ಗಂಡನನ್ನು ಕಳೆದುಕೊಂಡು 3 ಮಕ್ಕಳ ಜವಾಬ್ದಾರಿ ಹೊರಬೇಕಾದ ಓದುಬರಹ ಕಲಿತಿರದ ಸುನಂದಮ್ಮನಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಮುಂದೆ ತಮ್ಮ ಸಂಸಾರ ನಡೆಯುವುದು ಹೇಗೆ? ಮಕ್ಕಳ ಭವಿಷ್ಯದ ಗತಿ ಏನು?

ಬಿ.ಕಾಂ. ಪದವಿ ಇದ್ದರೂ ಖಾಯಂ ಕೆಲಸ ಸಿಗದೆ ಹಿರಿಮಗ ಮಹೇಶ ಅತಂತ್ರನಾಗಿದ್ದ. ಆಗ ತಾನೇ ಪಿಯುಸಿ ಮುಗಿಸಿದ ಗೀತಾ ಡಿಗ್ರಿ ಕಾಲೇಜ್‌ ಸೇರಬೇಕಿತ್ತು. ರಾಯರ ಅಂತಿಮ ಸಂಸ್ಕಾರಕ್ಕೆ ಸೇರಿದ ನೆಂಟವರೆಲ್ಲರೂ ಆಕೆಗೆ ಎಷ್ಟೋ ಧೈರ್ಯ ತುಂಬಿದರು. ಯಾರೆಷ್ಟು ಹೇಳಿದರೂ ಆಕೆಯ ಗೋಳಾಟಕ್ಕೆ ಕೊನೆ ಮೊದಲು ಇರಲಿಲ್ಲ. ಆಗ ಅವರ ಸಹಾಯಕ್ಕೆ ದೃಢವಾಗಿ ನಿಂತರು ಆಕೆಯ ತಮ್ಮ ಶ್ರೀಕಂಠ.

``ಅಕ್ಕಾ, ನೀನು ಇಷ್ಟೊಂದು ಗಾಬರಿ ಆಗಬೇಡ. ಮನಸ್ಸು ಕಲ್ಲು ಮಾಡಿಕೊಂಡು ಮಕ್ಕಳ ಯೋಗಕ್ಷೇಮ ಗಮನಿಸು. ನಾನು ಈ ಸಂಸಾರ ಮುನ್ನಡೆಸಲು ಹೆಗಲು ಕೊಡುತ್ತೇನೆ. ಮುಂದೆ 2 ವರ್ಷಗಳಲ್ಲಿ ನಿನ್ನ ಮನೆ ಖಂಡಿತಾ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ,'' ಎಂದು ಸುನಂದಮ್ಮನನ್ನು ಸಮಾಧಾನಪಡಿಸಿದರು.

ಶ್ರೀಕಂಠ ಮಾಮ ಹೇಳಿದಂತೆಯೇ ನಡೆದುಕೊಂಡರು. ಒಂದು ಖಾಸಗಿ ಬ್ಯಾಂಕಿನಲ್ಲಿ  ಹಿರಿಯ ಗುಮಾಸ್ತರಾಗಿದ್ದ ಅವರು ಬ್ಯಾಂಕಿನ ಕೆಲಸ ಮುಗಿಸಿಕೊಂಡು, ದಿನ ಬಿಟ್ಟು ದಿನ ಅಕ್ಕನ ಮನೆಗೆ ತಪ್ಪದೆ ಹಾಜರಾಗುತ್ತಿದ್ದರು. ಮಾಮ ಮನೆಗೆ ಬಂದರೆಂದರೆ ಮಕ್ಕಳಿಗೆ ಹೊಸ ಹುರುಪು ಮೂಡುತ್ತಿತ್ತು. ಅವರ ಸತತ ಪ್ರಯತ್ನಗಳಿಂದ ಹಿರಿಮಗ ಮಹೇಶನಿಗೆ ತಂದೆ ಕೆಲಸ ಮಾಡುತ್ತಿದ್ದ ಪೋಸ್ಟ್ ಆಫೀಸಿನಲ್ಲಿ ಕೆಲಸ ದೊರಕಿತು. ಅದೇ ತರಹ ಭಾವನ ಆಫೀಸಿಗೆ ಹತ್ತಾರು ಸಲ ಅಲೆದಾಡಿ, ಅವರಿಗೆ ಬರಬೇಕಿದ್ದ ಬಾಕಿ ಹಣ, ಪಿ.ಎಫ್‌, ಗ್ರಾಚ್ಯುಯಿಟಿ ಇತ್ಯಾದಿ ಎಲ್ಲ ಸಕಾಲಕ್ಕೆ ಸಿಗುವಂತೆ ಮುತುವರ್ಜಿಯಿಂದ ಓಡಾಡಿದರು. ಆ ಹಣದಿಂದ ಮೊದಲು ಗೀತಾಳ ಮದುವೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು. ರಾಯರು ಬದುಕಿರುವಾಗಲೇ 40 60 ಸೈಟಿನಲ್ಲಿ 2 ರೂಮುಗಳ ಒಂದು ಮನೆ ಕಟ್ಟಿಸಿದ್ದರಿಂದ ವಾಸಕ್ಕೆ ಏನೂ ತೊಂದರೆ ಇರಲಿಲ್ಲ. ಇಲ್ಲದಿದ್ದರೆ ಇಂದಿನ ದುಬಾರಿ ದಿನಗಳಲ್ಲಿ ಮೈಸೂರಿನಲ್ಲಿ ಬಾಡಿಗೆ ಕಟ್ಟಿಕೊಂಡು ಮಧ್ಯಮ ದ ಸಂಸಾರ ನಡೆಸುವುದು ಸುಲಭವಾಗಿರಲಿಲ್ಲ. ಹೀಗೆ ದಿನಗಳು ಕಳೆಯಲು, ಗೀತಾ ಮಗುವಿನ ತಾಯಿಯಾದಳು. ಬಹಳ ದಿನಗಳ ನಂತರ ಆ ಮನೆಯಲ್ಲಿ ಆನಂದದ ವಾತಾವರಣ ಮೂಡಿತು. ಮಹೇಶನಿಗೆ ಕೆಲಸಾವಾಗಿ ಈಗ ಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ ಅವನಿಗೂ ಮದುವೆ ಮಾಡಬೇಕೆಂದು ಸುನಂದಮ್ಮ ಬಯಸಿದರು. 4-6 ಕಡೆ ಸಂಬಂಧಗಳನ್ನು ವಿಚಾರಿಸಲಾಗಿ ಬಡವರ ಮನೆ ಹುಡುಗಿಯನ್ನು ತಂದುಕೊಳ್ಳುವುದೇ ಸೂಕ್ತ ಎಂದು ಅಕ್ಕ ತಮ್ಮ ನಿರ್ಧರಿಸಿದರು.

ಮುಂದೆ ಆ ಮನೆಗೆ ದಿಕ್ಕಾಗಿ, ಚಿಕ್ಕವನಾದ ಮೈದುನ ವರುಣ್‌, ಬಂದು ಹೋಗುವ ನಾದಿನಿ ಗೀತಾರನ್ನು ಸಂಭಾಳಿಸಲು ಮಮತಾಮಯಿ ಸೊಸೆ ಬೇಕೆಂದು ಬಡವರ ಮನೆಯ ಹುಡುಗಿ ನಾಗರತ್ನಾಳನ್ನು ಮಹೇಶನಿಗೆ ತಂದುಕೊಂಡರು. ಮೂವರು ಹೆಣ್ಣುಮಕ್ಕಳ ತುಂಬು ಮನೆಯಲ್ಲಿ ನಾಗರತ್ನಾ ಹಿರಿಮಗಳು. ಪಿಯುಸಿವರೆಗೆ ಮಾತ್ರ ಕಲಿತಿದ್ದ ಅವಳು, ಹಾಸಿಗೆ ಹಿಡಿದಿದ್ದ ರೋಗಿಷ್ಟ ತಾಯಿಯ ಸೇವೆ ಮಾಡುತ್ತಾ ಮನೆಯ ಜವಾಬ್ದಾರಿ ವಹಿಸಿದ್ದಳು. ಸರಳವಾಗಿ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು, ಸುನಂದಮ್ಮ ಕೊಡಿಸಿದ್ದ ರೇಷ್ಮೆ ಸೀರೆ, ಮಂಗಳಸೂತ್ರ ಧರಿಸಿ, ನೇರವಾಗಿ ಇವರ ಮನೆಗೆ ಪಡಿಯೆಡವಿ ಒಳಬಂದಳು. ಸರಳವಾಗಿ ಸುನಂದಮ್ಮ ಏರ್ಪಡಿಸಿದ್ದ ಹಬ್ಬದಡುಗೆ ಉಂಡು, ಅವಳ ತವರಿನವರು ಸಂಜೆ 4 ಗಂಟೆಗೆ ಹೊರಟುಬಿಟ್ಟರು. ಅಕ್ಕನ ಮನೆಯ ಸಂಸಾರ ಒಂದು ಹದಕ್ಕೆ ಬಂತೆಂದು ಶ್ರೀಕಂಠ ಸಮಾಧಾನಗೊಂಡರು. ಕೊನೆಯವನಾಗಿ ಉಳಿದ ವರುಣ್‌ ಮುಂದೆ ಚೆನ್ನಾಗಿ ಕಲಿತು ಸೆಟಲ್ ಆಗುತ್ತಾನೆ ಎಂಬ ವಿಶ್ವಾಸವಿತ್ತು. ಆ ಮನೆಯ ಸಂತಸ ಹೆಚ್ಚು ದಿನ ಹಾಗೇ ಉಳಿಯಲಿಲ್ಲ. ವಿಷಮಶೀತ ಜ್ವರ ಬಂದದ್ದೇ ನೆನಪಾಗಿ ಸುನಂದಮ್ಮ ಹಾಸಿಗೆ ಹಿಡಿದರು. ದಿನೇದಿನೇ ಅವರ ಅನಾರೋಗ್ಯ ಉಲ್ಬಣಗೊಂಡಿತು. ಆಸ್ಪತ್ರೆ ಸೇರಿ 20 ದಿನಗಳಾದರೂ ವಾಸಿಯಾಗುವ ಲಕ್ಷಣಗಳೇನೂ ಕಾಣಲಿಲ್ಲ. ತಾವು ಮನೆಯಲ್ಲೇ ಸಾಯುವುದಾಗಿ ಪಟ್ಟುಹಿಡಿದ ಸುನಂದಮ್ಮ, ಆಸ್ಪತ್ರೆಯಿಂದ ಬಂದು 15 ದಿನಗಳಾಗುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದರು. ಮತ್ತೊಮ್ಮೆ ಸಾವು ಆ ಮನೆಯ ಬಾಗಿಲು ಬಡಿದಿತ್ತು. ಮಹೇಶ, ನಾಗರತ್ನಾರಿಗೆ ಆಸ್ಪತ್ರೆ ಕಾಟ ತಪ್ಪಿತೆಂದು ನಿರಾಳವಾಯಿತು. ಆದರೆ ವರುಣ್‌ ಎದೆಯೊಡೆದು ಅತ್ತುಬಿಟ್ಟ. ಗೀತಾ ಸಹ ಬೆಂಗಳೂರಿನಿಂದ ಧಾವಿಸಿ ಬಂದಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ