ಕಳೆದ ತಿಂಗಳು ದೇಶಾದ್ಯಂತ ಪಂಚರಾಜ್ಯಗಳ ಚುನಾವಣೆ ಮುಗಿದು ಮೇ 4 ರಂದು ಎಣಿಕೆ ಮುಗಿದು ಎಲ್ಲಾ ರಾಜ್ಯಗಳಲ್ಲಿಯೂ ಸ್ಪಷ್ಟವಾಗಿ ಜನಾದೇಶ ಪ್ರಕಟವಾಗಿದ್ದರೂ, ತಮಿಳುನಾಡಿನಲ್ಲಿ ಸ್ವಲ್ಪ ರಾಜಕೀಯ ಅನಿಶ್ಚಿತೆ ಮತ್ತು ಬಿಕ್ಕಟ್ಟು ತಲೆದೋರಿದ್ದು ತಮಿಳುನಾಡಿನ ಒಟ್ಟು 234 ಕ್ಷೇತ್ರಗಳಲ್ಲಿ ಅಚ್ಚರಿ ಎನ್ನುವಂತೆ ಪ್ರಥಮಬಾರಿಗೆ ಚುನಾವಣೆಯನ್ನು ಎದುರಿಸಿದ ತಮಿಳುನಾಡಿನ ಜನಪ್ರಿಯ ಸಿನಿಮಾ ನಟ ವಿಜಯ್ ಜೋಸೆಫ್ ಆವರ ⁠ಟಿವಿಕೆಗೆ 108 ಸ್ಥಾನಗಳಿದೆ. ವಿಜಯ್ ಜೋಸೆಫ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದು, ಆಯ್ಕೆಯಾದ 14 ದಿನಗಳ ಒಳಗೆ ಯಾವುದಾದರೂ ಒಂದು ಕ್ಷೇತ್ರಕ್ಕೆ ರಾಜಿನಾಮೆ ಕೊಡಬೇಕಾಗಿರುವುದರಿಂದ ತಾಂತ್ರಿಕವಾಗಿ ಸದ್ಯಕ್ಕೆ ⁠ಟಿವಿಕೆಗೆ 107 ಸ್ಥಾನಗಳಿದ್ದರೂ ತಮಿಳು ನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಜೋಸೆಫ್ ಅವರಿಗೆ ಮುಖ್ಯಮಂತ್ರಿ ಅಧಿಕಾರಕ್ಕೇರಲು ಅವಕಾಶ ಮಾಡಿಕೊಡದೇ ಇರುವುದರ ಕುರಿತಾಗಿ ಪರ ಮತ್ತು ವಿರೋಧ ಚರ್ಚೆ ನಡೆಯುತ್ತಿದ್ದು, ರಾಜಕೀಯ ಅರಿಯದ ವಿಜಯ್ ಅಭಿಮಾನಿಗಳು ಮತ್ತು ಅವಕಾಶವಾದಿ ಕಾಂಗ್ರೇಸ್ಸಿಗರು, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತಿರುವಾಗ, ಈ ಕುರಿತು ವಸ್ತುನಿಷ್ಠ ವರದಿ ಇದೋ ನಿಮಗಾಗಿ

ತಮಿಳುನಾಡಿನ ವಿಧಾನದಭೆಯ ಒಟ್ಟು 234 ಸ್ಥಾನಗಳಲ್ಲಿ ಕ್ಷೇತ್ರಗಳಲ್ಲಿ 118 ಸ್ಥಾನಗಳಷ್ಟು ಸರಳ ಬಹುಮತ ಗಳಿಸಿದ್ದ ಪಕ್ಷವು ಸುಲಭವಾಗಿ ಅಧಿಕಾರಕ್ಕೇರಬಹುದಾಗಿದೆ. ಆದರೆ ತಾಂತ್ರಿಕವಾಗಿ 107 ಸ್ಥಾನಗಳಿಸಿರುವ ⁠ಟಿವಿಕೆಕೆ ಸರಳ ಬಹುಮತ ಗಳಿಸಲು ಇನ್ನೂ 11 ಶಾಸಕರ ಬೆಂಬಲ ಅಗತ್ಯವಿದ್ದು ಅದಕ್ಕಾಗಿಯೇ ಚುನಾವಣಾ ಫಲಿತಾಂಶ ಬಂದ ದಿನದಿಂದಲೂ ಇವತ್ತಿನವರೆಗೂ ವಿಜಯ್ ಮತ್ತು ಅವರ ಪಕ್ಷದ ಹಿರಿಯ ನಾಯಕರು ಡಿ.ಎಂ.ಕೆ ಮತ್ತು ಎಐಎಡಿಎಂಕೆ ಪಕ್ಷದ ಹೊರತು ಪಡಿಸಿ 1,2,3,4,5 ಸ್ಥಾನಗಳಿಸಿರುವ ಎಲ್ಲಾ ಪಕ್ಷಗಳ ಬಳಿ ತಮಗೆ ಬೆಂಬಲ ನೀಡಬೇಕೆಂದು ಕೋರುತ್ತಿದೆ.

ಸಾಧಾರಣವಾಗಿ ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಇದ್ದಲ್ಲಿ, ಅತಿ ಹೆಚ್ಚು ಸ್ಥಾನಗಳಿಸಿರುವ ಪಕ್ಷವನ್ನು ರಾಜಭವನಕ್ಕೆ ಕರೆಸಿ ಅವರಿಂದ ಸರ್ಕಾರ ರಚಿಸಿ ಬಹುಮತ ಸಾಭೀತು ಮಾಡಲು ಸಾಧ್ಯವೇ? ಎಂಬುದನ್ನು ಅರಿತು, ನಂತರ ತಮ್ಮ ವಿವೇಚನೆಯಿಂದ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವು ರಾಜ್ಯಪಾಲರಿಗೆ ಸಾಂವಿಧಾನಿಕವಾಗಿ ಇದೆ. ವಿಜಯ್ ಮತ್ತು ಅವರ ಪಕ್ಷ ಇತರೇ ಪಕ್ಷಗಳ ಬೆಂಬಲಕ್ಕಾಗಿ ಪ್ರಯತ್ನಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯಪಾಲರೂ ಸಹಾ ಸ್ವಲ್ಪ ಸಮಯಾವಕಾಶವನ್ನು ನೀಡಿದ್ದಾರೆ.

ರಾಜಕೀಯದ ಗಂಧಗಾಳಿಯನ್ನೇ ಅರಿಯದ ತಮಿಳಿಗ ವೆಟ್ರಿ ಕಳಗಂ ಪಕ್ಷದ ವಿಜಯ ಸಮರ್ಥಕರು ಮತ್ತು ಕಳೆದ ನಾಲ್ಕೈದು ದಶಕಗಳಿಂದಲೂ ತಮಿಳುನಾಡು ಅಧಿಕಾರದ ರಾಜಕಾರಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎನ್ನುವಂತಾಗಿರುವ ಕಾಂಗ್ರೇಸ್ ಪಕ್ಷವರು ತಮ್ಮ ಇಂಡಿ ಕೂಟದ ಡಿ.ಎಂ.ಕೆ. ಪಕ್ಷಕ್ಕೆ ಕೈಕೊಟ್ಟು ವಿಜಯ್ ಪಕ್ಷಕ್ಕೆ ಸಮರ್ಥ ನೀಡಿ TVK ಪಕ್ಷಕ್ಕೆ ಸರ್ಕಾರ ರಚಿಸಲು ತಮಿಳುನಾಡು ರಾಜ್ಯಪಾಲರು ಅವಕಾಶ ನಿರಾಕರಿಸಿದ್ದಾರೆ ಎಂಬ ಗುಲ್ಲೆಬ್ಬೆಸಿ ತಮಿಳು ನಾಡಿನಾದ್ಯಂತ ಬೀದಿ ರಂಪಾಟದ ಜೊತೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣೀಭೂತರಾಗಿದ್ದಾರೆ.

ಗೋವಾ ಮೂಲದ ತಮಿಳು ನಾಡಿನ ರಾಜ್ಯಪಾಲದಾದ ಶ್ರೀ ರಾಜೇಂದ್ರ ಅರ್ಲೇಕರ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ, ವಿಜಯ್ ಜೋಸೆಫ್ ಅವರಿಗೆ ಅಧಿಕಾರವನ್ನು ಕೊಡಲು ಹಿಂಜರಿಯುತ್ತಿದ್ದಾರೆ ಎಂಬ ಅಪಾದನೆಯ ಜೊತೆಗೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇದೇ ರೀತಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದಂತಹ ಸಂಧರ್ಭದಲ್ಲಿ ಕರ್ನಾಟಕದಲ್ಲಿ ಅಂದಿನ ಸಂಧರ್ಭದಲ್ಲಿ ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ಅವರು ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದಲ್ಲದೇ, ಸದನದಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದನ್ನು ತಿಳಿಸಿರುವುದಲ್ಲದೇ, ಎಸ್. ಆರ್.ಬೊಮ್ಮಾಯಿ ಅವರ ಅಧಿಕಾರದ ಕುರಿತಾದ ತೀರ್ಪಿನಲ್ಲಿ ಉಚ್ಚನ್ಯಾಯಾಲಯವು ರಾಜ್ಯಪಾಲರು ರಾಜಭವನದೊಳಗೆ ಕುಳಿತು ಸಂಖ್ಯಾಬಲವನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ ಬದಲಾಗಿ ಬಹುಮತವನ್ನು ಸಾಬೀತುಪಡಿಸಲು ವಿಧಾನಸಭೆ ಮಾತ್ರ ಏಕೈಕ ಸಾಂವಿಧಾನಿಕ ವೇದಿಕೆಯಾಗಿದೆ ಎಂಬ ಐತಿಹಾಸಿಕವಾದ ತೀರ್ಪನ್ನು ನೆನಪಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ