ಅನಾಥ ಪರಮೇಶಿ ಹೇಗೋ ಊರಿಗೆ ಬಂದು ಸೇರಿಕೊಂಡು ಊರಿನವನೇ ಆದ. ಊರ ಗೌಡರ ಅಕ್ಕರೆಯಿಂದ ಅವರ ಮನೆ ಮಗನಾದ. ಬೆಳೆದ ಮಗನಿಗೆ ಮದುವೆ ಮಾಡಲು ಗೌಡರು ಮುಂದಾದರು. ಮುಂದೆ ಪರಮೇಶಿ ಸಂಸಾರ ನಡೆದದ್ದು ಹೇಗೆ......?

ಸುರಸುಂದರ, ಸುರಸುಂದರಿ ಅನ್ನುವ ಹಾಗೆ ಸುರಪುರ ಸುಂದರವಾದ ಊರು. ಸುತ್ತಮುತ್ತ ಬೆಟ್ಟಗುಡ್ಡಗಳಿಂದ, ಹಳ್ಳಕೊಳ್ಳಗಳಿಂದ ಕಂಗೊಳಿಸುತ್ತಿತ್ತು. ಅಲ್ಲಿ ಎಲ್ಲ ಇದ್ದು ಇಲ್ಲಿನ ಜನ ಯಾವುದಕ್ಕೂ ಅವಲಂಬಿತರಾಗದೆ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದರು. ಸಮತಟ್ಟಾದ ಜಾಗದಲ್ಲಿ ಗೌಡರ ಮನೆಯಲ್ಲದೆ, ಕಷ್ಟ ಸುಖಕ್ಕೆ ಇರಲಿ ಎಂದು ತಂದಿಟ್ಟುಕೊಂಡಿದ್ದ. ಕುಲಸ್ತರ, ನೆಂಟರಿಷ್ಟರ ಮೂರ್ನಾಲ್ಕು ಮನೆಗಳಿದ್ದವು. ಆ ಊರಿನ ಉಳಿದ ಮನೆಗಳು ಅವರವರ ತೋಟ, ಗದ್ದೆ, ಜಮೀನಿನಲ್ಲಿದ್ದವು.

ಗದ್ದೆ ಬಯಲಿನಲ್ಲಿ ಕಲ್ಲು ಕಟ್ಟಡದಿಂದ ನಿರ್ಮಿಸಿದ ಪುಟ್ಟ ಕಲ್ಯಾಣಿಯು ಕುಡಿಯಲು ನೀರು ಒದಗಿಸುತ್ತಿತ್ತು. ಮಳೆ ಇಲ್ಲದೆ, ಬರಗಾಲ ಬಂದಾಗಲೂ ಎಲ್ಲೆಲ್ಲಿಂದೋ ಬಂದು ಜನ ಆ ಕೊಳದಿಂದ ನೀರನ್ನು ಹೊತ್ತೊಯ್ಯುತ್ತಿದ್ದರು. ಗೌಡರ ಜಮೀನಿನಲ್ಲಿಯೇ ಇದ್ದ ಒಂದು ಕೆರೆ ಅಲ್ಲದೆ, ಆ ಕಡೆ ಕಾಡಿನಂಚಿನಲ್ಲಿ ಹುಳ್ಳಿಕೆರೆ, ಈ ಕಡೆಚೋಕ್ರನ ಕೆರೆ, ಒಂದೆರಡು ಮೈಲಿ ನಡೆದರೆ ಕಟ್ಟೆಹೊಳೆ, ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಈ ಹೊಳೆ ಬೇಸಿಗೆಯಲ್ಲಿ ಗೂರಲು ಮನುಷ್ಯರು ಉಸಿರಾಡುವಂತೆ ನಿಧಾನವಾಗಿ ಹರಿಯುತ್ತಿತ್ತು. ಬಡವನು ಕೂಡ ಬದುಕು ಸಾಗಿಸಬಹುದಾದ ಊರು ಇದಾಗಿತ್ತು.

ಈ ಕಥೆಯ ನಾಯಕ ಪರಮೇಶಿ, ಪರಮೇಶ ಎಂಬುದು ಅವನ ಹೆಸರು. ಅದನ್ನು ಯಾರಿಟ್ಟರೊ ಅವನಿಗೂ ಗೊತ್ತಿಲ್ಲ. ತಾಯಿ ತಂದೆಯಿಲ್ಲದ ತಬ್ಬಲಿ ಹುಡುಗನಾದ ಅವನನ್ನು ಕೆಲವರು ಪರಮ ಎನ್ನುತ್ತಿದ್ದರು. ಇನ್ನೂ ಕೆಲವರು ಪರಮಿ ಎನ್ನುತ್ತಿದ್ದರು. ಕೆಲಸವಾಗಬೇಕಾದರೆ ಪರಮು ಎನ್ನುತ್ತಿದ್ದವರೇ ಕೋಪ ಬಂದಾಗ ಪರಮೇಶಿ ಎನ್ನುತ್ತಿದ್ದರು. ಅವನು ಯಾವುದಕ್ಕೂ ತಲೆ ಕೆಡಿಸಿಕೊಂಡವನಲ್ಲ.

ಇಕ್ಕಿದರೆ ತಾಯಿ, ಅಪ್ಪಿದರೆ ತಂದೆ ಎಂದು ಎಲ್ಲರೊಳಗೊಂದಾಗಿ ಜೀವನ ಸಾಗಿಸುತ್ತಿದ್ದ. ಇವನು ಅರಸೀಕೆರೆಯ ಕಡೆಯ ಒಂದು ಊರಿನವನು. ಗದ್ದೆ ಕೊಯ್ಲಿನ ಸಂದರ್ಭದಲ್ಲಿ ಆ ಹಳ್ಳಿಯ ಜನರ ಜೊತೆ ಇವನು ಬಂದ. ಆಗ ಇವನಿಗೆ ಹದಿನೈದೊ ಹದಿನಾರೋ ವರ್ಷಗಳಿರಬಹುದು. ಅಲ್ಲಿ ಇವನಿಗೆ ಸ್ವಂತದ್ದೆನ್ನುವುದು ಯಾವುದೂ ಇರಲಿಲ್ಲ. ಯಾರ ಮನೆಯಲ್ಲಾದರೂ ಏನಾದರೂ ಕೆಲಸ ಹೇಳಿದರೆ ಮಾಡುತ್ತಿದ್ದ. ಅವರು ಊಟಕ್ಕಿಟ್ಟರೆ ಊಟ ಮಾಡುತ್ತಿದ್ದ. ಎಲ್ಲೋ ಒಂದು ಕಡೆ ಜಾಗ ಸಿಕ್ಕಿದಲ್ಲಿ ಬಿದ್ದುಕೊಳ್ಳುತ್ತಿದ್ದ.

ಗದ್ದೆ ಕೊಯ್ಲು ಮುಗಿಸಿ ಊರಿಗೆ ಹೊರಟಾಗ ಗೌಡರು, ``ನೀನು ಇಲ್ಲಿಯೇ ಇದ್ದುಬಿಡು, ಅಲ್ಲಿ ಹೋಗಿ ಏನು ಮಾಡ್ತೀಯ? ಇಲ್ಲಿದ್ದರೆ ನಮ್ಮ ಮಕ್ಕಳ ಹಾಗೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ತೀವಿ,'' ಎಂದರು. ಅವನನ್ನು ಕರೆತಂದಿದ್ದ ಹಿರಿಯರು ಕೂಡ ಅದನ್ನೇ ಹೇಳಿದರು. ಗೌಡರಿಗೆ ಶಾಶ್ವತವಾಗಿ ಒಂದು ಆಳು ಸಿಕ್ಕಿದಂತಾಗುತ್ತದೆ ಎಂಬ ಲೆಕ್ಕಾಚಾರವಾದರೆ, ಪರಮೇಶಿಗೆ ತನ್ನ ಪರಿಸ್ಥಿತಿ ಒಪ್ಪಿಕೊಳ್ಳುವಂತೆ ಮಾಡಿತು. ಅವನು ಊರಿನಲ್ಲಿದ್ದಾಗ ಎಷ್ಟೋ ದಿನ ಊಟಕ್ಕೆ ಪರದಾಡಬೇಕಾಗುತ್ತಿತ್ತು.

ಒಂದೊಂದು ದಿನ ನೀರು ಕುಡಿದು ಮಲಗುತ್ತಿದ್ದುದು ನೆನಪಾಯಿತು. ಇಲ್ಲಿ ಬಂದಾಗಿನಿಂದ ಮೂರು ಹೊತ್ತು ಊಟ ತಿಂಡಿ ಸಿಗುತ್ತಿತ್ತಲ್ಲದೆ ಮನೆಯವರೆಲ್ಲ ಪರಮೇಶ, ಪರಮೇಶ.... ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಈ ಎಲ್ಲಾ ಕಾರಣಗಳಿಂದ ಅವನು ಇಲ್ಲಿಯೇ ಉಳಿಯಲು ತೀರ್ಮಾನಿಸಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ