ಸಮಾಜ ಸೇವೆ ಕೆಲವರಿಗೆ ರಕ್ತಗತವಾಗಿ ಬಂದಬಿಟ್ಟಿರುತ್ತೆ. ತಮ್ಮ ಹಿರೀಕರ ಮಾರ್ಗದರ್ಶನದಿಂದ ಅಥವಾ ಅವರು ನಡೆದ ದಾರಿಯಲ್ಲಿ ಸಾಗುತ್ತಾ ತಾವು ಅದೇ ದಾರಿಯಲ್ಲಿ ಮುಂದುವರಿಯುತ್ತಾರೆ. ಯಾರೂ ಕಾಣದ ಯಶಸ್ಸು, ಹೆಸರು ಬಂದಾಗ ಅತೀ ಸಂತಸಪಡುತ್ತಾರೆ. ಜನ ಗುರುತಿಸಿ ಗೌರವಿಸುವಷ್ಟರ ಮಟ್ಟಿಗೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಅಂಥವರ ಸಾಲಿಗೆ ಸೇರಿದವರೇ ವಿಮಲಾ ಸುಬ್ರಹ್ಮಣ್ಯಂ!

ನೇತ್ರ ಚಿಕಿತ್ಸಾ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ದಂತ ಶಿಬಿರ, ರಕ್ತದಾನ ಶಿಬಿರ ಹೀಗೇ ಮುಂದುವರಿಯುತ್ತದೆ ಇವರ ಸೇವಾ ಚಟುವಟಿಕೆಗಳು. ಬಡ ಮಕ್ಕಳಿಗೆ ಬಸ್‌ ಪಾಸ್‌, ಯೂನಿಫಾರಂ, ಶೂ, ಸಾಕ್ಸ್ ಕೊಡಿಸೋದು ತದನಂತರ ಪುಸ್ತಕ, ಪೆನ್ಸಿಲ್ ‌ಜೊತೆಗೆ ಶಾಲಾ ಶುಲ್ಕವನ್ನೂ ಸಹ ಕಟ್ಟುತ್ತಾ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಾರೆ.

ಮಹಿಳಾಮಣಿಗಳ ವಿಚಾರಕ್ಕೆ ಬಂದರೆ ವಿಧವೆಯರಿಗೆ ಹೊಲಿಗೆ ಯಂತ್ರ ಕೊಡಿಸುವ ಮುಖೇನ ಅವರ ಬಾಳಿನ ರಥ ಸಾಗಿಸಲು ನೆರವಾಗುತ್ತಾರೆ. ಅಂಗವಿಕಲ ಮಹಿಳೆಯರಿಗೆ ಅವಶ್ಯವೆನಿಸಿದ್ದನ್ನು ಕೊಡಿಸಿ ಅವರ ಸಂಕಷ್ಟಕ್ಕೆ ನೆರವಾಗುತ್ತಾರೆ. ಹಸಿದವರಿಗೆ ಊಟ, ನೊಂದವರಿಗೆ ಸಾಂತ್ವನ, ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುತ್ತ ಸಾಗುವ ಇವರು ಎಲ್ಲರಿಗೂ `ದೇವತಾ ಆಂಟಿ' ಆಗಿದ್ದಾರೆ.

04.01.1957ರಲ್ಲಿ ಮದನಪಲ್ಲಿಯ ಗಾರ್ಲ ಅಶ್ವರ್ತಂ ಶೆಟ್ಟಿ ಹಾಗೂ ಲಕ್ಷ್ಮಿದೇಮ್ಮನವರ ಮೂರನೇ ಪುತ್ರಿಯಾಗಿ ಜನಿಸಿದರು. ಬಾಲ್ಯದಿಂದಲೂ ಆಟಪಾಠಗಳಲ್ಲಿ ಮುಂದು. ಲಾಂಗ್‌ ಜಂಪ್‌, ಹೈ ಜಂಪ್‌, ರನ್ನಿಂಗ್‌ ರೇಸ್‌ಗಳಲ್ಲಿ ಅತಿ ಹೆಚ್ಚು ಬಹುಮಾನವನ್ನು ಪಡೆದಿರುವರು. ಜೊತೆಗೆ ತುಂಬು ಕುಟುಂಬವಾದ್ದರಿಂದ ಹಾಡು ಹಸೆ, ಕೈಕೆಲಸ ನೋಡನೋಡುತ್ತಲೇ ತಮ್ಮ ಜೊತೆ ಜೊತೆಯಾಗಿ ಬೆಳೆದು ಬಂದ ಕಲೆಗಳಾದವು. ಬೆಳೆದ ಹುಡುಗಿ ಸಕಲ ಕಲಾ ಸಂಪನ್ನೆಯಾಗಿದ್ದಳು. ವರನ ನೋಡಿ ಧಾರೆ ಎರೆದರು. ಅಲ್ಲಿಯೂ ತುಂಬು ಕುಟುಂಬ. ರಾಜಗೋಪಾಲ ಶೆಟ್ಟಿ ಹಾಗೂ ಆದಿಲಕ್ಷ್ಮಮ್ಮ ದಂಪತಿಗಳ ಪುತ್ರ ಸುಬ್ರಹ್ಮಣ್ಯಂರವರ ಕೈ ಹಿಡಿದರು. ತಂದೆ ತಾಯಿಯಿಂದ ಬಂದ ಸೇವಾ ಮನೋಭಾವಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆತು ಇವರ ಈ ಕಾರ್ಯಗಳಿಗೆ ಹೆಚ್ಚಿನ ನೀರೆರೆದವರು ಪತಿ ಸುಬ್ರಹ್ಮಣ್ಯಂ.

ಸತತ 25 ವರ್ಷಗಳಿಂದ ತ್ಯಾಗರಾಜ ನಗರದ ವಾಸವಿ ಸೇವಾ ಸಮಿತಿಯಲ್ಲಿ ಸದಸ್ಯರಾಗಿ, ಸಕ್ರಿಯವಾಗಿ ಭಾಗಿಯಾಗಿರುತ್ತಾರೆ. ಮೇಲು ಕಲಿಕೆ, ಗಾಯನ, ಸಮಾಜ, ಕಳಾಂದ್ರ ಸಂಸ್ಥೆಗಳಲ್ಲಿ ಆಜೀವ ಸದಸ್ಯರಾಗಿ ಸಂಸ್ಥೆಗಳ ಎಲ್ಲ ಕಾರ್ಯ ಕಲಾಪಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ. 2001ರಲ್ಲಿ ಪ್ರಾರಂಭವಾದ ತ್ಯಾಗರಾಜನಗರ ವಾಸವಿ ಮಹಿಳಾ ಮಂಡಳಿಯ ಪ್ರಮುಖ ಸ್ಥಾಪಕ ನಿರ್ದೇಶಕಿಯಾಗಿದ್ದು, ಮಂಡಳಿಯ ನಿರಂತರ ಚಟುವಟಿಕೆಗಳ ರೂವಾರಿ, ಆರೋಗ್ಯ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.

ಧಾರ್ಮಿಕ ಚಟುವಟಿಕಗಳಲ್ಲಿಯೂ ಸಕ್ರಿಯವಾಗಿ ಭಾಗಿಯಾಗುತ್ತಾ ತಮಿಳುನಾಡಿನ ವೆಲ್ಲೂರಿನಲ್ಲೂ ಭಜನಾ ಕಾರ್ಯಕ್ರಮ ನಡೆಸಿಕೊಟ್ಟ ಹೆಮ್ಮೆ ಇವರಿಗಿದೆ. ಅಲ್ಲದೇ ಇಲ್ಲಿನ ದೇವಾಲಯಗಳು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿಯೂ ಸತ್ಸಂಗ ನಡೆಸಿಕೊಂಡು ಬರುತ್ತಿದ್ದಾರೆ.

ಕ್ರಿಯಾಶೀಲತೆ ನಿಸ್ಪೃಹತೆಯೇ ಮೈವೆತ್ತಂತಿರುವ ಇವರು, ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾದ ಆಜೀವ ಸದಸ್ಯೆಯಾಗಿ, ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯಾಧ್ಯಕ್ಷೆಯಾಗಿ, ಸಂಸ್ಥೆಯ ಸಹ ಖಜಾಂಚಿಯಾಗಿ, ಉಪಾಧ್ಯಕ್ಷರಾಗಿ ಹಂತಹಂತವಾಗಿ ಬೆಳೆಯುತ್ತಿರುವರು. ಕರ್ನಾಟಕವಲ್ಲದೇ ಆಂಧ್ರ, ಕೇರಳ ಮಹಾರಾಷ್ಟ್ರಗಳಲ್ಲಿ ನಡೆಯುವ ಆರ್ಯವೈಶ್ಯ ಮಹಿಳಾ ಮಹಾಸಭಾದ ಕಾರ್ಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗಿಯಾಗುತ್ತ ಉತ್ತಮ ಮಾರ್ಗದರ್ಶಕರಾಗಿರೋದು ಹೆಚ್ಚಿನ ಸಂಗತಿಯೇ ಹೌದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ