ಕಥೆ -  ಪೂರ್ಣಿಮಾ ಆನಂದ್‌

ಡಿಸೆಂಬರ್‌ ತಿಂಗಳು. ಈ ಬಾರಿ ಕಿಟಿ ಪಾರ್ಟಿ ಪದ್ಮಾಳ ಮನೆಯಲ್ಲಿತ್ತು. ತಮ್ಮ ಹೌಸಿ ಆಟದ ನಂಬರ್‌ ಬಂದಾಗಲೂ ಕೂಡ ಎಲ್ಲರಿಗಿಂತ ಹಿರಿಯರಾಗಿದ್ದ 55 ವರ್ಷದ ಶಾರದಮ್ಮ ಎಂದಿನಂತೆ ಖುಷಿಯಾಗಿರಲಿಲ್ಲ. ಉಳಿದ 9 ಸದಸ್ಯರು ಕಣ್ಣುಗಳಲ್ಲೇ ಆಂಟಿಗೆ ಏನಾಯಿತೆಂದು ಪ್ರಶ್ನಿಸಿಕೊಂಡಾಗ ಎಲ್ಲರೂ ತಮಗೆ ಗೊತ್ತಿಲ್ಲವೆಂದು ತಲೆಯಾಡಿಸಿದರು.

ಸದಸ್ಯರಲ್ಲಿ ಅತ್ಯಂತ ಕಿರಿಯಳು ಪದ್ಮಾ. ಅವಳು ಕೇಳಿದಳು, ``ಆಂಟಿ ಏನಾಯ್ತು? ಬಂದಾಗಿನಿಂದ ಸಪ್ಪಗಿದ್ದೀರಿ?''

ಶಾರದಮ್ಮ ಬಲವಂತವಾಗಿ ನಗುತ್ತಾ, ``ಇಲ್ಲ, ಅಂಥದ್ದೇನಿಲ್ಲ,'' ಎಂದರು.

``ಇಲ್ಲ ಆಂಟಿ. ಏನೋ ವಿಷಯ ಇದೆ. ಹೇಳಿ,'' ಕಾರುಣ್ಯಾ ಆಗ್ರಹಿಸಿದಳು.

``ಕಿರಣ್‌ ಚೆನ್ನಾಗಿದ್ದಾನಾ?'' ಶಾರದಮ್ಮನ ಆತ್ಮೀಯ ಗೆಳತಿ ಅನಿತಾ ಕೇಳಿದರು.

``ಚೆನ್ನಾಗಿದ್ದಾನೆ. ಮೊದಲು ಈ ರೌಂಡ್‌ ಮುಗಿಸೋಣ.’’

''ಹೌಸಿ ಆಟದ ಮೊದಲ ರೌಂಡ್‌ ಮುಗಿದಾಗ ಪದ್ಮಾ ಕೇಳಿದಳು,

``ಹೊಸ ರ್ಷಕ್ಕೆ ನೀವುಗಳು ಏನು ಪ್ಲಾನ್‌ ಮಾಡ್ಕೊಂಡಿದ್ದೀರಿ?''

ಸುಮನಾ ಹೇಳಿದಳು,``ಇನ್ನೂ ಪ್ಲಾನ್‌ ಮಾಡಿಲ್ಲ. ನೋಡೋಣ ಸೊಸೈಟಿ ಏನಾದ್ರೂ ವ್ಯವಸ್ಥೆ ಮಾಡ್ತಾರಾ ಅಂತ.''

ಸುನೀತಾಳ ಗಂಡ ವಿನೋದ್‌ ಸೊಸೈಟಿಯ ಕಮಿಟಿ ಮೆಂಬರ್‌ ಆಗಿದ್ದರು. ``ಈ ಬಾರಿ ಯಾವ ಪ್ರೋಗ್ರಾಂ ಇಲ್ಲಾಂತ ನಮ್ಮ ಯಜಮಾನರು ಹೇಳುತ್ತಿದ್ದರು,'' ಸುನೀತಾ ಹೇಳಿದಳು.

ಅದಕ್ಕೆ ಸರಿತಾ ರೇಗುತ್ತಾ, ``ಛೇ, ಸೊಸೈಟೀಲಿ ಎಷ್ಟು ಒಳ್ಳೆಯ ಪ್ರೋಗ್ರಾಂಗಳು ನಡೀತಿದ್ವು. ಹೊಸ ವರ್ಷದಂದು ಆಚೆ ಹೋಗಕ್ಕಾಗಲ್ಲ. ಆವತ್ತು ಹೋಟೆಲ್‌ಗಳಲ್ಲಿ ಬಹಳ ರಶ್‌ ಇರುತ್ತೆ. ಜೊತೆಗೆ ಕಾಸ್ಟ್ಲಿ ಕೂಡ. ಹಾಗೆ ಹೋದರೂ ಸಹ ಊಟ ಮಾಡಿ ವಾಪಸ್‌ ಬರೋದಷ್ಟೇ ನ್ಯೂ ಇಯರ್‌ ಸೆಲೆಬ್ರೆಷನ್‌  ಮುಗಿದುಹೋಯ್ತು. ಮಜಾನೇ ಇರಲ್ಲ. ಸೊಸೈಟೀಲಿ ಏನಾದರೂ ಪ್ರೋಗ್ರಾಂ ಇದ್ದಿದ್ರೆ ಚೆನ್ನಾಗಿತ್ತು,'' ಎಂದಳು.

ಪದ್ಮಾ ಮತ್ತೆ ಕೇಳಿದಳು, ``ಆಂಟಿ ನಿಮ್ಮದೇನು ಪ್ಲಾನ್‌? ಕಿರಣ್‌ ಮನೆಗೆ ಹೋಗ್ತೀರಾ?''

``ಇನ್ನೂ ಯೋಚನೆ ಮಾಡಿಲ್ಲ ಪದ್ಮಾ.''

ಹೌಸಿ ಆಡಿದ ನಂತರ ಎಲ್ಲರೂ ಇನ್ನೆರಡು ಆಟಗಳನ್ನು ಆಡಿ ತಿಂಡಿ ತಿಂದು ತಮ್ಮ ತಮ್ಮ ಮನೆಗೆ ಹೊರಟರು. ಶಾರದಮ್ಮ ಕೂಡ ಮನೆಗೆ ಬಂದರು. ಬಟ್ಟೆ ಬದಲಿಸಿ ಮಲಗಿಕೊಂಡರು. ಎದುರಿಗೆ ಗೋಡೆಯ ಮೇಲೆ ತೂಗುಹಾಕಿದ್ದ ಗಂಡ ಶೇಖರ್‌ರ ಫೋಟೋ ಮೇಲೆ ದೃಷ್ಟಿ ಬಿದ್ದಾಗ ಕಣ್ಣೀರಿನಿಂದ ದೃಷ್ಟಿ ಮಂಜಾಯಿತು.

ಶೇಖರ್‌ ತೀರಿಕೊಂಡು 7 ವರ್ಷಗಳಾಗಿದ್ದವು. ಹಾರ್ಟ್‌ ಅಟ್ಯಾಕ್‌ ಆಗಿ ತೀರಿಕೊಂಡಿದ್ದರು. ಒಬ್ಬನೇ ಮಗ ಕಿರಣ್‌ ಬೆಂಗಳೂರಿನಲ್ಲಿ ಎರಡು ಬೆಡ್‌ ರೂಮಿನ ಫ್ಲ್ಯಾಟ್‌ನಲ್ಲಿ ಇವರ ಜೊತೆಗೇ ಇದ್ದ. ಅಪ್ಪ ಸಾಯುವ 2 ತಿಂಗಳ ಹಿಂದೆ ಅವನ ಮದುವೆಯಾಗಿತ್ತು. ಕೆಲವು ತಿಂಗಳುಗಳ ನಂತರ ಸೊಸೆ ಅಂಜಲಿ ಬೇರೆ ಮನೆ ಮಾಡಲು ಬಯಸಿದಳು. ಅಂಜಲಿ ಅತ್ತೆಯೊಂದಿಗೆ ಎಂದಿಗೂ ಆ ಬಗ್ಗೆ ಮಾತನಾಡಲಿಲ್ಲ. ಆದರೆ ಕಿರಣನ ಮಾತುಗಳಿಂದ ಅವರಿಬ್ಬರೂ ಬೇರೆ ಇರಲು ಇಚ್ಛಿಸುತ್ತಾರೆಂದು ಶಾರದಮ್ಮನವರಿಗೆ ತಿಳಿಯಿತು. ಅವರು ಅಂಜಲಿಯನ್ನು ಯಾವಾಗಲೂ ಮಗಳಂತೆ ನೋಡುತ್ತಿದ್ದರು. ಅವಳು ತಪ್ಪು ಮಾಡಿದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತಮಗೆ ಮಗಳಿಲ್ಲದ ಕೊರತೆಯನ್ನು ಅಂಜಲಿಯನ್ನು ಕಂಡು ಪೂರೈಸಿಕೊಳ್ಳುತ್ತಿದ್ದರು.

ಕಿರಣನ ಆಫೀಸ್‌ ತುಮಕೂರು ರಸ್ತೆಯಲ್ಲಿತ್ತು. ಅವನು ಅಮ್ಮನಿಗೆ ಹೇಳಿದ, ``ಅಮ್ಮಾ, ಅಷ್ಟು ದೂರ ಹೋಗಿಬರಲು ಬಹಳ ಆಯಾಸವಾಗುತ್ತೆ. ಅದಕ್ಕೆ ಅಲ್ಲೇ ಒಂದು ಫ್ಲಾಟ್‌ ಕೊಂಡು ಇರೋಣ ಅಂದ್ಕೊಂಡಿದ್ದೀನಿ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ