ಹಿಂದೂ ವಿವಾಹದ ಕಾನೂನು ಯಾವ ಪುರುಷಾರ್ಥಕ್ಕಾಗಿ?

ಹಿಂದೂ ಮಹಿಳೆಯರಿಗೆ ವಿಚ್ಛೇದನದ ತೊಂದರೆ ಎಷ್ಟು ಹೀನಾಯ ಎನ್ನುವುದು ಸುಪ್ರೀಂಕೋರ್ಟ್‌ನ ಮೇ 2019ರ ತೀರ್ಪಿನಿಂದ ಸ್ಪಷ್ಟವಾಯಿತು.

ಉತ್ತರ ಪ್ರದೇಶದ ಇಟಾವಾ ನಗರದ ಪ್ರವೀಣ್‌ ಹಾಗೂ ನೀಲಮ್ ರ ವಿವಾಹ 1998ರಲ್ಲಿ ನಡೆದಿತ್ತು. ನೀಲಮ್ ರಿಗೆ ಆಗ ಕೇವಲ 18 ತುಂಬಿತ್ತು. ಇಬ್ಬರಿಗೂ ಒಬ್ಬಳು ಮಗಳು ಕೂಡ ಇದ್ದಾಳೆ. ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ, ಇಬ್ಬರೂ ಬೇರೆ ಬೇರೆ ವಾಸ ಮಾಡತೊಡಗಿದರು. 2009ರಲ್ಲಿ ಗಂಡ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನದ ಮೊಕದ್ದಮೆ ಹಾಕಿದ. ಹೆಂಡತಿಯ ಏನೇ ಕಾರಣಗಳಿರಬಹುದು, ಕೌಟುಂಬಿಕ ನ್ಯಾಯಾಲಯ ಒತ್ತಾಯಪೂರ್ವಕವಾಗಿ ನೂಕಿಕೊಂಡು ಹೊರಟಿದ್ದ ಸಂಬಂಧಕ್ಕೆ ಕಾನೂನುರೀತ್ಯಾ ಮುಕ್ತಿ ಕೊಡಬೇಕಿತ್ತು. ಆದರೆ ಆ ನ್ಯಾಯಾಲಯ ಅರ್ಜಿಯನ್ನು ರದ್ದುಗೊಳಿಸಿತು.

ಜೊತೆಗಿರಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ಗಂಡ ಜಿಲ್ಲಾ ನ್ಯಾಯಾಲಯದ ಕದ ತಟ್ಟಿದ. ಜಿಲ್ಲಾ ನ್ಯಾಯಾಲಯ 3 ವರ್ಷ ಕಾಯಿಸಿ 2012ರಲ್ಲಿ ವಿಚ್ಛೇದನ ನೀಡಲು ನಿರಾಕರಿಸಿತು.

ಪ್ರವೀಣ್‌ ಬಳಿಕ ಉಚ್ಚ ನ್ಯಾಯಾಲಯಕ್ಕೆ ಹೋದ. ಮೇ 2013ರಲ್ಲಿ ವಿಚ್ಛೇದನಕ್ಕೆ ಮಂಜೂರಾತಿ ನೀಡಲಿಲ್ಲ. ಪ್ರಕರಣ ಕೋರ್ಟಿಗೆ  ಬಂದು 15 ವರ್ಷ ಆಗಿತ್ತು. ಅಲ್ಲಿಯವರೆಗೆ ಇಬ್ಬರೂ ತಮ್ಮ ಯೌವನ ಮರೆತುಬಿಟ್ಟಿದ್ದರು.

ಗಂಡ ಛಲ ಬಿಡದೆ ಸಪ್ರೀಂ ಕೋರ್ಟ್‌ಗೂ ಹೋದ. ಇಬ್ಬರ ನಡುವಿನ ಹೊಂದಾಣಿಕೆಯ ಸಂದರ್ಭದಲ್ಲಿ ಹೆಂಡತಿಗೆ 10 ಲಕ್ಷ ರೂ. ನೀಡಲು ಹಾಗೂ 3 ಲಕ್ಷ ರೂ. ಫಿಕ್ಸೆಡ್‌ ಡಿಪಾಸಿಟ್‌ ಇಡುವುದಾಗಿ ಪ್ರಸ್ತಾಪ ಮುಂದಿಟ್ಟ. ಆದರೆ ಇದೆಲ್ಲ ಆಗಲು ಸುಪ್ರಿಂ ಕೋರ್ಟ್‌ಗೆ 6 ವರ್ಷಗಳೇ ಬೇಕಾದವು.

ಈ ಮಧ್ಯೆ ಎರಡೂ ಕಡೆಯವರಿಂದ ಹಲವು ಮೊಕದ್ದಮೆಗಳು ದಾಖಲಾದವು. 2009ರಲ್ಲಿ ಜೀವನಾಂಶಕ್ಕಾಗಿ ಕ್ರಿಮಿನಲ್ ಪ್ರೊಸೀಜರ್‌ ಕೋಡ್‌ನನ್ವಯ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆ ದಾಖಲಾಯಿತು. 2009ರಲ್ಲಿಯೇ ನೀಲಮ್ ಕೌಟುಂಬಿಕ ದೌರ್ಜನ್ಯದಡಿ ಮತ್ತೊಂದು ಮೊಕದ್ದಮೆಯನ್ನು ಹೂಡಿದಳು. 2002ರಲ್ಲಿ ವರದಕ್ಷಿಣೆ ಕಾಯ್ದೆಯನ್ವಯ ಒಂದು ಪ್ರಕರಣ ಹಾಗೂ ಐಪಿಸಿ ಕೋರ್ಟ್‌ 406 ಅನ್ವಯ ಬ್ರೀಟ್‌ ಆಫ್‌ ಟ್ರಸ್ಟ್ ಅನ್ವಯ ಪ್ರಕರಣ ದಾಖಲಾಗಿತ್ತು. ಅಷ್ಟೇ ಅಲ್ಲ, ಗಂಡನ ವಿರುದ್ಧ ಒಂದು ಡಕಾಯಿತಿ ಪ್ರಕರಣ ಕೂಡ ದಾಖಲಾಯಿತು. ಗಂಡ 5 ಜನರೊಂದಿಗೆ ಲೂಟಿ ಮಾಡಲು ಬಂದಿದ್ದ ಎಂದು ಆಕೆ ಅದರಲ್ಲಿ ಹೇಳಿದ್ದಳು.

ಆಂತರಿಕ ವಿವಾದಗಳು ಏನೇ ಆಗಿರಬಹುದು, ವಿವಾಹದ ಕುರಿತಂತೆ ಇಷ್ಟೊಂದು ಮೊಕದ್ದಮೆಗಳು ಸಾಮಾನ್ಯ ಎಂಬಂತಾಗಿವೆ. ಇದರಲ್ಲಿ ತೊಂದರೆಗೊಳಗಾಗುವವಳು ಮಹಿಳೆಯೇ ಹೊರತು ಪುರುಷನಲ್ಲ. ಯಾವ ಯುವತಿಯ ಮದುವೆ 1998ರಲ್ಲಿ ಯಾವ ಕನಸು ಹೊತ್ತು ಆಗಿರುತ್ತೊ ಏನೋ, ಆದರೆ ಅವರ ನಡುವೆ ಏನೇ ಮತಭೇದ ಬಂದರೂ 20 ವರ್ಷ ಆಕೆ ನ್ಯಾಯಾಲಯಕ್ಕೆ ಅಲೆದಾಡುವಂತಾಗಬಾರದು.

ವಕೀಲರ ಲಕ್ಷಾಂತರ ಫೀಗೆ ಬದಲಾಗಿ 13 ಲಕ್ಷ ರೂ. ಸಿಕ್ಕಿತು. ಇದು ಹೆಚ್ಚೇನು? ಅವರ ಯೌವನ ಈಗ ಮರಳಿ ಬಂದೀತೆ? ಮಗಳೇ ಈಗ ಮದುವೆಗೆ ಸಜ್ಜಾಗಿದ್ದಾಳೆ.

ಮಹಿಳೆಯರನ್ನು 20-30 ವರ್ಷ ವಿಚ್ಛೇದನವಿಲ್ಲದೆ ಸತಾಯಿಸುವ ಹಿಂದೂ ವಿವಾಹ ಕಾನೂನು ಯಾವ ಪುರುಷಾರ್ಥಕ್ಕೆ? ಇದು ಕೂಡ ತ್ರಿವಳಿ ತಲಾಖ್‌ನ ಸಮಸ್ಯೆಗಿಂತ ಕಡಿಮೆ ಏನಿಲ್ಲ. ಆದರೆ ಹಿಂದೂ ಧರ್ಮಾಧೀಶರು ಇದನ್ನು ತಲೆಗೆ ಸುತ್ತಿದ ಪೇಟಾ, ಹಣೆಗೆ ಹಚ್ಚಿಕೊಳ್ಳುವ ತಿಲಕವೆಂದು ಒಪ್ಪಿಕೊಂಡು ಮುನ್ನಡೆಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ