಿ ಯಾವ ರೀತಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ತಮ್ಮ ದೇಶಕ್ಕಾಗಿ ಎಂತಹ ತ್ಯಾಗ ಮಾಡಿದ್ದಾರೆ ಎಂಬುದನ್ನು ವಿವರವಾಗಿ ಅರಿಯೋಣವೇ…….?

ಅಂಗ್‌ ಸಾನ್‌ ಸೂ ಕೀ ಹುಟ್ಟಿದ್ದು 1945ರ ಜೂನ್‌ 19ರಂದು. ಅವರ ತಂದೆ ಅಂಗ್‌ ಸಾನ್‌ ಬರ್ಮಾ ಸ್ವಾಧೀನ ಸೇನೆಯ ಕಮಾಂಡರ್‌ ಆಗಿದ್ದರು. ಅವರ ತಾಯಿ ರಿನ್‌ ರಂಗೂನ್‌ ಜನರಲ್ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದರು.

ಬರ್ಮಾಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಅವರ ತಂದೆ ಮುಂಚೂಣಿಯ ನಾಯಕರಾಗಿದ್ದರಿಂದ ಅಲ್ಲಿನ ಜನರು ಅವರನ್ನು ರಾಷ್ಟ್ರಪಿತ ಎಂದೇ ಭಾವಿಸಿದ್ದಾರೆ. 1947ರಲ್ಲಿ ಸೂ ಕೀ ಕೇವಲ 2 ವರ್ಷದವರಿದ್ದಾಗ ಅವರ ತಂದೆಯನ್ನು ರಾಜಕೀಯ ಷಡ್ಯಂತ್ರದಿಂದಾಗಿ ಕೊಲ್ಲಲಾಯಿತು. 1960ರಲ್ಲಿ ಅಂಗ್‌ ಸಾನ್‌ ಸೂ ಕೀ ದೆಹಲಿಗೆ ಬಂದು ಅಲ್ಲಿನ ಲೇಡಿ ಶ್ರೀರಾಮ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಆ ಬಳಿಕ ಆಕ್ಸ್ ಫರ್ಡ್ ವಿ.ವಿ.ಯಿಂದ ತತ್ವಶಾಶ್ತ್ರ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. 1972ರಲ್ಲಿ ಮೈಕೆಲ್ ಎರಿಸ್‌ ಜೊತೆಗೆ ವಿವಾಹವಾಯಿತು.

ಹೋರಾಟ ಆರಂಭ

ಮನೆಗೆಲಸದಿಂದ ಬಿಡುವು ಸಿಕ್ಕಾಗ ಅವರು ಲೇಖನ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಹಿಮಾಲಯ ಕುರಿತಂತೆ ಪತಿ ನಡೆಸುತ್ತಿದ್ದ ಸಂಶೋಧನಾ ಕೆಲಸಕ್ಕೂ ಅವರು ನೆರವು ನೀಡುತ್ತಿದ್ದರು. 1988ರಲ್ಲಿ ಅವರ ತಾಯಿ ತುಂಬಾ ಅನಾರೋಗ್ಯ ಪೀಡಿತರಾದರು. ಅದು ಅವರ ಜೀವನದ ನಿರ್ಣಾಯಕ ಹಂತವಾಗಿತ್ತು. ತಮ್ಮ ಪತಿ ಹಾಗೂ ಮಕ್ಕಳನ್ನು ಬಿಟ್ಟು ಅವರು ಎಂಥದೊಂದು ದಾರಿಯಲ್ಲಿ ಸಾಗಿದರೆಂದರೆ, ಆ ದಾರಿ ಕಲ್ಲುಮುಳ್ಳಿನಿಂದ ಕೂಡಿದ್ದಾಗಿತ್ತು. ಅವರು ಸರ್ವಾಧಿಕಾರತ್ವದ ವಿರುದ್ಧ ಆಂದೋಳನಕ್ಕಿಳಿದರು. ಸೈನ್ಯಾಡಳಿತ ಅವರನ್ನು ಹತ್ತಿಕ್ಕಲು ಪ್ರಯತ್ನಿಸಿತು. ಅವರಿಗೆ ಬಗೆಬಗೆಯ ರೀತಿಯಲ್ಲಿ ಹೆದರಿಸಲು ನೋಡಿತು. ಆದರೆ ಯಾವ ಹೆದರಿಕೆಗೂ ಬಗ್ಗದೆ ಅಂಗ್‌ ಸಾನ್‌ ಸೂ ಕೀ ಸರ್ವಾಧಿಕಾರಿ ಧೋರಣೆಯನ್ನು ಬಲವಾಗಿ ಖಂಡಿಸುತ್ತ ಹೋರಾಟಕ್ಕೆ ಇಳಿದರು. ಆದರೆ ಸೈನ್ಯಾಡಳಿತ ಯಾವ ಕಾರಣವನ್ನೂ ಕೊಡದೆ ಆಕೆ ಚುನಾವಣೆಗೆ ಸ್ಪರ್ಧಿಸದಂತೆ ತಡೆಯೊಡ್ಡಿತು. ಒಂದು ಸಲ ಸಾರ್ವಜನಿಕ ರಾಲಿಯೊಂದರಲ್ಲಿ ಸೈನಿಕನೊಬ್ಬ ಅವರತ್ತ ರೈಫಲ್ ತೋರಿಸಿದಾಗ, ಅಂಗ್‌ ಸಾನ್‌ ಸೂ ಕೀ ಹೆದರದೆ ನಿಂತು, ``ಏನು ಅಪರಾಧ ಮಾಡಬೇಕೆನ್ನುತ್ತಿಯೋ ಮಾಡು. ಆದರೆ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ,'' ಎಂದರಂತೆ.

ಈ ಘಟನೆಯ 3 ತಿಂಗಳ ಬಳಿಕ ಅಂಗ್‌ ಸಾನ್‌ ಸೂ ಕೀ ತಮ್ಮ ಮನೆಯಲ್ಲಿ ವಿದ್ಯಾರ್ಥಿಗಳ ಸಮೂಹವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಆಗ ಸೈನಿಕರು ಮನೆಯೊಳಗೆ ನುಗ್ಗಿ ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗೆ ತಳ್ಳಿದರು. ಸೂಕೀ ಅವರನ್ನು ಅವರದೇ ಮನೆಯಲ್ಲಿ ಗೃಹಬಂಧನದಲ್ಲಿ ಇರಿಸಿದರು. ಸೈನ್ಯಾಡಳಿತದ ಈ ಕ್ರಮವನ್ನು ವಿರೋಧಿಸಿ ಆಕೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರ ಇಬ್ಬರು ಪುತ್ರರು ಕೂಡ ಅವರ ಜೊತೆ ಇರಲು ಬಂದರು. ಮೂರನೇ ದಿನ ಅವರ ಪತಿ ಉಪವಾಸ ಸತ್ಯಾಗ್ರಹಕ್ಕೆ ಕೈ ಜೋಡಿಸಿದರು. ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸದಿರಲಿ ಎಂದು ಸೈನ್ಯಾಡಳಿತ ವಿದ್ಯಾರ್ಥಿಗಳನ್ನು ಮುಕ್ತಗೊಳಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ