ನೀಳ್ಗಥೆ - ಶಾರದಾ ಶೇಖರ್‌

ಡಿಸೆಂಬರ್‌ 13, ಕೆಲಸ ಮಾಡಲು ಆರಂಭಿಸಿ 8 ವರ್ಷಗಳು ಮುಗಿದಿವೆ. ಯೋಚಿಸುತ್ತಲೇ ಶರೀರದಲ್ಲಿ ಕಂಪನ ಉಂಟಾಯಿತು. ಕೆಲಸಕ್ಕೆ ಸೇರಿದಾಗ ಅವಳಿಗೆ 24 ವರ್ಷ. ಇಷ್ಟವಿಲ್ಲದಿದ್ದರೂ ಮನದಲ್ಲಿ ಮುಂದಿನ ತಿಂಗಳಿಗೆ ತಾನೂ 32 ವರ್ಷದವಳಾಗುತ್ತೇನೆ ಎಂಬ ವಿಚಾರ ಬಂತು. ಈ 8 ವರ್ಷಗಳಲ್ಲಿ ಜೀವನ ಬದಲಾಗಲೇ ಇಲ್ಲ. ಅಮ್ಮ ಮೊದಲಿನ ಹಾಗೇ ಇದ್ದಾರೆ, ತೀಕ್ಷ್ಣ ಮಾತಿನ ಮುಂಗೋಪಿ. ತಮ್ಮ ಕೂಡಾ ಹಾಗೇ ಇದ್ದಾನೆ. ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಸ್ವಭಾವ. ಮುಂಚೆಯಿಂದಲೇ ತಾಯಿಯ ಮೇಲೆ ಅವಲಂಬಿಸಿರುವಾತ. ಅಪ್ಪ ತೀರಿಹೋಗಿ 6 ವರ್ಷಗಳಾದವು. ಅವರೇ ಮನೆ ಕಟ್ಟಿಸಿದ್ದು. ಮನೆಯಲ್ಲಿ ಅಗತ್ಯದ ಸಾಮಾನುಗಳೆಲ್ಲಾ ಇವೆ. ಇದರ ನಂತರ ಕಾಲ ಸ್ಥಬ್ಧವಾಗಿದೆ.

ತನ್ನ ಜೀವನದಲ್ಲಿ ಬದಲಾವಣೆ ಬರಲಿ ಎಂದು ವಿದ್ಯಾ ಎಷ್ಟೋ ಪ್ರಯತ್ನಪಟ್ಟಿದ್ದಳು. ತನ್ನನ್ನು ತ್ಯಾಗಮೂರ್ತಿ ಎಂದು ಕರೆಯುವುದು ಅವಳಿಗಿಷ್ಟವಿರಲಿಲ್ಲ. ತಾನು ಮನೆಯ ಭಾರ ಹೊತ್ತಿದ್ದೇನೆ ಎಂದು ಅಕ್ಕಪಕ್ಕದವರು, ಬಂಧುಬಳಗ ಭಾವಿಸುವುದು ಅವಳಿಗೆ ಬೇಕಾಗಿರಲಿಲ್ಲ. ತಾನು ದೇವಿಯಾಗುವುದು ಅವಳಿಗೆ ಬೇಡವಾಗಿತ್ತು. ಆದರೆ ಅವಳ ಕೈಲಿ ಏನೂ ಇರಲಿಲ್ಲ.

ಆಫೀಸಿಗೆ ಹೋಗಲು ತಡವಾಗುತ್ತಿತ್ತು. ಅವಳು ತೀರಾ ಸಾದಾ ಆಗಿರುವ ತಿಳಿ ಗುಲಾಬಿ ಬಣ್ಣದ ಚೂಡಿದಾರ್‌ ಹಾಕಿಕೊಂಡಿದ್ದಳು. ದುಪ್ಪಟ್ಟಾವನ್ನು ಹರಡಿ ಹೊದ್ದುಕೊಂಡಿದ್ದಳು. ಚಪ್ಪಲಿ ಮೆಟ್ಟಿ ಕೈನೆಟಿಕ್‌ ಏರಿದಳು. ನೋಡಲು ತೆಗೆದುಹಾಕುವ ಹಾಗಿರಲಿಲ್ಲ ವಿದ್ಯಾ. ಅವಳೆಂದೂ ಅಲಂಕಾರ, ಮೇಕಪ್‌ ಮಾಡಿಕೊಂಡವಳಲ್ಲ.

ಕಾರಣ, ಸ್ವಲ್ಪ ಮಟ್ಟಿಗೆ ತಾಯಿ. ಆಕೆಗೆ ಅಲಂಕರಿಸಿಕೊಳ್ಳುವ ಹುಚ್ಚು ಬಹಳ. ಈ ವಯಸ್ಸಿನಲ್ಲೂ ಹೊಂದಾಣಿಕೆಯ ಸೀರೆ ಬ್ಲೌಸ್ ಜೊತೆಗೆ ಮ್ಯಾಚಿಂಗ್‌ ಒಡವೆಗಳನ್ನು ಧರಿಸುತ್ತಿದ್ದಳು. ತುಟಿಗಳಿಗೆ ಗಾಢ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುತ್ತಿದ್ದಳು. ನಡೆಯುವುದೂ ಕೂಡ ಸ್ಟೈಲೇ. ಅವಳಿಂದಾಗಿ ವಿದ್ಯಾಗೆ ಅಲಂಕಾರದಲ್ಲಿ ಆಸಕ್ತಿ ಹೊರಟುಹೋಗಿತ್ತು. ಅವಳಿಗೆ ತಾಯಿಯ ಜೊತೆ ಎಲ್ಲಿಗೆ ಹೋಗಲೂ ಇಷ್ಟವಿರಲಿಲ್ಲ. ಆದರೆ ತಾಯಿಗೆ ಏನೂ ಅನ್ನಿಸುತ್ತಿರಲಿಲ್ಲ. ಹೀಗೆಲ್ಲಾ ಅಲಂಕಾರ ಮಾಡಿಕೊಳ್ಳಬೇಡಿ ಎಂದು ಆಕೆಗೆ ಹೇಳುವುದು ಕಷ್ಟವಾಗುತ್ತಿತ್ತು. ಅವಳು ಯಾರ ಮಾತು ತಾನೇ ಕೇಳುತ್ತಿದ್ದಳು? ಅಪ್ಪನಿಗೆ ಇದ್ದದ್ದು ಇದೇ ದೂರು. ಅದೇ ಪ್ರಾಣವನ್ನೂ ತೆಗೆದುಕೊಂಡಿತು. ವಿದ್ಯಾ ಆಫೀಸು ತಲುಪಿದಳು. ಎಂದಿನಂತೆ ಎಲ್ಲರಿಗಿಂತ ಮುಂಚೆ ಬಂದಿದ್ದಳು. ತನ್ನ ಜಾಗದಲ್ಲಿ ಕುಳಿತು ಕಂಪ್ಯೂಟರ್‌ ಆನ್‌ ಮಾಡಿದಳು. ಸ್ಕ್ರೀನ್‌ಮೇಲೆ ಒಂದು ಚೀಟಿ ಅಂಟಿಸಲಾಗಿತ್ತು. ಕುಮಾರ್‌ಫೋನ್‌ಮಾಡಿದ್ದ. ನಿನ್ನ  ಹತ್ತಿರ ಅರ್ಜೆಂಟ್‌ ಕೆಲಸವಿದೆ ಎಂದು ಬರೆದಿದ್ದ ಚೀಟಿ. ಕೆಳಗೆ ಮೊಬೈಲ್‌ ನಂಬರ್‌ ಕೂಡಾ ಇತ್ತು.

ಹಿಂದಿನ ಸಂಜೆ ಹೊತ್ತಾದ ನಂತರ ಫೋನ್‌ ಬಂದಿತ್ತು. ಸಮಯ ಸರಿಯಾಗಿ ಹೇಳಬೇಕೆಂದರೆ 6 ಗಂಟೆ 40 ನಿಮಿಷ. ವಿದ್ಯಾ ಕೇವಲ 10 ನಿಮಿಷ ಮುಂಚೆ ಆಫೀಸಿನಿಂದ ಹೊರಟಿದ್ದು. ಹಾಗಾದರೆ ಕುಮಾರ್‌ ಇದೇ ಊರಲ್ಲಿದ್ದಾನೆ. ಅವನಿಗೆಂತಹ ಅರ್ಜೆಂಟ್‌ ಕೆಲಸವಿದೆ? ಹೀಗೆ ಎಂದೂ ಕುಮಾರ್‌ ಫೋನ್‌ ಮಾಡಿದವನಲ್ಲ. ಅವನಿಗೆ ಫೋನ್‌ ಮಾಡುವುದೋ ಬೇಡವೋ ಎಂಬ ಯೋಚನೆಯಲ್ಲಿ ಬಿದ್ದಳು. ಅವನಿಗೇನು ಬೇಕೋ ಯಾರಿಗ್ಗೊತ್ತು? ಅವನೇ ಫೋನ್‌ ಮಾಡಲಿ ಎಂದು ಯೋಚಿಸಿದಳು. ಊಟದ ಬಿಡುವಿನವರೆಗೆ ಅವಳು ಕುಮಾರನ ಫೋನನ್ನು ಅಸಹನೆಯಿಂದ ಕಾಯುತ್ತಿದ್ದಳು. ನಂತರ ಸುಮ್ಮನಿರಲಾಗಲಿಲ್ಲ. ಎರಡೂವರೆ ಗಂಟೆಗೆ ಅವಳೇ ಫೋನ್‌ ಮಾಡಿದಳು. ಕುಮಾರನ ದನಿ ಸ್ವಲ್ಪವೂ ಬದಲಾಗಿರಲಿಲ್ಲ. ಅವನ ದನಿ ಕೇಳುತ್ತಲೇ ವಿದ್ಯಾ ಜಡವಾದಳು. ಏನು ಮಾತನಾಡಬೇಕೆಂದು ತೋಚಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ