ಪ್ರಾಣಕ್ಕೆ ಬದಲು ಪ್ರಾಣ : ಎಷ್ಟು ಸರಿ?

ಅತ್ಯಾಚಾರಿಗಳಿಗೆ ಸಾಮಾನ್ಯವಾಗಿ ಗಲ್ಲು ಶಿಕ್ಷೆ ವಿಧಿಸಲು ಮನವಿ ಮಾಡಲಾಗುತ್ತದೆ. ಆದರೆ ಕೋರ್ಟುಗಳು ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸದೇ ಬರ್ಬರತೆಯಿಂದ ಕೂಡಿದ ಸಾಮೂಹಿಕ ಹತ್ಯಾಕಾಂಡಗಳಲ್ಲಿ ಸಿಕ್ಕಿಬಿದ್ದವರಿಗೆ ಗಲ್ಲು ಶಿಕ್ಷೆ ವಿಧಿಸುತ್ತವೆ. ಆಜೀವ ಕಾರಾಗೃಹ ಶಿಕ್ಷೆಯನ್ನು ಬಹಳಷ್ಟು ಅಪರಾಧಗಳಿಗೆ ವಿಧಿಸಲಾಗುತ್ತಿದೆ. ಅದಕ್ಕಿಂತ ದೊಡ್ಡ ಶಿಕ್ಷೆ ಎಂದರೆ ಗಲ್ಲು ಶಿಕ್ಷೆಯೇ ಆಗಿದೆ.

ಕ್ರೂರ ಅಪರಾಧಿಗಳು ಸೇಡು ತೀರಿಸಿಕೊಳ್ಳುವುದನ್ನು ತಡೆಯಲು ಗಲ್ಲು ಶಿಕ್ಷೆ ನೀಡಬೇಕೆಂದು ಕೆಲವರು ಹೇಳುತ್ತಾರೆ. ಆದರೆ ಅಪರಾಧ ಘಟಿಸಿದ ನಂತರ ಗಲ್ಲು ಶಿಕ್ಷೆ ವಿಧಿಸುವಲ್ಲಿ ಕನಿಷ್ಠ 10 ವರ್ಷಗಳು ಆಗುತ್ತವೆ.

ಅಮೆರಿಕಾದಲ್ಲಿ ಮರಣದಂಡನೆ ನೀಡಲಾಗುತ್ತದೆ. ಪ್ರತಿ ವರ್ಷ ಸುಮಾರು 35-40 ಅಪರಾಧಿಗಳಿಗೆ ?ಶಿಕ್ಷೆ ನೀಡಲಾಗುತ್ತದೆ. ಆದರೆ ಈ ನಡುವೆ ಶಿಕ್ಷೆಯಾಗುತ್ತಿಲ್ಲ. ಸರ್ಕಾರ ಅಥವಾ ಕೋರ್ಟಿನ ಮನಸ್ಸು ಕರಗುತ್ತಿದೆ ಎಂದಲ್ಲ. ಆದರೆ ಅಲ್ಲಿ ಕೆಮಿಕಲ್ ಇಂಜೆಕ್ಷನ್‌ನಿಂದ ನೋವು ರಹಿತ ಮರಣದಂಡನೆ ಕೊಡುವುದಿದ್ದು ಅದಕ್ಕೆ ಬೇಕಾದ ಕೆಮಿಕಲ್ಸ್ ಸಿಗುತ್ತಿಲ್ಲ.

ಮಾನವತಾವಾದಿಗಳು ಔಷಧ ಕಂಪನಿಗಳಿಗೆ ಮರಣದಂಡನೆ ನೀಡುವಲ್ಲಿ ಉಪಯೋಗಿಸುವ ಕೆಮಿಕಲ್ಸ್ ತಯಾರಿಸಬಾರದು ಎಂದು ಒತ್ತಡ ಹಾಕಿದ್ದಾರೆ. ಹೀಗಾಗಿ ಈ ಇಂಜೆಕ್ಷನ್‌ ಸಿಗುವುದೇ ಇಲ್ಲ.

ಭಾರತದಲ್ಲಿ ಮರಣ ದಂಡನೆಯನ್ನು ಗಲ್ಲಿಗೆ ಹಾಕುವುದರ ಮೂಲಕ ಕೊಡುತ್ತಿದ್ದು, ಅದು ಬಹಳ ಕ್ರೂರ ವಿಧಾನವಾಗಿದೆ. ಆದರೆ ಅದಕ್ಕೂ ಲಿವರ್‌ ಎಳೆದು ಕಾಲ ಕೆಳಗಿನ ಹಲಗೆಯನ್ನು ಸರಿಸುವವರು ಈಗ ಸಿಗುತ್ತಿಲ್ಲ. ಅಂದಹಾಗೆ ಗಲ್ಲಿಗೇರಿಸುವವರಿಗೆ ಸಾಮಾಜಿಕ ಬಹಿಷ್ಕಾರ ಇರುತ್ತದೆ. ಹೀಗಾಗಿ ಈ ಕಾರ್ಯಕ್ಕೆ ಎಷ್ಟೇ ಹಣ ಕೊಟ್ಟರೂ ಜನ ಸಿಗುವುದು ಕಡಿಮೆ.

ಪ್ರಾಣಕ್ಕೆ ಬದಲು ಪ್ರಾಣ ಎನ್ನುವ ಸಿದ್ಧಾಂತ ತಪ್ಪು. ಇದರಿಂದ ಅಪರಾಧಗಳು ನಿಂತಿಲ್ಲ. ಮರಣದಂಡನೆ ಅಪರಾಧಿಗಳ ಮನಸ್ಸಿನಲ್ಲಿ ಭಯ ಉಂಟು ಮಾಡುವುದಿಲ್ಲ. ಅಪರಾಧ ಮಾಡುವಾಗ ಅವರಲ್ಲಿ ಆವೇಶ, ಉನ್ಮಾದ ತುಂಬಿರುತ್ತದೆ. ತಾನು ಉಳಿದುಕೊಳ್ಳುತ್ತೇನೆ ಎಂಬ ತಪ್ಪು ತಿಳಿವಳಿಕೆ ಸಾಮಾನ್ಯವಾಗಿ ಅವರಲ್ಲಿರುತ್ತದೆ.

ಎಂಥದೇ ಅಪರಾಧವಾಗಲಿ, ಮರಣದಂಡನೆ ಶಿಕ್ಷೆ ಕ್ರೂರತೆಯ ಪ್ರತೀಕವಾಗಿದೆ. ಅವರ ಮನೆಯವರಿಗೆ ಇದೊಂದು ಭಯಂಕರ ಶಿಕ್ಷೆ. ಆಜೀವ ಕಾರಾಗೃಹಾಸದಲ್ಲಿ ತೋರಿದ ಒಳ್ಳೆಯ ವರ್ತನೆಗಾಗಿ ಸ್ವಲ್ಪ ಕಾಲದ ರಿಯಾಯಿತಿ ಸಿಗುವ ಭರವಸೆ ಇರುತ್ತದೆ.

ಅಪರಾಧಿಯಿಂದ ತೊಂದರೆಗೀಡಾದವರ ಬಗ್ಗೆ ಯೋಚಿಸುತ್ತಾ ಅಪರಾಧಿಯ ಮನೆಯವರ ಬಗ್ಗೆಯೂ ಯೋಚಿಸಬೇಕಾಗಿದೆ. ವಿಶೇಷವಾಗಿ ಸಭ್ಯ ಸಮಾಜದಲ್ಲಿ.

1984 ಮತ್ತು 2002ರ ದಂಗೆಗಳಲ್ಲಿ ಕೊಲೆಗಡುಕರಿಗೆ ಶಿಕ್ಷೆ ಸಿಗಲಿಲ್ಲ ಎಂದಾಗ, ಸಿಖ್ಖರು ಮತ್ತು ಮುಸ್ಲಿಮರನ್ನು ಕೊಂದದ್ದಕ್ಕೆ ಸಿಕ್ಕ ಪ್ರತಿಫಲವಿದು ಎಂದು ಅವರು ಹೆಮ್ಮೆ ಪಡುವಂತಿಲ್ಲ. ಅವರ ಮನಸ್ಸಿನಲ್ಲಿ ಏನಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಅವರು ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ.

ಅಪರಾಧಿಗಳು ಒಂದು ವೇಳೆ ಕಲ್ಲಿನಂಥ ಹೃದಯಿಗಳಾಗಿದ್ದರೆ ಅವರಿಗೇನೂ ಪಶ್ಚಾತ್ತಾಪವಾಗುವುದಿಲ್ಲ. ಆದರೆ ಅಂತಹ ಅಪರಾಧಿಯನ್ನು ಹಿಡಿಯಲಾಗುವುದಿಲ್ಲ ಅಥವಾ ಸಾಕ್ಷಿಗಳನ್ನು ಬೆದರಿಸಿ ಬಿಡುಗಡೆಯಾಗುತ್ತಾರೆ. ಮರಣದಂಡನೆಯ ಶಿಕ್ಷೆಯನ್ನು ಬಹಳಷ್ಟು ಜನರು ಅಪರಾಧ ನಡೆಯುತ್ತಿರುವುದನ್ನು ಕಣ್ಣಾರೆ ಕಂಡಿರಬೇಕು ಅಥವಾ ಅಪರಾಧಿಯ ಮನೆಯವರ ಬಳಿ ವಕಾಲತ್ತಿಗೆ ಹಣ ಇರಲಿಲ್ಲವೆಂದಾಗ ಇಂತಹವರಿಗೆ ಮರಣದಂಡನೆ ವಿಧಿಸಲ್ಪಡುತ್ತದೆ. ಅದು ತಪ್ಪು. ಏಕೆಂದರೆ ಜನರಿಗೆ ಆ ತಿಂಗಳು ಯಾರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು, ಅಪರಾಧಿ ಯಾವ ಅಪರಾಧ ಮಾಡಿದ್ದಾನೆ ಎಂದು ನೆನಪೇ ಇರುವುದಿಲ್ಲ.

ಜೈಲಿನ ಅರ್ಥ ದೇಹಕ್ಕೆ ದಂಡನೆ ಕೊಡುವುದಲ್ಲ. ತಾನೇನೋ ತಪ್ಪು ಮಾಡಿದ್ದೇನೆ ಎನ್ನುವ ಮಾನಸಿಕ ಸ್ಥಿತಿ ಅಪರಾಧಿಯಲ್ಲಿ ಉಂಟು ಮಾಡುತ್ತದೆ. ಶಾರೀರಿಕ ದಂಡನೆಯನ್ನು ಮರಣದಂಡನೆಯಿಂದಲೇ ಕೊಡಬೇಕು ಎನ್ನುವುದು ತಪ್ಪು ಆಲೋಚನೆ.

ಕೆಮಿಕಲ್ಸ್ ಕಂಪನಿಗಳು ನೋವುರಹಿತ ಸಾವು ಕೊಡುವ ಔಷಧ ತಯಾರಿಸುವುದನ್ನು ನಿಲ್ಲಿಸಿವೆ, ಅವನ್ನು ಮೆಚ್ಚಬೇಕು. ಇದು ಮಾನವತೆ ಉಳಿಸುವ ಸಂಕೇತವಾಗಿದೆ.

ಪಣಕ್ಕೊಡ್ಡಿದ ಬಾಲ್ಯ

ಬೆಂಗಳೂರು, ದೆಹಲಿ ಮುಂತಾದ ನಗರಗಳಲ್ಲಿ ನರ್ಸರಿ ಕ್ಲಾಸ್‌ಗೆ ಮಕ್ಕಳಿಗೆ ಅಡ್ಮಿಶನ್‌ ಕೊಡಿಸಲು ಎಂತೆಂಥವರಿಗೂ ತಲೆ ಚಚ್ಚಿಕೊಳ್ಳಬೇಕಾದಂತಹ ಸ್ಥಿತಿ ಬಂದಿದೆ. ಒಮ್ಮೊಮ್ಮೆ ಮುಖ್ಯಮಂತ್ರಿಗಳೇ ಈ ಕುರಿತಂತೆ ಹೇಳಿಕೆ ಕೊಡುತ್ತಾರಾದರೆ, ಮತ್ತೊಮ್ಮೆ ಹೈಕೋರ್ಟ್‌ ಈ ಬಗ್ಗೆ ತೀರ್ಪು ನೀಡುತ್ತದೆ.

ಶಾಲೆ ಕಡಿಮೆ ಇರುವುದು ಸಮಸ್ಯೆಯಲ್ಲ, ಹೆಸರಾಂತ ಶಾಲೆಗಳು ಕಡಿಮೆ ಇವೆ. ಅವುಗಳಲ್ಲಿ ಅಡ್ಮಿಶನ್‌ ಸಿಗುತ್ತಿದ್ದಂತೆ ತಾಯಂದಿರು “ನಮ್ಮ ಮಗ/ಮಗಳು ಎ.ಸಿ. ಬಸ್‌ನಲ್ಲಿ, ಎ.ಸಿ. ಕ್ಲಾಸುಗಳಿಗೆ ಹೋಗುತ್ತಾರೆ,” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ದೆಹಲಿ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಖಾಸಗಿ ನರ್ಸರಿ ಸ್ಕೂಲ್ ಗಳು ಮಗುವಿನ ಮನೆ 6 ಕಿ.ಮೀ.ಗಿಂತ ದೂರ ಇರದಂತೆ ನೋಡಿಕೊಳ್ಳಬೇಕೆಂದು ತಿಳಿಸಿದೆ. ಬಳಿಕ ಈ ಅಂತರವನ್ನು 8 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಅಂದರೆ ಮಕ್ಕಳು ಅತ್ತೂ ಕರೆದು ದಿನ 8 ಕಿ.ಮೀ.ತನಕ ಹೋಗುವುದು ಹಾಗೂ ವಾಪಸ್‌ ಬರುವುದೆಂದರೆ, ಅವರ ದೈನಂದಿನ ಆಟವಾಡುವ, ಮಲಗುವ 3 ಗಂಟೆಗಳು ಹೋಗಿಬಿಟ್ಟವು ಎಂದರ್ಥ.

ಈ ಸಮಸ್ಯೆ ಕೇವಲ ದೆಹಲಿ, ಬೆಂಗಳೂರಿನದಲ್ಲ, ಇಡೀ ದೇಶದ ಸಮಸ್ಯೆ. ಹಳೆಯ ಶಾಲೆಗಳಲ್ಲಿ ಪ್ರವೇಶ ದೊರಕಿಸಿಕೊಳ್ಳಲು ಲಕ್ಷಾಂತರ ರೂ. ವಂತಿಗೆ ಕೊಡಬೇಕಾಗಿ ಬರುತ್ತದೆ. ತಂದೆ ತಾಯಿ 3-4 ದಿನಗಳ ಕಾಲ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿಯೂ ಇರುತ್ತದೆ.

ಮಕ್ಕಳು ಇಂಟರ್‌ ವ್ಯೂಗಾಗಿ ಗಂಟೆಗಟ್ಟಲೆ ಓದಬೇಕಾದ ಸ್ಥಿತಿ ಇರುತ್ತದೆ. ಆದರೆ ಆಗ ಮಗುವಿಗೆ 2 ಅಥವಾ 3 ವರ್ಷ ಮಾತ್ರ ಆಗಿರುತ್ತದೆ. ಶಾಲೆಯಿಂದ ಮನೆಯ ದೂರ ನಿಗದಿತ ಮಿತಿಯಲ್ಲಿಯೇ ಬರಲು ಮನೆಯ ನಕಲಿ ದಾಖಲೆ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಕೋಚಿಂಗ್‌ ಕೂಡ ಶುರವಾಗಿದೆ.

ಇದು ಮಕ್ಕಳ ಭವಿಷ್ಯದ ಜೊತೆಗಿನ ಚೆಲ್ಲಾಟ. ಮಕ್ಕಳ ಭವಿಷ್ಯ ರೂಪಿಸುವ ಹೆಸರಿನಲ್ಲಿ ತಂದೆತಾಯಿ ಅವರ ವರ್ತಮಾನವನ್ನು ಹೊಸಕಿ ಹಾಕುತ್ತಿದ್ದಾರೆ. ಒಳ್ಳೆಯ ಶಾಲೆ ಎನ್ನುವುದೇನೋ ಸರಿ, ಆದರೆ ಆ ಒಳ್ಳೆಯ ಸ್ಕೂಲ್ ‌ನಿಮ್ಮ ಮನೆಯ ಸಮೀಪ ಕೂಡ ಇರಬಹುದಾಗಿದೆ. ನಿಮ್ಮ ಒಳ್ಳೆಯ ಸ್ವಭಾವದ ಮಗು ಎಲ್ಲಿಯೇ ಹೋದರೂ ಅದು ತಂತಾನೇ ಒಳ್ಳೆಯ ವಾತಾವರಣ ಸೃಷ್ಟಿ ಮಾಡಿಕೊಳ್ಳುತ್ತದೆ. ಒಂದು ವೇಳೆ ಮಗು ಅಹಂಕಾರಿ ಪ್ರವೃತ್ತಿಯದಾಗಿದ್ದರೆ, ಹಠಮಾರಿತನದಿಂದ ಕೂಡಿದ್ದರೆ ಎಂಥದೇ ಉತ್ತಮ ವಾತಾವರಣವನ್ನೂ ಹಾಳು ಮಾಡುತ್ತದೆ.

DSC_3059

ಒಂದು ಶಾಲೆಯ ಹೆಸರು ಅಲ್ಲಿನ ವಿದ್ಯಾರ್ಥಿಗಳಿಂದ ಬರುತ್ತದೆಯೇ ಹೊರತು, ಆ ಶಾಲೆಯ ಮೇಲೆ ಬರೆದ ಹೆಸರಿನಿಂದ ಅಲ್ಲ. ತಂದೆ ತಾಯಿಗಳು ಎಳೆಯ ವಯಸ್ಸಿನ ಅಂದರೆ ನರ್ಸರಿಯಲ್ಲಿ ಓದುವ ಮಕ್ಕಳ ಜೀವನದ ಜೊತೆಗೆ ಚೆಲ್ಲಾಟವಾಡಬಾರದು. ಶಾಲಾ ಹಂತದಿಂದಲೇ ಮಕ್ಕಳಿಗೆ ಒಳ್ಳೆಯ ಶಾಲೆ, ಕೆಟ್ಟ ಶಾಲೆ ಎಂಬ ವರ್ಗೀಕರಣ ಮಾಡುವುದು ಸರಿಯಲ್ಲ. ಕಿಟಿ ಪಾರ್ಟಿ, ಮದುವೆ ಪಾರ್ಟಿಯಲ್ಲಿ ಮಕ್ಕಳಿಗೆ ದೊಡ್ಡ ಜನರೊಂದಿಗೆ ಭೇಟಿಯಾಗಲು ಶಾಲೆಯ ಹೆಸರು ಉಲ್ಲೇಖ ಮಾಡುವುದು ಅವಶ್ಯಕವಲ್ಲ. ಇದು ಮಕ್ಕಳನ್ನು ಮಾನಸಿಕವಾಗಿ ಆತ್ಮವಿಶ್ವಾಸಿಗಳಾಗಿಸದೇ, ಅವರನ್ನು ಅಹಂಕಾರಿಗಳನ್ನಾಗಿಸುತ್ತದೆ. ಅವರು ತಮ್ಮನ್ನು ತಾವು ವಿಶೇಷವೆಂದು ಪರಿಗಣಿಸಲಾರಂಭಿಸುತ್ತಾರೆ.

ಸರ್ಕಾರ ಈ ನಿಟ್ಟಿನಲ್ಲಿ ಹಸ್ತಕ್ಷೇಪ ಮಾಡಬಾರದು. ನ್ಯಾಯಾಲಯಗಳು ಬೇಡಿಕೆ ಹಾಗೂ ಪೂರೈಕೆ ನಿಯಮದ ಪ್ರಕಾರ ಪ್ರವೇಶ ಪ್ರಕ್ರಿಯೆ ನಡೆಯುವಂತೆ ಕ್ರಮ ಜರುಗಿಸಬೇಕು. ಆಗ ಒಳ್ಳೆಯ ಸ್ಕೂಲ್ ‌ಗಳು ತಂತಾನೇ ಆರಂಭವಾಗುತ್ತವೆ. ಒಂದು ವೇಳೆ ಸರ್ಕಾರದ ಹಸ್ತಕ್ಷೇಪ ಕಡಿಮೆಯಾದರೆ ನರ್ಸರಿಯ ಮಕ್ಕಳಿಗೆ ಪ್ರವೇಶ ನೀಡಲು ಭಾರಿ ಎನಿಸುವಂತಹ ನಿಯಮ ರೂಪಿಸಿ ಶಾಲೆ ಹಾಗೂ ತಂದೆ ತಾಯಿಯರನ್ನು ಹೆದರಿಸಲಾಗುತ್ತದೆ.

ಈ ತೆರನಾದ ಪ್ರಕರಣಗಳು ಮೇಲಿಂದ ಮೇಲೆ ನ್ಯಾಯಾಲಯದ ಕಟ್ಟೆ ಏರಿ ಆಗಾಗ ನಿಯಮ ಬದಲಿಸಲಾಗುತ್ತಿದೆ. ವಂತಿಗೆ ಬಂದ್‌ ಮಾಡುವ ನಿಟ್ಟಿನಲ್ಲಿ ಇಡೀ ಪ್ರಕರಣವನ್ನೇ ಕಲಸುಮೇಲೋಗರ ಮಾಡಲಾಗುತ್ತಿದೆ.

ನರ್ಸರಿ ಮಕ್ಕಳ ತಂದೆ ತಾಯಿಯರ ಮುಖದಲ್ಲಿ ನಗು ಕಾಣುವಂತಾಗಬೇಕೇ ಹೊರತು, ಜೋಲು ಮುಖ ಕಾಣುವಂತಾಗಬಾರದು. ನರ್ಸರಿ ಶಿಕ್ಷಣ ಹೆಮ್ಮೆಯ ವಿಷಯವಲ್ಲ, ಅದು ಅತ್ಯಂತ ಸರಳ ಸಂಗತಿ. ಮಕ್ಕಳಿಗೆ ಮುಂದೆ ಮುಂದೆ ಸಾಗುವ ತರಬೇತಿ ನೀಡುವುದಾಗಿದೆ.

ಕಾನೂನೇ ಕುರುಡೋ ಅಥವಾ ವ್ಯವಸ್ಥೆಯೋ?

ಸುಪ್ರೀಂ ಕೋರ್ಟ್‌ ಒಂದು ತೀರ್ಪಿನ ಸಂದರ್ಭದಲ್ಲಿ ಅಪರಾಧ ಕಾನೂನಿನ ಬಗ್ಗೆ ಒಂದು ವ್ಯಾಖ್ಯೆ ಮಾಡಿದೆ. ಅದು ಅಪರಾಧ ಎಸಗುವವರು ಮುಕ್ತವಾಗಿ ಓಡಾಡುವುದನ್ನು ತಡೆಯಲು ನೆರವು ನೀಡುತ್ತದೆ.

ಅತ್ಯಂತ ಘೋರ ಆರೋಪದಲ್ಲಿ ಯಾರಾದರೂ ಆರೋಪಿ ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆ ಹೊಂದಿದರೆ, ಇದರ ದಂಡವನ್ನು ಆ ಪ್ರಕರಣದ ಬಗ್ಗೆ ತನಿಖೆ ನಡೆಸುವ ಅಧಿಕಾರಿಯೇ ತೆರಬೇಕಾಗುತ್ತದೆ.

ಈಚೆಗೆ ಕಾನೂನಿನಲ್ಲಿ ತಿರುಗಿ ಬೀಳುವುದು ಸಾಮಾನ್ಯ ಸಂಗತಿ. ಒಂದು ಗಂಭೀರ ಆರೋಪ ಮಾಡಿ ಅಪರಾಧಿಗಳು ಸುಮ್ಮನೇ ಜೈಲಿಗೆ ಹೋಗುತ್ತಾರೆ. ಆದರೆ ಪೊಲೀಸರೊಂದಿಗೆ ಸೇರಿಕೊಂಡು ವೈದ್ಯಕೀಯ ವರದಿ, ಸಾಕ್ಷಿಗಳ ಹೇಳಿಕೆ ಹಾಗೂ ಘಟನಾ ಸ್ಥಳದ ವರದಿಯಲ್ಲಿ ಉದ್ದೇಶಪೂರ್ವಕವಾಗಿ ಲೋಪ ಎಸಗುತ್ತಾರೆ.

5-6 ತಿಂಗಳ ಬಳಿಕ ಪ್ರಕರಣ ವಿಚಾರಣೆಗೆ ಬಂದಾಗ ಆರೋಪಿ ಪರ ವಕೀಲ ಮೇಲಿಂದ ಮೇಲೆ ಆರೋಪ ಸಾಬೀತು ಮಾಡುವಷ್ಟು ಸಾಕ್ಷ್ಯಗಳು ಬಲವಾಗಿಲ್ಲ ಎಂದು ಹೇಳುತ್ತಿರುತ್ತಾನೆ. 4-5 ರ್ಷಗಳ ಬಳಿಕ ತೀರ್ಪು ಹೊರಬಿದ್ದಾಗ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯ ಆರೋಪಗಳನ್ನು ಸಾಬೀತು ಮಾಡಲು ಆಗುವುದಿಲ್ಲ. ಅಂತಹ ಸ್ಥಿತಿಯಲ್ಲಿ ಅವನನ್ನು ಬಿಡುಗಡೆಗೊಳಿಸಲಾಗುತ್ತದೆ.

ತೋರಿಕೆಗಾಗಿ ಅಥವಾ ಸಂತ್ರಸ್ತರು ಅಥವಾ ಅವರ ಮನೆಯವರ ಆಗ್ರಹದ ಮೇರೆಗೆ ಸರ್ಕಾರ ಅಪೀಲ್ ‌ಕೂಡ ಮಾಡುತ್ತದೆ. ಆದರೆ ತನಿಖೆಯ ಸತ್ಯಾಸತ್ಯತೆಗಳು ಅತ್ಯಂತ ನಿಕೃಷ್ಟವಾಗಿರುತ್ತವೆ. ಈ ಕಾರಣದಿಂದ ಪ್ರಕರಣ ಅಲ್ಲೂ ಸೋಲು ಕಾಣುತ್ತದೆ. ಹೀಗಾಗಿ ಆರೋಪಿಗಳನ್ನು ಆರೋಪ ಮುಕ್ತರೆಂದು ಘೋಷಿಸಲಾಗುತ್ತದೆ.

ಅಪರಾಧದ ಘಟನೆ ನಡೆದಿರುವುದು ಎಲ್ಲರಿಗೂ ಗೊತ್ತಿರುತ್ತದೆ. ಘಟನೆಯಲ್ಲಿ ಯಾರಾದರೂ ಗಾಯಗೊಂಡಿರಬಹುದು ಇಲ್ಲವೇ ಸತ್ತೇ ಹೋಗಿರಬಹುದು ಎಂಬುದೂ ತಿಳಿದಿರುತ್ತದೆ. ಆದರೆ ಯಾರೂ ಅಪರಾಧಿ ಎಂದು ಸಾಬೀತಾಗುವುದಿಲ್ಲ. ಇದೆಂಥ ನ್ಯಾಯ ಈ ದೇಶದ್ದು? ಅಪರಾಧ ಎಸಗಿದಾಗ ಆರೋಪಿಗಳಿಗೆ ಶಿಕ್ಷೆ ವಿಧಿಸುದು ಪೊಲೀಸರ ಮೊದಲ ಕರ್ತವ್ಯ. ಎಷ್ಟೋ ಪ್ರಕರಣದಲ್ಲಿ ಅರು ಆರೋಪಿಗಳಿಗೆ ಶಿಕ್ಷೆ ಕೂಡ ಕೊಡಿಸಿರುವುದು ಅಂಕಿಅಂಶಗಳಿಂದ ತಿಳಿದು ಬರುತ್ತದೆ. ಆದರೆ ಯಾವ ಕಾರಣದಿಂದ ಆರೋಪಿಗಳು ತಪ್ಪಿಸಿಕೊಂಡರು ಎನ್ನುವ ಬಗ್ಗೆ, ತಪ್ಪಿತಸ್ಥ ಪೊಲೀಸರ ಬಗೆಗೆ ಮಾತ್ರ ಫೈಲುಗಳಲ್ಲಿ ಉಲ್ಲೇಖ ಕಂಡುಬರುವುದೇ ಇಲ್ಲ.

ಒಂದು ವೇಳೆ ಜನರು ಅದರಲ್ಲೂ ಮನೆಯೊಡತಿ, ಅಣ್ಣ, ತಂಗಿ, ಗಂಡ, ತಂದೆ ಮುಂತಾದವರು ಅಪರಾಧ ಎಸಗಿದಾಗ, ಪ್ರಕರಣದಿಂದ ಮುಕ್ತರಾಗಲು ಪೊಲೀಸರನ್ನು ಖರೀದಿಸುವುದು ಸುಲಭ ಎಂದು ಭಾವಿಸುತ್ತಾರೆ. ನಮ್ಮ ಸಿನಿಮಾಗಳಲ್ಲಿ ಕೂಡ ವರ್ಷಾನುವರ್ಷಗಳಿಂದ ನಮ್ಮ ಕಾನೂನು ರೂಪಿಸಿದವರಿಗೆ ಎಂದೂ ಎಚ್ಚರಾಗಿಲ್ಲವೆಂದು ಹೇಳುತ್ತಲೇ ಬರಲಾಗುತ್ತಿದೆ. ಈಗ ಸುಪ್ರೀಂ ಕೋರ್ಟ್‌ ಕೂಡ ಅದನ್ನೇ ಹೇಳಿದೆ. ಆದರೆ ಅದನ್ನು ಕಾನೂನಿನಲ್ಲಿ ಬರೆಯಲಾಗಿಲ್ಲವಲ್ಲ…..? ಪ್ರಕರಣಗಳು ಹೀಗೆಯೇ ನಡೆಯುತ್ತಲೇ ಇರುತ್ತವೆ.

ನಮ್ಮ ದೇಶದ ಸಿದ್ಧಾಂತವೆಂದರೆ, ಹಿರಿಯರ ಮಾತನ್ನು ಬಹುದೊಡ್ಡ ಉಪದೇಶ ಎಂದು ಹೇಳಲಾಗುತ್ತದೆ. ಆದರೆ ಯಾರೊಬ್ಬರೂ ಅದರಂತೆ ನಡೆಯುವುದಿಲ್ಲ. ನ್ಯಾಯಾಲಯಗಳು ಆದೇಶ ಕೊಡುತ್ತಲೇ ಇರುತ್ತವೆ, ಪೊಲೀಸರು ತಮ್ಮ ಜೇಬನ್ನು ಬೆಚ್ಚಗೆ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ