ಶೇಖರ್‌ ಅಂದೂ ಸಹ ಆಫೀಸಿಗೆ ತಡವಾಗಿ ಬಂದಿದ್ದ. ಹಾಗೆ ಬಂದವನಿಗೆ ಅಚ್ಚರಿಯಾಗಿತ್ತು. ಆಫೀಸ್‌ ವಾತಾವರಣ ಗಂಭೀರ ಆಗಿರುವಂತೆ ಕಂಡಿತ್ತು. ಎಲ್ಲರೂ ಸೀರಿಯಸ್‌ ಆಗಿ ತಮ್ಮ ಕೆಲಸದಲ್ಲಿ ತೊಡಗಿದ್ದರು. ಸಾಧಾರಣವಾಗಿ ರಾಕೇಶ್‌, ಮಧುಮಿತಾ ಆಫೀಸ್‌ಗೆ ಬಂದು ಕೆಲಕಾಲ ಎಲ್ಲರೊಡನೆ ಹರಟಿ ಬಳಿಕ ಕೆಲಸ ಪ್ರಾರಂಭಿಸುತ್ತಿದ್ದರೂ ಈಗಾಗಲೇ ಬಿಝಿಯಾಗಿದ್ದರು.

ಶೇಖರ್‌ ತನ್ನ ಟೇಬಲ್‌ನಲ್ಲಿ ಕುಳಿತುಕೊಂಡವನೇ ಮೋಹನ್‌ಗೆ ಕೇಳಿದ, ``ಏನಿಂದು ಇಷ್ಟೊಂದು ಸೈಲೆಂಟ್‌ ಆಗಿ ಕೆಲಸ ಸಾಗುತ್ತಿದೆ?'' ಮೋಹನ್‌ ತಾನೇನೂ ಮಾತನಾಡದೆ ಮ್ಯಾನೇಜರ್‌ ಕೋಣೆಯತ್ತ ಕೈ ತೋರಿಸಿ ಏನೋ ಸನ್ನೆ ಮಾಡಿದ. ಶೇಖರ್‌ಗೆ ಮ್ಯಾನೇಜರ್‌ ಕೋಣೆಯಲ್ಲಿ ಬೇರೆ ಯಾರೋ ಇದ್ದಾರೆನ್ನುವಷ್ಟು ಅರ್ಥವಾಗಿತ್ತು. ಮತ್ತೆ ಕೆಲವು ನಿಮಿಷಗಳಲ್ಲಿ ಶೇಖರ್‌ಗೆ ಮ್ಯಾನೇಜರ್‌ ಕಡೆಯಿಂದ ಕರೆ ಬಂದಿತು. ಅತ್ತ ಹೋದ ಶೇಖರ್‌ಗೆ ವಿ.ಎಲ್. ರಾಜಾರಾಂ, ಮ್ಯಾನೇಜರ್‌ ಎನ್ನುವ ಫಲಕ ಕಾಣಿಸಿತು.

``ಕಮ್ ಇನ್‌....''

ಶೇಖರ್‌ ಒಳಹೋಗುತ್ತಿದ್ದಂತೆ ಸಂಸ್ಥೆಯ ಎಂ.ಡಿ. ಸತೀಶ್‌ ಚಂದ್ರ ಎದುರಿನ ಆಸನದಲ್ಲಿ ಕುಳಿತಿರುವುದು ಕಾಣಿಸಿತು. ಅವರ ಪಕ್ಕದಲ್ಲೇ ರಾಜಾರಾಂ ಆಸೀನರಾಗಿದ್ದರು.

``ಶೇಖರ್‌, ಏಕೆ ನೀವು ಒಂದು ವಾರದಿಂದ ತಡವಾಗಿ ಬರುತ್ತಿದ್ದೀರಿ?''

``ಕ್ಷಮಿಸಿ, ನನ್ನ ತಾಯಿಯ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಅವರಿಗೆ ಹಾರ್ಟ್‌ ಆಪರೇಷನ್‌ಗೆ ಎರಡು ಲಕ್ಷ ಬೇಕು. ಆ ದುಡ್ಡು ಹೊಂದಿಸುವ ಓಡಾಟದಲ್ಲಿ ನನಗೆ ಸರಿಯಾಗಿ ಕೆಲಸಕ್ಕೆ ಬರಲು ಸಾಧ್ಯವಾಗುತ್ತಿಲ್ಲ,'' ಎಂದ.

``ಸರಿ, ಆದರೆ ನಮ್ಮ ಸಂಸ್ಥೆಯ ಕೆಲಸ ಮುಖ್ಯ ತಾನೇ? ರಾವ್ಸ್ ಅಂಡ್‌ ರಾವ್ಸ್ ಸಂಸ್ಥೆಯ ಪ್ರಾಜೆಕ್ಟ್ ನ ಫೈನಲ್ ರಿಪೋರ್ಟ್ ಇಂದು ಸಂಜೆ ತಯಾರಿಸಬೇಕೆಂದು ತಿಳಿದಿದೆಯಲ್ಲವೇ?'' ಎಂ.ಡಿ. ಸತೀಶ್‌ ಚಂದ್ರ ಕೇಳಿದರು.

``ಹೌದು.... ನಾನದನ್ನು ತಯಾರಿಸಿದ್ದೇನೆ. ಇನ್ನರ್ಧ ಗಂಟೆಯಲ್ಲಿ ಅದನ್ನು ಕೊಡುತ್ತೇನೆ, ಮತ್ತೆ ಇನ್ನು ಮೇಲೆ ಪ್ರತಿ ದಿನ ಬೇಗನೇ ಬರುತ್ತೇನೆ,'' ಶೇಖರ್‌ ವಿನೀತನಾಗಿ ನುಡಿದ.

``ಶೇಖರ್‌ ನೀವು ಬಹಳ ಒಳ್ಳೆಯ ಕೆಲಸಗಾರರು. ನೀವು ಇದುವರೆಗೂ ನಮ್ಮ ಸಂಸ್ಥೆಗೆ ಬಹಳಷ್ಟು ಉತ್ತಮ ಪ್ರಾಜೆಕ್ಟ್ ಗಳನ್ನು ತಂದಿದ್ದೀರಿ. ಕೆಲಸದಲ್ಲಿನ ನಿಮ್ಮ ಆಸಕ್ತಿ ಶ್ರದ್ಧೆಗಳು ನನಗೆ ಹಿಡಿಸಿದೆ. ಆದರೆ ಈಗ ನಿಮ್ಮ ಕುಟುಂಬದೊಡನೆ ಕೆಲಸವನ್ನು ತಳುಕು ಹಾಕುತ್ತೀರುವಿರಿ. ಏಕೆ? ಹೀಗೆ ಮಾಡಬೇಡಿ, '' ಎಂದು ಎಂ.ಡಿ. ಹೇಳಿದಾಗ ಶೇಖರ್‌ ಮೌನವಾಗಿ ತಲೆ ಆಡಿಸಿದ.

ಶೇಖರ್‌ ಅಲ್ಲಿಂದ ಹಿಂತಿರುಗಲು ಒಪ್ಪಿಗೆ ಪಡೆದು ತನ್ನ ಟೇಬಲ್ ಬಳಿ ಬಂದ, ಅವನ ಹಿಂದೆಯೇ ಬಂದ ಸತೀಶ್‌ ಚಂದ್ರ, ``ಅಂದಹಾಗೆ ನಿಮ್ಮ ತಾಯಿ ಯಾವ ಆಸ್ಪತ್ರೆಯಲ್ಲಿದ್ದಾರೆ?'' ಕೇಳಿದರು.

``ಸರ್‌, ನಮ್ಮ ತಾಯಿ ಪೀಪಲ್ಸ್ ಟ್ರೀ ಆಸ್ಪತ್ರೆಯಲ್ಲಿದ್ದಾರೆ. ಡಾ. ಮಧುಸೂದನ್‌ರಿಂದ ಟ್ರೀಟ್‌ಮೆಂಟ್‌ ನಡೆಯುತ್ತಿದೆ.''

ಅಂದೆಲ್ಲ ಶೇಖರ್‌ಗೆ ಕೆಲಸ ನಿರ್ವಹಿಸಲು ಮನಸ್ಸೇ ಇರಲಿಲ್ಲ.

ರಾಕೇಶ್‌ ಕೇಳಿದ, ``ಏನಾಯ್ತು? ಎಂದಿನಂತೆ ಇಲ್ಲವಲ್ಲ,'' ಎಂದಾಗ ಶೇಖರ್‌ ತನ್ನ ತಾಯಿ ಆರೋಗ್ಯದ ಕುರಿತು ಹೇಳಿದ. ರಾಕೇಶ್‌ತನ್ನ ತಮ್ಮನಿಗೆ ಎಂಜಿನಿಯರಿಂಗ್‌ ಓದಿಸಬೇಕಾದಾಗ ಇದೇ ರೀತಿ ಕಷ್ಟವಾಗಿತ್ತು. ಆಗ ಯಾರೋ ಅನಾಮಧೇಯರಿಂದ ನನಗೆ ಸಹಾಯ ಸಿಕ್ಕಿತು ಎಂದದ್ದನ್ನು ಕೇಳಿ ಶೇಖರ್‌ಗೆ ಅಚ್ಚರಿ ಎನಿಸಿತಾದರೂ ಮತ್ತೆ ಹೆಚ್ಚೇನೂ ಕೇಳಲು ಹೋಗಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ