ನೀಳ್ಗಥೆ - ರಾಧಿಕಾ ಮನೋಹರ್‌ 

ಭಾಗ  ಎರಡು  

ಇಲ್ಲಿಯರೆಗೆ.....

ಅಶ್ವಿನ್‌ ವೃತ್ತಿಯಿಂದ ವೈದ್ಯರು. ನಂದಿತಾ ಎಂಬ ಹುಡುಗಿಯೊಡನೆ ಅವರ ಮದುವೆಯಾಯಿತು. ಅವಳು ಒಂದು ಒಳ್ಳೆಯ ಕಂಪನಿಯಲ್ಲಿ ಸೀನಿಯರ್‌ ಮ್ಯಾನೇಜರ್‌ ಆಗಿದ್ದಳು. ಮದುವೆಯ ನಂತರ ತಮ್ಮ ಪತ್ನಿಯ ನಿರುತ್ಸಾಹ ಕಂಡು ಅಶ್ವಿನ್‌ಚಿಂತಿತರಾದರು. ಜೊತೆಯಲ್ಲಿ ಮಲಗಿದಾಗಲೂ ಅವಳು ಒಂದು ಹೆಣ್ಣಿನಂತೆ  ವರ್ತಿಸುತ್ತಿರಲಿಲ್ಲ.  ಒಂದು ದಿನ ಅಶ್ವಿನ್‌ ಅವಳನ್ನು ಒತ್ತಾಯಿಸಿ ಕೇಳಿದಾಗ, ಅವಳು ಹೇಳಿದ್ದೇನೆಂದರೆ.... ಅವಳಿಗೆ ಒಬ್ಬ ವ್ಯಕ್ತಿಯೊಡನೆ ಪ್ರೀತಿಯಿದ್ದು, ಅವನಿಗಾಗಿ ಹುಚ್ಚಿಯಂತಾಗಿದ್ದಳು. ಆಶ್ಚರ್ಯವೆಂದರೆ ಅವಳು ಪ್ರೀತಿಸುತ್ತಿದ್ದ ವ್ಯಕ್ತಿ ವಿವಾಹಿತ. ಇದನ್ನು ಕೇಳಿ ಅಶ್ವಿನ್‌ಗೆ ನಿಂತ ನೆಲ ಕುಸಿದಂತಾಯಿತು. ಹಲವು ವರ್ಷಗಳ ನಂತರ ಅವರ ಕ್ಲಿನಿಕ್‌ಗೆ ಒಬ್ಬ ಮಹಿಳೆ ಬಂದಳು.......

ಮುಂದೆ ಓದಿ........

ವಿವಾಹ ವಿಚ್ಛೇದನವಾದ 8 ವರ್ಷಗಳ ನಂತರ ನಂದಿತಾ ಒಂದು ದಿನ ಇದ್ದಕ್ಕಿದ್ದಂತೆ ಡಾ. ಅಶ್ವಿನ್‌ರನ್ನು ಭೇಟಿ ಮಾಡಲು ಕ್ಲಿನಿಕ್‌ಗೆ ಬಂದಳು. ಅವಳ ಬೇಡಿಕೆಯನ್ನು ತಿಳಿದು ಅಶ್ವಿನ್‌ ಆಶ್ಚರ್ಯಗೊಂಡರು. ನಂದಿತಾ ಬಯಸುತ್ತಿದ್ದುದಾದರೂ ಏನು.....?

ಅಶ್ವಿನ್‌ ಸಾಕಷ್ಟು ಆಲೋಚಿಸಿದರು. ಇಂತಹ ಪರಿಸ್ಥಿತಿಯಲ್ಲಿ ಅವರಿಗಿದ್ದುದು ಎರಡೇ ದಾರಿಗಳು. ನಂದಿತಾಳನ್ನು ಬಿಡುಗಡೆ ಮಾಡಿ ಅವಳು ತನಗೆ ಬೇಕಾದಂತೆ ಜೀವನ ನಡೆಸಲು ಬಿಟ್ಟು ಬಿಡುವುದು ಅಥವಾ ಅವಳನ್ನು ತಮ್ಮ ಜೊತೆಯಲ್ಲೇ ಇರಿಸಿಕೊಂಡು ಮನೋವೈದ್ಯರಿಂದ ಚಿಕಿತ್ಸೆ ಕೊಡಿಸುವುದು.

ಅವರು ಯಾವುದೇ ದಾರಿಯನ್ನು ಆರಿಸಿಕೊಂಡರೂ, ನಂದಿತಾ ಮಾಡಿರುವ ಮೋಸ ಮುಳ್ಳಿನಂತೆ ಜೀವನ ಪರ್ಯಂತ ಅವರನ್ನು ಚುಚ್ಚುತ್ತಿರುತ್ತದೆ. ಅವಳು ತನ್ನ ತಪ್ಪನ್ನು ತಿದ್ದಿಕೊಳ್ಳಲು ಒಂದು ಅವಕಾಶ ಕೊಟ್ಟು ನೋಡಬಹುದು. ಅವರಲ್ಲಿ ಅಷ್ಟು ಕರುಣೆ ಇದ್ದೇ ಇತ್ತು. ಆದರೆ ಇಷ್ಟೆಲ್ಲ ಮಾಡಿದ ಮೇಲೂ ಅವಳು ಸರಿಹೋಗದಿದ್ದರೆ.....  ಅವರು ಆ ನೋವನ್ನು ಸಹಿಸಿಕೊಳ್ಳಬಹುದೇ? ಅವರ ಪತ್ನಿ ಹಗಲು ಪರಪುರುಷನೊಡನೆ ಮಜಾ ಮಾಡಿ ರಾತ್ರಿ ಅವರೊಡನೆ ಮಂಜುಗಡ್ಡೆಯಂತೆ ಮಲಗಿದ್ದರೆ ಅದನ್ನು ಸಹಿಸುವುದು ಚಿಕ್ಕ ವಿಷಯವಲ್ಲ.

ಇಂತಹ ಜವಾಬ್ದಾರಿರಹಿತ ಮತ್ತು ವಿಶ್ವಾಸದ್ರೋಹಿ ಪತ್ನಿಯೊಡನೆ ಹೆಚ್ಚು ದಿನ ಕಳೆಯಲು ಅವರಿಗೆ ಸಾಧ್ಯವಾಗುವುದೇ? ಅವಳಿಗೆ ಮಕ್ಕಳಾದರೆ ಅದು ಯಾರ ವೀರ್ಯದಿಂದ ಜನಿಸಿದೆ ಎಂಬ ಸಂದೇಹ ಬಂದೇ ಬರುವುದು. ಅದನ್ನು ಪರೀಕ್ಷಿಸಲು ಡಿಎನ್‌ಎ ಟೆಸ್ಟ್ ಮಾಡಿಸುತ್ತಾ ತೊಳಲಾಡಬೇಕೇ? ಅವರು ಜೀವನ ಪರ್ಯಂತ ಅನುಮಾನ ಮತ್ತು ಚಿಂತೆಯ ಸುಳಿಯಲ್ಲಿ ಸಿಲುಕಿರಬೇಕಾಗುತ್ತದೆ.

ಪತ್ನಿಯಾದವಳು ಪರಪುರುಷನೊಡನೆ ಸಂಬಂಧವಿರಿಸಿಕೊಂಡರೆ ಅದೆಂತಹ ಹಿಂಸೆ ಎಂಬುದು ಡಾಕ್ಟರ್‌ಗೆ ಅರ್ಥವಾಗಿದೆ. ಆ ಶಿಕ್ಷೆಯಿಂದ ಮನುಷ್ಯನಿಗೆ ಸಾಯಲೂ ಆಗದು, ಬದುಕಲೂ ಆಗದು.

ಇಷ್ಟೆಲ್ಲ ಹಿಂಸೆ ಇದ್ದರೂ ಮೃದು ಸ್ವಭಾವದವರಾದ ಅಶ್ವಿನ್‌, ``ನಂದಿತಾ, ನಿರ್ಧಾರವನ್ನು ನಿನಗೇ ಬಿಡುತ್ತೇನೆ. ನೀನು ಸರಿಯಾಗಿರುತ್ತೇನೆ ಎಂದರೆ ನನ್ನ ಜೊತೆಯಲ್ಲಿ ಇರಿಸಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿನಗೆ ಬಿಡುಗಡೆ ಕೊಡುತ್ತೇನೆ. ನಿನಗೆ ಯಾವುದು ಇಷ್ಟವೋ ಹಾಗೆ ಮಾಡು.'' ಎಂದರು.

``ನಾನು ಪ್ರಯತ್ನಪಡುತ್ತೇನೆ. ನಿಜ ಹೇಳಬೇಕು ಅಂದರೆ ನಮ್ಮ ಮದುವೆ ನಿಶ್ಚಯ ಆದಾಗಲೇ ನಾನು ಅವನಿಂದ ದೂರ ಆಗುವುದಕ್ಕೆ ಪ್ರಯತ್ನಿಸಿದೆ. ಮದುವೆಯಾದ ಮೇಲೂ ಸಾಕಷ್ಟು ಪ್ರಯತ್ನ ಪಡುತ್ತಿದ್ದೇನೆ. ಇದರಿಂದಲೇ ನನಗೆ ನಿಮ್ಮ ಜೊತೆ ಸರಿಯಾಗಿ ವ್ಯವಹರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವನ ಸಹವಾಸ ಬಿಡುವುದಕ್ಕೆ ಆಗುವುದೇ ಅಂತ ನೋಡುತ್ತೇನೆ,'' ಎಂದಳು ನಂದಿತಾ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ